ದಾವಣಗೆರೆ 16: ನಗರದ ಸದರ್ನ್ ಸ್ಟಾರ್ ಹೋಟೇಲ್ನಲ್ಲಿ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ನಿಂದ ಜ.16 ರಿಂದ 19 ರವರೆಗೆ ಏರ್ಪಡಿಸಿರುವ ನಾಲ್ಕು ದಿನಗಳ ವಿಶೇಷ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಅಂಚಲ್ ಶ್ಯಾಮನೂರು ಹಾಗೂ ಅಖಿಲಾ ಶ್ಯಾಮನೂರು ಶುಕ್ರವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಶ್ರೀಮಂತ ಇತಿಹಾಸ ಹೊಂದಿರುವ ಬ್ರ್ಯಾಂಡ್ ದಾವಣಗೆರೆಗೆ ತನ್ನ ಕಲಾತ್ಮಕತೆಯನ್ನು ತರುವುದನ್ನು ನೋಡುವುದು ಸಂತೋಷಕರವಾಗಿದೆ. ಈ ವಿನ್ಯಾಸಗಳು ಕೇವಲ ಸುಂದರವಾದ ಆಭರಣಗಳಲ್ಲ-ಕಥೆಗಳು, ಸಂಪ್ರದಾಯಗಳು ಮತ್ತು ಭಾವನೆಗಳಿಗೆ ಜೀವ ತುಂಬಿವೆ. ಪ್ರತಿಯೊಂದು ವಿನ್ಯಾಸದಲ್ಲಿನ ಕರಕುಶಲತೆ ಮತ್ತು ಕಾಳಜಿಯನ್ನು ಇಲ್ಲಿನ ಜನರು ಮೆಚ್ಚುತ್ತಾರೆ ಎಂದರು.
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪನ್ ಮಳಿಗೆಯ ಮುಖ್ಯಸ್ಥ ಶ್ರೀಹರಿ ಮಾತನಾಡಿ, ಆಭರಣಗಳು ಅದ್ಭುತವಾಗಿರುವುದರ ಜೊತೆಗೆ ಅರ್ಥಪೂರ್ಣವಾಗಿರಬೇಕು ಎಂದು ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಯಾವಾಗಲೂ ನಂಬಿದೆ.ಈ ಪ್ರದರ್ಶನವು ದಾವಣಗೆರೆ ಜನರೊಂದಿಗೆ ಸಂಪರ್ಕ ಸಾಧಿಸುವ, ನಮ್ಮ ಪರಂಪರೆಯನ್ನು ಹಂಚಿಕೊಳ್ಳುವ ಮತ್ತು ಸಿಕೆಸಿ ಸಂಗ್ರಹದಿAದ ಹಿಡಿದು ನಮ್ಮ ಸುಸ್ಥಿರ ಛಿಡಿಚಿsh.ಛಿಟub ನಂತಹ ಹೊಸ ವಿಚಾರಗಳನ್ನು ಅವರಿಗೆ ಪರಿಚಯಿಸುವ ನಮ್ಮ ಮಾರ್ಗವಾಗಿದೆ. ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ದಾವಣಗೆರೆಯಲ್ಲಿ ಪ್ರತಿ ಬಾರಿ ಆಭರಣ ಪ್ರದರ್ಶನ ನಡೆಸಿದಾಗಲೂ, ಗ್ರಾಹಕರ ಪ್ರತಿಕ್ರಿಯೆ ನಿಜವಾಗಿಯೂ ಅಗಾಧವಾಗಿದ್ದು, ಇದು ಮತ್ತೆ ಮತ್ತೆ ಬರಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದರು.
Read also : ಮಹಿಳೆಯರಿಗೆ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ
ದಾವಣಗೆರೆಯಲ್ಲಿನ ಈ ಪ್ರದರ್ಶನವು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿಲ್ಲ, ಕಲಾತ್ಮಕತೆ, ಪರಂಪರೆಯ ಪ್ರದರ್ಶನ. ಇಲ್ಲಿ ಸಂದರ್ಶ ಕರು 155 ವರ್ಷಗಳಷ್ಟು ಹಳೆಯ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಭರಣಗಳ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ವೀಕ್ಷಿಸುತ್ತಾರೆ ಎಂದು ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪನ್ ಆರ್ ಮುಖ್ಯಸ್ಥ ತೇಜಸ್ ಕಲ್ರಾ ಹೇಳಿದರು.
