ದಾವಣಗೆರೆ (Davanagere): ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲೂಕಿಗೆ 506, ಚನ್ನಗಿರಿ ತಾಲೂಕಿಗೆ 244 ಸೇರಿ ಕ್ಷೇತ್ರಕ್ಕೆ ಒಟ್ಟು 750 ಮನೆಗಳು ಮಂಜೂರಾಗಿವೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದ್ದಾರೆ.
ನಿರ್ಗತಿಕರು, ಬಡವರಿಗೆ ಸೂರು ಕಲ್ಪಿಸಲು ಸರ್ಕಾರ ಮತ್ತು ವಸತಿ ಸಚಿವರ ಮೇಲೆ ಒತ್ತಡ ಹಾಕಿ ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲೂಕಿನ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗಳಿಗೆ 2022-23ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಮತ್ತು ಬಸವ ವಸತಿ ಯೋಜನೆಯಡಿ 506, ಚನ್ನಗಿರಿ ತಾಲೂಕಿನ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗಳಿಗೆ 244 ಸೇರಿದಂತೆ ಒಟ್ಟು 750 ಮನೆಗಳನ್ನು ಮಂಜೂರು ಮಾಡಿಸಲಾಗಿದೆ.
ದಾವಣಗೆರೆ ತಾಲೂಕಿನ ಗ್ರಾಪಂಗಳಾದ ಆಲೂರು 12, ಆನಗೋಡು 31, ಅಣಜಿ 23, ಅಣಬೇರು 30, ಅತ್ತಿಗೆರೆ 18, ಬಾಡ 25, ಬಸವನಾಳು 24, ಗೋಪನಾಳು 21, ಹೆಮ್ಮನಬೇತೂರು 25, ಹೊನ್ನೂರು 20, ಹುಚ್ಚವ್ವನಹಳ್ಳಿ 23, ಐಗೂರು 5, ಕಂದಗಲ್ಲು 10, ಕಂದನಕೋವಿ 10, ಕೊಡಗನೂರು 19, ಕುರ್ಕಿ 20, ಮಳಲಕೆರೆ 20, ಮತ್ತಿ 15, ಮಾಯಕೊಂಡ 33, ನರಗನಹಳ್ಳಿ 22, ಶ್ಯಾಗಲೆ 21, ತೋಳಹುಣಿಸೆ 14, ನೇರ್ಲಿಗೆ 18, ಲೋಕಿಕೆರೆ 22, ಶ್ರೀರಾಮನಗರ 5 ಸೇರಿ ಒಟ್ಟು 506 ಮನೆ ಹಂಚಿಕೆ ಮಾಡಲಾಗಿದೆ.
ಚನ್ನಗಿರಿ ತಾಲೂಕಿನ ಗ್ರಾಪಂಗಳಾದ ಬಸವಾಪಟ್ಟಣ 34, ಬೆಳಲಗೆರೆ 18, ಚಿರಡೋಣಿ 30, ದಾಗಿನಕಟ್ಟೆ 17, ಜಿ.ಕೆ.ಹಳ್ಳಿ 8, ಕಬ್ಬಳ 5, ಕಂಸಾಗರ 14, ಕಣಿವೆಬಿಳಚಿ 2, ಕಾರಿಗನೂರು 10, ಕತ್ತಲಗೆರೆ 12, ಕೋಟೆಹಾಳ್ 11, ನಿಲೋಗಲ್ಲು 14, ತ್ಯಾವಣಿಗೆ 26, ರುದ್ರಾಪುರ 3, ನಿವಿಲೇಹಾಳು 16, ನಲ್ಕುದುರೆ 24 ಸೇರಿ ಒಟ್ಟು 244 ಮನೆ ಹಂಚಿಕೆ ಮಾಡಲಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಮಾಹಿತಿ ನೀಡಿದ್ದಾರೆ.
ಸರ್ಕಾರ ನಿರ್ಗತಿಕರಿಗೆ, ಬಡವರಿಗೆ ಮನೆ ನೀಡಿದೆ. ಆದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಯಾವುದೇ ಕಾರಣಕ್ಕೂ ಫಲಾನುಭವಿಗಳ ಬಳಿ ಮನೆ ನೀಡುವುದಕ್ಕೆ ಹಣ ವಸೂಲಿ ಮಾಡಬಾರದು. ಒಂದು ವೇಳೆ ಹಣ ವಸೂಲಿ ಮಾಡಿದರೆ ಫಲಾನುಭವಿಗಳು ನೇರವಾಗಿ ಶಾಸಕರನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.
Read also : ಸ್ವಾಭಿಮಾನಕ್ಕೆ ಬಡತನ ಇರಬಾರದು, ಶ್ರೀಮಂತಿಕೆ ಇರಬೇಕು: ಜಿ. ಬಿ. ವಿನಯ್ ಕುಮಾರ್ ಸಲಹೆ