Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು : ಮುಂಜಾನೆಯ ಕೊಲೆ-3
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು : ಮುಂಜಾನೆಯ ಕೊಲೆ-3

Dinamaana Kannada News
Last updated: April 24, 2024 5:52 am
Dinamaana Kannada News
Share
suduru -mining -bellare
ಸಂಡೂರಿನ ಕಥನಗಳು
SHARE

ಯುದ್ಧಗಳು ಆರಂಭವಾದರೆ  ಆರಂಭಕ್ಕೂ ಮುನ್ನ ಕಹಳೆಯಾದರೂ ಮೊಳಗುತ್ತದೆ. ಆಧುನಿಕ ಯುದ್ಧ ಕಾಲದ ಈ ದಿನಗಳಲ್ಲಿ ಕನಿಷ್ಟ ಪಕ್ಷ ಶೀತಲ ಸಮರವಾದರೂ ನಡೆಯುತ್ತದೆ.

ಸಾವು- ನೋವು; ಹಿಂಸೆ ಸಂಭವಿಸುತ್ತದೆ. ಶತ್ರು ಎದುರಿಗೇ ಇರುತ್ತಾನೆ. ಸಾಯಲು ಎರಡೂ ಕಡೆಯ ಸೈನಿಕರಿರುತ್ತಾರೆ. ಅದು ರಾಜರುಗಳ ಕಾಲದ ಸಂಪತ್ತಿನ ದಾಹವೋ ಶೌರ್ಯ ಪ್ರತಾಪಗಳ ತೋರಿಕೆಗಾಗಿಯೋ ಅಂತೂ ಯುದ್ಧಗಳು ನಡೆಯುತ್ತಿದ್ದವು. ಯುದ್ಧದಲ್ಲಿ ಭಾಗಿಯಾದವರಲ್ಲಿ ಕೆಲವರಾದರೂ ಸಾಯುತ್ತಿದ್ದರು.ಕೆಲವರು ಗಾಯಗೊಳ್ಳುತ್ತಿದ್ದರು. ಉಳಿದ ಪ್ರಜೆಗಳು ರಾಜನ ಆಳ್ವಿಕೆಯಲ್ಲಿ ಬದುಕುತ್ತಿದ್ದರು.

ಉಸಿರಾಡುವ ಗಾಳಿಯ ಮೇಲೆ ನಿರಂತರ ದಾಳಿಗಳು

ಸೊಂಡೂರಿನಲ್ಲಿ ರಾಜ ಮಹಾರಾಜರುಗಳ ಪಳೆಯುಳಿಕೆಗಳಿದ್ದರೂ ಯುದ್ಧಗಳಿಲ್ಲ , ಯುದ್ಧ ನಿಂತಿಲ್ಲ ಎಂದು ನಾನು ಹೇಳುವುದಿಲ್ಲ.ಇಲ್ಲಿ ಯುದ್ಧಕ್ಕಿಂತ ಭೀಕರ ದಾಳಿಗಳು ಅಮಾಯಕ ನಾಗರಿಕರ ಮೇಲೆ, ಹುಟ್ಟುವ ಮಕ್ಕಳು ಉಸಿರಾಡುವ ಗಾಳಿಯ ಮೇಲೆ ನಿರಂತರ ದಾಳಿಗಳು ನಡೆಯುತ್ತಲೇ ಇವೆ. ಈ ದಾಳಿಗಳಿಂದ ಕೇವಲ ಸಾವುಗಳಾಗುವುದಿಲ್ಲ. ನೋವುಂಟಾಗುವುದಿಲ್ಲ ಆದರೆ ಕೊಲೆಗಳಾಗುತ್ತವೆ.ಕೇವಲ ಕೊಲೆಗಳಾಗುತ್ತವೆ.  ಗಣಿಗಾರಿಕೆ ಕೇವಲ ಧಣಿಗಳನ್ನಷ್ಟೆ ಶ್ರೀಮಂತರನ್ನಾಗಿ ಮಾಡಲಿಲ್ಲ.ಬಡ ರೈತರ ಮಣ್ಣನ್ನೂ ಕಸಿದು, ಅವರ  ಬೇಸಾಯವನ್ನೂ ಸಾಯಿಸಲಾಯಿತು.

ಮಕ್ಕಳ ಅಕ್ಷರಗಳೂ ಮಣ್ಣಲ್ಲಿ ಸೇರಿಹೋದವು

ಮಕ್ಕಳ ಅಕ್ಷರಗಳೂ ಮಣ್ಣಲ್ಲಿ ಸೇರಿಹೋದವು. ಪಾರಂಪರಿಕ ಜ್ಞಾನಗಳೂ ಅದಿರಿನ ಮಣ್ಣಿನ ಜೊತೆ ಸೇರಿ ಹೋದವು. ಕನಿಷ್ಟ ಪಕ್ಷ ಮನುಷ್ಯರ ನಗು,ಅಳು ; ಅಣ್ಣ ತಮ್ಮ;ಅಕ್ಕ ತಂಗಿಯರೆಂಬ ಭಾವನಾತ್ಮಕ ಸಂಬಂಧಗಳೂ ಸಹ ಗಣಿ ರೊಕ್ಕದಲ್ಲಿ ಮಿಂದೆದ್ದು ರಕ್ತವರ್ಣಕ್ಕೆ ತಿರುಗಿದ್ದು ವಿಪರ್ಯಾಸ. ಆ ಬೆಟ್ಟ ಗುಡ್ಡಗಳಿಗೆಲ್ಲ ಚೆನ್ನಾಗಿ ನೆನಪಿದೆ. ತನ್ನ ಕಾಲ ಬುಡದ ಆ ಕಲ್ಲಿನ ಹೊಲವನ್ನು ರಂಟೆ ಹೊಡೆದು ಹಸನು ಮಾಡಿದ ಅಣ್ಣ ತಮ್ಮಂದಿರ ಶ್ರಮದ ಅರಿವೂ ಇದೆ.

Sanduru stories
ಸಂಡೂರು ಮೈನಿಂಗ್

 ಇದ್ದರೆ ಅವರಂತೆ ಇರಬೇಕು. ಎಂಬಂಥ ಬಂಧ!

ಅಣ್ಣನಿಗೆ-ತಮ್ಮ; ತಮ್ಮನಿಗೆ -ಅಣ್ಣ

ಜೀವಕ್ಕೆ ಜೀವ ಕೊಡಬಲ್ಲವರು.

ಬಿರು ಬಿಸಿಲಿನಲ್ಲಿ ರಂಟೆ ಹೊಡೆಯುವ ಅಣ್ಣ ತಮ್ಮಂದಿರ ಹೊಂದಾಣಿಕೆಯ ಬದುಕು ಎಲ್ಲರಿಗೂ ಮಾದರಿಯಾಗಿತ್ತು.

ಗಳೇವು ನಿಲ್ಲಿಸಿದ ಅಣ್ಣನಿಗೆ ನೀರು ಕೊಟ್ಟು , ತಮ್ಮ ರಂಟೆ ಹೊಡೆಯುತ್ತಿದ್ದ.

ತುಸು ಹೊತ್ತು ಹೊಂಗೆ ಮರದ ನೆರಳಿನಲ್ಲಿ ಕುಂತ ಅಣ್ಣನಿಗೆ, ತಮ್ಮ ಬಿಸಿಲಿನಲ್ಲಿ ರಂಟೆ ಹೊಡೆಯುವುದ ನೋಡಿ ಕರುಳು ಚುರುಕ್ ಎನ್ನಿಸಿದಂತಾಗಿ,  ಪುನಃ ತಾನು ಗಳೇವು ಕೈಗೊಳ್ಳುತ್ತಿದ್ದ. ಅಣ್ಣ ತಮ್ಮ ಅಂದ್ರೆ ಹಿಂಗಿರಬೇಕು ಎಂಬಂತೆ ಎರಡು ಜೀವಗಳು ಅನೋನ್ಯವಾಗಿದ್ದವು.

ಆಗೆಲ್ಲ ‘ಗಣಿ’ ಎಂದರೆ ‘ಗಿಣಿ’ ಎಂಬಂತೆ ಕೇಳಿಸುವ ದಿನಗಳಿದ್ದವು. ನಿತ್ಯವೂ ಊರ ಸಂತೆ; ಜಾತ್ರೆಯಿರುವಂತೆ ಸದಾ ಗಜಿ ಬಿಜಿಯಿರುತ್ತಿತ್ತು. ಗಣಿಗಾರಿಕೆಯ ಟ್ರಕ್ಕುಗಳ ಅಬ್ಬರಕ್ಕೆ,ಅರ್ಧಕ್ಕೆ ಶಾಲೆ ಬಿಟ್ಟು ಬಡವನಾದ ಹುಡುಗನ ಮನಸ್ಥಿತಿಯಲ್ಲಿ ಹೊಲಗಳಿದ್ದವು. ಬ್ಯಾಸಾಯದ ಹೊಲಗಳು-ಗಣಿಗಾರಿಕೆಯೆದುರು ತಪ್ಪಿತಸ್ಥನಂತೆ ನಿಂತ ಮನುಷ್ಯರ ಸಾಲುಗಳ ಹಾಗೆ ಕಾಣುತ್ತಿದ್ದವು.

ಎಲ್ಲಿ ನೋಡಿದರೂ ರಾಶಿ ರಾಶಿ ರೊಕ್ಕದ್ದೇ ಮಾತು!

…..….ಅಂಥದ್ದೇ ಒಂದು ದಿನ,ಗಣಿ ಧಣಿಯೊಬ್ಬ ಮನೆ ಮುಂದೆ ಬಂದು ನಿಂತಿದ್ದ. ಆ ಕುಟುಂಬದ ಹತ್ತು ಹೊಟ್ಟೆಗಳನ್ನು  ತಣಿಸುವ ಹೊಲದ ಮೇಲೆ ಅವನ ಕಣ್ಣಿತ್ತು. ಹೊಲದ ಮೇಲೆ ಲಕ್ಷ ಲಕ್ಷದ ಮಾತುಗಳು ಹರಿದಾಡಿದವು. ಹ್ಞೂ…ಎಂದರೆ ಎರಡು ಎಕರೆ ಭೂಮಿಗೆ ಐವತ್ತು ಲಕ್ಷ! ಅರ್ಧರ್ಧವೆಂದರೂ ತಲಾ ಇಪ್ಪತ್ತೈದು ಲಕ್ಷ.!!

 

ಇಪ್ಪತ್ತೈದು …ಲಕ್ಷ.!

ಅಣ್ಣ -ತಮ್ಮನ ಮುಖ ನೋಡಿದ

ತಮ್ಮ-ಅಣ್ಣನ ಮುಖ ನೋಡಿದ

ತಂತಮ್ಮ ಮುಖಗಳು ಎಂದಿನಂತಿರಲಿಲ್ಲವೆಂಬುದು ಇಬ್ಬರಿಗೂ ಮನವರಿಕೆಯಾಯಿತು.

ಮುಂಜಾನೆ ಆ ಕೇರಿಯಲ್ಲಿ ಒಂದು ಕೊಲೆಯಾಗಿತ್ತು

.!

 

             ಬಿ.ಶ್ರೀನಿವಾಸ.

 

TAGGED:dinamaana.comKannada NewsSanduru stories.ಕನ್ನಡ ಸುದ್ದಿಕಾಂದಿನಮಾನಸಂಡೂರಿನ ಕಥನಗಳು.
Share This Article
Twitter Email Copy Link Print
Previous Article Rayasam Bhimasena Rao ಕನ್ನಡ ಸಾಹಿತ್ಯಕ್ಕೆ ಬೀಚಿಯವರ ಕೊಡುಗೆ ಅನನ್ಯ
Next Article COURT DVG ಅಂಬೇಡ್ಕರ್ ಜಗತ್ತಿನ ಸರ್ವಕಾಲಿಕ ಸರ್ವಶ್ರೇಷ್ಠರಲ್ಲಿ ಒಬ್ಬರು : ವಿಶ್ರಾಂತ ನ್ಯಾ. ಹೆಚ್. ಬಿಲ್ಲಪ್ಪ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Political analysis | ಡಿಕೆಶಿ ಅಂದ್ರೆ ಅಮಿತ್ ಶಾ ಅವರಿಗಿಷ್ಟ

ಕಳೆದ ವಾರ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು.…

By Dinamaana Kannada News

ಗ್ರಾಮೀಣ ಅಂಚೆ ಪಾಲಕ-ಸೇವಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

ಶಿವಮೊಗ್ಗ, ಜುಲೈ 18 :  ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು…

By Dinamaana Kannada News

Davanagere : ಹೈಟೆಕ್ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಸಾರ್ವಜನಿಕ ಬಳಕೆಗೆ ಮುಕ್ತ, ಜಿಲ್ಲಾ ಉಸ್ತುವಾರಿ ಸಚಿವರಿಂದ ಹಸಿರು ನಿಶಾನೆ

ದಾವಣಗೆರೆ ಸೆ. 22 (Davanagere ):  ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ನವೀಕೃತ ನೂತನ ಹೈಟೆಕ್ ಬಸ್…

By Dinamaana Kannada News

You Might Also Like

gym fitness
ತಾಜಾ ಸುದ್ದಿ

SC -ST ಯುವಜನರಿಗೆ ಉಚಿತ ಜಿಮ್‌ಫಿಟ್ನೆಸ್ ತರಬೇತಿ

By Dinamaana Kannada News
Applications invited
ತಾಜಾ ಸುದ್ದಿ

ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಗೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ರಾಷ್ಟ್ರೀಯ ರಸ್ತೆ ಸುರಕ್ಷತಾ:ಬೈಕ್ ಜಾಥಕ್ಕೆ ಚಾಲನೆ ನೀಡಿದ ಎಸ್ಪಿ ಉಮಾ ಪ್ರಶಾಂತ್

By Dinamaana Kannada News
B.Srineevas davanagere
ಅಭಿಪ್ರಾಯ

ದಿನಮಾನ-ಪುಸ್ತಕ ವಿಮರ್ಶೆ|ಚಾರಿತ್ರಿಕ ಹೋರಾಟದ ಬೆಂಕಿಯ ಮಳೆ : ಬಿ.ಶ್ರೀನಿವಾಸ 

By ಬಿ.ಶ್ರೀನಿವಾಸ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?