Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಸಿನಿಮಾ > Kannada movie : ಮಾರ್ಟಿನ್ ಟ್ರೈಲರ್ (Martin) ದೇಶಪ್ರೇಮಿಯ ಕಥೆಗೆ  ಅಂತರ ರಾಷ್ಟ್ರೀಯ ಗರಿ
ಸಿನಿಮಾ

Kannada movie : ಮಾರ್ಟಿನ್ ಟ್ರೈಲರ್ (Martin) ದೇಶಪ್ರೇಮಿಯ ಕಥೆಗೆ  ಅಂತರ ರಾಷ್ಟ್ರೀಯ ಗರಿ

Dinamaana Kannada News
Last updated: August 7, 2024 9:29 am
Dinamaana Kannada News
Share
Davanagere
ಮಾರ್ಟಿನ್ ಸಿನಿಮಾ
SHARE

ಮುಂಬಯಿ (Mumbai) : ಭಾರತದ ಮೊಟ್ಟಮೊದಲ ಅಂತರರಾಷ್ಟ್ರೀಯ ಮಟ್ಟದ ಪ್ರೆಸ್ ಮೀಟ್ ಹಾಗೂ ಟ್ರೈಲರ್ ಲಾಂಚ್ ಇವೆಂಟ್ ಮುಂಬಯಿ ಜೋಗೇಶ್ವರಿ ಏರಿಯಾದ  ಇನ್ ಫಿನಿಟಿ ಮಾಲ್  ಪಿವಿಆರ್ ಥಿಯೇಟರಿನಲ್ಲಿ ನಡೆಯಿತು.

ಉದಯ್ ಕೆ. ಮೆಹ್ತಾ ಮಾತನಾಡಿ ,  ಹೊಸ ರೀತಿಯ ಕಾನ್ಸೆಪ್ಟ್, ನಿರೂಪಣೆ ನನಗೆ ಈ ಚಿತ್ರ ಮಾಡಲು ಪ್ರೇರಣೆಯಾಯ್ತು. ಆರು ತಿಂಗಳ‌ ಹಿಂದೆ ಈ ಚಿತ್ರವನ್ನು ಪ್ಯಾನ್ ವರ್ಲ್ಡ್ ಸಿನಿಮಾ ಮಾಡಬೇಕೆಂಬ ಆಲೋಚನೆ ಬಂತು.  ಅದಕ್ಕೆ ಸರಿಯಾಗಿ ಎಲ್ಲಾ ಕಡೆಯಿಂದ  ಬೇಡಿಕೆಯೂ ಬಂತು. ಮೊದಲು 5 ಭಾಷೆ ಮಾಡಬೇಕೆಂಬ ಯೋಜನೆ ಮಾತ್ರ ಇತ್ತು. ಸಿನಿಮಾ ಆಗ್ತಾ ಆಗ್ತಾ ಅದು ಪ್ರಪಂಚದ ಸಿನಿಮಾ ಆಯ್ತು ಎಂದರು.

ಅರ್ಜುನ್ ಸರ್ಜಾ ಮಾತನಾಡಿ,  ನಾನೂ ಸಹ 44 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆದರೆ ಮೊದಲ ಬಾರಿಗೆ ಈ ಥರದ ಪ್ರೆಸ್ ಮೀಟ್ ನಲ್ಲಿ  ಭಾಗವಹಿಸಿರೋದು. ಇದಕ್ಕೆ ಮಾರ್ಟಿನ್ ತಂಡ ಕಾರಣ. ದ್ರುವ ತನ್ನ ಐದನೇ ಚಿತ್ರದಲ್ಲೇ ಮ್ಯಾಜಿಕ್ ಮಾಡಿದ್ದಾನೆ. ಆತನಿಂದ ಪ್ರೇಕ್ಷಕರು‌ ತುಂಬಾ ಬಯಸುತ್ತಿದ್ದಾರೆ. ನಾನು ಕೂಡ ಈತನಿಂದ ಸಾಕಷ್ಟು ಕಲಿಯುತ್ತಿದ್ದೇನೆ. ಆತನೇ ನನಗೆ ಇನ್ಸ್ ಪಿರೇಷನ್‌, ಉದಯ್ ಮೆಹ್ತಾ  ತುಂಬಾ ಪ್ಯಾಷನೇಟೆಡ್ ನಿರ್ಮಾಪಕರು. ಅವರಿಗೆ ಈ ಸಿನಿಮಾದಿಂದ ಅವಾರ್ಡ್, ರಿವಾರ್ಡ್ ಎರಡೂ ಸಿಗುವಂತಾಗಲಿ ಎಂದರು.

ಧ್ರುವ ಸರ್ಜಾ ಮಾತನಾಡಿ  ರಾಜ್ಯ ದೇಶ ಎನ್ನದೆ  ಎಲ್ಲಾ ಭಾಗದ ಜನರಿಗೂ  ಅರ್ಥವಾಗುವಂಥ ಯೂನಿಕ್ ಸ್ಟೋರಿ  ಚಿತ್ರದಲ್ಲಿದೆ. ಯೂನಿವರ್ಸಲ್ ಥೀಮ್ ಆಗಿರೋದ್ರಿಂದ ಎಲ್ಲರಿಗೂ ಕನೆಕ್ಟ್ ಆಗುತ್ತದೆ, ಅರ್ಥವಾಗುತ್ತದೆ.

ಸಸ್ಪೆನ್ಸ್, ಥ್ರಿಲ್ಲರ್, ಬಿಗ್ ಆಕ್ಷನ್ ಜೊತೆಗೆ ಸಣ್ಣ ಡ್ರಾಮಾ ಇದರಲ್ಲಿದೆ. ಕ್ಲೈಮ್ಯಾಕ್ಸ್ ಭಾಗದ ಆಕ್ಷನ್ ಮಾಡುವುದು ನನಗೆ ತುಂಬಾ ಚಾಲೆಂಜ್ ಆಗಿತ್ತು. ಇದು ದೇಶಪ್ರೇಮಿಯೊಬ್ಬನ ಸಾಹಸದ ಕಥೆ ಎಂದು‌ ಹೇಳಿದರು.

ನಾಯಕಿ ವೈಭವಿ ಮಾತನಾಡಿ,  7 ವರ್ಷಗಳಿಂದ ಕನ್ನಡ, ತಮಿಳು,  ತೆಲುಗು ಚಿತ್ರಗಳಲ್ಕಿ ನಟಿಸಿದ್ದೇನೆ. ಮಾರ್ಟಿನ್ ಈಸ್ ಒನ್ ಆಫ್ ದ ಬಿಗ್ಗೆಸ್ಟ್ ಮೂವಿ ಇನ್ ಮೈ ಕರಿಯರ್. ದ್ರುವ ತೆರೆಮೇಲೆ ಎಷ್ಟು ಅರ್ಭಟಿಸಿದ್ದಾರೋ, ಹಾರ್ಟ್ಲಿ ಅವರು ಅಷ್ಟೇ ಸಾಫ್ಟ್. ಅಲ್ಲದೆ  ಇಂಥ ಸಿನಿಮಾ ಮಾಡಲು ಗಟ್ಟಿ ಗುಂಡಿಗೆ ಇರಬೇಕು.. ಅದಿದ್ದವರೇ ಇಂಥ ಸಿನಿಮಾ ಮಾಡಲು ಸಾಧ್ಯ ಎಂದರು.

ಎ.ಪಿ‌. ಅರ್ಜುನ್  ಮಾತನಾಡಿ,  ನಾನು ಮಂಡ್ಯದ ಹುಡುಗ ಫಸ್ಟ್ ಸಿನಿಮಾ ಅಂಬಾರಿ, ಅದ್ದೂರಿ  ಚಿತ್ರದ ಮೂಲಕ ಧ್ರುವ ನನ್ನು ಪರಿಚಯಿಸಿದೆ. ಆರಂಭದಲ್ಲಿ ನಾರ್ಮಲ್ ಸಿನಿಮಾ ಅಂತಲೇ ಪ್ರಾರಂಭಿಸಿದೆವು. 20 ದಿನಗಳ‌ ಶೂಟಿಂಗ್ ಆದಮೇಲೆ ಇದರಲ್ಲೇನೋ ಇದೆ ಅಂತ ಪ್ಯಾನ್ ಸಿನಿಮಾ ಪ್ಲಾನ್ ಮಾಡಿದೆವು. ಇಂಥ ಸಿನಿಮಾ ಮಾಡಬೇಕು ಅಂತ ಬಂದಾಗ ನಿರ್ಮಾಪಕರೂ ಮುಖ್ಯವಾಗುತ್ತಾರೆ. ಆ ವಿಷಯದಲ್ಲಿ ಮೆಹತಾ ಅವರ ಧೈರ್ಯ ಮೆಚ್ಚಲೇಬೇಕು. ಸರ್ಜಾ ಸಿನಿಮಾಗಳಲ್ಲಿ  ದೇಶಾಭಿಮಾನ ಎದ್ದು ಕಾಣುತ್ತದೆ.  ಇದರಲ್ಲಿ  ಅದು ಹತ್ತರಷ್ಟು ಎದ್ದು ಕಾಣುತ್ತೆ ಎಂದರು.

Read also : Kannada film : “ಗೌರಿ” ಚಿತ್ರದ ಟ್ರೇಲರ್ ಕಿಚ್ಚ ಸುದೀಪ್ ರಿಂದ  ಅನಾವರಣ  : ಆ.15 ರಂದು ತೆರೆಗೆ  

ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ನನ್ನ ೨೫ ವರ್ಷಗಳ ಸಿನಿಮಾ  ಜೀವನದಲ್ಲಿ ದ ಬೆಸ್ಟ್ ಸಿನಿಮಾ ಎಂದು ಹೇಳಿದರು.

ಧೃವ ಸರ್ಜಾ, ಅರ್ಜುನ್ ಸರ್ಜಾ, ನಿರ್ಮಾಪಕ ಉದಯ್ ಕೆ.ಮೆಹ್ತಾ, ನಿರ್ದೇಶಕ ಎ.ಪಿ.ಅರ್ಜುನ್, ನಾಯಕಿಯರಾದ  ಅನ್ವೇಶಿ ಜೈನ್, ವೈಭವಿ ಶಾಂಡಿಲ್ಯ ವೇದಿಕೆಯಲ್ಲಿದ್ದರು.

ಮಾರ್ಟಿನ್ ಚಿತ್ರ. ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಅಲ್ಲದೆ ಕೆನಡಾ, ಕೀನ್ಯಾ, ಯುಕೆ, ದುಬೈ, ಜಪಾನ್‌ ಸೇರಿದಂತೆ  ಪ್ರಪಂಚದ 21 ದೇಶಗಳಿಂದ ಆಗಮಿಸಿದ ನೂರಾರು ಪತ್ರಕರ್ತರು ಈ ಬೃಹತ್ ಮಾಧ್ಯಮ ಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.

TAGGED:Dinamana.comLatest Kannada NewsMovie newsಕನ್ನಡ ಸುದ್ದಿದಿನಮಾನ.ಕಾಂಸಿನಿಮಾ ಸುದ್ದಿ
Share This Article
Twitter Email Copy Link Print
Previous Article davanagere DAVANAGERE NEWS : ಸಿದ್ಧರಾಮಯ್ಯ ದುರ್ಬಲಗೊಳಿಸುವ ಕುತಂತ್ರ ನಿಲ್ಲಿಸಿ : ನಿಟ್ಟುವಳ್ಳಿ ಪ್ರವೀಣ್ ಕುಮಾರ್
Next Article Applications invited DAVANAGERE NEWS :ಸಿಬ್ಬಂದಿ ನೇಮಕಾತಿ ಆಯೋಗದಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಗಾಂಜಾ ಸೇವೆನೆ ಇಬ್ಬರ ವಿರುದ್ದ ಪ್ರಕರಣ ದಾಖಲು

ದಾವಣಗೆರೆ: ಎರೆಗುಂಟೆ ರಸ್ತೆಯ ಅಶೋಕ ನಗರ  ಬಳಿ ಸಾರ್ವಜನಿಕರೊಂದಿಗೆ ಅನುಚಿತವಾಗಿ  ವರ್ತಿಸುತ್ತಿದವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, ವೈದ್ಯಕೀಯ ಪರೀಕ್ಷೆ…

By Dinamaana Kannada News

ಸಮವಸ್ತ್ರ ವೃತ್ತಿಯ ವಿವಿಧ ಹುದ್ದೆಗಳಿಗೆ ಸೇರಬಯಸುವ ಅಭ್ಯರ್ಥಿಗಳಿಗೆ ತರಬೇತಿ ಅರ್ಜಿ ಅಹ್ವಾನ 

ದಾವಣಗೆರೆ ಜೂ.15  : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಭಾರತೀಯ ಸೇನೆ ಸೇರಿದಂತೆ ಇತರೆ ಸಮವಸ್ತ್ರ ಸೇವೆಗಳಿಗೆ…

By Dinamaana Kannada News

ದಾವಣಗೆರೆ | ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ : ಪ್ರಸಕ್ತ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?