Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Silent dolls… | ಮೌನವಾದ ಗೊಂಬೆಗಳು …
Blog

Silent dolls… | ಮೌನವಾದ ಗೊಂಬೆಗಳು …

Dinamaana Kannada News
Last updated: October 11, 2024 8:13 am
Dinamaana Kannada News
Share
short story
ಸವಿತಾ ಎಸ್ ವೆಂಕಟೇಶ್ ಸಹಪ್ರಾಧ್ಯಾಪಕರು. ಮೈಸೂರು.
SHARE

Kannada News | Dinamaana.com | 11-10-2024

ದೊಡ್ಡವರೆಲ್ಲ ನೆನಪಿಸಿಕೊಳ್ಳಿ , ನಾವು ಚಿಕ್ಕವರಿದ್ದಾಗ ಎಲ್ಲರ ಬಳಿ ಆಟ ಆಡಲು ಸಾಕಷ್ಟು ಗೊಂಬೆಗಳು ಇರುತ್ತಿದ್ದವು. ಒಂದೊಂದು ಗೊಂಬೆಗು ಒಂದೊಂದು ಕಥೆ ಇರುತಿತ್ತು. ಇದು ಅಪ್ಪ ನನ್ನ ಜನ್ಮದಿನಕ್ಕೆ  ತಂದು ಕೊಟ್ಟಿ ಗೊಂಬೆ, ಇದು ಅಮ್ಮ ತನ್ನ ಗೆಳತಿಯ ಜೊತೆ ಸುತ್ತಾಡಲು ಹೋದಾಗ ನನ್ನ ಸಮಾಧಾನ ಪಡಿಸಲೆಂದು ಮನೆಗೆ ಬರುವಾಗ ತಂದು ಕೊಟ್ಟಿದ್ದಂತಹ ಗೊಂಬೆ.

ಮತ್ತೊಂದು ಅಜ್ಜಿ ಮನೆಯಲ್ಲಿ ಇದ್ದದ್ದನ್ನು ನಾನೇ ಇಷ್ಟಪಟ್ಟು ತೆಗೆದುಕೊಂಡು ಬಂದಂತಹ ಗೊಂಬೆ. ಕೆಲವೊಮ್ಮೆ  ಸಂತೆ ಬೀದಿಯಲ್ಲಿ ಹೋಗುವಾಗ ಅಂಗಡಿಯ ಹೊರಗೆ ಇಟ್ಟಿದ್ದ ಒಂದು ಗೊಂಬೆ  ನನ್ನನ್ನು ಬಾ ಎಂದು ಕರೆದಂತಾಗಿ ಅದರ ಬಳಿ ಹೋಗಿ, ಅಪ್ಪ ಅಮ್ಮ ಬೇಡವೆಂದರೂ ಹಠ ಮಾಡಿ ಕಾಡಿಬೇಡಿ ನಾನೇ ತೆಗೆಸಿಕೊಂಡ ಅಚ್ಚುಮೆಚ್ಚಿನ ಗೊಂಬೆ ‌ ಅಣ್ಣನ ಬಳಿ ಇದ್ದ ಗೊಂಬೆಯನ್ನು ಜಗಳ ಮಾಡಿ “ಈ ಗೊಂಬೆ ನನ್ನದೇ” ಎಂದು ಜಗಳದಲ್ಲಿ ಗೆದ್ದ ಗೊಂಬೆ.

ಹೀಗೆ ಹಿಂದಿನ ಕಾಲದಲ್ಲಿ ಮಕ್ಕಳಿಗೆ ಗೊಂಬೆಗಳೇ ಅವರ ಪರಿವಾರ.. ಗೊಂಬೆಗಳನ್ನು ಮುಂದೆ ಕೂರಿಸಿಕೊಂಡು,  ಕೈಯಲ್ಲಿ ಬಿದುರಿನ ಬೆತ್ತ  ಹಿಡಿದು, ಸ್ಕೂಲ್ ಟೀಚರ್ ಆಟ, ಅಪ್ಪನಂತೆ ಗದರಿಸುವುದು, ಅಮ್ಮನಂತೆ ಮುದ್ದಿಸುವುದು.. ಗೊಂಬೆಗಳ ಮುಂದೆ ತಟ್ಟೆ ಇಟ್ಟು ಮಾಡುತ್ತಿದ್ದ ಅಡುಗೆ ಮನೆಯ ಆಟ,ಗೊಂಬೆಗೆ ಮಕ್ಕಳೇ ಟೀಚರ್ ಆಗಿ ಹೇಳಿಕೊಡುವ ಹೋಂವರ್ಕ್ ಜೊತೆಗೆ ತಾವು ಬರೆದು ಮುಗಿಸುತ್ತಿದ್ದ ಸ್ಕೂಲ್ ಪಾಠಗಳು…ಹೀಗೆಲ್ಲಾ ಗೊಂಬೆಗಳ ಜೊತೆಗೆ ಮಧುರ ಬಾಂಧವ್ಯ .. ಈಗ ಸವಿ ನೆನಪುಗಳು ಮಾತ್ರ.

ಮನೆಯಲ್ಲಿ ಆಡುವ ಮಕ್ಕಳಿದ್ದಾರೆಂದರೆ ಮನೆಗೆ ಬಂದು ಹೋಗುವ ಆಪ್ತ ನೆಂಟರಿಷ್ಟರು, ಅಜ್ಜಿ ತಾತ, ಚಿಕ್ಕಪ್ಪ ಚಿಕ್ಕಮ್ಮ, ಅತ್ತೆ ಮಾವ..ಹೀಗೆ ಮಕ್ಕಳಿಗಾಗಿ ತಂದುಕೊಡುತ್ತಿದ್ದ ಚಿಕ್ಕಪುಟ್ಟ ಬಣ್ಣ ಬಣ್ಣದ ಮುದ್ದಾದ ಗೊಂಬೆಗಳು…ಆಹಾ! ಎಂತಹ ಸುಂದರ ಲೋಕವದು…

ನವರಾತ್ರಿ ದಸರಾ ಹಬ್ಬ ಬಂದಿತೆಂದರೆ ಮಕ್ಕಳೆಲ್ಲ ಸೇರಿ ಅವರವರ ಮನೆಯಲ್ಲಿ ತಾವು ಕಲೆ ಹಾಕಿದಂತಹ ಗೊಂಬೆಗಳನ್ನು, ಬಗೆ ಬಗೆಯಾಗಿ ಅಲಂಕೃತಗೊಂಡ ಪಟ್ಟದ ಗೊಂಬೆಯ ಜೊತೆಗೆ ಪಟ್ಟಕ್ಕೆ ಏರಿಸಿ ಕೂರಿಸಿ ಸಂಭ್ರಮಿಸುವುದು. ಪ್ರತಿಯೊಂದು ಮನೆಯಲ್ಲೂ ಒಂದೊಂದು ದಸರಾ ಕಥೆಯನ್ನು ಸಾರುವ ಅಲಂಕೃತವಾದ ಸಾಲು ಸಾಲು ಗೊಂಬೆಗಳು…ಇಂತಿಷ್ಟೇ ಗೊಂಬೆ ಕೂರಿಸಬೇಕೆಂಬ ನಿಯಮವಿಲ್ಲ. ಪಟ್ಟದ ಬೊಂಬೆ, ಚನ್ನಪಟ್ಟಣದ ಗೊಂಬೆ, ಆಟಿಕೆಯ ಗೊಂಬೆ, ಮರದ ಗೊಂಬೆ ಹಕ್ಕೀ ಪಕ್ಷಿಗಳು ಪ್ರಾಣಿಗಳು..ಹೀಗೆ ಹಲವಾರು ಬಗೆಯ ಬೊಂಬೆಗಳನ್ನು ಕೂರಿಸಿ ನವರಾತ್ರಿಯ 10 ದಿನವೂ ಸಂಜೆಯ ಹೊತ್ತು ಬೊಂಬೆಗಳಿಗೆ ಆರತಿ ಮಾಡಿ,  ಮಕ್ಕಳಿಗೆ ಕೊಡಲು ಮಾಡುತ್ತಿದ್ದ ಪುಟ್ಟ ಪುಟ್ಟ  ಬಾಗಿನಕ್ಕೆಂದು ಬಗೆಬಗೆಯ ತಿಂಡಿಗಳು, ಅದನ್ನು ಪಡೆಯಲೆಂದೆ ಮಕ್ಕಳು ಆಸೆಯಿಂದ ಕರೆದವರ ಮನೆಗೆ ಸಂಜೆ ಗೊಂಬೆ ಆರತಿಗೆ ಹೋಗುತ್ತಿದ್ದ ಸಂಭ್ರಮ..  ಈಗ ಎಲ್ಲವೂ ಕೆಲವರಿಗಷ್ಟೇ ಸೀಮಿತವಾಗಿ ಉಳಿದಿದೆ.

ಪ್ರತಿಯೊಂದು ಮಗುವಿನ ಕೈಗೂ ಒಂದೊಂದು ಮೊಬೈಲ್ ಬಂದು ಈ ಸಂಭ್ರಮವೆಲ್ಲ ನಶಿಸಿ ಮನೆಯಲ್ಲಿರುವ ಗೊಂಬೆಗಳು ಧೂಳು ಹಿಡಿದು ಅಳುವಂತಾಗಿದೆ.. ತಮ್ಮನ್ನು ಎತ್ತಿ ಆಡಿಸಿ ಮುದ್ದಾಡಿವ ಮಕ್ಕಳ ಕೋಮಲ ಕೈಗಳಿಲ್ಲವೆಂದು ಗೊಂಬೆಗಳು ಪರಿ ತಪ್ಪಿಸುತ್ತಿವೆ…ದೊಡ್ಡವರು ಸಹ “ಅಯ್ಯೋ ಅದೆಲ್ಲ ಜೋಡಿಸುವುದು, ತೆಗೆಯುವುದು ಕಷ್ಟದ ಕೆಲಸ, ಮಾಡಲು ಸಮಯವಿಲ್ಲ” ಎಂದು ಹೇಳಿ ಅವರ ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ.. ಇದರ ಜೊತೆಗೆ ನಮ್ಮ ನಾಡ ಹಬ್ಬ ದಸರಾದ ವೈಭವ ಎಲ್ಲೋ ಒಂದು ಕಡೆ ಆಧುನಿಕತೆಯ ಮೆರಗನ್ನು ಪಡೆದು ಬೇರೆಯದೇ ರೀತಿಯಲ್ಲಿ ಸಂಭ್ರಮಿಸುತ್ತಿರುವುದು ಗೋಚರಿಸುತ್ತಿದೆ.

ಮಕ್ಕಳ ದಸರಾ, ಯುವ ದಸರಾ ,ಮಹಿಳಾ ದಸರಾ, ರೈತರ ದಸರಾ ಹೀಗೆ ಹಲವಾರು ಹೆಸರುಗಳೊಂದಿಗೆ ಬೇರೆ ರೀತಿಯಲ್ಲಿ ಕಾಣುತ್ತಿದ್ದೇವೆ.. ಏನೇ ಆದರೂ ಇವುಗಳ ಜೊತೆಗೆ ಬಗೆ ಬಗೆಯ ಕಥೆಗಳನ್ನು ಸಾರುವ ಗೊಂಬೆಗಳು ನಮ್ಮ ಬದುಕಿನ ಅಂಗವಾಗಿ ಉಳಿಯಬೇಕೆಂಬುದೇ ದಸರಾ ಹಬ್ಬದ ವಿಶೇಷವಾಗಬೇಕು. ಗೊಂಬೆಗಳ ಜೊತೆ ಮಕ್ಕಳು ಆಟವಾಡಿಕೊಂಡು ಮಾತನಾಡುವುದು ಎಂದರೆ ತಮ್ಮ ಮನಸ್ಸಿನ ಭಾವನೆಗಳನ್ನು, ಉದ್ವೇಗವನ್ನು ಹೊರ ಹಾಕುವ ಒಂದು ಸಾಧನವಾಗಿರುತ್ತಿತ್ತು.. ತಮ್ಮದೇ ಗೊಂಬೆಗಳ ಲೋಕದಲ್ಲಿ ವಿಹರಿಸಿ ಮನಸ್ಸನ್ನು ಹಗುರಗೊಳಿಸಿಕೊಳ್ಳುವ  ಜೀವನದ ಕಲೆಯ ಭಾಗವಾಗಿರುತ್ತಿತ್ತು.. ಆದರೆ, ಈಗ ಮೊಬೈಲ್ ಹಾವಳಿಯಿಂದಾಗಿ ಪುಟ್ಟ ಪುಟ್ಟ ಮಕ್ಕಳು ಗೊಂಬೆ ಆಟವನ್ನು ಮರೆತು, ಮೊಬೈಲ್ಗೆ ದಾಸರಾಗಿ, ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯರ ಬಳಿಗೆ ಧಾವಿಸುತ್ತಿರುವುದು ಗೋಚರವಾಗಿದೆ. ಇಂದಿನ ಮಕ್ಕಳೆಲ್ಲ ಬಾಲ್ಯದಲ್ಲೇ ಹರೆಯದವರಂತಾಗುತ್ತಿರುವುದು  ಎಷ್ಟು ಸರಿ? ಯೋಚಿಸಿ ನೋಡಿ.

ಸವಿತಾ ಎಸ್ ವೆಂಕಟೇಶ್

ಸಹಪ್ರಾಧ್ಯಾಪಕರು.

 ಮೈಸೂರು.

TAGGED:Dinamana.comKannada NewsShort StorySilent Dollsಕನ್ನಡ ಸುದ್ದಿದಿನಮಾನ.ಕಾಂಮೌನವಾದ ಗೊಂಬೆಗಳುಸಣ್ಣಕಥೆ
Share This Article
Twitter Email Copy Link Print
Previous Article Vidyanagar Police Station Davanagere Davanagere | ಸುಲಿಗೆ ಪ್ರಕರಣ : ಆರೋಪಿಗಳ ಸೆರೆ
Next Article DAVANAGERE Davanagere | ಶೋಭಾಯಾತ್ರೆ : ʼಪೊಲೀಸ್ ಪಥ ಸಂಚಲನ’

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಶಿಕ್ಷಕರ ಸೇವೆ ಪಡೆಯಲು ಅರ್ಜಿ ಆಹ್ವಾನ

ದಾವಣಗೆರೆ ಜು.22  :  ಬಾಲಕರ, ಬಾಲಕಿಯರ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಪ್ರಸಕ್ತ ಸಾಲಿಗೆ ವಿಜ್ಞಾನ, ಗಣಿತ, ದೈಹಿಕ, ಯೋಗ, ಸಂಗೀತ,…

By Dinamaana Kannada News

ನೀಟ್‌ ಫಲಿತಾಂಶ : ಸೂಕ್ತ ತನಿಖೆಗೆ ಎನ್‌ಎಸ್‌ಯುಐ ಒತ್ತಾಯ

ದಾವಣಗೆರೆ :  ನೀಟ್‌ ಫಲಿತಾಂಶದಲ್ಲಿ ವೈಫಲ್ಯದಿಂದ   ವಿದ್ಯಾರ್ಥಿ‌ಗಳಿಗೆ ಅನ್ಯಾಯವಾಗಿದ್ದ ಕೂಡಲೇ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಎವಿಕೆ…

By Dinamaana Kannada News

Davanagere | ಅಂಗ ವೈಕಲ್ಯತೆ ಪಾಪವಲ್ಲ : ನ್ಯಾ. ಮಹಾವೀರ್ ಮ.ಕರೆಣ್ಣವರ

ದಾವಣಗೆರೆ (Davanagere) : ಅಂಗವೈಕಲ್ಯ ಪಾಪವಲ್ಲ,  ಬಿಕ್ಕಟ್ಟನ್ನು ಅವಕಾಶಗಳಾಗಿ ಪರಿವರ್ತಿಸುವ ಅವಕಾಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ಕಂಪ್ಯೂಟರ್ ಆಧಾರಿತ ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಪರೀಕ್ಷೆಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದಿರಿ : ರೈತರಿಗೆ ಸಚಿವರಿಂದ ಅಭಯ

By Dinamaana Kannada News
Davanagere
ತಾಜಾ ಸುದ್ದಿ

ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?