Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಶಿಕ್ಷಕರಿಂದ ಮಕ್ಕಳ ಮೇಲಿನ ಕಿರುಕುಳ ನಿಲ್ಲಿಸಿ : ಡಾ. ಡಿ ಫ್ರಾನ್ಸಿಸ್ ಕ್ಸೇವಿಯರ್
ಅಭಿಪ್ರಾಯ

ಶಿಕ್ಷಕರಿಂದ ಮಕ್ಕಳ ಮೇಲಿನ ಕಿರುಕುಳ ನಿಲ್ಲಿಸಿ : ಡಾ. ಡಿ ಫ್ರಾನ್ಸಿಸ್ ಕ್ಸೇವಿಯರ್

Dinamaana Kannada News
Last updated: October 21, 2025 6:11 am
Dinamaana Kannada News
Share
Davanagere
SHARE

​ಶಿಕ್ಷಣವನ್ನು ಅರಸಿ, ಪೋಷಕರು ಇಡೀ ತಮ್ಮ ಜೀವನವನ್ನೇ ತೇಯ್ದು ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಗೆ ಕಳುಹಿಸುತ್ತಾರೆ, ಆದರೆ ಇತ್ತೀಚೀನ ದಿನಗಳಲ್ಲಿ ಕೆಲವು ಶಾಲೆಗಳು ಮಕ್ಕಳ ಪಾಲಿಗೆ ನರಕ ಸದೃಶ್ಯವಾದ ತಾಣವಾಗಿ ಪರಿಣಮಿಸಿವೆ.

ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ತಂದೆ ತಾಯಿ ಹಾಗೂ ಗುರುವಿನ ಸ್ಥಾನದಲ್ಲಿ ನಿಂತು ವಿದ್ಯಾದಾನ ಮಾಡಬೇಕಾದವನು ಕ್ಷುಲ್ಲಕ ಕಾರಣಗಳಿಗಾಗಿ ವಿದ್ಯಾರ್ಥಿಗಳ ಮೇಲೆ ರಾಕ್ಷಕ ಪ್ರವೃತ್ತಿ ತೋರಿಸಿ ಎಳೆಯ ಮಕ್ಕಳ ಮೇಲೆ ದೈಹಿಕ ಮಾನಸಿಕ ಹಲ್ಲೆಯನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ.

ಇತ್ತೀಚೆಗೆ ಯಾವುದೇ ಚಾನಲ್ ಇರಲಿ ಸುದ್ದಿ ಪತ್ರಿಕೆ ಇರಲಿ ಎಲ್ಲಿ ನೋಡಿದರೂ ಶಾಲೆಗಳಲ್ಲಿ ಮಕ್ಕಳ ಮೇಲಿನ ಅಮಾನವೀಯ ರೀತಿಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸೆಗಿರುವ ಸುದ್ದಿಗಳಲೇ ಬರ ಸಿಡಿಲಿನಂತೆ ಎರಗುತ್ತಿವೆ.

ಎರಡು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಹಾಗೂ ಶಿಕ್ಷಕ ಇಬ್ಬರು ಸೇರಿಕೊಂಡು 5ನೇ ತರಗತಿ ವಿದ್ಯಾರ್ಥಿಯ ಮೇಲೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿ ಆ ಮಗುವನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಜಿರಿತ ಮಾಡಿ ಆ ಮುಗ್ದ ಮಗು ಆಸ್ಪತ್ರೆ ಸೇರಿರುವ ಸುದ್ದಿ, ಇನ್ನೊಂದು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಸಂಸ್ಕೃತ ವೇದಾಧ್ಯಯನ ಶಾಲೆಯ ಶಿಕ್ಷಕ ವಿದ್ಯಾರ್ಥಿಯನ್ನು ಕಾಲಿನಿಂದ ಚೆಂಡಿನಂತೆ ಒದ್ದು ಒದ್ದು ಥಳಿಸುತ್ತಿರುವ ಸುದ್ದಿ ಪ್ರಸಾರವಾಗಿದೆ.

ಇಂತಹ ನೂರಾರು ಸುದ್ದಿಗಳು ನಿತ್ಯವೂ ಹರಿದಾಡುತ್ತಲೇ ಇವೆ. ಶಿಕ್ಷಕರನ್ನೇ ನಂಬಿ ಶಾಲೆಗೆ ವಿದ್ಯೆ ಕಲಿಯಲು ಬರುವ ಮಕ್ಕಳನ್ನು ಕಾಪಾಡುವವರು ಯಾರು ಎನ್ನುವ ಪ್ರಶ್ನೆ ಈಗ ಯಕ್ಷ ಪ್ರಶ್ನೆಯಾಗಿದೆ. ಶಾಲೆಯೆಂದರೆ ಜ್ಞಾನದ ದೇಗುಲ. ಮಕ್ಕಳ ಪಾಲಿಗೆ ಅದು ಎರಡನೇ ಮನೆ. ಆದರೆ, ಕೆಲವು ಅಪರೂಪದ ಸಂದರ್ಭಗಳಲ್ಲಿ, ಈ ಪವಿತ್ರ ಪರಿಸರದಲ್ಲೂ ಮಕ್ಕಳ ಮೇಲೆ ದೈಹಿಕ ಅಥವಾ ಮಾನಸಿಕ ಕಿರುಕುಳದ ಘಟನೆಗಳು ವರದಿಯಾಗುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ.

​ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು. ಅವರ ಮಾರ್ಗದರ್ಶನ ಮತ್ತು ಪ್ರೀತಿಯು ಮಕ್ಕಳ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ಕೆಲವರು ಶಿಸ್ತಿನ ಹೆಸರಿನಲ್ಲಿ ಅಥವಾ ಬೇರೆ ಯಾವುದೇ ಕಾರಣಕ್ಕಾಗಿ ಮಕ್ಕಳನ್ನು ಅನಗತ್ಯವಾಗಿ ದಂಡಿಸುವುದು, ಮಾನಸಿಕವಾಗಿ ಹಿಂಸಿಸುವುದು ಅಥವಾ ಅವಮಾನಿಸುವುದು ಮಕ್ಕಳ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗಿದೆ.

​ಕಿರುಕುಳದ ಸ್ವರೂಪಗಳು : ಶಿಕ್ಷಕರಿಂದ ಮಕ್ಕಳ ಮೇಲಿನ ಕಿರುಕುಳ ಕೇವಲ ದೈಹಿಕವಾಗಿ ಹೊಡೆಯುವುದು ಅಥವಾ ದಂಡಿಸುವುದಕ್ಕೆ ಸೀಮಿತವಾಗಿಲ್ಲ. ಇದು ಬೇರೆ ಬೇರೆ ಸ್ವರೂಪಗಳಲ್ಲಿ ಕಾಣಿಸಿಕೊಳ್ಳಬಹುದು

​ಮಾನಸಿಕ ಕಿರುಕುಳ: ಸಾರ್ವಜನಿಕವಾಗಿ ನಿಂದಿಸುವುದು, ಅವಮಾನ ಮಾಡುವುದು, ಅಣಕಿಸುವುದು ಅಥವಾ ದೀರ್ಘಕಾಲದವರೆಗೆ ಭಯದ ವಾತಾವರಣವನ್ನು ಸೃಷ್ಟಿಸುವುದು.

Read also : ಈ ದೀಪಾವಳಿ ಕತ್ತಲೆಯಿಂದ ಬೆಳಕನ್ನು ತರಲಿ

​ಭಾವನಾತ್ಮಕ ಕಿರುಕುಳ: ಮಕ್ಕಳ ಸಾಧನೆಗಳನ್ನು ಕಡೆಗಣಿಸುವುದು, ಪ್ರೀತಿ ಮತ್ತು ಬೆಂಬಲವನ್ನು ನಿರಾಕರಿಸುವುದು.

​ಶೈಕ್ಷಣಿಕ ಕಿರುಕುಳ: ಹೆಚ್ಚು ಕೆಲಸ ನೀಡಿ ಒತ್ತಡ ಹೇರುವುದು ಅಥವಾ ಕಡಿಮೆ ಅಂಕಗಳಿಗಾಗಿ ಕೀಳಾಗಿ ಕಾಣುವುದು.

​ಮಕ್ಕಳ ಮೇಲೆ ಪರಿಣಾಮ : ಇಂತಹ ಕಿರುಕುಳವು ಮಕ್ಕಳ ಮನಸ್ಸಿನ ಮೇಲೆ ದೀರ್ಘಕಾಲದ ಪರಿಣಾಮ ಬೀರುತ್ತದೆ:

​ಭಯ ಮತ್ತು ಆತಂಕ: ಶಾಲೆಗೆ ಹೋಗಲು ಹೆದರಿಕೆ, ಶಿಕ್ಷಕರನ್ನು ಕಂಡರೆ ಭಯಪಡುವ ಮನಸ್ಥಿತಿ.

​ಶೈಕ್ಷಣಿಕ ಕುಸಿತ: ಒತ್ತಡದಿಂದಾಗಿ ಅಧ್ಯಯನದ ಕಡೆಗೆ ಗಮನ ಕೊಡಲು ಸಾಧ್ಯವಾಗದೆ ಪ್ರದರ್ಶನ ಕುಂಠಿತವಾಗುವುದು.

​ಮಾನಸಿಕ ಆರೋಗ್ಯ ಸಮಸ್ಯೆಗಳು: ಆತ್ಮವಿಶ್ವಾಸ ಕಳೆದುಕೊಳ್ಳುವುದು, ಖಿನ್ನತೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುವುದು.

​ಸಮಾಜದಿಂದ ದೂರವಾಗುವುದು:  ಇತರ ಮಕ್ಕಳೊಂದಿಗೆ ಬೆರೆಯಲು ಹಿಂಜರಿಯುವುದು ಮತ್ತು ಒಂಟಿತನವನ್ನು ಅನುಭವಿಸುವುದು.

​ತಕ್ಷಣದ ಅಗತ್ಯ ಕ್ರಮಗಳು : ​ಈ ಸಮಸ್ಯೆಯನ್ನು ನಿವಾರಿಸಲು ಎಲ್ಲರೂ ಕೈಜೋಡಿಸಬೇಕು. ಶಿಕ್ಷಕರ ತರಬೇತಿ: ಶಿಕ್ಷಕರಿಗೆ ಸಕಾರಾತ್ಮಕ ಶಿಸ್ತು (Positive Discipline) ಮತ್ತು ಮಕ್ಕಳೊಂದಿಗೆ ವ್ಯವಹರಿಸುವ ಕುರಿತು ಸೂಕ್ತವಾದ ಮತ್ತು ನಿಯಮಿತವಾದ ತರಬೇತಿ ನೀಡಬೇಕು. ಕೋಪವನ್ನು ನಿರ್ವಹಿಸುವ ಕೌಶಲ್ಯಗಳನ್ನು ಕಲಿಸಬೇಕು.

​ಪೋಷಕರ ಪಾತ್ರ: ಪೋಷಕರು ತಮ್ಮ ಮಕ್ಕಳಲ್ಲಿ ಶಾಲೆ ಅಥವಾ ಶಿಕ್ಷಕರ ಕುರಿತು ಯಾವುದೇ ಭಯವಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಸಮಸ್ಯೆ ಇದ್ದರೆ ತಕ್ಷಣ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತರಬೇಕು.

​ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿ: ಕಿರುಕುಳ ನಿಲ್ಲಿಸಲು ಶಾಲೆಯು ಕಟ್ಟುನಿಟ್ಟಾದ ನೀತಿಗಳನ್ನು ಜಾರಿಗೆ ತರಬೇಕು. ಮಕ್ಕಳ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಕಿರುಕುಳ ನೀಡುವ ಶಿಕ್ಷಕರನ್ನು ಸಮರ್ಥಿಸಬಾರದು.

​ಕಾನೂನು ಕ್ರಮ : ಮಕ್ಕಳ ಮೇಲೆ ಕಿರುಕುಳ ನೀಡುವವರ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಸರ್ಕಾರ, ಶಿಕ್ಷಣ ಇಲಾಖೆ, ಮಕ್ಕಳ ರಕ್ಷಣಾ ಆಯೋಗ ಮುಂತಾದವರು ತಕ್ಷಣ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

​ಒಟ್ಟಾರೆಯಾಗಿ ಹೇಳುವುದಾದರೆ, ಶಾಲೆಗಳು ಪ್ರೀತಿ, ಭದ್ರತೆ ಮತ್ತು ಪ್ರೋತ್ಸಾಹದ ಕೇಂದ್ರಗಳಾಗಿರಬೇಕು. ಶಿಕ್ಷಕರು ಮಾರ್ಗದರ್ಶಕರಾಗಿ, ಸ್ನೇಹಿತರಾಗಿ ಮತ್ತು ತತ್ವಜ್ಞಾನಿಗಳಾಗಿ ಮಕ್ಕಳೊಂದಿಗೆ ನಡೆದುಕೊಳ್ಳಬೇಕು. ನಮ್ಮ ಮಕ್ಕಳು ಭಯಮುಕ್ತ ವಾತಾವರಣದಲ್ಲಿ ಬೆಳೆಯಲು ಅವಕಾಶ ನೀಡೋಣ.

​ಪ್ರತಿ ಮಗುವು ಗೌರವ ಮತ್ತು ಪ್ರೀತಿಯಿಂದ ಕಲಿಯಲು ಅರ್ಹವಾಗಿದೆ. ಕಿರುಕುಳ ಮುಕ್ತ ಶಾಲೆಯೇ ನಮ್ಮ ಗುರಿ

ಲೇಖಕರು : ಡಾ. ಡಿ ಫ್ರಾನ್ಸಿಸ್ ಕ್ಸೇವಿಯರ್
ಲೇಖಕರು ಹಾಗೂ ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು
ದಾವಣಗೆರೆ ಜಿಲ್ಲೆ
9731395908

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬಿದ್ದಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ
Next Article Waqf davanagere ದಾವಣಗೆರೆ|ಅ.23 ರಂದು ಮುತವಲ್ಲಿಗಳಿಗೆ ಜಿಲ್ಲಾ ವಕ್ಪ್‌ ಇಲಾಖೆಯಿಂದ ಕಾರ್ಯಾಗಾರ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಕ್ಯಾನ್ಸರ್ ರೋಗಿಗಳ ಪಾಲಿನ ಭರವಸೆಯ ಆಶಾಕಿರಣ ಡಾ.ಸುರೇಶ್ ರಾವ್ ಕನಸಿನ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್‌ ನ ಉಗಮ

ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ತೀರ್ಥಹಳ್ಳಿಯ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ನ ಕಿರು…

By Dinamaana Kannada News

Channagiri | ಅಪಘಾತ : ಓರ್ವ ಸಾವು,  8 ಜನರಿಗೆ ಗಂಭೀರ ಗಾಯ

ಚನ್ನಗಿರಿ (Channagiri) :  ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್ ಸಾವರರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು,…

By Dinamaana Kannada News

Davanagere | ಯಶಸ್ಸು ನಿಮ್ಮದಾಗಲು ಗುರಿ ಇಟ್ಟುಕೊಳ್ಳಿ : ಪ್ರೊ.ಆರ್.ಶಶಿಧರ್

ದಾವಣಗೆರೆ (Davanagere): ಆಧುನಿಕ ಶಿಕ್ಷಣ ಪದ್ಧತಿಯು ಇಂದು ಅನೇಕ ಜ್ಞಾನ ಶಿಸ್ತುಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಟ್ಟಿದೆ. ಆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?