ದಾವಣಗೆರೆ (Davanagere): ಸಾರ್ವಜನಿಕರು, ಬೀದಿ ಬದಿ ವ್ಯಾಪಾರಿಗಳು, ಉದ್ಯಮಿದಾರರು ತ್ಯಾಜ್ಯ ವಿಂಗಡಿಸದೇ, ತ್ಯಾಜ್ಯ ಎಸೆಯುತ್ತಿದ್ದಲ್ಲಿ ಅಂತಹ ಪ್ರಕರಣಗಳ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುವಂತೆ, ಆಯುಕ್ತರಿಗೆ ಅಥವಾ ಖುದ್ದಾಗಿ ತಮಗೆ ಕರೆ ಮಾಡುವಂತೆ ಇಲ್ಲವೇ ಛಾಯಾ ಚಿತ್ರಗಳನ್ನು ತೆಗೆದು ವಾಟ್ಸಾಪ್ ಮೂಲಕ ಕಳುಹಿಸುವಂತೆ ಹಾಗೂ ನಗರ ಸ್ವಚ್ಛತೆಯಲ್ಲಿ ಸಹಕರಿಸದೆ ಇದ್ದಲ್ಲಿ, ಅಂತಹ ಉಲ್ಲಂಘನೆದಾರರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ.ತಿಳಿಸಿದರು
ಮಹಾನಗರ ಪಾಲಿಕೆಯ ಪೌರಕಾರ್ಮಿಕರುಗಳ ಕುಂದು ಕೊರತೆ ಹಾಗೂ ನಗರದ ಸ್ವಚ್ಛತೆ ಬಗ್ಗೆ ಪೌರಕಾರ್ಮಿಕರೊಂದಿಗೆ ಚರ್ಚಿಸಲು ಮಹಾನಗರಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Read also : Davangere | ಹಳಬರ ಸಚಿವ ಸ್ಥಾನಕ್ಕೆ ಕೋಕ್ ಕೊಡಿ
ನಗರ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರುಗಳು ಶ್ರಮಿಸುತ್ತಿದ್ದು, ಪಾಲಿಕೆಯಿಂದ ಒದಗಿಸುವ ಸುರಕ್ಷತಾ ಪರಿಕರಗಳನ್ನು ನಿಯಮಿತವಾಗಿ ಉಪಯೋಗಿಸುವುದರೊಂದಿಗೆ ತಮ್ಮ ಸಾರ್ವಜನಿಕರ ಆರೋಗ್ಯ ರಕ್ಷಣೆಯೊಂದಿಗೆ ತಮ್ಮ ಆರೋಗ್ಯವನ್ನೂ ರಕ್ಷಿಸಿಕೊಳ್ಳುವಂತೆ ತಿಳಿಸಿದರು.
ಕೆಲವು ಮನೆಗಳಿಂದ ಸರಿಯಾಗಿ ತ್ಯಾಜ್ಯ ವಿಂಗಡಣೆ ಮಾಡದೇ ತಡರಾತ್ರಿ ಅಥವಾ ಬೆಳ್ಳಂಬೆಳಿಗ್ಗೆ ರಸ್ತೆ ಬದಿ ಎಸೆಯುವಂತಹ ಉಲ್ಲಂಘನೆದಾರರು ದಂಡ ವಿಧಿಸಲು ಹೋದಂತಹ ಪ್ರಕರಣಗಳಲ್ಲಿ ನಮಗೆ ಉನ್ನತಾಧಿಕಾರಿಗಳ ಪರಿಚಯವಿದೆ ಎಂದು ನಮಗೇ ದಬಾಯಿಸುತ್ತಾರೆ. ಇಂತಹ ಮಿಶ್ರ ತ್ಯಾಜ್ಯವನ್ನು ಸ್ವಚ್ಚಗೊಳಿಸುವಾಗ ಬರುವ ವಾಸನೆಯಿಂದ ನಮಗೆ ಊಟ ಸೇರದಂತಹ ಪರಿಸ್ಥಿತಿ ಇದೆ ಎಂದು ಪೌರಕಾರ್ಮಿಕರುಗಳು ಆಳಲು ತೋಡಿಕೊಂಡರು.
ಸಭೆಯಲ್ಲಿ ಮಹಾನಗರಪಾಲಿಕೆಯ ಆಯುಕ್ತರಾದ ರೇಣುಕಾ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.