ದಾವಣಗೆರೆ (Davanagere): ಪ್ರಸಕ್ತ ಸಾಲಿನ ಎಸ್ಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಎಲ್ಲಾ ಮುಸ್ಲಿಂ ವಿದ್ಯಾರ್ಥಿಗಳಿಗೆ ದುಮ್ಮಿ ಹುಸೇನ್ ಸಾಬ್ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನಿಸಲಾಗಿದೆ.
ಆರ್ಹ ವಿದ್ಯಾರ್ಥಿಗಳು ಗೇಮ್ಸ್ ಗ್ಯಾಲಕ್ಕಿ, ವಿದ್ಯಾನಗರ ಮುಖ್ಯರಸ್ತೆ, ದಾವಣಗೆರೆ ಇಲ್ಲಿ ಅರ್ಜಿ ಪಡೆದು ಆಧಾರ್ ಮತ್ತು ಅಂಕಪಟ್ಟಿಯೊAದಿಗೆ ಜೂನ್. 25ರ ಒಳಗಾಗಿ ಭರ್ತಿ ಮಾಡಿದ ಅರ್ಜಿಯನ್ನು ಫೋಟೋ ಲಗತ್ತಿಸಿ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಮೊ: 9448729083 ಕ್ಕೆ ಸಂಪರ್ಕಿಸಬಹುದು ಎಂದು ಟ್ರಸ್ಟ್ನ ಅಧ್ಯಕ್ಷ ಡಾ. ಡಿ. ಅಬ್ದುಲ್ ಬುಡನ್ ತಿಳಿಸಿದ್ದಾರೆ.
Read also : Davanagere | ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ವಜಾಕ್ಕೆ ಆಲೂರು ನಿಂಗರಾಜ್ ಆಗ್ರಹ