ಹರಿಹರ (Harihara) : ಪ್ರಭಾರಿ ಜಿಲ್ಲಾಧಿಕಾರಿ ಸುರೇಶ್ ಹಿಟ್ನಾಳ್ ಅವರು ನಗರದ ಮಂಜುನಾಥ ದಾಮೋದರ ಪೈ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ಕೊಳಕಾದ ಹೊದಿಕೆಗಳನ್ನು ಗಮನಿಸಿ ಇಲ್ಲಿಗೆ ಬರುವ ರೋಗಿಗಳು ರೋಗ ಮುಕ್ತರಾಗುವ ಬದಲು ಮತ್ತಷ್ಟು ರೋಗಪೀಡಿತರಾಗುತ್ತಾರೆ ಎಂದರು.
ಅಸ್ಪತ್ರೆಗೆ ಬರುವ ರೋಗಿಗಳಿಗೆ ಕುರ್ಚಿಗಳಿಲ್ಲವೆ ಎಂದು ಪ್ರಶ್ನಿಸಿ, ತಪಾಸಣೆಗೆ ಬರುವ ರೋಗಿಗಳು ಕುಳಿತುಕೊಳ್ಳಲು ಮೊದಲು ಕುರ್ಚಿಗಳನ್ನು ಅಳವಡಿಸಿರಿ ಎಂದು ಹೇಳಿದರು.
ಅಸ್ಪತ್ರೆಯ ಶುಲ್ಕದ ವಿವರವನ್ನು ಜನರಿಗೆ ಸ್ಪಷ್ಟವಾಗಿ ಕಾಣುವಂತೆ ಅಳವಡಿಸಿ ಎಂದು ಸೂಚಿಸಿದರು, ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಗುತ್ತಿಗೆ ಆಧಾರಿತ ನೌಕರರನ್ನು ಮಾತನಾಡಿಸಿ, ಸಂಬಳವನ್ನು ಏಜೆನ್ಸಿಯವರು ನಿಯಮಿತವಾಗಿ ಪಾವತಿ ಮಾಡುತ್ತಿದ್ದಾರೆಯೇ ಯೆ ಎಂದು ಮಾಹಿತಿ ಪಡೆದರು, ಜನೌಷಧಿ ಕೇಂದ್ರ, ಎಕ್ಸ್ರೇ ಘಟಕ, ಪ್ರಯೋಗಾಲಯ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆ ಅವ್ಯವಸ್ಥೆ ಕೂಡಿದ್ದು ಸರಿಪಡಿಸಲು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಇನ್ನೊಂದು ಬಾರಿ ಮತ್ತೆ ಭೇಟಿ ನೀಡಿ ಪ್ರತಿಯೊಂದು ವಾರ್ಡನ್ನು ಪರಿಶೀಲನೆ ಮಾಡುತ್ತೇನೆ ಎಂದರು.
Read also : ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಶಿಕ್ಷೆ
ಆಸ್ಪತ್ರೆ ಮುಖ್ಯಸ್ಥ ಹನುಮಾನಾಯ್ಕ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.