ದಾವಣಗೆರೆ : ಜಿಲ್ಲಾ ಮಾನವ ಅಭಿವೃದ್ಧಿ-2025ರ ವರದಿ ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-2031ರ ವರದಿ ತಯಾರಿಕೆಗೆ ಅರ್ಹ ತಾಂತ್ರಿಕ ಸಂಸ್ಥೆಗಳಿಂದ ಆಸಕ್ತಿ ಅಭಿವ್ಯಕ್ತಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಅರ್ಹ ಸಂಸ್ಥೆ ವಿಶ್ವವಿದ್ಯಾಲಯದವರು 10 ದಿನದೊಳಗಾಗಿ ಈ ವರದಿಗಳ ತಯಾರಿಕೆಗೆ ಪ್ರತ್ಯೇಕ ಸಂಯೋಜನೆಯೊಂದಿಗೆ ಹಾಗೂ ಪ್ರತ್ಯೇಕ ಆಸಕ್ತಿ ಅಭಿವ್ಯಕ್ತಿ (Expression of Interest )ಯನ್ನು ಸಲ್ಲಿಸಬಹುದು.
Read also : ದಾವಣಗೆರೆ | ಮಕ್ಕಳಷ್ಟೇ ಅಲ್ಲ ಪೋಷಕರು ದೊಡ್ಡ ಕನಸು ಕಾಣಬೇಕು: ಜಿ. ಬಿ. ವಿನಯ್ ಕುಮಾರ್ ಕರೆ
ನಿಬಂಧನೆ: ತಮ್ಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಮಾನವ ಅಭಿವೃದ್ಧಿ ವರದಿ ಹಾಗೂ ಸಮಗ್ರ ಮತ್ತು ಸುಸ್ಥಿತರ ಜಿಲ್ಲಾ ಅಭಿವೃದ್ದಿ ಯೋಜನೆ- 2031ರ ವರದಿಗಳ ತಯಾರಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವಂತಹ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಾಕರನ್ನು ಸಂಯೋಜಕರನ್ನಾಗಿ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಾಕರನ್ನು ಸಹಾಯಕ ಸಂಯೋಜಕರನ್ನಾಗಿ ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ಹಾಗೂ ಡೇಟಾ ಎಂಟ್ರಿ ಸಿಬ್ಬಂದಿಯನ್ನು ತೆಗೆದುಕೊಳ್ಳುವುದು. ಈ ನಿಬಂಧನೆಗನುಸಾರ ಅರ್ಹತೆಯುಳ್ಳ ಸ್ಥಳೀಯ ಸಂಸ್ಥೆಗಳಿಗೆ ಆದ್ಯತೆಯನ್ನು ನೀಡಲಾಗುವುದೆಂದು ಜಿ.ಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ತಿಳಿಸಿದ್ದಾರೆ.