Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ರಾಜಕೀಯ > Political analysis | ಕುಮಾರಣ್ಣ ಒಪ್ಪಿದ್ರೂ ಯೋಗಿ ಒಪ್ತಿಲ್ಲ
ರಾಜಕೀಯ

Political analysis | ಕುಮಾರಣ್ಣ ಒಪ್ಪಿದ್ರೂ ಯೋಗಿ ಒಪ್ತಿಲ್ಲ

Dinamaana Kannada News
Last updated: October 21, 2024 4:53 am
Dinamaana Kannada News
Share
Political analysis
ಕುಮಾರ ಸ್ವಾಮಿ
SHARE

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮೊನ್ನೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಗ್ಗೆ ನಡ್ಡಾ ಪ್ರಸ್ತಾಪಿಸಿದ್ದಾರೆ.

‘ಕುಮಾರಸ್ವಾಮೀಜಿ . ಚನ್ನಪಟ್ಟಣ ಕ್ಷೇತ್ರದ ಬೈ ಎಲೆಕ್ಷನ್ನಿಗೆ ಸಂಬಂಧಿಸಿದಂತೆ ನಾವು  ವರದಿ ತರಿಸಿಕೊಂಡಿದ್ದೇವೆ. ಎಷ್ಟೇ ಆದರೂ ಅದು ನಿಮ್ಮ ಕ್ಷೇತ್ರ.ಹೀಗಾಗಿ ನೀವು ನಿಮ್ಮ ಪುತ್ರನನ್ನು ಅಲ್ಲಿಂದ ಕಣಕ್ಕಿಳಿಸುತ್ತೀರೋ?ನಿಮ್ಮ ಕುಟುಂಬದ ಬೇರೊಬ್ಬರನ್ನು ಕಣಕ್ಕಿಳಿಸುತ್ತೀರೋ?ಅಥವಾ ನಿಮ್ಮ ಪಕ್ಷದ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸುತ್ತೀರೋ? ನಿಮ್ಮಿಚ್ಚೆಗೆ ಸಂಬಂಧಿಸಿದ್ದು. ಅರ್ಥಾತ್,ನೀವು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿ ನಮಗೆ ಹೇಳಿದರೆ,ನಾವು ಬಿಜೆಪಿ ನಾಯಕರು ಅಲ್ಲಿಗೆ ಬಂದು ಪ್ರಚಾರ ಮಾಡಿ ಹೋಗುತ್ತೇವೆ.

ಹಾಗೊಂದು ವೇಳೆ ನೀವು ನಮಗೂ ಒಂದು ಆಪ್ಷನ್ ಕೊಡಲು ರೆಡಿ ಇರುವುದಾದರೆ ನಮ್ಮ ಪಕ್ಷದ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ಬಿಟ್ಟುಕೊಡಲು ಸಾಧ್ಯವಾ? ಅಂತ ಯೋಚಿಸಿ. ಹಾಗಂತ ಯೋಗೇಶ್ವರ್ ಬಿಜೆಪಿಯ ಅಭ್ಯರ್ಥಿಯಾಗಬೇಕು ಅಂತಲ್ಲ. ಯಾಕೆಂದರೆ ಅದು ಜೆಡಿಎಸ್ ಕ್ಷೇತ್ರವಾದ್ದರಿಂದ ಬಿಟ್ಟುಕೊಡುವುದು ನಿಮಗೆ ಕಷ್ಟವಾಗಬಹುದು.

ಹೀಗಾಗಿ ಯೋಗೇಶ್ವರ್ ಅವರು ನಿಮ್ಮ ಪಕ್ಷದ ವತಿಯಿಂದಲೇ ಅಭ್ಯರ್ಥಿಯಾಗಲಿ.ಫೈನಲಿ ಕಣಕ್ಕಿಳಿಯುವುದು ಎನ್.ಡಿ.ಎ ಅಭ್ಯರ್ಥಿಯಾದ್ದರಿಂದ ಯೋಗೇಶ್ವರ್ ನಿಮ್ಮ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಸಮಸ್ಯೆ  ಇಲ್ಲ ಅಂತ ನಡ್ಡಾ ಹೇಳಿದ್ದಾರೆ.

ಯಾವಾಗ ನಡ್ಡಾ ಈ ವಿಷಯ ಪ್ರಸ್ತಾಪಿಸಿದರೋ? ಆಗ ಕ್ಷಣ ಕಾಲ ಮೌನಿಯಾದ ಕುಮಾರಸ್ವಾಮಿ ತದನಂತರ:’ಸಾರ್,ಈ ಬಗ್ಗೆ ಯೋಚಿಸಲು ನನಗೆ ಎರಡು ದಿನ ಟೈಮು ಕೊಡಿ.ಯಾಕೆಂದರೆ ಯೋಗೇಶ್ವರ್ ಅವರಿಗೆ ಪಕ್ಷದ ಟಿಕೆಟ್ ಕೊಡುವ ಬಗ್ಗೆ ಮೊದಲು ನಮ್ಮ ಪಕ್ಷದ ಸ್ಥಳೀಯ ನಾಯಕರ ಜತೆ ಚರ್ಚಿಸಬೇಕು’ಎಂದಿದ್ದಾರೆ. ಕುಮಾರಸ್ವಾಮಿಯವರ ಮಾತು ಕೇಳಿದ ನಡ್ಡಾ:’ಅದೂ ಸರಿ ಕುಮಾರಸ್ವಾಮೀಜಿ. ನೀವು ನಿಮ್ಮ ಪಕ್ಷದ ನಾಯಕರ ಜತೆ ಚರ್ಚಿಸಿ ಒಂದು ಪಾಸಿಟಿವ್ ಡಿಸೀಷನ್ನಿಗೆ ಬನ್ನಿ’ಎಂದಿದ್ದಾರೆ.

ಯಾವಾಗ ಇಂತಹದೊಂದು ಚರ್ಚೆ ನಡೆಯಿತೋ? ಇದಾದ ನಂತರ ಕುಮಾರಸ್ವಾಮಿ ಅವರು ಈ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಗಮನಕ್ಕೆ ತಂದಿದ್ದಾರೆ.ಮತ್ತು ವಿಷಯ ತಿಳಿದ ಅಮಿತ್  ಷಾ ಕೂಡಾ ಕುಮಾರಸ್ವಾಮಿ ಅವರ ಫ್ಲೆಕ್ಸಿಬಿಲಿಟಿಯ ಬಗ್ಗೆ ತಾರೀಪು ಮಾಡಿದರಂತೆ

ಯೋಗೇಶ್ವರ್ ಗೆ ಟಿಕೆಟ್ ಬೇಡಣ್ಣೋ ಅಂದ್ರು (Political analysis)

ಹೀಗೆ ದಿಲ್ಲಿಯಲ್ಲಿ ನಡ್ಡಾ ಅವರ ಜತೆ ನಡೆದ ಮಾತುಕತೆಯ ನಂತರ ಸೀದಾ ಕರ್ನಾಟಕಕ್ಕೆ ಬಂದ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ನಾಯಕರು ಮತ್ತು ಚನ್ನಪಟ್ಟಣದ ಸ್ಥಳೀಯ ನಾಯಕರ ಜತೆ ಸಮಾಲೋಚನೆ ನಡೆಸಿದ್ದಾರೆ.

ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ,ಆರ್.ಅಶೋಕ್ ಮತ್ತು ಅಶ್ವಥ್ತನಾರಾಯಣ ಅವರೆಲ್ಲ, ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಲು ಒತ್ತಾಯಿಸುತ್ತಿರುವುದು ಸೇರಿದಂತೆ ಬಿಜೆಪಿಯ ವರಿಷ್ಟರು ಹೇಳಿದ್ದನ್ನೆಲ್ಲ ಈ ಸಭೆಯ ಗಮನಕ್ಕೆ ತಂದಿದ್ದಾರೆ.

ಆದರೆ ಕುಮಾರಸ್ವಾಮಿ ಅವರು ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಉರಿದು ಬಿದ್ದ ಹಲ ನಾಯಕರು,’ಸಾರ್,ಯಾವ ಕಾರಣಕ್ಕಾಗಿ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡುತ್ತೀರಿ? ಅವರನ್ನು ನಂಬಿ ನಾವು ಟಿಕೆಟ್ ಕೊಡಲು ಸಾಧ್ಯವೇ? ಸಾಲದು ಎಂದರೆ ಕುಮಾರಸ್ವಾಮಿ ಒಕ್ಕಲಿಗ ನಾಯಕರನ್ನು ಮುಗಿಸುತ್ತಿದ್ದಾರೆ ಅನ್ನುವಂತಹ ಹೇಳಿಕೆಗಳನ್ನು ಅವರು ಕೊಡುತ್ತಿದ್ದಾರೆ. ಹೀಗೆ ಇಷ್ಟ ಬಂದಂತೆ ಮಾತನಾಡುತ್ತಿರುವ ಯೋಗೇಶ್ವರ್ ಅವರಿಗೆ ಜೆಡಿಎಸ್ ಟಿಕೆಟ್ ಕೊಡುವುದು ಸರಿಯಲ್ಲ ಅಂತ ಕಿರಿಕಿರಿ ಮಾಡಿದ್ದಾರೆ.

ಆದರೆ , ಹೀಗೆ ಕಿರಿಕಿರಿ ಮಾಡಿದವರನ್ನು ಸಮಾಧಾನಿಸಿದ ಕುಮಾರಸ್ವಾಮಿ ಅವರು:’ನೋಡಿ,ಯೋಗೇಶ್ವರ್ ಅವರ ವಿಷಯದಲ್ಲಿ ನಿಮಗೆ ಅಸಮಾಧಾನವಾಗಿರುವುದು ಸಹಜ.ಆದರೆ ಇವತ್ತು ನಾವು ಎನ್.ಡಿ.ಎ ಮಿತ್ರಕೂಟದ ಭಾಗವಾಗಿದ್ದೇವೆ. ಪ್ರಧಾನಿ ನರೇಂದ್ರಮೋದಿಯವರು,ಅಮಿತ್ ಷಾ ಅವರು ನಮ್ಮನ್ನು ಎಷ್ಟು  ವಿಶ್ವಾಸದಿಂದ ಕಾಣುತ್ತಿದ್ದಾರೆ ಎಂದರೆ, ಅದನ್ನು ನಾವು ಮರೆಯಲು ಸಾಧ್ಯವಿಲ್ಲ.

ಇದೇ ರೀತಿ ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆ,ತೋರಿಸುತ್ತಿರುವ ಪ್ರೀತಿಯ ಮುಂದೆ ಚನ್ನಪಟ್ಟಣದ ಟಿಕೆಟ್ ನಮಗೇ ಇರಲಿ ಅಂತ ರಚ್ಚೆ ಹಿಡಿಯುವುದೂ ನಮಗೆ ತರವಲ್ಲ.ಹೀಗಾಗಿ ನಿಮ್ಮ ಮನಸ್ಸಿನ ಭಾವನೆ ಏನಿದೆಯೋ?ಅದನ್ನೂ ಯೋಗೇಶ್ವರ್ ಅವರ ಗಮನಕ್ಕೆ ತರೋಣ.ಆಗಿದ್ದನ್ನು ಸರಿಪಡಿಸಿಕೊಂಡು ಹೋಗೋಣ ಅಂತ ಮನವರಿಕೆ ಮಾಡಿಕೊಟ್ಟು ಜೆಡಿಎಸ್ ಟಿಕೆಟ್ ಕೊಡೋಣ’ ಎಂದಿದ್ದಾರೆ. ಹೀಗೆ ಕುಮಾರಸ್ವಾಮಿ ಅವರಾಡಿದ ಮಾತಿನಿಂದ ಸಭೆಯಲ್ಲಿದ್ದವರಿಗೆ ಪೂರ್ತಿ ಸಮಾಧಾನವಾಗದಿದ್ದರೂ ದಿಲ್ಲಿ ರಾಜಕಾರಣದ ಒಳಸುಳಿಗಳೇನಿವೆಯೋ? ಅಂತ ಮೌನವಾಗಿದ್ದಾರೆ.

ಯೋಗೇಶ್ವರ್ ಉಲ್ಟಾ ಹೊಡೆದಿದ್ದೇಕೆ? (Political analysis)

ಯಾವಾಗ ಈ ಸಭೆ ಮುಗಿಯಿತೋ? ಇದಾದ ನಂತರ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು,ನಾಗಮಂಗಲದ ಮಾಜಿ ಸಾಸಕ ಸುರೇಶ್ ಗೌಡ ಸೇರಿದಂತೆ ಹಲವು ನಾಯಕರ ಟೀಮನ್ನು ಯೋಗೇಶ್ವರ್ ಬಳಿ ಕಳಿಸಿದ್ದಾರೆ.

ಹೀಗೆ ಹೋದ ಟೀಮು,’ಯೋಗೇಶ್ವರ್ ಅವರೇ ನಿಮಗೆ ಟಿಕೆಟ್ ಕೊಡುವ ವಿಷಯದಲ್ಲಿ ನಮಗೆ ವಿರೋಧವೇನಿಲ್ಲ.ಆದರೆ ಕುಮಾರಸ್ವಾಮಿಯವರ ಬಗ್ಗೆ ನೀವು ಕೊಡುತ್ತಿರುವ ಸ್ಟೇಟ್ ಮೆಂಟುಗಳಿಂದ ನಮಗೆ ಬೇಸರವಾಗಿದೆ.ಇಷ್ಟಾದರೂ ಎಲ್ಲವನ್ನೂ ಮರೆತು ಟಿಕೆಟ್ ಕೊಡಲು ಕುಮಾರಸ್ವಾಮಿಯವರು ಒಪ್ಪಿದ್ದಾರೆ.ನೀವೂ ನಿಮ್ಮ ನಿಲುವುಗಳನ್ನು ಬದಲಿಸಿ ಹೊಂದಿಕೊಂಡು ಹೋಗಿ.ನಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಿರಿ’ ಎಂದಿದ್ದಾರೆ.

ಆದರೆ ಅವರು ಹೀಗೆ ಹೇಳುತ್ತಿದ್ದಂತೆಯೇ ಉಲ್ಟಾ ಹೊಡೆದ ಯೋಗೇಶ್ವರ್ ಅವರು:ನಾನು ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸುವುದಾ? ನೋ ಚಾನ್ಸ್. ನಮ್ಮದು ರಾಷ್ಟ್ರೀಯ ಪಕ್ಷಾರೀ. ನಾನೇಕೆ ರಾಷ್ಟ್ರೀಯ ಪಕ್ಷ ತೊರೆದು ಜೆಡಿಎಸ್ ಸೇರಲಿ? ಕರ್ನಾಟಕದಲ್ಲಿ ಬಿಜೆಪಿ ಕಟ್ಟಲು ಶ್ರಮಿಸಿದವನು ನಾನು. ಇವತ್ತು ಮೋದಿಯವರು ಪ್ರಧಾನಿಯಾಗಲು ಕರ್ನಾಟಕ ಕೊಡುಗೆ ಕೊಟ್ಟಿದೆ ಎಂದರೆ ಇಲ್ಲಿ ಬಿಜೆಪಿ ಬಲಿಷ್ಟವಾಗಿದೆ ಅಂತಲೇ ಅರ್ಥ.ಹೀಗಾಗಿ ಯಾವ ಕಾರಣಕ್ಕೂ ನಾನು ಬಿಜೆಪಿ ತೊರೆಯುವುದಿಲ್ಲ.ಜೆಡಿಎಸ್ ಸೇರುವುದಿಲ್ಲ.ಕೊಡುವುದಿದ್ದರೆ ನೀವು ಬಿಜೆಪಿಗೇ ಸೀಟು ಬಿಟ್ಟು ಕೊಡಬೇಕೇ ವಿನ: ಬೇರೆ ದಾರಿಯೇ ಇಲ್ಲ ಎಂದಿದ್ದಾರೆ.

ಹೀಗೆ ಯೋಗೇಶ್ವರ್ ಔಟ್ ರೈಟಾಗಿ ಉಲ್ಟಾ ಹೊಡೆದ ಮೇಲೆ ವಿಷಯ ಕುಮಾರಸ್ವಾಮಿ ಅವರಿಗೆ ತಲುಪಿದೆ.ಅಷ್ಟೇ ಅಲ್ಲ, ಬೇಸತ್ತ ಅವರು ವಿಷಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಆರ್.ಅಶೋಕ್ ಅವರಿಗೆ ವಿವರಿಸಿದ್ದಾರೆ. ಯಾವಾಗ ಕುಮಾರಸ್ವಾಮಿ ಅವರು ಈ ವಿಷಯ ತಿಳಿಸಿದರೋ? ಆಗ ಬೆಂಗಳೂರಿನ ಜಾಲಹಳ್ಳಿಯಲ್ಲಿ ಸಭೆ ನಡೆಸಿದ ಬಿಜೆಪಿಯ ಹಲ ನಾಯಕರು,ಈ ವಿಷಯದಲ್ಲಿ ಇನ್ನು ಮಧ್ಯೆ ಪ್ರವೇಶಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಮೂಲಗಳ ಪ್ರಕಾರ, ಭಾನುವಾರ ಬೆಳಿಗ್ಗೆ ಕುಮಾರಸ್ವಾಮಿ ಅವರಿಗೆ ಫೋನು ಮಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು;’ಕುಮಾರಸ್ವಾಮಿ ಅವ್ರೇ.ನೀವು ಯಾರಿಗೆ ಬೇಕೋ ಅವರಿಗೆ ಟಿಕೆಟ್ ಕೊಡಿ.ಈ ವಿಷಯದಲ್ಲಿ ಇನ್ನು ತುಂಬ ಯೋಚಿಸಬೇಡಿ’ಎಂದಿದ್ದಾರಂತೆ. ಹೀಗಾಗಿ ಚನ್ನಪಟ್ಟಣದಲ್ಲಿ ಜಯಮುತ್ತು ಕಣಕ್ಕಿಳಿಯಬೇಕೋ? ಇನ್ನೊಬ್ಬ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ?ಅಂತ ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ.

ಫೀಲ್ಡಿಗೆ ಇಳೀತಾರಾ ಡಿಕೆಸು? (Political analysis)

ಇನ್ನು ಚನ್ನಪಟ್ಟಣದ ಕಣಕ್ಕೆ ಡಿಸಿಎಂ ಡಿಕೆಶಿ ಸಹೋದರ ಡಿಕೆಸು ಇಳಿಯುವ ಲಕ್ಷಣಗಳು ಕಾಣಿಸಿಕೊಂಡಿವೆ. ಆದರೆ,  ಮಿತ್ರಕೂಟದ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದರೆ ಡಿ.ಕೆ.ಸುರೇಶ್ ಫೀಲ್ಡಿಗಿಳಿಯುವುದು ಅನುಮಾನ.ಕಾರಣ? ಬಿಜೆಪಿ-ಜೆಡಿಎಸ್ ಮಿತ್ರಕೂಟದ ಬಲ ಕ್ರೋಢೀಕರಣಗೊಂಡರೆ ಕಾಂಗ್ರೆಸ್ ಗೆಲ್ಲುವುದು ಕಷ್ಟ. ಕ್ಷೇತ್ರದಲ್ಲಿ ಜೆಡಿಎಸ್ ಗಿರುವ ಸಾಲಿಡ್ಡು ಬೆಂಬಲ.ಯೋಗೇಶ್ವರ್ ಅವರ ಹಿಂದಿರುವ ನಲವತ್ತೈದು ಸಾವಿರ ಪ್ಲಸ್ ಮತಗಳು ಮಿತ್ರಕೂಟದ ಗೆಲುವನ್ನು‌ ಸುಲಭಗೊಳಿಸಲಿವೆ.

ಆದರೆ ಈಗಿರುವ ಮಾಹಿತಿಗಳ ಪ್ರಕಾರ,ಯೋಗೇಶ್ವರ್ ಮಿತ್ರಕೂಟದ ಅಭ್ಯರ್ಥಿಯಾಗುವುದಿಲ್ಲ.ಹೀಗಾಗಿ ಜೆಡಿಎಸ್ ವತಿಯಿಂದ ಮಿತ್ರಕೂಟದ ಅಭ್ಯರ್ಥಿ ಕಣಕ್ಕಿಳಿದರೂ ಯೋಗೇಶ್ವರ್ ಬಂಡಾಯ ಏಳುವ ಸಾಧ್ಯತೆ ಜಾಸ್ತಿ. ಒಂದು ವೇಳೆ ಹೀಗೇನಾದರೂ ಆಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಡಿಕೆಸು ಫೀಲ್ಡಿಗಿಳಿಯಲಿದ್ದಾರೆ. ಡಿಕೆ ಕ್ಯಾಂಪಿಗೆ ತಲುಪಿರುವ ಮಾಹಿತಿಗಳ ಪ್ರಕಾರ,ತ್ರಿಕೋನ‌ ಸ್ಪರ್ಧೆ ಏರ್ಪಟ್ಟರೆ ಕ್ಷೇತ್ರದ ಬಹುಸಂಖ್ಯಾತ ಒಕ್ಕಲಿಗರು ಡಿಕೆಸು ಬೆಂಬಲಕ್ಕೆ ನಿಲ್ಲಲಿದ್ದಾರೆ.ಕಾರಣ? ನಮ್ಮವರಾದ ಕುಮಾರಸ್ವಾಮಿ ಈಗಾಗಲೇ ದಿಲ್ಲಿ ತಲುಪಿ ಕೇಂದ್ರ ಮಂತ್ರಿ ಆಗಿದ್ದಾರೆ.

ಹೀಗಾಗಿ ಇಲ್ಲಿ ನಮ್ಮವರೇ ಆದ ಡಿಕೆಸು ಗೆಲ್ಲಲಿ. ಎಷ್ಟೇ ಆದರೂ ಡಿಕೆಸು ಕೆಲಸಗಾರ ಎಂಬುದು ಬಹುಸಂಖ್ಯಾತ ಭಾವನೆ. ಈ ಮಧ್ಯೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯೋಗೇಶ್ವರ್ ವಿರುದ್ದ ಗೆಲ್ಲುವ ಅಭ್ಯರ್ಥಿ ಅಂತ ಮುಸ್ಲಿಮರು ಕುಮಾರಸ್ವಾಮಿ ಜತೆ ನಿಂತಿದ್ದರು. ಆದರೆ ಈ ಸಲ ಹಾಗಲ್ಲ.ಬಿಜೆಪಿ ಮಿತ್ರಕೂಟದ ಅಭ್ಯರ್ಥಿಯ ವಿರುದ್ದ ಕಾಂಗ್ರೆಸ್ ಗೆಲ್ಲಲಿ ಅಂತ ಅವರು ಬಯಸುತ್ತಾರೆ.ಹೀಗಾಗಿ ಒಕ್ಕಲಿಗ,ಮುಸ್ಲಿಂ,ಪರಿಶಿಷ್ಟರ ಮತಗಳನ್ನು ಕ್ರೋಢೀಕರಿಸಿ ಗೆಲ್ಲಬಹುದು ಎಂಬುದು ಡಿಕೆ ಕ್ಯಾಂಪಿಗಿರುವ ಮಾಹಿತಿ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೆ ಅಂತ ಡಿಕೆ ಕ್ಯಾಂಪು ಈ ಕ್ಷಣಕ್ಕೂ ಲೆಕ್ಕ ಹಾಕುತ್ತಿದೆ.ಮಿತ್ರಕೂಟದ ಅಭ್ಯರ್ಥಿ ಯಾರು ಎಂಬುದರ ಆಧಾರದ ಮೇಲೆ ಮುಂದಿನ‌ ಹೆಜ್ಜೆ ಇಡಲಿದೆ.

ಬೊಮ್ಮಾಯಿ ಪ್ಲೇ  ಕಾರ್ಡ್ ಹೀಗಿದೆ (Political analysis)

ಈ ಮಧ್ಯೆ ಉಪಚುನಾವಣೆ ನಡೆಯುವ ಶಿಗ್ಗಾಂವಿ ಕ್ಷೇತ್ರದ ರಾಜಕಾರಣ ಕುತೂಹಲ ಮೂಡಿಸುವಂತಿದೆ.ಕಾರಣ?ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣಕ್ಕಿಳಿಯಲಿದ್ದಾರೆ. ಯಾವಾಗ ಭರತ್ ಬೊಮ್ಮಾಯಿ ಸ್ಪರ್ಧಿಸುವುದು ನಿಕ್ಕಿ ಆಯಿತೋ?ಅದಾದ ನಂತರ ಕಾಂಗ್ರೆಸ್ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

ಈ ಚರ್ಚೆಯ ಪ್ರಕಾರ,ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ವಿರುದ್ದ ಗೆಲ್ಲಬೇಕೆಂದಿದ್ದರೆ ಪಕ್ಷ ಪಂಚಮಸಾಲಿ ಲಿಂಗಾಯತರೊಬ್ಬರಿಗೆ ಟಿಕೆಟ್ ಕೊಡಬೇಕು.ಇಲ್ಲ,ಭರತ್ ಬೊಮ್ಮಾಯಿ ಗೆಲ್ಲಬೇಕು ಅಂತಿದ್ದರೆ ಮುಸ್ಲಿಮರೊಬ್ಬರಿಗೆ ಟಿಕೆಟ್ ಕೊಡಬೇಕು.

ಕಾರಣ? ಕ್ಷೇತ್ರದಲ್ಲಿ ಅರವತ್ತು ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಲಿಂಗಾಯತರಿದ್ದಾರೆ.ಹೀಗಾಗಿ ಈ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ನಲವತ್ತು ಸಾವಿರಷ್ಟಿರುವ ಮುಸ್ಲಿಮರು,ಮೂವತ್ತೈದು ಸಾವಿರದಷ್ಟಿರುವ ಕುರುಬರು ಮತ್ತು ಗಣನೀಯ ಸಂಖ್ಯೆಯಲ್ಲಿರುವ ಪರಿಶಿಷ್ಟರ ಮತಗಳನ್ನು ಕನ್ ಸಾಲಿಡೇಟ್ ಮಾಡಿ ಕಾಂಗ್ರೆಸ್ ಗೆಲ್ಲಬಹುದು.

ಹಾಗೆ ಮಾಡದೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಪಂಚಮಸಾಲಿ ಲಿಂಗಾಯತರ ಮತಗಳು ಸಾಲಿಡ್ಡಾಗಿ ಭರತ್ ಬೊಮ್ಮಾಯಿ ಪಾಲಾಗುತ್ತದೆ.ಹೀಗೆ ಪಂಚಮಸಾಲಿ ಲಿಂಗಾಯತರ ಸಾಲಿಡ್ಡು ಬೆಂಬಲ ಸಿಕ್ಕರೆ, ಸಾದ ಲಿಂಗಾಯತರು, ಪರಿಶಿಷ್ಟರ ಪೈಕಿ ಎಡಗೈ ಮತಗಳು ಸೇರಿದರೆ ಭರತ್ ಬೊಮ್ಮಾಯಿ ಗೆಲುವು ಸುಲಭವಾಗುತ್ತದೆ.

ಈ ಹಿಂದೆ ಬಸವರಾಜ ಬೊಮ್ಮಾಯಿ ಸತತವಾಗಿ ಗೆಲ್ಲಲು ಈ ಅವಲಕ್ಕಿ ಪವಲಕ್ಕಿ ಕಾಂಚನ‌ ಮಿಣ ಮಿಣ ಪಾಲಿಟಿಕ್ಸೇ ಕಾರಣ ಹೀಗಾಗಿ ಈ ಸಲ ಪಂಚಮಸಾಲಿ ಲಿಂಗಾಯತರಿಗೆ ಪಕ್ಷದ ಟಿಕೆಟ್ ಸಿಕ್ಕದೆ ಹೋದರೆ ಯಥಾ ಪ್ರಕಾರ ಬಸವರಾಜ ಬೊಮ್ಮಾಯಿ ಅವರ ಅವಲಕ್ಕಿ ಪವಲಕ್ಕಿ ಕಾಂಚನ ಮಿಣ ಮಿಣ ಪಾಲಿಟಿಕ್ಸ್ ಯಶಸ್ವಿಯಾಗುತ್ತದೆ.ಭರತ್ ಬೊಮ್ಮಾಯಿ ಗೆಲುವು ಸುಲಭವಾಗುತ್ತದೆ ಎಂಬುದು ಕೈ ಪಾಳಯದ ಗುಸು ಗುಸು.

ಮುಂದೇನಾಗುತ್ತದೋ?

Read also : Political analysis | ಮಿತ್ರಕೂಟಕ್ಕೆ ಕುಮಾರಣ್ಣನೇ ದಂಡನಾಯಕ

ಆರ್.ಟಿ.ವಿಠ್ಠಲಮೂರ್ತಿ

TAGGED:Dinamana.comKannada NewsPolitical Analysisಕನ್ನಡ ಸುದ್ದಿದಿನಮಾನ.ಕಾಂರಾಜಕೀಯ ವಿಶ್ಲೇಷಣೆ
Share This Article
Twitter Email Copy Link Print
Previous Article P.J. Mahantesh Harihara Harihara | ಒಳ ಮೀಸಲಾತಿಗಾಗಿ ಒತ್ತಾಯಿಸಿ ಅ.23 ಪ್ರತಿಭಟನೆ : ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮನವಿ
Next Article ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಚಳ್ಳಕೆರೆಯಲ್ಲಿ‌ ಶಾಸಕ ರಘುಮೂರ್ತಿ ಅವರ ಮಗಳ ವಿವಾಹದಲ್ಲಿ ಪಾಲ್ಗೊಂಡು ವಧು ವರರಿಗೆ ಶುಭ ಹಾರೈಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ನೂರಕ್ಕೆ ನೂರರಷ್ಟು ವಿಶ್ವಾಸ : ಸಿದ್ದರಾಮಯ್ಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಸೊಳ್ಳೆಗಳ ನಿಯಂತ್ರಣಕ್ಕೆ ಮುಂಜಾಗೃತ ಕ್ರಮ ಅವಶ್ಯ : ಡಾ.ಪ್ರಶಾಂತ್ ಆರಾಧ್ಯ

ದಾವಣಗೆರೆ : ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರು ಮುಂಜಾಗೃತಾ ಕ್ರಮ ಅನುಸರಿಸುವಂತೆ ಮನೆಮದ್ದು ತಜ್ಞ…

By Dinamaana Kannada News

ಕ್ರೀಡಾಪಟುಗಳ ವಿದ್ಯಾರ್ಥಿ ವೇತನ : ಅವಧಿ ವಿಸ್ತರಣೆ

ದಾವಣಗೆರೆ ಜು.15  :  ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ, ಪ್ರೌಢಶಾಲಾ…

By Dinamaana Kannada News

ಗಲಭೆ ಸೃಷ್ಠಿಸಲು ಬಿಜೆಪಿ ಮತ್ತದರ ಅಂಗಸಂಸ್ಥೆಗಳ ಪ್ರಯತ್ನ

ದಾವಣಗೆರೆ: ದಾವಣಗೆರೆ ನಗರದಲ್ಲಿ ಕೆಲವು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಯುವಕರು ಹಾಗೂ ಮತ್ತು ಅದರ ಅಂಗಸಂಸ್ಥೆಗಳ ಪದಾಧಿಕಾರಿಗಳು ಗಲಭೆ ಸೃಷ್ಠಿಸುವ…

By Dinamaana Kannada News

You Might Also Like

World No Tobacco Day
ತಾಜಾ ಸುದ್ದಿ

World No Tobacco Day | ದುಶ್ಚಟಗಳಿಂದ ದೂರವಿರಿ : ನ್ಯಾ.ವೇಲಾ ಡಿ.ಕೆ

By Dinamaana Kannada News
ವೀರಣ್ಣ ಮಡಿವಾಳರ
Blog

ಕನ್ನಡ ಸಾಲಿ ಮಾಸ್ತರ ಗೆಳೆಯ ವೀರಣ್ಣನ ನೆಪದಲ್ಲಿ….

By Dinamaana Kannada News
Davanagere
ತಾಜಾ ಸುದ್ದಿ

Davanagere | ಡಿಪ್ಲೋಮಾ ಕೋರ್ಸ್‍ಗೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

Davanagere | ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?