ದಾವಣಗೆರೆ (Davanagere): ಚನ್ನಗಿರಿ ತಾಲೂಕಿನ ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸಂಘಕ್ಕೆ ಚುನಾವಣೆಗೆ ಸಿದ್ಧಪಡಿಸಿರುವ ಮತದಾರರ ಪಟ್ಟಿಯನ್ನು ಅಧಿಕಾರಿಗಳು ತಿದ್ದಿದ್ದಾರೆ. ಆದ್ದರಿಂದ ಈ ಕೂಡಲೇ ಅಕ್ರಮ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ ಚುನಾವಣೆ ರದ್ದು ಮಾಡುವಂತೆ ಆಗ್ರಹಿಸಿದರು.
ಚನ್ನಗಿರಿ ತಾಲೂಕಿನ ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜ.12ರಂದು ಚುನಾವಣೆ ನಡೆಯಲಿದ್ದು, ಸಹಕಾರ ಸಂಘದ ಆಡಳಿತ ಮಂಡಳಿ, ಅಧಿಕಾರಿಗಳು ಸೇರಿ ಸಭೆಗೆ ಹಾಜರಾಗದಿ ರುವ ಸಾಕಷ್ಟು ಸದಸ್ಯರ ಸಹಿ ಅವರೇ ಮಾಡಿದ್ದಾರೆ. ಅμÉ್ಟೀ ಅಲ್ಲದೇ ಮೂರು ಸಭೆಗಳಿಗೆ ಹಾಜರಾಗದೇ ಇರುವ ಜಾಗದಲ್ಲಿ ವೈಟ್ನರ್ ಹಾಕಿ ತಿದ್ದಿದ್ದಾರೆಂದು ಆರೋಪಿಸಿದರು.
ಸೋಮವಾರ ಇದೇ ವಿಷಯವಾಗಿ ಎರಡು ಬಣಗಳ ನಡುವೆ ಸಹಕಾರ ಸಂಘದಲ್ಲಿ ವಾಗ್ವಾದ ನಡೆದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.
ಆದ್ದರಿಂದ ಅಕ್ರಮ ಮಾಡಿದ ನಾಲ್ಕು ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸೊಸೈಟಿ ಸೂಪರ್ ಸೀಡ್ ಮಾಡಿ, ಚುನಾವಣೆ ರದ್ದು ಮಾಡಬೇಕು ಜತೆಗೆ ಸೊಸೈಟಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಧಾವಿಸಿ ಶಾಸಕ ಶಿವಗಂಗಾ ಬಸವರಾಜ್ ಮನವೊಲಿಸಲು ಪ್ರಯತ್ನಪಟ್ಟರು. ನಂತರ ಸದಸ್ಯ ಚುನಾವಣೆ ಮುಂದೂಡುವ ಭರವಸೆ ನೀಡಿದ ನಂತರ ಶಾಸಕ ಮತ್ತವರ ಬೆಂಬಲಿಗರು ಪ್ರತಿಭಟನೆಯಿಂದ ಹಿಂದೆ ಸರಿದರು.
ಒಂದು ವೇಳೆ ಅಕ್ರಮ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದರೇ ಅವರ ವಿರುದ್ಧ ಕ್ರಮ ಆಗುವವರೆಗೂ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಶಾಸಕ ಬಸವರಾಜ್ ಶಿವಗಂಗಾ ನೀಡಿದರು.
Read also : ಕೊಂಡಜ್ಜಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆ : ಡಿಸಿ, ಸಿಇಓ ಭಾಗಿ