ಜಗಳೂರು : ಸಮುದಾಯ ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಕೊರೆತೆಯಿಂದಾಗಿ ಜನರಿಗೆ ಸದ್ಬಳಕೆಯಾಗಬೇಕಿದ್ದ ಬಾಕ್ಸ್ ಗಟ್ಟಲೇ ಔಷಧಿಗಳು ವ್ಯರ್ಥವಾಗಿವೆ.
ತಾಲೂಕಿನ ಚಿಕ್ಕಮಲ್ಲನ ಹೊಳೆ ಗ್ರಾಮದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ಸುಸಜ್ಜಿತವಾದ ಕಟ್ಟಡ ಮೂಲಭೂತ ಸೌಲಭ್ಯಗಳನ್ನು ಸಹ ಹೊಂದಿದೆ ಜೊತೆಗೆ ರೋಗಿಗಳಿಗೆ ಅನುಕೂಲವಾಗಿರುವಂತಹ ಬೆಡ್ಡು , ಔಷಧಿ , ಮಾತ್ರೆ ಇಂಜಕ್ಷನ್ ಸಮರ್ಪಕವಾಗಿ ಇವೆ ಅದರೆ, ಬಳಕೆಯಾಗದ ಹಿನ್ನಲೆಯಲ್ಲಿ ಬಾಕ್ಸ್ ಗಟ್ಟಲೇ ಔಷಧಿಗಳು ರೋಗಿಗಳು ವ್ಯರ್ಥವಾಗಿವೆ.
ಸಮುದಾಯ ಆರೋಗ್ಯ ಅಧಿಕಾರಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ವೈದ್ಯರು ಬಾರದೆ ಇರುವುದರಿಂದ ಉಪ ಕೇಂದ್ರದ ವ್ಯಾಪ್ತಿಯ ಗ್ರಾಮಸ್ಥರಿಗೆ ತುಂಬಾ ನಷ್ಟವಾಗುತ್ತಿದೆ. ರೈತರ ಮತ್ತು ಸಿಬ್ಬಂದಿಗಳ ಕೊರತೆಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿರುವಂತಹ ಅವರಿಗೆ ಬಳಕೆಯಾಗಬೇಕಾಗಿದ್ದ ಔಷಧಿಗಳ ಕೇಂದ್ರದಲ್ಲಿ ದಾಸ್ತನಾಗಿದ್ದು ಅವಧಿ ಮೀರಿವೆ.
ಸಿಬ್ಬಂದಿಗಳ ಕೊರತೆಯಿಂದಾಗಿ ಔಷಧಿಗಳು ಅವಧಿ ಮೀರಿ ವ್ಯರ್ಥವಾಗುತ್ತಿವೆ. ಇರುವ ಔಷಧಿಗಳನ್ನು ಸಮೀಪದ ಕೇಂದ್ರಕ್ಕೆ ನೀಡಿದರೆ. ಅನುಕೂಲವಾಗುವುದು. ಆದರೆ , ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸದೆ ಇರುವುದರಿಂದ ಸಾಕಷ್ಟು ಹಣ ಅರ್ಥವಾಗಲು ಕಾರಣರಾಗಿದ್ದಾರೆ.
ತಾಲೂಕಿನಲ್ಲಿ 22 ಸಿಎಚ್ಓ ಹುದ್ದೆಗಳು ಇದ್ದು ಏಳು ಜನ ನಾನಾ ಕಾರಣಗಳಿಂದ ರಾಜೀನಾಮೆ ನೀಡಿರುವುದರಿಂದ ಸ್ಥಾನಗಳು ತೆರವಾಗಿರುವುದರಿಂದ ಔಷಧಿಗಳು ಉಳಿಯಲು ಕಾರಣವಾಗಿದೆ. ಸರ್ಕಾರ ಇತ್ತ ಗಮನ ಹರಿಸಿ ಹುದ್ದೆಗಳನ್ನು ತುಂಬಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡದ ರೋಗಗಳಿಗೆ ಸಂಬಂಧಿಸಿದ ಔಷಧಿಗಳು ಭಾಗಗಟ್ಟಲೆ ದಾಸ್ತನಾಗಿದ್ದು ಸಿಎಚ್ಒ ಹುದ್ದೆಯ ಮತ್ತು ಸಿಬ್ಬಂದಿಗಳ ಕೊರತೆಯನ್ನಾಗಿ ಔಷಧಿಗಳು ವ್ಯರ್ಥವಾಗಿವೆ.
ರಾಘವೇಂದ್ರ
ಸಾಮಾಜಿಕ ಹೋರಾಟಗಾರಉಪಕೇಂದ್ರಕ್ಕೆ ಭೇಟಿ ನೀಡಿ ಡ್ರಗ್ಸ್ ಗಳನ್ನು ಪರಿಶೀಲನೆ ನಡೆಸಲಾಗುವುದು. ಅವಧಿ ಮೀರಿದ ಔಷಧಿಗಳು ಇದ್ದರೆ ಅವುಗಳನ್ನು ತೆರವು ಮಾಡಿ ಬಳಕೆಯಾಗುವಂತಹ ಔಷಧಿಗಳನ್ನು ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲುಪಿಸುವಂತಹ ವ್ಯವಸ್ಥೆ ಮಾಡಲಾಗುವುದು.
ಡಾ. ವಿಶ್ವನಾಥ್
ತಾಲೂಕು ಆರೋಗ್ಯ ಅಧಿಕಾರಿಗಳು
