ದಾವಣಗೆರೆ : ಮಹಿಳೆಯೊಬ್ಬರು ಕಳೆದುಕೊಂಡಿದ್ದ ಬಂಗಾರದ ಒಡವೆಗಳನ್ನು ಮರಳಿ ಕೊಡಿಸುವಲ್ಲಿ 112 ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅಕ್ಷತ ಎಂಬ ಮಹಿಳೆ ಕಳೆದ ಮೂರು ತಿಂಗಳ ಹಿಂದೆ ತಮ್ಮ ಮನೆಗೆ ಜೋಗಮ್ಮ ಬಂದ ವೇಳೆ ಊಟ ಮಾಡಿಸಿ, ಸತ್ಕರಿಸಿ ಒಂದು ಸೀರೆ ನೀಡಿ ಕಳುಹಿಸಿದ್ದಾರೆ. ಅದರೆ ಮಾರನೇ ದಿನ 22 ಗ್ರಾಂ ಬಂಗಾರದ ಒಡವೆ ಕಂಡು ಬಂದಿಲ್ಲ. ಒಡವೆ ಹುಡುಕಿದಾಗ ಜೋಗಮ್ಮಳಿಗೆ ನೀಡಿದ ಸೀರೆಯಲ್ಲಿ ಒಡವೆಯನ್ನು ಇಟ್ಟಿರುವುದು ತಿಳಿದುಬಂದಿದೆ.
ಸೆ. 22ರಂದು ಸಂಜೆ ಅದೇ ಜೋಗಮ್ಮ ತಮ್ಮ ಮನೆಯ ಹತ್ತಿರದ ಬೀದಿಯಲ್ಲಿ ಕಂಡುಬAದಾಗ ಒಡವೆ ಬಗ್ಗೆ ವಿಚಾರಿಸಿದಾಗ ಜೋಗಮ್ಮಳು ಒಡವೆ ಯಾವುದೂ ನನ್ನ ಹತ್ತಿರ ಇಲ್ಲವೆಂದು ತಿಳಿಸಿದ್ದಾರೆ. 112ಗೆ ಕರೆ ಮಾಡಿ ಪೊಲೀಸ್ ಸೇವೆ ಪಡೆದಿದ್ದಾರೆ.
ಹೊಯ್ಸಳದಲ್ಲಿ ಕರ್ತವ್ಯನಿರತ ಆಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಜೋಗಮ್ಮಳಿಗೆ ವಿಚಾರಿಸಿ ತಿಳಿಹೇಳಿದಾಗ ಜೋಗಮ್ಮಳು ತಮ್ಮ ಮನೆಯಲ್ಲಿಯೇ ಒಡವೆ ಹಾಗೂ ಸೀರೆ ಇರುವುದಾಗಿ, ಒಡವೆಯನ್ನು ತರಿಸಿಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಒಡವೆಯನ್ನು ತರಿಸಿದ ನಂತರ ವಿದ್ಯಾನಗರ ಠಾಣೆಯ ಅಧಿಕಾರಿಗಳ ಸಮಕ್ಷಮದಲ್ಲಿ ಒಡವೆಯನ್ನು ಅಕ್ಷತ ಎಂಬುವವರಿಗೆ ಒಪ್ಪಿಸಿದ್ದಾರೆ.
Read also : ದಾವಣಗೆರೆ :ಖಾಸಗಿ ಸಂಸ್ಥೆಯಲ್ಲಿನ ವಿವಿಧ ಹುದ್ದೆಗಳಿಗೆ ನೇರ ಆಯ್ಕೆ ಸಂದರ್ಶನ
ಒಡವೆಗಳನ್ನು ವಾರಾಸುದಾರರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದ 112 ಹೊಯ್ಸಳ ವಾಹನ ಕರ್ತವ್ಯ ಅಧಿಕಾರಿಗಳಾದ ತಿಪ್ಪೇಸ್ವಾಮಿ ಹಾಗೂ ಉಮೇಶರವರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
