ದಾವಣಗೆರೆ : ಜಿಲ್ಲೆಯ ಚಿರಡೋಣೆ ಕ್ಯಾಂಪ್ ಗ್ರಾಮದಲ್ಲಿ ಸುಲಿಗೆ ಮತ್ತು ಮನೆ ಕಳ್ಳತನ ಮಾಡಿದ್ದ ಆರೋಪಿತನ್ನು ಬಸವಪಟ್ಟಣ ಠಾಣೆಯ ಬಂಧಿಸಿರುವ ಪೊಲೀಸರು ಬಂಧಿತರಿAದ 12,28,000/- ರೂ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಚಿರಡೋಣಿ ಗ್ರಾಮದ ಶಿವಮೂರ್ತಿ, ರಮೇಶ್, ರುದ್ರೇಶ ಬಂಧಿತ ಆರೋಪಿಗಳು.
ಕೃತ್ಯಕ್ಕೆ ಬಳಸಿದ ಒಂದು ಮಚ್ಚು, ಹಾಗೂ ಸುಲಿಗೆ ಮತ್ತು ಮನೆಕಳ್ಳತನ ಮಾಡಿದ್ದ ಒಟ್ಟು 12,28,000/- ರೂ ಬೆಲೆ ಬಾಳುವ 02 ಮಾಂಗಲ್ಯ ಸರಗಳು, ಒಂದು ಜೊತೆ ಬೆಂಡೋಲೆ, ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಹಂಸತಾರಕA ಕುಟುಂಬ ಬೆಂಗಳೂರಿಗೆ ಹೋಗಿದ್ದಾಗ ಚಿರಡೋಣಿ ಕ್ಯಾಂಪ್ನ ತಮ್ಮ ಮನೆಯಲ್ಲಿದ್ದ ಬೆಳ್ಳಿ, ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಸಂಬAಧ ಬಸವಾಪಟ್ಟಣ ಪೊಲೀಸ್ ಠಾಣೆಯ ಪ್ರಕರಣ ದಾಖಲಿಸಿದ್ದರು.
ಅಲ್ಲದೇ ಅದೇ ದಿನ ಸುಮಲತಾ ಸಿ.ಹೆಚ್.ಸತ್ಯಾನಾರಾಯಣ ಹಾಗೂ ಅವರ ಅತ್ತೆ ವೀರಯಮ್ಮ ರವರುಗಳು ಚಿರಡೋಣಿ ಕ್ಯಾಂಪ್ ನ ತಮ್ಮ ಮನೆಯಲ್ಲಿದ್ದಾಗ ಯಾರೋ ಇಬ್ಬರು ಅಪರಿಚಿತರು ಹಲ್ಲೆ ನಡೆಸಿ, ಅವರುಗಳ ಕೊರಳಿನಲ್ಲಿದ್ದ 02 ಬಂಗಾರದ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಈ ಎರಡು ಪ್ರಕರಣಗಳಲ್ಲಿನ ಆರೋಪಿತರನ್ನು ಪತ್ತೆ ಮಾಡಲು ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಎಸ್ಪಿ ಪರಮೇಶ್ವರ ಹೆಗಡೆ, ಚನ್ನಗರಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗಿಸ್ ಮಾರ್ಗದರ್ಶನದಲ್ಲಿ, ಲಿಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಜಿಲ್ಲಾ ಸುಕೋ ಟೀಮ್ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನ ಪತ್ತೆ ಮಾಡಿದ್ದರು.
Read also : 52 ಲಕ್ಷ ರೂ ವಂಚನೆ|ಸೈಬರ್ ಪೊಲೀಸರಿಂದ ಆರೋಪಿ ಬಂಧನ
ಎರಡೂ ಪ್ರಕರಣಗಳಲ್ಲಿ ಸುಮಾರು ರೂ 12,28,000/- ರೂ ಮೌಲ್ಯದ ಬೆಲೆ ಬಾಳುವ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಪತ್ತೆ ಮಾಡಿದ ತಂಡದ ಅಧಿಕಾರಿಗಳಾದ ಸಿಪಿಐ ಲಿಂಗನಗೌಡ ನೆಗಳೂರು , ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ನಿರೀಕ್ಷಕ ಇಸ್ಮಾಯಿಲ್, ಮಂಜುನಾಥ್, ಬಸವಾಪಟ್ಟಣ ಠಾಣೆಯ ಪಿ.ಎಸ್.ಐ ಇಮ್ತಿಯಾಜ್ ಹಾಗೂ ಸಂತೆಬೆನ್ನೂರು ಠಾಣೆಯ ಪಿಎಐ , ಜಗದೀಶ್, ಮತ್ತು ಸಿಬ್ಬಂದಿಯವರಾದ ರುದ್ರೇಶ್, ವೀರಭದ್ರಪ್ಪ, ಅಂಜಿನಪ್ಪ, ರಾಘವೇಂದ್ರ, ರವೀಂದ್ರ, ಧರ್ಮಪ್ಪ, ಚಾಲಕ ರವಿ, ಬಾಲರಾಜ್, ಇಬ್ರಾಹಿಂ, ಅಣ್ಣೇಶ, ಪರಶುರಾಮ, ತಿಮ್ಮರಾಜು, ಶಿವರಾಜ್, ಆನಂದ್, ಹೇಮನಾಯ್ಕ, ಚನ್ನಕೇಶವ, ಮೋಹನ್ ಚಾಲಕ ಇರ್ಷಾದ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ರಾಮಚಂದ್ರ ಜಾಧವ್, ಶಿವಕುಮಾರ್, ರಮೇಶ್, ನಾಗರಾಜ್, ಅಕ್ತರ್ ಹಾಗೂ ಜಿಲ್ಲಾ ಸುಕೋ ಟೀಮ್ ಅಧಿಕಾರಿಗಳನ್ನೊಳಗೊಂಡ ತಂಡವನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.