ದಾವಣಗೆರೆ (Davanagere); ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು ಭವಿಷ್ಯದ ಬರಹದಲ್ಲಿರುವ ವಿದ್ಯಾರ್ಥಿಗಳಿಗೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ವಿಡಿಯೋ ಸಂದೇಶದ ಮೂಲಕ ಶುಭಕೋರಿದ್ದಾರೆ.
ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಸಂಸದರು, ದ್ವಿತೀಯ ಪಿಯುಸಿ ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟ.ದಾವಣಗೆರೆ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ.ನೀವು ಒಂದು ಮಹತ್ವದ ಹಂತವನ್ನು ತಲುಪುತ್ತಿರುವ ಸಮಯ ಇದು. ದ್ವಿತೀಯ ಪಿಯುಸಿ ಪರೀಕ್ಷೆಗಳು ನಿಮ್ಮ ಭವಿಷ್ಯದ ಕನಸುಗಳಿಗೆ ದಾರಿ ತೋರಿಸುತ್ತವೆ.
ನಿಮ್ಮ ಶ್ರಮ, ವಿದ್ಯಾಭ್ಯಾಸ ಜೊತೆಗೆ ದೃಢಸಂಕಲ್ಪದೊಂದಿಗೆ ನೀವು ಈ ಹಂತವನ್ನು ಯಶಸ್ವಿಯಾಗಿ ಮುನ್ನಡೆಸುತ್ತೀರಾ ಎಂಬ ವಿಶ್ವಾಸವಿದೆ.ಪರೀಕ್ಷೆಗಳು ಕೇವಲ ಅಂಕಗಳನ್ನು ಪಡೆಯುವ ಹಂತವಲ್ಲ. ಅವು ನಿಮ್ಮ ಬದುಕಿನ ಮಹತ್ತರ ಪಾಠಗಳನ್ನು ಕಲಿಸುವ ಸೂಕ್ತ ಅವಕಾಶಗಳು. ಈ ಸಮಯದಲ್ಲಿ ಶಿಸ್ತಿನ ಜೀವನ ಮತ್ತು ಯೋಜಿತ ಅಧ್ಯಯನ ನಿಮಗೆ ಅತ್ಯಂತ ಸಹಾಯಕವಾಗಬಹುದು .
ತಪ್ಪದೇ ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ ಹಾಗೂ ಸಮಯವನ್ನು ಸೂಕ್ತವಾಗಿ ನಿರ್ವಹಿಸಿ.ಪ್ರಶ್ನೆಗಳನ್ನು ಓದುವಾಗ, ಉತ್ತರಿಸುವಾಗ ಸಮರ್ಪಕ ಸಮಯ ಬಳಸಿಕೊಳ್ಳಿ. ಮುಖ್ಯವಾಗಿ ಆರೋಗ್ಯದ ಮೇಲೆ ಗಮನಹರಿಸಿ. ಸಮತೋಲನಯುಕ್ತ ಆಹಾರ, ಸಮರ್ಪಕ ವಿಶ್ರಾಂತಿ ಹಾಗೂ ಆತ್ಮಸ್ಥೈರ್ಯ ನೀವು ಉತ್ತಮವಾಗಿ ಪರೀಕ್ಷೆ ಬರೆಯಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.
Read also : Davanagere | ನೊಂದವರ ನೆಚ್ಚಿನ ಅಧಿಕಾರಿಗಳಾಗಿ : ಸಂಸದರ ಸೂಚನೆ