Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಮಗಳ(ಮಾನ್ಯ)ಹತ್ಯೆ ,ದಲಿತರ ಮೇಲೆ ದೌರ್ಜನ್ಯ ಪ್ರಕರಣ:ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ  ಪ್ರತಿಭಟನೆ
ತಾಜಾ ಸುದ್ದಿ

ಮಗಳ(ಮಾನ್ಯ)ಹತ್ಯೆ ,ದಲಿತರ ಮೇಲೆ ದೌರ್ಜನ್ಯ ಪ್ರಕರಣ:ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ  ಪ್ರತಿಭಟನೆ

Dinamaana Kannada News
Last updated: December 24, 2025 11:33 am
Dinamaana Kannada News
Share
davanagere dss protest
SHARE

ದಾವಣಗೆರೆ : ದಲಿತ ಯುವಕನ ಮದುವೆಯಾದ ಕಾರಣದಿಂದ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ಪೋಷಕರಿಂದಲೇ ಮಗಳ (ಮಾನ್ಯ)ಹತ್ಯೆ ಹಾಗೂ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ  ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಅಂಬೇಡ್ಕರ ವೃತ್ತದಿಂದ ಮೆರವಣೆಗೆ ನಡೆಸಿದ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಸದಸ್ಯರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  ಹತ್ಯೆಯ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ  ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಹಿರಿಯ ಮುಖಂಡ ಬಿ.ಎಂ.ಹನುಮಂತಪ್ಪ ಮಾತನಾಡಿ, ನಾಗರೀಕ ಸಮಾಜದಲ್ಲಿ ಜಾತಿ ಆಧಾರಿತ ಕ್ರೌರ್ಯ, ಮತೀಯವಾದಿ ಹಿಂಸೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಪ್ರಕಾಶ್ ಗೌಡ ಪಾಟೀಲ್ ಅವರ ಮಗಳು ಮಾನ್ಯ ಪ. ಜಾತಿ ಯುವಕ ವಿವೇಕಾನಂದ ನನ್ನ ಪ್ರೀತಿಸಿ ವಿವಾಹವಾಗಿದ್ದರಿಂದ ಮಾರಕಾಯುದಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಘಟನೆಗಳ ವಿರುದ್ದ ರಾಜ್ಯಾದ್ಯಂತ ಆಂದೋಲನ ನಡೆಯಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಅಧ್ಯಕ್ಷ ಹೆಚ್. ಮಲ್ಲೇಶ್  ಮಾತನಾಡಿ,  ಭಾರತೀಯ ಸಂವಿಧಾನ ಸರ್ವ ಸಮಾನತೆಯನ್ನು ಸಾರಿದ್ದರೂ ಹಿಂದುತ್ವ ಮತ್ತು ಕೋಮುವಾದ ನೀತಿ ಪ್ರತಿಪಾದಿಸುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಸೂರ್ಯ ಪೂರ್ವದಲ್ಲಿ ಉದಯಿಸುವುದು ಎಷ್ಟು ಸತ್ಯವೋ ಭಾರತ ಹಿಂದೂ ರಾಷ್ಟ್ರ ಎಂಬುದೂ ಸತ್ಯ ಎಂಬ ಆಘಾತಕಾರಿ ಹೇಳಿಕೆ ಜಾತಿ ಮತೀಯವಾದ ಬಿಂಬಿಸುತ್ತದೆ. ಹುಬ್ಬಳ್ಳಿಯಲ್ಲಿ ತಂದೆ ಯಿಂದಲೇ ವಿವಾಹಿತ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಪರಿವಾರದ ಮೇಲೆ ಅಮಾನುಷವಾಗಿ ಕಗ್ಗೋಲೆ ನಡೆಸಿರುವ ರಾಕ್ಷಸರ ನರಮೇಧವನ್ನು ಅತ್ಯಂತ ಉಗ್ರವಾಗಿ ಖಂಡಿಸಿ ಇಂತಹಾ ಮಾನವ ವಿರೋಧಿ ಜೀವಜಂತುಗಳನ್ನ ಸಮಾಜದಿಂದ ಬೇರ್ಪಡಿಸಲು ಜೀವಾವಧಿ – ಮರಣ ದಂಡನೆಯಂತಹ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಾಧ್ಯಕ್ಷ ಮಂಜುನಾಥ ಕುಂದವಾಡ ಮಾತನಾಡಿ, ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ಪೋಷಕರಿಂದಲೇ ಮಗಳ  (ಮಾನ್ಯ)  ಹತ್ಯೆ ಹಾಗೂ ದಲಿತ  ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ತೀವ್ರವಾಗಿ ಖಂಡಿಸುತ್ತೇವೆ. ಇದು ಮಾನವ ಸಮಾಜದಲ್ಲಿ ಹೇಯ ಕೃತ್ಯವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ನೇಣು ಶಿಕ್ಷೆ ವಿಧಿಸಬೇಕು.ಕೊಲೆಗಡುಕರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಮೃತಳ ಗಂಡ ಸಂಬಂಧಿಕರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಜಾತಿ ಮತೀಯವಾದಿ ಸಮಾಜಘಾತುರಿಂದ ಜೀವ ರಕ್ಷಣೆ ಒದಗಿಸಬೇಕು. ದಲಿತರ ಮೇಲಿನ ದೌರ್ಜನ್ಯಗಳ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ತೆರೆಯಬೇಕು ಎಂದು ಒತ್ತಾಯಿಸಿದರು.

Read also : ವಿದ್ಯಾನಗರದಲ್ಲಿ ಡ್ರಗ್ಸ್ ದಂಧೆ : ಕಾಂಗ್ರೆಸ್ ಮುಖಂಡ ಸೇರಿ 4 ಮಂದಿ ಬಂಧನ

ಪ್ರಧಾನ ಕಾರ್ಯದರ್ಶಿ ಲಿಂಗರಾಜ ಎಂ. ಗಾಂಧಿನಗರ, ರಾಕೇಶ್‌ ಗಾಂಧಿನಗರ, ಕರಿಬಸಪ್ಪ, ಮೈಲಾರಪ್ಪ,  ಲಕ್ಷ್ಮಣ್ ಕೊಡಗನೂರು, ಸತೀಶ ಅರವಿಂದ, ಅಜ್ಜೇಶ್‌, ರಾಮಪ್ಪ, ಹೆಚ್.ನಿಂಗಪ್ಪ, ಸದಾನಂದ ಚಿಕ್ಕನಳ್ಳಿ, ಅಭಿನಂದನ, ನಾಗರಾಜ್ ಚಿತ್ತಾನಹಳ್ಳಿ, ಸಮಾದೆಪ್ಪ ಶಾಮನೂರು , ಪರಶುರಾಮ್‌ ಮೆಳ್ಳೆಕಟ್ಟೆ, ಮಾಲತೇಶ್,   ರಾಮಪ್ಪ, ನಾಗರಾಜ ಎನ್‌.ಎಂ, ಸಿದ್ದರಾಮಪ್ಪ ಇತರರು ಇದ್ದರು.

TAGGED:Daughter murderDavanagere NewsDinamana.comKannada NewsMurderಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ವಿದ್ಯಾನಗರದಲ್ಲಿ ಡ್ರಗ್ಸ್ ದಂಧೆ : ಕಾಂಗ್ರೆಸ್ ಮುಖಂಡ ಸೇರಿ 4 ಮಂದಿ ಬಂಧನ
Next Article Honor killing ಮರ್ಯಾದೆಗೇಡು ಹತ್ಯೆ|ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ:ಗದಗ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Indira Canteen | ಹಸಿವು ನೀಗಿಸಲು ಇಂದಿರಾ ಕ್ಯಾಂಟಿನ್ ಸಹಕಾರಿ : ಸಚಿವ ರಹೀಂಖಾನ್

ದಾವಣಗೆರೆ (Davanagere) : ಸರ್ಕಾರವು ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಿಸುವ ಆಶಯದೊಂದಿಗೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್‌ಗಳನ್ನು ಪ್ರಾರಂಭಿಸಿದೆ. ಕಡಿಮೆ ದರದಲ್ಲಿ…

By Dinamaana Kannada News

Davanagere | ಪುನೀತ್ ರಾಜ್ ಕುಮಾರ್ ಕಪ್ ಚೆಸ್ ಪಂದ್ಯಾವಳಿಗಳಿಗೆ ಸಚಿವರು ಹಾಗೂ ಸಂಸದರಿಂದ ಚಾಲನೆ

ದಾವಣಗೆರೆ.ಅ.4 (Davanagere); ಚೆಸ್ ಕ್ಲಬ್ ಆಯೋಜಿಸಿರುವ "ಪುನೀತ್ ರಾಜ್ ಕುಮಾರ್ ಕಪ್ " ಪಂದ್ಯಾವಳಿಯನ್ನು ಎಂ.ಸಿ.ಸಿ ಬಿ ಬ್ಲಾಕಿನಲ್ಲಿ ಸಚಿವರ…

By Dinamaana Kannada News

ಸಮ ಸಮಾಜದ ಪಿತಾಮಹಾ ವಿಶ್ವಗುರು ಬಸವಣ್ಣ : ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ :  ಬಸವಣ್ಣ ಬರೀ ಲಿಂಗಾಯತರ, ಕನ್ನಡಿಗರ ಸ್ವತ್ತು ಅಲ್ಲ, ಇಡೀ ಮಾನವ ಕುಲಕ್ಕೇ ಬೇಕಾಗಿರುವಂತಹ ವಿಶ್ವಗುರು. ಎಲ್ಲರ ಪರವಾಗಿ…

By Dinamaana Kannada News

You Might Also Like

Christmas
ಅಭಿಪ್ರಾಯ

ಕ್ರಿಸ್ಮಸ್: ಸಂಭ್ರಮ ಮತ್ತು ಶಾಂತಿಯ ಹಬ್ಬ: ಡಾ. ಡಿ. ಫ್ರಾನ್ಸಿಸ್

By Dinamaana Kannada News
Honor killing
ತಾಜಾ ಸುದ್ದಿ

ಮರ್ಯಾದೆಗೇಡು ಹತ್ಯೆ|ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ:ಗದಗ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

ವಿದ್ಯಾನಗರದಲ್ಲಿ ಡ್ರಗ್ಸ್ ದಂಧೆ : ಕಾಂಗ್ರೆಸ್ ಮುಖಂಡ ಸೇರಿ 4 ಮಂದಿ ಬಂಧನ

By Dinamaana Kannada News
Judge Mahavir M. Karennavara
ತಾಜಾ ಸುದ್ದಿ

ಗುಣಮಟ್ಟದ ಶಿಕ್ಷಣ ಪಡೆದಲ್ಲಿ ಸರ್ವೋತೋಮುಖ ಬೆಳವಣಿಗೆಗೆ ಸಹಕಾರಿ : ನ್ಯಾ.ಮಹಾವೀರ ಮ ಕರಣ್ಣನವರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?