ದಾವಣಗೆರೆ Davanagere : ಹಿಮೋಫೀಲಿಯಾ (Hemophilia) ವಿರಳ ರಕ್ತಸ್ರಾವ ರೋಗವಾಗಿದ್ದು, ಅತ್ಯಂತ ದುಬಾರಿ ವೆಚ್ಚದ ಕಾಯಿಲೆಯಾಗಿದೆ ಎಂದು ಪೂರ್ವ ವಲಯ ಐ.ಜಿ.ಪಿ ಡಾ. ರವಿಕಾಂತೇಗೌಡ ಹೇಳಿದರು.
ಇಲ್ಲಿನ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಆವರಣದಲ್ಲಿ ಹಿಮೋಫಿಲೀಯಾ ಹಾಗೂ ಥಲಸ್ಸೇಮಿಯಾ ದಿನಾಚರಣೆ ಕಾರ್ಯಕ್ರಮ ಹಾಗೂ ಎಮ್.ಸಿ.ಸಿ “ಬಿ” ಬ್ಲಾಕ್ನ ಐ.ಎಮ್.ಎ ಹಾಲ್ನಲ್ಲಿ ಹಿಮೋಫೀಲಿಯಾ ರೋಗದ ಬಗ್ಗೆ ವೈದ್ಯರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮುಂದಿನ ದಿನದಲ್ಲಿ ಜೀನ್ ಥೆರಪಿ ಚಿಕಿತ್ಸೆ ನಮ್ಮ ಭಾರತ ದೇಶದಲ್ಲೂ ಬರಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದ ಅವರು, ಹಿಮೋಫೀಲಿಯಾ ಕ್ಷೇತ್ರದಲ್ಲಿ ಡಾ. ಸುರೇಶ್ ಹನಗವಾಡಿರವರು ಚೈತನ್ಯ ಕಳೆದುಕೊಂಡವರಿಗೆ ಚೈತನ್ಯ ತುಂಬುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ವಿಕಲಚೇತನರ ಮುಖ್ಯ ಆಯುಕ್ತ ಎಸ್. ಗೋವಿಂದರಾಜ್ ಅವರು ಬಲೂನು ಹಾರಿ ಬಿಡುವುದರ ಮೂಲಕ ಹಿಮೋಫಿಲೀಯಾ ಹಾಗೂ ಥಲಸ್ಸೇಮಿಯಾ ಬಾದಿತರ ನೋವು ಶಮನವಾಗಲಿ. ಆಕಾಶದೆತ್ತರಕ್ಕೆ ನಮ್ಮ ಗುರಿ ಇರಲಿ ಎಂದು ಹೇಳಿದರು.
ನಂತರ ಸಂಸ್ಥೆಯ ಸಭಾಂಗಣದಲ್ಲಿ ಎನ್.ಜಿ.ಓ ಗಳೊಂದಿಗೆ ಸಂವಹನ ನಡೆಸಿ ವಿಕಲಚೇತನರ ಕುಂದು ಕೊರತೆ ಮತ್ತು ಹಕ್ಕುಗಳ ಬಗ್ಗೆ ವಿಸ್ತ್ರುತವಾಗಿ ಚರ್ಚಿಸಿದರು.
ಡಾ. ಶಾಂತಭಟ್ ಅವರು, ಮಹಿಳೆಯರು ಮತ್ತು ಅನುವಂಶಿಕ ಖಾಯಿಲೆ ಬಗ್ಗೆ ಮಾಹಿತಿ ನೀಡಿದರು.
ವಿಕಲಚೇತನರ ಹಕ್ಕುಗಳು, ಕಾನೂನು ಬಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವಿರ್ ಕರೆಣ್ಣವರ್ ಮಾತನಾಡಿ, ಸಮಾಜದಲ್ಲಿ ದುರ್ಭಲರಿಗೆ, ಅಶಕ್ತರಿಗೆ ನ್ಯಾಯ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕೆಂದು ತಿಳಿಸಿದರು.
Read also : Chitradurga | ಗರಗ ಗ್ರಾಮದ ತಿಪ್ಪೇಶ್ ಕಾಣೆ
ಹಿಮೋಫಿಲೀಯಾ ರೋಗದ ಚಿಕಿತ್ಸೆ, ರೋಗ ಪತ್ತೆ ಹಚ್ಚುವಿಕೆ, ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ಡಾ. ಸುರೇಶ್ ಹನಗವಾಡಿ ಅವರು ಉಪನ್ಯಾಸ ನೀಡಿ, ಹಿಮೋಫಿಲೀಯಾ ರೋಗ ಗುಣಲಕ್ಷಣಗಳು ವೈದ್ಯರ ಗಮನಕ್ಕೆ ಬಂದ ಕೂಡಲೆ ಕರ್ನಾಟಕ ಹಿಮೋಫಿಲೀಯಾ ಸೋಸೈಟಿಯನ್ನು ಸಂಪರ್ಕಿಸಲು ತಿಳಿಸಿದರು.
ಸಂಯೋಜಿತ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಮೀನಾಕ್ಷಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ, ಜಿಲ್ಲಾ ಸರ್ವೆಲಿಯನ್ಸ್ ಅಧಿಕಾರಿ ಡಾ.ಜಿ.ಡಿ. ರಾಘವನ್, ಡಾ.ಪಿ.ಡಿ. ಮುರುಳೀಧರ, ಅಶ್ವತಮ್ಮ ಸಿ., ಡಾ. ಕೆ.ಕೆ. ಪ್ರಕಾಶ್, ಡಾ. ಮೀರಾ ಹನಗವಾಡಿ, ವೈದ್ಯಾಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಆಯೋಜಕತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಾವಣಗೆರೆ ರಾಜ್ಯ ರಕ್ತ ಕೋಶ – ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.