Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸಂಘಟಿತರಾಗಲು ನಿ. ಪೊಲೀಸ್‌ ವರಿಷ್ಠಾಧಿಕಾರಿ ಎನ್. ರುದ್ರಮುನಿ ಯುವಕರಿಗೆ ಕರೆ
ತಾಜಾ ಸುದ್ದಿ

ಸಂಘಟಿತರಾಗಲು ನಿ. ಪೊಲೀಸ್‌ ವರಿಷ್ಠಾಧಿಕಾರಿ ಎನ್. ರುದ್ರಮುನಿ ಯುವಕರಿಗೆ ಕರೆ

Dinamaana Kannada News
Last updated: March 11, 2025 4:59 am
Dinamaana Kannada News
Share
Meeting of the Untouchables and Oppressed Classes
ಅಹಿಂದ ಹಾಗೂ ಶೋಷಿತ ವರ್ಗಗಳ ಸಭೆ
SHARE
ಹರಿಹರ (Harihara) : ನಾವು ಕಷ್ಟಪಟ್ಟು ಮುಂದೆ ಬಂದವರು. ಯಾರು ಶ್ರೀಮಂತರಾಗಿ ನಾವು ಮುಂದೆ ಬಂದಿಲ್ಲ. ಆದ್ದರಿಂದ ನಾವು ಸಂಘಟಿತ ರಾದರೆ ಅವರು ನಮ್ಮ ಹತ್ತಿರ ಬರುತ್ತಾರೆ. ನಾವು ಜಾಗೃತರಾಗಬೇಕು. ನಮ್ಮ ನಡೆ ನ್ಯಾಯಯುತವಾಗಿರಲಿ ಮತ್ತು ಹೋರಾಟಗಳು ನಿರಂತರವಾಗಿರಲಿ. ಯುವಕರು ಮುಂದೆ ಬರಬೇಕು. ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಹಿಂದ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಎನ್. ರುದ್ರಮುನಿ ಅವರು ತಿಳಿಸಿದರು.
ಅಹಿಂದ ಹಾಗೂ ಶೋಷಿತ ಸಮುದಾಯಗಳ ವೇದಿಕೆ ಹರಿಹರ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಹಾಗೂ ಶೋಷಿತ ಸಮುದಾಯಗಳ ವೇದಿಕೆ ಇವರುಗಳ ಸಂಯುಕ್ತಾಶ್ರಯ ದಲ್ಲಿ, ಹರಿಹರದ ಹೈಸ್ಕೂಲ್ ಬಡಾವಣೆಯ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಕಾಂತ ರಾಜ್ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಬಿಡುಗಡೆ ಹಾಗೂ ಅನುಷ್ಠಾನಕ್ಕಾಗಿ ಆಗ್ರಹಿಸಿ ಅಹಿಂದ ಹಾಗೂ ಶೋಷಿತ ವರ್ಗಗಳ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಘಟನೆಗಳನ್ನು ಯಾರ ಪರವಾಗಿಯೂ ಇಲ್ಲ. ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಬಡವರ ಹಿತಕ್ಕಾಗಿ ಈ ಸಂಘಟನೆ ಅತ್ಯವತ್ಯಶಕವಾಗಿದೆ. ನಮ್ಮ ಹಕ್ಕು,  ನಮ್ಮ ಹೋರಾಟ ಎಂದು ಎನ್. ರುದ್ರಮುನಿ ಅವರು ಹೇಳಿದರು.
ನಾವು ಸಭೆಗೆ ಕೆಲವು ಮುಖಂಡರಿಗೆ ಆಹ್ವಾನ ನೀಡಿದ್ದೆವು, ಆದರೆ ಅವರು ಬರಲಿಲ್ಲ. ಕಾರಣ, ನಾನು ಎಂಎಲ್‌ಎ ಆಗುತ್ತೇನೆ, ಮಿನಿಸ್ಟರ್‌ ಆಗುತ್ತೇನೆ ಎಂಬ ಅವರ ತಪ್ಪು ತಿಳುವಳಿಕೆಯಿಂದ ಅವರು ಬಂದಿಲ್ಲ. ಆದರೆ, ಆ ತಪ್ಪು ತಿಳುವಳಿಕೆ ಇದ್ದರೆ ನಿಮ್ಮ ಮನಸ್ಸಿನಿಂದ ತೆಗೆದುಹಾಕಿ ಎಂದು ಹೇಳಿದರು.  ಒಂದಾಗಿ ಹೋಗೋಣ ಸಂಘಟನೆ ಬಲಪಡಿಸೋಣ. ಪ್ರತಿ ಜಿಲ್ಲೆಯಲ್ಲಿ ಅಹಿಂದ ಸಂಘಟನೆಯನ್ನು ಕಟ್ಟೋಣ ಎಂದು ಯುವಕರಿಗೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ  ಅಬ್ದುಲ್ ಜಬ್ಬಾರ್  ಮಾತನಾಡಿ, ಈ ಸಂವಿಧಾನವು ಕೈ ತಪ್ಪುವ ಮುಂಚಿತವಾಗಿ ನಾವು ಎಚ್ಚರ ವಹಿಸಬೇಕು. ಕಾಂತರಾಜ ವರದಿ ಜಾರಿಗೆ ತಂದರೆ ಕೆಲವರಿಗೆ ತೊಂದರೆ ಆಗುತ್ತದೆ. ಕಾರಣ ಶೇ. 80% ಇರುವ ಇರುವುದರಲ್ಲಿ, 20 ಭಾಗ ಬೇರ್ಪಡೆ ಯಾಗುತ್ತದೆ ಎಂಬ ತಪ್ಪು ತಿಳುವಳಿಕೆಯಿಂದ ಕೆಲವರು ಕಾಂತರಾಜ ವರದಿಯನ್ನು ವಿರೋಧ ಮಾಡುತ್ತಿ ದ್ದಾರೆ. ಕಾಂತರಾಜ್ ಬಗ್ಗೆ ಯಾರೂ ಓದಿಲ್ಲ, ನೋಡಿಲ್ಲ ಆದರೂ ಕೂಡ ಕೆಲವರು ಇದರ ಬಗ್ಗೆ ವಿನಾಕಾರಣ ಸಿಎಂ ಅವರ ಬಳಿ ಹೋಗಿ ಇದನ್ನು ಜಾರಿಗೆ ತರಕೂಡದು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯನವರಿಗೆ ಬಡವರ ಮೇಲೆ ಕಾಳಜಿ ಅನುಕಂಪ ಇದೆ. ಆದರೆ ಅದನ್ನು ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಅದರಿಂದ ಕಾಂತರಾಜ್ ವರದಿಯು ಜಾರಿಗೆ  ತರುವಲ್ಲಿ ವಿಳಂಬವಾಗುತ್ತಿದೆ.  ನಮ್ಮ ದಾವಣಗೆರೆ ಜಿಲ್ಲೆಯಲ್ಲಿ ಕೆಲವು ಹಿಂದೆ ಹಿಂದುಳಿದ ನಾಯಕರು ಎಂಎಲ್ಎ, ಎಂಎಲ್ಸಿಗಳು ಆಗಿದ್ದರು. ಆದರೆ ಈಗ ಎರಡು ಪಂಗಡಗಳು ಮಾತ್ರ ಎಮ್ಎಲ್ಎ. ಎಂಎಲ್ಸಿಗಳಾಗುತ್ತಿದ್ದಾರೆ ಎಂದರೆ ಇದು ಶೋಚನೀಯ ಸಂಗತಿ  ಎಂದು ಮನನೊಂದು ಹೇಳಿಕೊಂಡರು.
ನಾವು ವೋಟು ಕೊಟ್ಟು ಅವರನ್ನು ನಾವು ಉನ್ನತ ಮಟ್ಟಕ್ಕೆ ಕಳಿಸಿದ್ದೇವೆ. ಆದರೆ ಮುಂಬರುವ ಚುನಾವಣೆಗಳಲ್ಲಿ ಎಚ್ಚರವಹಿಸಬೇಕು.
ಅಹಿಂದ ಎಲ್ಲಾ ಜಾತಿಗಳಿಗೆ ನಾವು ನ್ಯಾಯ ಒದಗಿಸಬೇಕು. ಎಲ್ಲಾ ಜಿಲ್ಲಾ, ತಾಲ್ಲೂಕುಗಳಲ್ಲಿ ಸಂಘಟನೆಯಾಗಬೇಕು ಹಾಗೂ ಯುವಕರಿಗೆ ಪ್ರತಿ ವಾರ್ಡ್‌ನಂತೆ ಹತ್ತು ಜನರನ್ನು ಆಯ್ಕೆ ಮಾಡಿ, ಪ್ರೊ. ಬಿ. ಕೃಷ್ಣಪ್ಪ ಸಮುದಾಯ ಭವನದಲ್ಲಿ ಅಹಿಂದ ಬಗ್ಗೆ ತರಬೇತಿ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲ ರಾಮಚಂದ್ರ ಕಲಾಲ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ, ನಿವೃತ್ತ ಪ್ರೊ. ಡಾ.ಎ.ಬಿ.ರಾಮಚಂದ್ರಪ್ಪ,  ದಾವಣಗೆರೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿರಾಜ್ ಅಹಮದ್, ಕೃಷ್ಣಮೂರ್ತಿ, ನಗರಸಭೆ ಮಾಜಿ ಸದಸ್ಯ ಬಿ. ರೇವಣಸಿದ್ದಪ್ಪ, ಹೆಚ್.ಕೆ.ಕೊಟ್ರಪ್ಪ, ಹೆಚ್. ಮಲ್ಲೇಶ್, ಡಿಎಸ್ಎಸ್ ಸಂಚಾಲಕ ಪಿ. ಜೆ.ಮಹಾಂತೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಇಲಿಯಾಸ್ ಅಹ್ಮದ್, ಆಶಿಶ್ ಅಹ್ಮದ್, ಸಿ.ಎನ್. ಹುಲುಗೇಶ್, ಬಿ.ಎನ್. ರಮೇಶ್, ಮಹಮ್ಮದ್ ಫೈರೋಜ್ ಅಹ್ಮದ್‌ ಮತ್ತಿತರರು ಉಪಸ್ಥಿತರಿದ್ದರು.
Read also : ಕಳ್ಳತನ ಪ್ರಕರಣ | 10.32 ಲಕ್ಷ ಮೌಲ್ಯದ ಸ್ವತ್ತು ವಶ : ಆರೋಪಿಗಳ ಸೆರೆ
ಸ್ವಾಗತವನ್ನು ಆಶಿಫ್ ಅಹಮದ್, ನಿರೂಪಣೆಯನ್ನು ಸಿ.ಎನ್. ಹುಲುಗೇಶ್ ಅವರು ನೆರವೇರಿಸಿದರು. ಜಿ.ಹೆಚ್.ಮರಿಯೋಜಿರಾವ್ ಪ್ರಾಸ್ತವಿಕ ನುಡಿಗಳನ್ನಾಡಿದರು.
TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಶೋಷಿತ ಸಮುದಾಯಗಳ ವೇದಿಕೆ
Share This Article
Twitter Email Copy Link Print
Previous Article Davanagere ಕಳ್ಳತನ ಪ್ರಕರಣ | 10.32 ಲಕ್ಷ ಮೌಲ್ಯದ ಸ್ವತ್ತು ವಶ : ಆರೋಪಿಗಳ ಸೆರೆ
Next Article davangere-district-level-job-fair-2025 ಮಾ.15ರಿಂದ ಉದ್ಯೋಗ ಮೇಳ | 50ಕ್ಕೂ ಹೆಚ್ಚು ಕಂಪನಿಗಳು ಭಾಗಿ | ಸುರ್ವಣ ಅವಕಾಶ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere| ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಸಜೆ

ದಾವಣಗೆರೆ (Davanagere) : ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗೆ 10 ವರ್ಷ ಕಠಿಣ…

By Dinamaana Kannada News

ದೇವದಾರಿ ಯೋಜನೆ-ಮನುಷ್ಯಕುಲದ ಆತ್ಮವಿನಾಶದ ದಾರಿಯ ಆರಂಭ

Kannada News | Sanduru Stories | Dinamaana.com | 16-06-2024 ದೇವದಾರಿ! (Sanduru) ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ…

By Dinamaana Kannada News

ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ : ಪ್ರೊ.ಸುಚಿತ್ರಾ.

ದಾವಣಗೆರೆ (Davanagere): ವಿದ್ಯಾರ್ಥಿಗಳು ಹಿಂಜರಿಕೆಯ ಮನೋಭಾವದಿಂದ ಹೊರಬಂದು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಹೊಸ ಹೊಸ ವಿಚಾರಗಳನ್ನು ಅರಿತುಕೊಳ್ಳಲು ಸಾಧ್ಯ ಎಂದು ದಾವಣಗೆರೆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

By Dinamaana Kannada News
Political analysis
ರಾಜಕೀಯ

Political analysis | ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು?

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?