Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಪಂಚಮಸಾಲಿ ಸಮಾಜದ ಪ್ರತ್ಯೇಕ ಸಭೆಗಳು ರದ್ದು : ಮಾಜಿ ಶಾಸಕ ಎಚ್.ಎಸ್.ಶಿವಶಂಕರ್
ತಾಜಾ ಸುದ್ದಿ

ಪಂಚಮಸಾಲಿ ಸಮಾಜದ ಪ್ರತ್ಯೇಕ ಸಭೆಗಳು ರದ್ದು : ಮಾಜಿ ಶಾಸಕ ಎಚ್.ಎಸ್.ಶಿವಶಂಕರ್

Dinamaana Kannada News
Last updated: April 18, 2025 6:27 am
Dinamaana Kannada News
Share
Panchamasali Society
Panchamasali Society
SHARE

ದಾವಣಗೆರೆ (Davanagere): ಪಂಚಮಸಾಲಿ ಸಮಾಜದ ಮುಖಂಡ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ನಂತರ ಉಂಟಾದ ಗೊಂದಲ ಕುರಿತು ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮತ್ತು ಜಯಮೃತ್ಯುಂಜಯ ಶ್ರೀಗಳು ಕರೆದಿದ್ದ ತಮ್ಮ ಬೆಂಬಲಿಗರ ಪ್ರತ್ಯೇಕ ಸಭೆಗಳು ರದ್ದಾಗಿವೆ ಎಂದು ಮಾಜಿ ಶಾಸಕ ಹಾಗೂ ಸಮಾಜದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಶಿವಶಂಕರ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜದ ನಾಯಕರಿಗೆ ಅನ್ಯಾಯವಾದಾಗ ಸಮಾಜ ಬಾಂಧವರು ಹೋರಾಟ ಮಾಡುವುದು ಸಾಮಾನ್ಯ, ಆದರ ಬಗ್ಗೆ ಹೆಚ್ಚು ಹೇಳುವುದಿಲ್ಲ. ಆದರೆ ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳು ಸಮಾಜದ ಒಬ್ಬ ನಾಯಕನಿಗೆ ಅನ್ಯಾಯವಾಗುತ್ತದೆ ಎಂದು ಬೆಂಬಲಕ್ಕೆ ನಿಂತಿದ್ದು ಸ್ವಾಗತಾರ್ಹ. ರಾಜಕೀಯ ನಾಯಕರಿಗೆ ಎಲ್ಲ ಮಠ ಪೀಠಗಳು ಬೆಂಬಲಕ್ಕೆ ನಿಲ್ಲುವುದು ಸಾಮಾನ್ಯ. ಸ್ವಾಮೀಜಿಯಾದವರು ಪೀಠ ಕಟ್ಟುವುದು, ಸಮಾಜ ಕಟ್ಟುವುದು, ಸಮಾಜ ಬಾಂಧವರಿಗೆ ನೋವಾದಾಗ ಬೆಂಬಲಕ್ಕೆ ನಿಲ್ಲುವುದು ಸಾಮಾನ್ಯ. ಜಯಮೃತ್ಯುಂಜಯ ಸ್ವಾಮೀಜಿ ಇದನ್ನೆ ಮಾಡಿದ್ದಾರೆ ಎಂದರು.

ತದನಂತರ ನಡೆದ ಹೇಳಿಕೆಗಳು, ಅದಕ್ಕೆ ಪ್ರತಿ ಹೇಳಿಕೆಗಳು, ಸಾಮಾಜಿಕ ಜಾಲತಾಣಗಳ ಸಂದೇಶಗಳಿಂದ ಸಾಕಷ್ಟು ಗೊಂದಲಗಳು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿವೆ. ಇದು ಮುಂದುವರಿಯಬಾರದು ಎಂಬ ಸದುದ್ದೇಶದಿಂದ ಸಮಾಜದ ಮುಖಂಡ, ಮಾಜಿ ಸಚಿವ ಎ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಒಂದೇ ವೇದಿಕೆಯಲ್ಲಿ ಸಭೆ ನಡೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸ್ವಾಮೀಜಿ ಮತ್ತು ವಿಜಯಾನಂದ ಕಾಶಪ್ಪನವರ್ ಅವರೊಂದಿಗೆ ಸಭೆಗಳ ರದ್ಧುಪಡಿಸುವಂತೆ ಮನವಿ ಮಾಡಲಾಗಿತ್ತು. ಇಬ್ಬರು ಸಹಮತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕಾಶಪ್ಪನವರ್ ಕರೆದಿದ್ದ ಏ.19 ಸಭೆ ಹಾಗೂ ಇದಕ್ಕೆ ಪ್ರತಿಯಾಗಿ ಏ. 20 ರಂದು ಸ್ವಾಮೀಜಿಯವರು ಕರೆದಿದ್ದ ಅವರವರ ಬೆಂಬಲಿಗರ ಎರಡೂ ಸಭೆಗಳನ್ನು ರದ್ದು ಮಾಡಲಾಗಿದ್ದು, ಸಮಾಜ ಬಾಂಧವರು ಈ ಬಗ್ಗೆ ಗಮನಹರಿಸಬೇಕೆಂದು ತಿಳಿಸಿದರು.

Read also : ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ : ಅಧಿಕಾರಿಗಳಿಗೆ ತರಾಟೆ

ಶ್ರೀಗಳು ಯತ್ನಾಳ್ ಅವರ ಬಗ್ಗೆ ಹೆಚ್ಚು ಹೇಳಿಕೆ ಕೊಟ್ಟಿದ್ದರಿಂದ ಸಮಾಜದ ಕಾಂಗ್ರೆಸ್ ಪಕ್ಷದ ಕೆಲ ನಾಯಕರಿಗೆ ಗೊಂದಲ ಮತ್ತು ಅಸಮಾಧಾನ ಆಗಿದೆ. ಇದರಿಂದ ನಾಯಕರು ಆತಂಕಪಡುವುದು ಬೇಡ. ಸ್ವಾಮೀಜಿಯವರು ಅವರ ಜವಾಬ್ದಾರಿ ನಿರ್ವಹಿಸಿದ್ದಾರೆ. ಅದನ್ನು ತಪ್ಪಾಗಿ ಅರ್ಥೈಸಿ ಶ್ರೀಗಳ ಮೇಲೆ ಹರಿಹಾಯುವುದುಬೇಡ. ಶ್ರೀಗಳು ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಅವರು ಕೇವಲ ಮಠ ಕಟ್ಟಿಲ್ಲ, ಮನಸು ಕಟ್ಟಿದ್ದಾರೆ. ಸಮಾಜ ಕಟ್ಟುವಲ್ಲಿ ಅವರ ಪಾತ್ರ ದೊಡ್ಡದಿದೆ. ಸ್ವಾಮೀಜಿ ಒಂದು ಪಕ್ಷದ ಪರವಾಗಿ ಇದ್ದಾರೆ ಎಂದು ತಿಳಿದುಕೊಳ್ಳುವುದು ಬೇಡ. ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಮಾಡಬೇಕು. ಸಮಾಜ ದೊಡ್ಡದೇ ಹೊರತು, ವ್ಯಕ್ತಿ ಅಲ್ಲ. ಯಾರೂ ಕೂಡ ದ್ವೇಷದ ಹೇಳಿಕೆಗಳನ್ನು ನೀಡಬಾರದು ಎಂದರು.

ಮುರುಗೇಶ್ ನಿರಾಣಿ ಒಂದು ಕಡೆ, ಯತ್ನಾಳ್ ಇನೊಂದು ಕಡೆ, ಕಾಶಪ್ಪನವರ್ ಮತ್ತೊಂದು ಕಡೆ ಇದ್ದಾರೆ. ಎಲ್ಲರನ್ನೂ ಒಗ್ಗೂಡಿಸಿ ಒಂದೇ ವೇದಿಕೆಯಲ್ಲಿ ತಂದು ಸಭೆ ನಡೆಸುವ ನಿಟ್ಟಿನಲ್ಲಿ ಮಾಜಿ ಸಚಿವ ಎ.ಬಿ. ಪಾಟೀಲ್, ನಾನು ಒಳಗೊಂಡಂತೆ ಅನೇಕರು ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಭೆಯ ದಿನ ನಿರ್ಧರಿಸಲಾಗುವುದು. ಅಲ್ಲಿಯವರೆಗೂ ಸಮಾಜ ಬಾಂಧವರು ತಾಳ್ಮೆಯಿಂದ ಇರಬೇಕೆಂದು ಶಿವಶಂಕರ್ ಮನವಿ ಮಾಡಿದರು.

ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದ ಕಾರಣಕ್ಕೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರ ಪರ ನಿಂತಿದ್ದು ಕರ್ತವ್ಯದ ಒಂದು ಭಾಗ. ಸಮಾಜದ ಯಾವುದೇ ನಾಯಕರಿಗೆ ಅನ್ಯಾಯವಾದಲ್ಲಿ ಅವರ ಪರವಾಗಿ ನಿಲ್ಲಬೇಕಾಗಿರುವುದು ಸರ್ವೇ ಸಾಮಾನ್ಯ. ಅದರಂತೆ ಯತ್ನಾಳ್ ಪರ ನಿಂತಿದ್ದಾರೆ. ಅದನ್ನ ಕೆಲವರು ಒಪ್ಪಿದ್ದಾರೆ. ಕೆಲವರು ಸ್ವಾಮೀಜಿ ಒಬ್ಬರು, ಒಂದು ಪಕ್ಷದ ಪರ ನಿಂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವುದು ಸಮಂಜಸವೂ ಆಗಿದೆ. ಸ್ವಾಮೀಜಿಯವರು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ ಎಂದು ಎಲ್ಲರೂ ತಿಳಿದು, ಪರಸ್ಪರ ಹೇಳಿಕೆಗಳನ್ನು ನೀಡುವುದು, ಫೇಸ್‍ಬುಕ್‍ನಲ್ಲಿ ಕಾಮೆಂಟ್ ಹಾಕುವುದನ್ನ ಸಮಾಜದ ಹಿತದೃಷ್ಟಿಯಿಂದ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಒಬ್ಬರ ಮತ್ತು ಒಂದು ಪಕ್ಷದ ಪರವಾಗಿ ನಿಲ್ಲದಂತೆ ಸ್ವಾಮೀಜಿಯವರಿಗೂ ಕೋರಲಾಗಿದೆ. ಅದಕ್ಕೆ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ಅವರು ಹಣ ಮಾಡುವತ್ತ ಹೆಜ್ಜೆ ಹಾಕಿಲ್ಲ. ಬದಲಿಗೆ ಸಮಾಜದವರ ಮನಸ್ಸುಗಳ ಕಟ್ಟುವ ಕೆಲಸ ಮಾಡಿದ್ದಾರೆ. ನಾವು ಪಂಚಮಸಾಲಿಗಳು ಎಂದು ಎದೆತಟ್ಟಿಕೊಂಡು ಹೇಳಿಕೊಳ್ಳುವಂತಹ ಸನ್ನಿ ವೇಶ ತಂದಿದ್ದಾರೆ. ಸಮಾಜದಲ್ಲಿ ಗೊಂದಲ, ಗೋಜಲು, ಆತಂಕ ಮೂಡಿಸುವ, ದ್ವೇಷ ಮೂಡಿಸುವ ಹೇಳಿಕೆ ನೀಡಬಾರದು. ಎಲ್ಲ ಗೊಂದಲಕ್ಕೆ ಇತಿಶ್ರೀ ಆಗಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಬಿ.ಜಿ. ಅಜಯ್‍ಕುಮಾರ್, ಬಿ.ಜಿ. ಭರತ್, ಮುರುಗೇಶ್, ಮಯೂರ್, ಆನಂದ ಜಿರಲಿ ಇತರರು ಇದ್ದರು.

TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ : ಅಧಿಕಾರಿಗಳಿಗೆ ತರಾಟೆ
Next Article G. B. Vinay Kumar ಶೋಷಿತರಿಗೆ “ಜಾತಿಗಣತಿ” ಜಾರಿಯಾಗಬೇಕು: ಜಿ. ಬಿ. ವಿನಯ್ ಕುಮಾರ್ ಅಭಿಮತ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Silent dolls… | ಮೌನವಾದ ಗೊಂಬೆಗಳು …

Kannada News | Dinamaana.com | 11-10-2024 ದೊಡ್ಡವರೆಲ್ಲ ನೆನಪಿಸಿಕೊಳ್ಳಿ , ನಾವು ಚಿಕ್ಕವರಿದ್ದಾಗ ಎಲ್ಲರ ಬಳಿ ಆಟ ಆಡಲು…

By Dinamaana Kannada News

ನೊಂದ ನೆರಿಗೆಯ ಸ್ವಾಗತ 

  ಆಕಾಶದ ನೀಲಿಯಲಿ ಚಂದ್ರ ತಾರೆ ತೊಟ್ಟಿಲಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರಷ್ಟೇ ಸಾಕೆ…

By Dinamaana Kannada News

ಜಾತಿ ಗಣತಿ | ದನಿ ಎತ್ತದ ಸಚಿವರು ರಾಜೀನಾಮೆ ನೀಡಲಿ

ದಾವಣಗೆರೆ (Davanagere): ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಸಮಾಜಕ್ಕೆ ಅನ್ಯಾಯವಾಗುತ್ತದೆ ಎಂದ ತಕ್ಷಣ ಸಮುದಾಯದ ಸಭೆ ನಡೆಸಿದರು. ಆದರೆ, ನಮ್ಮ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಸುರಕ್ಷತಾ ಸಭೆ | ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಡಿಜಿಟಲ್ ವ್ಯವಸ್ಥೆಯ ಮೂಲಕವೇ ಭೂದಾಖಲೆಗಳ ವಿತರಣೆ : ಡಿಸಿ

By Dinamaana Kannada News
davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?