Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಪರಾಧ ಸುದ್ದಿ > Crime news | ರೌಡಿಶೀಟರ್ ಕಣುಮನ ಹಂತಕರು ಒಂದು ದಿನದ ನಂತರ ಅಂದರ್ !
ಅಪರಾಧ ಸುದ್ದಿ

Crime news | ರೌಡಿಶೀಟರ್ ಕಣುಮನ ಹಂತಕರು ಒಂದು ದಿನದ ನಂತರ ಅಂದರ್ !

Dinamaana Kannada News
Last updated: May 7, 2025 6:24 am
Dinamaana Kannada News
Share
Davanagere crime
Davanagere crime
SHARE

ಚಿತ್ರದುರ್ಗ (chitraduraga): ರೌಡಿ ಶೀಟರ್ ಕಣುಮ ಅಲಿಯಾಸ್ ಕಣುಮ ಸಂತೋಷಕುಮಾರನನ್ನು ಬರ್ಬರವಾಗಿ ಹತ್ಯೆಗೈದು ಸ್ಥಳದಿಂದ ನಾಪತ್ತೆಯಾಗಿದ್ದ ಹಂತಕರ ಪೈಕಿ 10 ಜನ ಮಂಗಳವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

ಹತ್ತು ಜನರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಚಿತ್ರದುರ್ಗಡಿವೈಎಸ್ಪಿದಿನಕರ್‌ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಕಣುಮ ಸಂತೋಷನ ಹತ್ಯೆ ಮಾಡಿ, ಬಸ್ ಮೂಲಕ ತಾವು ಹೊಳಲ್ಕೆರೆಗೆ ಬಂದಿರುವುದಾಗಿ ಪೊಲೀಸರ ಮುಂದೆ  ಆರೋಪಿಗಳು ಹೇಳಿದ್ದಾರೆ.

ಇತ್ತ ಕಣುಮನ ಹಂತಕರು ಹೊಳಲ್ಕೆರೆ ಠಾಣೆಯಲ್ಲಿ ಶರಣಾಗಿರುವ ವಿಷಯ ತಿಳಿಯುತ್ತಿದ್ದಂತೆ ಹಂತಕರ ಪತ್ತೆಗೆ ರಚನೆಯಾಗಿದ್ದ ದಾವಣಗೆರೆ ನಗರ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆಯುವ ಪ್ರಕ್ರಿಯೆ ಕೈಗೊಳ್ಳಲು ತೆರಳಿದೆ.

ಇನ್ನು ವಿಚಾರಣೆ ನಂತರ ಕಣುಮನ ಹತ್ಯೆ ಆರೋಪಿಗಳನ್ನು ನ್ಯಾಯಾಧೀಶರ ಸಮಕ್ಷಮದಲ್ಲಿ ಹಾಜರುಪಡಿಸಿ, ದಾವಣಗೆರೆಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.

ದಾವಣಗೆರೆ ಭಾರತ ಕಾಲನಿ ನಿವಾಸಿ ಸಂತೋಷ್ ಅಲಿಯಾಸ್ ಚಾವಳಿ ಸಂತೋಷ, ಕಾರ್ತಿಕ್, ಪ್ರಭು, ನವೀನ್ ಅಲಿಯಾರ್‌ಬಾಕ್ರಿ, ರಾಜ ಅಲಿಯಾಸ್ ತಾರಕ್ ರಾಜ, ನವೀನ್ ಅಲಿಯಾಸ್ ಸೈಲೆಂಟ್ ನವೀನ, ಮಾರುತಿ, ಬಸವರಾಜ ಅಲಿಯಾಸ್ ಪಿಂಕಿ, ಜಯಸೂರ್ಯ, ಭರತ್‌ ಅಲಿಯಾಸ್ ಸ್ಲಂ ಪೊಲೀಸರಿಗೆ ಶರಣಾಗಿದ್ದು, ಪ್ರಕರಣದ ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆಂದು ಹೇಳಲಾಗಿದೆ.

ಘಟನೆ ವಿವರ: ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದುರಿನ ರಿಕ್ರಿಯೇಷನ್ ಕ್ಲಬ್‌ನಲ್ಲಿ ಕಾಂಗ್ರೆಸ್ ಮುಖಂಡ ಕಣುಮ ಸಂತೋಷ ಸೇರಿದಂತೆ ಬಿಜೆಪಿ ಮುಖಂಡರು, ಇತರೆ ವ್ಯಕ್ತಿಗಳು ಜೆ ರಿಕ್ರಿಯೇಷನ್ ಕ್ಲಬ್ ನಲ್ಲಿ ಕುಳಿತಿದ್ದ ವೇಳೆ ಏಳೆಂಟು ಜನರ ಗುಂಪು ಅಲ್ಲಿಗೆ ನುಗ್ಗಿ ಏಕಾಏಕಿ ಮಚ್ಚು, ಲಾಂಗ್ ಗಳಿಂದ ಕಣುಮನನ್ನೇ ಗುರಿಯಾಗಿಸಿಕೊಂಡು, ಮುಖ, ಕೈ,ಕುತ್ತಿಗೆ ಮೇಲೆ ದಾಳಿ ಮಾಡಿ, ಬರ್ಬರವಾಗಿ ಹತ್ಯೆ ಮಾಡಿತ್ತು.

Read also : crime news | ದಾವಣಗೆರೆಯಲ್ಲಿ  ರೌಡಿಶೀಟರ್ ಸಂತೋಷ್ (ಕಣುಮ)  ಬರ್ಬರ ಹತ್ಯೆ

ಮೃತ ಕಣುಮ ಸಂತೋಷನ ಪತ್ನಿ ಟಿ.ಕೆ.ಶೃತಿ, ತನ್ನ ಪತಿ ಸಂತೋಷಕುಮಾರ ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದರು. ಆದರೆ, ಸಂಜೆ ತಮ್ಮ ಸಂಬಂಧಿ ಮಂಜುನಾಥ ತನಗೆ ಕರೆ ಮಾಡಿ, ಸಂತೋಷ್ ಗೆ ಸೋಮೇಶ್ವರ ಆಸ್ಪತ್ರೆ ಎದುರಿನ ಕಟ್ಟಡದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ಪತಿಯನ್ನು ಕೊಲೆ ಮಾಡಿದವರನ್ನು ಪತ್ತೆ ಮಾಡಿ, ಕಾನೂನು ಕ್ರಮ ಒತ್ತಾಯಿಸಿದರು.

“12 ಜನರ ವಿರುದ್ದ ದೂರು : ರೌಡಿ ಶೀಟರ್, ಕಾಂಗ್ರೆಸ್ ಮುಖಂಡ ಸಂತೋಷಕುಮಾರ ಅಲಿಯಾಸ್ ಕಣುಮ ಸಂತೋಷನ ಕೊಲೆಗೆ ಸಂಬಂಧಿಸಿದಂತೆ 12 ಮಂದಿಸೇರಿದಂತೆ ಇತರರ ವಿರುದ್ಧ ಮೃತನ ಪತ್ನಿ ಟಿ.ಕೆ.ಶೃತಿ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಗರದ ವಾಸಿಗಳಾದ ಗುಂಡಪ್ಪ, ಭಾರತ್ ಕಾಲನಿಯಕಾರ್ತಿಕ್, ಬೂದಾಳ್ ರಸ್ತೆಯ ನವೀನ್, ಖಾರದ ಪುಡಿ ನವೀನ್ (ಖಾರದ ಪುಡಿ ಮಂಜನ ತಮ್ಮ), ಚಾವಳಿ ಸಂತು ಅಲಿಯಾಸ್ ಚಾವಳಿ ಸಂತೋಷ, ಅಲಿಯಾಸ್ ಬಸವರಾಜ ಬಸ್ಯಾಷ ಹನುಮಂತಪ್ಪ, ಗಡ್ಡ ವಿಜಿ, ಚಿಕ್ಕನಹಳ್ಳಿ ಶಿವು, ಕಡ್ಡಿ ರಘು, ಪ್ರಶಾಂತ್ ಅಲಿಯಾಸ್ ಪಚ್ಚಿ, 60 ಅಡಿ ರಸ್ತೆಯ ಗಣಿ ಮತ್ತು ಇತರರು ತನ್ನ ಪತಿ ಸಂತೋಷಕುಮಾರ ಅಲಿಯಾಸ್ ಕಣುಮ ಸಂತೋಷನನ್ನು ಕೊಲೆ ಮಾಡಿರುವುದಾಗಿ ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

TAGGED:crime newsdavanagerepoliceRowdysheeter
Share This Article
Twitter Email Copy Link Print
Previous Article Davanagere Davanagere | ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
Next Article Davanagere ದಾವಣಗೆರೆ ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಕುಸಿತ : ಬಿಜೆಪಿ ಲೋಕಿಕೆರೆ ನಾಗರಾಜ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಸೊಂಡೂರಿನ ಕಗ್ಗತ್ತಲೆಯ ಕಥನಗಳು-26 ಸಾಲಿ ಬಿಟ್ಟ ಮಕ್ಕಳು….

ಬಳ್ಳಾರಿ ಜಿಲ್ಲೆಯ ತಲಾ ವರಮಾನವು ರೂ.47607/ ಇದ್ದು,ಆಗ ಕರ್ನಾಟಕ ರಾಜ್ಯದ ತಲಾ ವರಮಾನವು ರೂಂ.41902/ ಆಗಿತ್ತು. ಅಂದರೆ ಬಳ್ಳಾರಿ ಜಿಲ್ಲೆ…

By Dinamaana Kannada News

Harihara | ಬಾಡಿಗೆದಾರರನ್ನು ಖಾಲಿ ಮಾಡಿಸಿ, ಮರು ಹಾರಜು ಮಾಡಿ ಒತ್ತಾಯ

ಹರಿಹರ (Davanagere) : ನಗರದ ಗಾಂಧಿ ಮೈದಾನದ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರ ಅವಧಿ ಮೀರಿರುವ ಕಾರಣ ಎಲ್ಲಾ…

By Dinamaana Kannada News

Davanagere | ಆವರಗೆರೆ ನಿರಾಶ್ರಿತರಿಗೆ ಹಕ್ಕುಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ (Davanagere): ಆವರಗೆರೆಯ ಹಳ್ಳದ ಖರಾಬು ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ನಿರ್ಗತಿಕರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಕರ್ನಾಟಕ…

By Dinamaana Kannada News

You Might Also Like

ups blast davangere-mother-son-dead
ಅಪರಾಧ ಸುದ್ದಿ

ದಾವಣಗೆರೆಯಲ್ಲಿ ಯಪಿಎಸ್ ಬ್ಲಾಸ್ಟ್ ಶಂಕೆ : ರೂಮಿನಲ್ಲಿದ್ದ ತಾಯಿ, ಮಗ ಧಾರುಣ ಸಾವು

By Dinamaana Kannada News
Jagaluru Crime News
ಅಪರಾಧ ಸುದ್ದಿ

ಪೆಟ್ರೋಲ್ ಸುರಿದು ಎಟಿಎಂ ಒಡೆಯಲು ಯತ್ನ; ನಂತ್ರ ನಡೆದ ಘಟನೆಯಿಂದ ಕಳ್ಳರು ಕಕ್ಕಬಿಕ್ಕಿ

By Dinamaana Kannada News
Crime davanagere
ಅಪರಾಧ ಸುದ್ದಿತಾಜಾ ಸುದ್ದಿ

ಕಳ್ಳತನ ಪ್ರಕರಣ : ಓರ್ವ ಆರೋಪಿ ಹಾಗೂ ಇಬ್ಬರು ಅಪ್ರಾಪ್ತರ ಬಂಧನ

By Dinamaana Kannada News
Farmers' registration process for crop insurance scheme begins
ತಾಜಾ ಸುದ್ದಿ

ಬೆಳೆವಿಮೆ ಯೋಜನೆಗೆ ರೈತರ ನೋಂದಣಿ ಪ್ರಕ್ರಿಯೆ ಆರಂಭ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?