Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere | ಸರಳ ವಿವಾಹಗಳಿಗೆ ಇಸ್ಲಾಂ ಧರ್ಮ ಬೆಂಬಲ : ಸೈಯದ್ ಶಂಷುದ್ದೀನ್ ಬರ್ಕಾತಿ
ತಾಜಾ ಸುದ್ದಿ

Davanagere | ಸರಳ ವಿವಾಹಗಳಿಗೆ ಇಸ್ಲಾಂ ಧರ್ಮ ಬೆಂಬಲ : ಸೈಯದ್ ಶಂಷುದ್ದೀನ್ ಬರ್ಕಾತಿ

Dinamaana Kannada News
Last updated: August 26, 2024 3:18 am
Dinamaana Kannada News
Share
Harihara
ಹರಿಹರ: ಹರಿಹರದಲ್ಲಿ ಹಿಂದುಸ್ಥಾನ್ ಟ್ರೇಡರ್ಸ್ ವೆಲ್ಫೇರ್ ಕಮಿಟಿ, ಲಾರಿ ಮಾಲಿಕರು ಮತ್ತು ಚಾಲಕರ ಸಂಘದಿಂದ ಆಯೋಜಿಸಿದ್ದ ಮುಸ್ಲಿಂ ಸಮುದಾಯದವರ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 8 ಜೋಡಿ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದರು.
SHARE

ಹರಿಹರ (Davanagere) : ವಿವಾಹ ಮಹೋತ್ಸವಗಳ ಸರಳೀಕರಣಕ್ಕೆ ಇಸ್ಲಾಂ ಧರ್ಮ ಬೆಂಬಲ ನೀಡುತ್ತದೆ ಎಂದು ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ ಹೇಳಿದರು.

ಹಿಂದುಸ್ಥಾನ್ ಟ್ರೇಡರ್ಸ್ ವೆಲ್ಫೇರ್ ಕಮಿಟಿ, ಲಾರಿ ಮಾಲಿಕರು ಮತ್ತು ಚಾಲಕರ ಸಂಘದಿಂದ ನಗರದ ಭಾಗೀರಥಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮುಸ್ಲಿಂ ಸಮುದಾಯದವರ ಸಾಮೂಹಿಕ ವಿವಾಹ ಮಹೋತ್ಸವದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ವಿವಾಹ ಸೇರಿದಂತೆ ಕುಟುಂಬದ ಇತರೆ ಶುಭ ಮಹೋತ್ಸವಗಳನ್ನು ಸರಳವಾಗಿ ಆಚರಿಸಿದವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರವಾದಿ ಮೊಹಮ್ಮದ್ ರವರೂ ಕೂಡ ತಮ್ಮ ಕುಟುಂಬದ ಸದಸ್ಯರ ವಿವಾಹಗಳನ್ನು ಅತ್ಯಂತ ಸರಳವಾಗಿ ಆಚರಿಸಿ ನಮಗೆಲ್ಲ ಮಾದರಿಯಾಗಿದ್ದಾರೆಂದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಸಂಸ್ಥೆಯವರು ಬಹಳ ಪರಿಶ್ರಮದಿಂದ ವಿವಾಹ ಮಹೋತ್ಸವ ಆಯೋಜಿಸಿದ್ದಾರೆ. ವಿವಾಹಕ್ಕೆ ಮಾಡಬೇಕಿದ್ದ ಖರ್ಚನ್ನು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡಿ, ಆದರ್ಶ ಜೀವನ ನಡೆಸಿರಿ ಎಂದು ನವದಂಪತಿಗಳಿಗೆ ಕಿವಿ ಮಾತು ಹೇಳಿದರು.

Read also  : Davangere Cybercrime | ಲಾಭದ ಅಮಿಷ, ಆನ್ಲೈನ್ ಟ್ರೇಡಿಂಗ್  ಹಣ ಹೂಡಿಕೆ : 53.59 ಲಕ್ಷ ರೂ ವಂಚನೆ

ಸಮರ್ಥ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಮಕ್ಕಳ ವಿವಾಹಗಳನ್ನು ನೆರೆವೇರಿಸಿದ ಕುಟುಂಬದವರು ಹಲವು ವರ್ಷಗಳ ಕಾಲ ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಾರೆ. ವಿವಾಹಗಳನ್ನು ಸರಳವಾಗಿ ಆಚರಿಸುವ ಪರಂಪರೆ ಸಮಾಜದಲ್ಲಿ ಬೆಳೆಯಬೇಕೆಂದರು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಸೈಯದ್ ಏಜಾಜ್ ಮಾತನಾಡಿ, ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 8 ಜೋಡಿ ನವದಂಪತಿಗಳಿಗೆ ತಲಾ ಒಂದುವರೆ ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ದಿನನಿತ್ಯದ ವಸ್ತುಗಳನ್ನು ಆಯೋಜಕರು ನೀಡಿರುವುದು ಶ್ಲಾಘನೀಯ ಎಂದರು.

ಹಿಂದುಸ್ಥಾನ್ ಟ್ರೇಡರ್ಸ್ ವೆಲ್ಫೇರ್ ಕಮಿಟಿ ಮುಖಂಡ ಅಬು ತುರಾಬ್ ಮಾತನಾಡಿ, ಎಲ್ಲಿಯೂ ದೇಣಿಗೆ ಎತ್ತದೆ ಲಾರಿ ಮಾಲಿಕರು, ಚಾಲಕರು ಹಾಗೂ ಕೆಲವು ವ್ಯಾಪಾರಿಗಳು ಪರಸ್ಪರ ಹಣ ಹಾಕಿ ಈ ಮಹೋತ್ಸವ ಆಯೋಜಿಸಿದೆ. ಇಂತಹ ಮಹೋತ್ಸವಗಳಲ್ಲಿ ಮದುವೆಯಾದ ದಂಪತಿಗಳಿಗೆ ವಕ್ಫ್ ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸರ್ಕಾರ ಜಾರಿ ಮಾಡಬೇಕೆಂದರು.

ಅಂಜುಮನ್ ಸಂಸ್ಥೆ ಕಾರ್ಯದರ್ಶಿ ಆಸಿಫ್ ಜುನೈದಿ, ನಗರಸಭಾ ಸದಸ್ಯರಾದ ಎಂ.ಎಸ್.ಬಾಬುಲಾಲ್, ಸೈಯದ್ ಅಲೀಂ, ಲಾರಿ ಮಾಲಿಕರ ಸಂಘದ ಅಧ್ಯಕ್ಷ ಸೈಯದ್ ಯೂಸುಫ್ ಕಾರ್ಯದರ್ಶಿ ಜಕಾಉಲ್ಲಾ, ಪದಾಧಿಕಾರಿಗಳಾದ ಜಪಾನ್ ರಫೀಕ್, ಮೊಹ್ಮದ್ ರಫೀಕ್, ಫಯಾಜ್ ಅಹ್ಮದ್, ಸೈಯದ್ ಅಬೂಜರ್, ಕರೀಂ ಸಾಬ್, ಸೈಯದ್ ಇಸ್ಮಾಯಿಲ್, ಮಹಬೂಬ್ ಸಾಬ್, ಬಿಸ್ಮಿಲ್ಲಾ ರಫೀಕ್, ಅಸ್ಲಂ, ಮೊಹ್ಮದ್ ರಫೀಕ್, ಶಶಿನಾಯ್ಕ್, ದೋಸ್ತಾನಾ ಖಲೀಲ್ ಸಾಬ್, ಹಾಜಿ ಅಲಿ, ಸೈಯದ್ ಸನಾಉಲ್ಲಾ, ಗುತ್ತೂರು ನಾಸಿರ್ ಪೈಲ್ವಾನ್, ಕೆ.ರಿಯಾಜ್ ಅಹ್ಮದ್, ಸೈಯದ್ ಜಬಿಉಲ್ಲಾ, ಗೌಸ್‍ಪೀರ್, ಸೈಯದ್ ಮುಜಮ್ಮಿಲ್, ಆಸಿಫ್ ಅಖ್ತರ್, ರಹಮಾನ್ ಸಾಬ್, ಅಬು ಸೈಯದ್, ಅಬು ಸ್ವಾಲೇಹಾ, ದಾದಾಪೀರ್ ಭಾನುವಳ್ಳಿ ಇದ್ದರು.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere Davangere Cybercrime | ಲಾಭದ ಅಮಿಷ, ಆನ್ಲೈನ್ ಟ್ರೇಡಿಂಗ್  ಹಣ ಹೂಡಿಕೆ : 53.59 ಲಕ್ಷ ರೂ ವಂಚನೆ
Next Article Davanagere Vijayendra | ವಿಜಯೇಂದ್ರ ವಿರುದ್ದ ಅಕ್ಟೋಬರ್ ಕ್ರಾಂತಿ?

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಸಿಡಿಲು ಬಡಿದು ೨೫ ಮೇಕೆ ಸಾವು

ದಾವಣಗೆರೆ  :   ತಾಲ್ಲೂಕಿನ ಆನಗೋಡು ಸಮೀಪದ ಈಚಘಟ್ಟ ಗ್ರಾಮದಲ್ಲಿ ಸಿಡಿಲು ಬಡಿದು ೧೬ ಹೆಣ್ಣು ಮೇಕೆ, ೯ ಗಂಡು ಮೇಕೆ…

By Dinamaana Kannada News

Davanagere news | ಎಸ್ಎಎಸ್ಎಸ್ ಯೋಗ ಕೇಂದ್ರದ ವಿದ್ಯಾರ್ಥಿಗಳು ಸಾಧನೆ

ದಾವಣಗೆರೆ (Davangere District) :  ಇತ್ತೀಚಿಗೆ ಚಿಕ್ಕಮಗಳೂರು (Chikmagalur District) ಜಿಲ್ಲೆ ಕಡೂರು ಪಟ್ಟಣದ ಪುಟ್ಟಮ್ಮ ಬೆಂಕಿ ಕಲ್ಯಾಣ ಮಂಟಪದಲ್ಲಿ…

By Dinamaana Kannada News

ದಾವಣಗೆರೆ | ಬೀದಿ ಬದಿ ವ್ಯಾಪಾರ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ-ತಪಾಸಣೆ

ದಾವಣಗೆರೆ : ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಬೀದಿ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?