ದಾವಣಗೆರೆ (Davanagere): ನಗರದ ಶ್ರೀ ಶಿವಯೋಗಾಶ್ರಮ – ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಯವರಿಗೆ (Sri Basava Prabhu Swamiji of Viraktamatha)ಕುವೆಂಪು ವಿಶ್ವವಿದ್ಯಾನಿಲಯದಿ೦ದ ಪಿಹೆಚ್ಡಿ ಪದವಿ ಲಭಿಸಿದೆ.
ಶಿವಮೂರ್ತಿ ಮುರುಘಾ ಶರಣರು ; ಸಾಹಿತ್ಯ ಮತ್ತು ಸಂಸ್ಕೃತಿ’ ವಿಷಯ ಕುರಿತು ಡಾ. ಸಣ್ಣರಾಮ ಅವರ ಮಾರ್ಗ ದರ್ಶನದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಈ ಪದವಿ ನೀಡಲಾಗಿದೆ.
ಕುವೆಂಪು ವಿಶ್ವವಿದ್ಯಾನಿಲಯದ ಆವರಣ ದಲ್ಲಿ ನಡೆದ ಕುವೆಂಪು ವಿವಿ 34ನೇ ಘಟಿಕೋ ತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಅವರು ಶ್ರೀ ಬಸವ ಪ್ರಭು. ಸ್ವಾಮೀಜಿಯವರಿಗೆ ಪಿಹೆಚ್ಡಿ ಪದವಿ ಪ್ರದಾನ ಮಾಡಿದರು.