Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ದಾವಣಗೆರೆ ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಕುಸಿತ : ಬಿಜೆಪಿ ಲೋಕಿಕೆರೆ ನಾಗರಾಜ
ತಾಜಾ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಕುಸಿತ : ಬಿಜೆಪಿ ಲೋಕಿಕೆರೆ ನಾಗರಾಜ

Dinamaana Kannada News
Last updated: May 7, 2025 6:44 am
Dinamaana Kannada News
Share
Davanagere
Davanagere
SHARE

ದಾವಣಗೆರೆ (Davanagere) : ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಇಸ್ಪೀಟ್ ಜೂಜಾಟ, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್, ಡ್ರಗ್ಸ್, ಗಾಂಜಾ, ಮರಳು ದಂಧೆ ಕಾನೂನು ಬಾಹಿರ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ನೋಡಿಕೊಳ್ಳಲೆಂದೇ ಒಬ್ಬ ಹಿಂಬಾಲಕನನ್ನು ಬೇರೆ ಬೇರೆ ಇಲಾಖೆಗೆ ಬಿಡುವ ಮೂಲಕ ಕಾಂಗ್ರೆಸ್ ಅಳ್ವಿಕೆಯಲ್ಲಿ ಲಂಚ ಬಾಕತನ ಮಿತಿ ಮೀರುತ್ತಿದ್ದು,ಸಚಿವರು, ಸಂಸದರು, ಉತ್ತರ- ದಕ್ಷಿಣ ಶಾಸಕರು ಯಾರೆಂಬುದೇ ಗೊಂದಲವಾಗುತ್ತಿದೆ ಎಂದು ದೂರಿದರು.

ಈಗ ಐಪಿಎಲ್ ಪಂದ್ಯಾವಳಿ ನಡೆದಿದ್ದು, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸಹ ಸಾಗಿದೆ. ಕ್ರಿಕೆಟ್ ಬೆಟ್ಟಿಂಗ್‍ಗೆ ದುಡ್ಡುಕಟ್ಟಿ ಅನೇಕ ಕುಟುಂಬ ಬೀದಿ ಪಾಲಾಗಿವೆ ಎಂದು ಹೇಳಿದರು.

ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಜಿಲ್ಲಾ ಸಚಿವರ ಆಳ್ವಿಕೆಯಲ್ಲಿ ಅತಿ ಸಚಿವರ ಹಿಂಬಾಲಕನೊಬ್ಬ ಜಿಲ್ಲೆಯ ಪೊಲೀಸ್ ಇಲಾಖೆ ವ್ಯವಸ್ಥೆ ನೋಡಿಕೊಳ್ಳುತ್ತಿದ್ದು, ಸಚಿವರು, ಸಂಸದರು, ಶಾಸಕರಿಗೂ ಸಿಗದಷ್ಟು ಬೆಲೆ ಹಿಂಬಾಲಕನಿಗೆ ಅಧಿಕಾರಿಗಳು ನೀಡುತ್ತಿದ್ದಾರೆ. ಬೇರೆ ಬೇರೆ ಇಲಾಖೆ ನೋಡಿಕೊಳ್ಳುವ ಸಚಿವರ ಹಿಂಬಾಲಕರಿಗೆ ಬೆಲೆ ಸಿಗುತ್ತಿದ್ದು, ಸಚಿವ, ಸಂಸದರು, ಶಾಸಕರು ಯಾರೆಂಬುದೇ ಗೊತ್ತಾಗದಂತಾಗಿದೆ ಎಂದರು.

ಆಪ್ತರಿಗೆ ಟೆಂಡರ್ ಧಿಕ್ಕರಿಸಿ ಮರಳುಗಾರಿಕೆಗೆ ಅನುವು ಮಾಡಿಕೊಡಲಾಗುತ್ತಿದೆ. ಸಚಿವರ ಬಲಗೈ ಬಂಟನಾಗಿದ್ದ ವ್ಯಕ್ತಿ ದಾವಣಗೆರೆ ಇಸ್ಪೀಟ್ ಅಡ್ಡೆಯೊಂದರಲ್ಲಿ ಸೋಮವಾರ ಸಂಜೆ ಬರ್ಬರವಾಗಿ ಹತ್ಯೆಯಾಗಿದ್ದು, ಅಂತಹವರನ್ನು ಕಾಂಗ್ರೆಸ್ಸಿನ ನಾಯಕರು ಬೆಳೆಸಿದ್ದನ್ನು ನೋಡಿದರೆ ಜನರಿಗೆ ಏನು ಹೇಳಲು ಹೊರಟಿದ್ದಾರೆಂಬುದೇ ಅರ್ಥವಾಗದಾಗಿದೆ ಎಂದರು.

ಜಿಲ್ಲೆಯ ವಿವಿಧ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಉಪಲೋಕಾಯುಕ್ತರಿಗೆ ರಾಜ್ಯದಲ್ಲೇ ದಾಖಲೆಯ 512 ಅರ್ಜಿ ದಾವಣಗೆರೆಯಲ್ಲಿ ಸಲ್ಲಿಕೆಯಾಗಿದೆಯೆಂದರೆ, ಇಲ್ಲಿ ಏನು ನಡೆಯುತ್ತಿದೆಯೆಂಬುದಕ್ಕೆ ನಿದರ್ಶನವಾಗಿದೆ ಎಂದು ಆರೋಪಿಸಿದರು.

Read also : Crime news | ರೌಡಿಶೀಟರ್ ಕಣುಮನ ಹಂತಕರು ಒಂದು ದಿನದ ನಂತರ ಅಂದರ್ !

ಮುಖಂಡರಾದ ಎನ್.ಎಚ್. ಹಾಲೇಶ, ರಾಜು ತೋಟಪ್ಪನವರ್,ವಾಟರ್ ಮಂಜು, ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.

TAGGED:davanagereIPL Cricket Bettingಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ದಾವಣಗೆರೆಬಿಜೆಪಿ
Share This Article
Twitter Email Copy Link Print
Previous Article Davanagere crime Crime news | ರೌಡಿಶೀಟರ್ ಕಣುಮನ ಹಂತಕರು ಒಂದು ದಿನದ ನಂತರ ಅಂದರ್ !
Next Article Davanagere ಭಯೋತ್ಪಾದಕರ ಶಿಬಿರದ ಮೇಲೆ ಭಾರತ ಸೇನೆಯ ಪರಾಕ್ರಮಕ್ಕೆ ಸಲಾಂ: ಸೈಯದ್ ಖಾಲಿದ್ ಅಹ್ಮದ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಮುಗಿಲು ಮುಟ್ಟಿದ ಮಾದಿಗರ ಧ್ವನಿ | ನ್ಯಾಯ ಸಿಗದಿದ್ದರೆ ರಾಜಕಾರಣಿಗಳನ್ನು ಮನೆ ಹತ್ತಿರ ಬಿಟ್ಟುಕೊಳ್ಳಬೇಡಿ : ನಾರಾಯಣ ಸ್ವಾಮಿ

ದಾವಣಗೆರೆ (Davanagere):  ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಜಾತಿ ಗಣತಿ ಬೇಕು ಎನ್ನುವ ಸಿದ್ದರಾಮಯ್ಯ ಬಜೆಟ್ ಅನುದಾನ , ನಿಗಮ, ನೇಮಕಾತಿ…

By Dinamaana Kannada News

ಅಕ್ರಮ ಮಣ್ಣು, ಮರಳು ಗಣಿಗಾರಿಕೆಯಿಂದ ನದಿ ಮೂಲ ನಾಶ : ಡಿಎಸ್‌ಎಸ್‌ ಆತಂಕ

ಹರಿಹರ (Harihara) : ಅಕ್ರಮ ಮಣ್ಣು ಹಾಗೂ ಮರಳು ಗಣಿಗಾರಿಕೆಯಿಂದಾಗಿ ಒಂದೆರಡು ವರ್ಷಗಳಲ್ಲಿ ನದಿಯೇ ಇಲ್ಲದಂತಾಗಲಿದೆ. ಆದ್ದರಿಂದ ತಾಲ್ಲೂಕಿನ ಜನತೆ…

By Dinamaana Kannada News

ಅಲ್ಪಸಂಖ್ಯಾತರ ಸಮುದಾಯದ ಬಿ.ಎಡ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಡಿ.02 - ಪ್ರಸಕ್ತ ಸಾಲಿನಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್‍ನಿಂದ ಮಾನ್ಯತೆ ಪಡೆದಿರುವ ದಾವಣಗೆರೆ ಜಿಲ್ಲೆಯ ಸರ್ಕಾರಿ,…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Mallikarjuna Kadakola
ತಾಜಾ ಸುದ್ದಿ

ಕಡಕೋಳ ನೆಲದ ನೆನಪುಗಳು ಕೃತಿಗೆ ರಾಷ್ಟ್ರೀಯ ಪುರಸ್ಕಾರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?