Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > short story | ಪ್ರೀತಿಯ ಕೊರತೆಯಲ್ಲಿ ನೀಲಾ !
Blog

short story | ಪ್ರೀತಿಯ ಕೊರತೆಯಲ್ಲಿ ನೀಲಾ !

Dinamaana Kannada News
Last updated: October 24, 2024 8:37 am
Dinamaana Kannada News
Share
small story
small story
SHARE

Kannada News | Dinamaana.com | 24-10-2024

ನೀಲಾ ಮುದ್ದಾದ ಹೆಣ್ಣು ಮಗಳು. ಚಿಕ್ಕಂದಿನಿAದ ಸಾಕಷ್ಟು ನೋವು ಕಷ್ಟ ಕಂಡುಕೊAಡು ಬೆಳೆದವಳು. ಪ್ರತಿದಿನ ಪ್ರತಿಕ್ಷಣ ಪ್ರೀತಿಗಾಗಿ ಹಂಬಲಿಸುತ್ತಿದ್ದ ಮುಗ್ಧ ಹುಡುಗಿ.

ನೇರ ಮಾತು ದಿಟ್ಟ ನಿರ್ಧಾರ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಎಲ್ಲಾ ಗುಣಗಳನ್ನು ಒಳಗೊಂಡ ಒಬ್ಬ ಸುಂದರ ಬೆಡಗಿ. ಅವಳಿಗೆ ಇದ್ದ ಒಂದು ಲೋಪವೆಂದರೆ ಮುಂಗೋಪ. ವಿದ್ಯಾವಂತೆ ಬುದ್ಧಿವಂತೆ. ಅವಳಿಗೆ ಸಹೋದರಿ ಇದ್ದಳು ಜೊತೆಗೆ ಒಬ್ಬ ಸಹೋದರನು ಇದ್ದನು.

ಸಹೋದರಿ ಅವರ ತಂದೆ ತಾಯಿಗೆ ನಂಬಿಕೆ ದ್ರೋಹ ಮಾಡಿದಳು ಅದರ ಪರಿಣಾಮ ನೀಲಾಳ ಮೇಲೆ ಆಯಿತು. ಇಷ್ಟೆಲ್ಲಾ ಒಳ್ಳೆಯ ಗುಣಗಳನ್ನು ಹೊಂದಿದ್ದ ನೀಲಾ ಮನೆಯಲ್ಲಿ ಪ್ರೀತಿಯ ಕೊರತೆ ಅನುಭವಿಸುತ್ತಿದ್ದಳು. ಪ್ರೀತಿಗಾಗಿ ಸದಾ ಹಂಬಲಿಸುತ್ತಿದ್ದವಳು. ಪ್ರೀತಿಗೆ ಬಹಳ ಬೇಗ ಕರಗಿ ಹೋಗುತ್ತಿದ್ದವಳು. ಅವಳಿಗೆ ಪ್ರತಿದಿನ ಕಾಡುತ್ತಿದ್ದ ವಿಷಯವೆಂದರೆ ನನ್ನನ್ನು ಪ್ರೀತಿಸುವ ಜನರು ಯಾರು ಇಲ್ಲ ಎಂಬುದು.

ಹೊಸ ಪರಿಚಯದಲ್ಲಿ ಹೊಸ ಜನರೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊAಡು ತನ್ನ ಜೀವನವನ್ನು ಸದಾ ಲವಲವಿಕೆಯಿಂದ ಖುಷಿಯಿಂದ ಇಟ್ಟುಕೊಂಡಿದ್ದಳು.ಮದುವೆಯಾಯಿತು ,ಮಕ್ಕಳು ಆದವು .ಸ್ವಲ್ಪ ದಿನ ಎಲ್ಲವೂ ಖುಷಿಯಿಂದ ನಡೆಯುತ್ತಿತ್ತು ತನ್ನನ್ನು ಪ್ರೀತಿಸುವ ಜೀವಗಳು ಗಂಡ ಮತ್ತು ಮಕ್ಕಳು ಎಂದು ಭಾವಿಸಿದ್ದಳು. ಬರ ಬರುತ್ತಾ ಗಂಡನ ಪ್ರೀತಿ ಕಡಿಮೆಯಾಯಿತು . ಮಕ್ಕಳ ಮೇಲಿನ ವ್ಯಾಮೋಹ ಕಡಿಮೆಯಾಯಿತು.

ಜೀವನ ಉತ್ಸಾಹ ಕಳೆದುಕೊಂಡು ಯಾಂತ್ರಿಕ ಜೀವನ ನಡೆಸುತ್ತಿದ್ದ ನೀಲಾಳಿಗೆ ಚೈತನ್ಯ ತುಂಬುವ ಒಂದು ಜೀವದ ಅವಶ್ಯಕತೆ ಇತ್ತು. ಅವಳು ಅಡುಗೆ ಮನೆಗೆ ಹೋದಾಗ ನಾನು ಒಂಟಿ ನಾನು ಕೆಲಸ ಮಾಡಲು ಮಾತ್ರ ಇರುವವಳು ಎಂಬ ಭಾವ ಇತ್ತು . ಒಂದು ದಿನ ಅಡಿಗೆ ಮನೆಯ ಕಿಟಕಿಯಿಂದ ಒಂದು ಶಬ್ದ ಕೇಳಿಸಿತು . ಸುಂದರ ಶಬ್ದ ಕಿವಿಗೆ ಇಂಪನ್ನು ನೀಡಿದ್ದು , ಯಾರು ಅವಳನ್ನು ಶಬ್ದ ಸಂಜ್ಞೆ ಮೂಲಕ ಕರಿಯುತ್ತಿರುವಂತೆ ಅವಳಿಗೆ ಭಾಸವಾಯಿತು. ಹೊರಗೆ ಹೋಗಿ ಎಲ್ಲಾ ಕಡೆ ನೋಡಿದಾಗ ಯಾರು ಕಾಣಿಸಲಿಲ್ಲ ಭ್ರಮೆ ಎಂದು ತಿಳಿದಳು. ಮತ್ತೆ ಮರುದಿನ ಆ ಸಮಯಕ್ಕೆ ಇದೇ ಘಟನೆ ಮರುಕಳಿಸಿತು.

Read also : poem | ತಾಯಿಯ ಪ್ರೀತಿ…

ಅವಳಿಗೆ ಒಂದು ಕಡೆ ಖುಷಿ ಒಂದು ಕಡೆ ಆತಂಕ ಗೊಂದಲ ಖುಷಿಯ ಪ್ರಮಾಣವೇ ಜಾಸ್ತಿ ಆಯ್ತು. ನನ್ನನ್ನು ಯಾರು ನೋಡುತ್ತಿದ್ದಾರೆ. ಪ್ರತಿ ದಿನ ನನಗೆ ಕಾಯುತ್ತಾರೆ. ಸಮಯಕ್ಕೆ ಬಂದು ನನಗೆ ಸಂಜ್ಞೆ ಮಾಡುತ್ತಾರೆ ಎಂದು ಖುಷಿಯಿಂದ ಪ್ರೀತಿಯಿಂದ ಅಡುಗೆ ಮಾಡಲು ಶುರು ಮಾಡಿದಳು.

ಮೊದಲು ಅಡಿಗೆ ಮನೆಯೆಂದರೆ ಬೇಸರಗೊಳ್ಳುತ್ತಿದ್ದ ನೀಲಾ ಇಂದು ಅಡುಗೆ ಮನೆಗೆ ಹೋಗಲು ಕಾತುರಳಾದಳು. ಆ ಶಬ್ದ ಅವಳಿಗೆ ನೀಡುತ್ತಿದ್ದ ಉತ್ಸಾಹ ಸಂತೋಷ ಅಷ್ಟಿಷ್ಟಲ್ಲ ಚೈತನ್ಯದ ಚಿಲುಮೆಯದಳು. ಸದಾ ಲವಲವಿಕೆಯಿಂದ ಇರಲು ಶುರು ಮಾಡಿದಳು. ಮನೆ ನಂದಗೋಕುಲವಾಯಿತು.

ಗಂಡನ ತಿರಸ್ಕಾರ ಅತ್ತೆ ಮಾವರ ದಬ್ಬಾಳಿಕೆ ಮಕ್ಕಳ ಕಿರಿಕಿರಿ ಯಾವುದು ಈ ಕಾಣದ ಶಬ್ದದ ಪ್ರೀತಿಯ ಮುಂದೆ ದೊಡ್ಡದೇನಿಸಲಿಲ್ಲ. ಹೆಣ್ಣು ಬಯಸುವುದು ಅಷ್ಟೇ ಅಲ್ಲವೇ ತನಗಾಗಿ ಸ್ವಲ್ಪ ಸಮಯ ಕೊಡುವ ಪ್ರೀತಿ ನೀಡುವ ಜೀವ ಬೇಕೆಂಬುದು ನನಗಾಗಿ ಯಾರೋ ಇರುವರು ಅನ್ನುವ ನಂಬಿಕೆ ಅವಳ ಬದುಕಿಗೆ ಸ್ಪೂರ್ತಿಯಾಯಿತು.

ಹಾಗಾದರೆ ಅವಳಿಗೆ ಪ್ರತಿದಿನ ಬರುತ್ತಿದ್ದ ಶಬ್ದ ಯಾವುದು? ಎನ್ನುವ ಪ್ರಶ್ನೆ ಕಾಡುವುದಲ್ಲವೇ ಪ್ರತಿದಿನ ಆ ಸಮಯಕ್ಕೆ ಅಲ್ಲಿಗೆ ಬರುತ್ತಿದ್ದಿದ್ದು ಒಂದು ಸುಂದರ ಪಕ್ಷಿ ಅದರ ಶಬ್ದವೇ ಅವಳನ್ನು ಮನಸೂರೆಗೊಂಡಿತ್ತು. ಅದು ಅವಳಿಗೆ ತಿಳಿಯದಾಗಿತ್ತು.

ಸುವಿ (ಸುಚಿತ್ರ) ದಾವಣಗೆರೆ

TAGGED:dinamaana.comLack of loveShort StorySuviಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಪ್ರೀತಿಯ ಕೊರತೆಸಣ್ಣ ಕಥೆಸುವಿ
Share This Article
Twitter Email Copy Link Print
Previous Article massive-protest-demanding-implementation-of-reservation-in-madiga-and-chalavadi-communities-davanagere ಮುಗಿಲು ಮುಟ್ಟಿದ ಮಾದಿಗರ ಧ್ವನಿ | ನ್ಯಾಯ ಸಿಗದಿದ್ದರೆ ರಾಜಕಾರಣಿಗಳನ್ನು ಮನೆ ಹತ್ತಿರ ಬಿಟ್ಟುಕೊಳ್ಳಬೇಡಿ : ನಾರಾಯಣ ಸ್ವಾಮಿ
Next Article Davanagere Davanagere | 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆ, ದಾವಣಗೆರೆಯಲ್ಲಿ  ಆದ್ದೂರಿ ಸ್ವಾಗತ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಅಂಗನವಾಡಿ ನೇಮಕಾತಿ: ಆಮಿಷಗಳಿಗೆ ಬಲಿಯಾಗದಿರಿ ಎಂದು ಡಿಸಿ ಗಂಗಾಧರಸ್ವಾಮಿ ಅಭಯ

ದಾವಣಗೆರೆ, ಜೂನ್‌.29: ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ನೇಮಕ ಮಾಡಲು ಅರ್ಜಿ (ಅಂಗನವಾಡಿ ನೇಮಕಾತಿ) …

By Dinamaana Kannada News

ವಿದ್ಯುತ್ ವ್ಯತ್ಯಯ

ದಾವಣಗೆರೆ.ಜೂ.26  :  ಜಲಸಿರಿ  ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜೂನ್ 27 ರಂದು ಬೆಳಿಗ್ಗೆ…

By Dinamaana Kannada News

Davanagere news | ಆಟೋದಲ್ಲಿ ಮರೆತು ಹೋಗಿದ್ದ ಅಭರಣ ಹಿಂದಿರುಗಿಸಿದ ಪೊಲೀಸರು

ದಾವಣಗೆರೆ  (Davanagere) : ಆಟೋದಲ್ಲಿ  ಕಳೆದುಕೊಂಡಿದ್ದ ಬಂಗಾರ & ಬೆಳ್ಳಿಯ ಆಭರಣಗಳನ್ನು ಪತ್ತೆ ಮಾಡುವಲ್ಲಿ ಬಸವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹರಿಹರದ ನವೀನತಾಜ್…

By Dinamaana Kannada News

You Might Also Like

MP visits STPI Bengaluru
ತಾಜಾ ಸುದ್ದಿ

ದಾವಣಗೆರೆ | ಸಂಸದರಿಂದ ಎಸ್‌ಟಿಪಿಐ ಬೆಂಗಳೂರು ಭೇಟಿ : ಐಟಿವಲಯಕ್ಕೆ ಹೊಸ ಉತ್ತೇಜನ

By Dinamaana Kannada News
ದಾವಣಗೆರೆ
ತಾಜಾ ಸುದ್ದಿ

ದಾವಣಗೆರೆ | ಆತ್ಮಹತ್ಯೆಗೆ ಯತ್ನ : ತಾಯಿ ಮತ್ತು  ಮಗು ರಕ್ಷಿಸಿದ 112 ಹೊಯ್ಸಳ ಸಿಬ್ಬಂದಿ

By Dinamaana Kannada News
District Jawahar Bal Manch
ತಾಜಾ ಸುದ್ದಿ

ದಾವಣಗೆರೆ | ಮಾದಕ ವಸ್ತುಗಳಿಂದ ಭವಿಷ್ಯ ಸರ್ವನಾಶ : ದಿನೇಶ್ ಕೆ. ಶೆಟ್ಟಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ಮಾನವ ಅಭಿವೃದ್ದಿ ವರದಿ ತಯಾರಿಕೆಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?