Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Hemophilia | ಜೀನ್ ಥೆರಪಿ ಚಿಕಿತ್ಸೆ ನಮ್ಮ ದೇಶದಲ್ಲೂ ಬರಬಹುದು : ಐ.ಜಿ.ಪಿ ಡಾ. ರವಿಕಾಂತೇಗೌಡ
ತಾಜಾ ಸುದ್ದಿ

Hemophilia | ಜೀನ್ ಥೆರಪಿ ಚಿಕಿತ್ಸೆ ನಮ್ಮ ದೇಶದಲ್ಲೂ ಬರಬಹುದು : ಐ.ಜಿ.ಪಿ ಡಾ. ರವಿಕಾಂತೇಗೌಡ

Dinamaana Kannada News
Last updated: May 10, 2025 12:01 pm
Dinamaana Kannada News
Share
Thalassemia Day celebration program
Thalassemia Day celebration program
SHARE

ದಾವಣಗೆರೆ Davanagere : ಹಿಮೋಫೀಲಿಯಾ (Hemophilia) ವಿರಳ ರಕ್ತಸ್ರಾವ ರೋಗವಾಗಿದ್ದು, ಅತ್ಯಂತ ದುಬಾರಿ ವೆಚ್ಚದ ಕಾಯಿಲೆಯಾಗಿದೆ ಎಂದು ಪೂರ್ವ ವಲಯ ಐ.ಜಿ.ಪಿ ಡಾ. ರವಿಕಾಂತೇಗೌಡ ಹೇಳಿದರು.

ಇಲ್ಲಿನ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಆವರಣದಲ್ಲಿ  ಹಿಮೋಫಿಲೀಯಾ ಹಾಗೂ ಥಲಸ್ಸೇಮಿಯಾ ದಿನಾಚರಣೆ ಕಾರ್ಯಕ್ರಮ ಹಾಗೂ ಎಮ್.ಸಿ.ಸಿ “ಬಿ” ಬ್ಲಾಕ್‍ನ ಐ.ಎಮ್.ಎ ಹಾಲ್‍ನಲ್ಲಿ ಹಿಮೋಫೀಲಿಯಾ ರೋಗದ ಬಗ್ಗೆ ವೈದ್ಯರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮುಂದಿನ ದಿನದಲ್ಲಿ ಜೀನ್ ಥೆರಪಿ ಚಿಕಿತ್ಸೆ ನಮ್ಮ ಭಾರತ ದೇಶದಲ್ಲೂ ಬರಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದ ಅವರು, ಹಿಮೋಫೀಲಿಯಾ ಕ್ಷೇತ್ರದಲ್ಲಿ ಡಾ. ಸುರೇಶ್ ಹನಗವಾಡಿರವರು ಚೈತನ್ಯ ಕಳೆದುಕೊಂಡವರಿಗೆ ಚೈತನ್ಯ ತುಂಬುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ವಿಕಲಚೇತನರ ಮುಖ್ಯ ಆಯುಕ್ತ ಎಸ್. ಗೋವಿಂದರಾಜ್ ಅವರು ಬಲೂನು ಹಾರಿ ಬಿಡುವುದರ ಮೂಲಕ ಹಿಮೋಫಿಲೀಯಾ ಹಾಗೂ ಥಲಸ್ಸೇಮಿಯಾ ಬಾದಿತರ ನೋವು ಶಮನವಾಗಲಿ. ಆಕಾಶದೆತ್ತರಕ್ಕೆ ನಮ್ಮ ಗುರಿ ಇರಲಿ ಎಂದು ಹೇಳಿದರು.

ನಂತರ ಸಂಸ್ಥೆಯ ಸಭಾಂಗಣದಲ್ಲಿ ಎನ್.ಜಿ.ಓ ಗಳೊಂದಿಗೆ ಸಂವಹನ ನಡೆಸಿ ವಿಕಲಚೇತನರ ಕುಂದು ಕೊರತೆ ಮತ್ತು ಹಕ್ಕುಗಳ ಬಗ್ಗೆ ವಿಸ್ತ್ರುತವಾಗಿ ಚರ್ಚಿಸಿದರು.

ಡಾ. ಶಾಂತಭಟ್ ಅವರು, ಮಹಿಳೆಯರು ಮತ್ತು ಅನುವಂಶಿಕ ಖಾಯಿಲೆ ಬಗ್ಗೆ ಮಾಹಿತಿ ನೀಡಿದರು.

ವಿಕಲಚೇತನರ ಹಕ್ಕುಗಳು, ಕಾನೂನು ಬಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವಿರ್ ಕರೆಣ್ಣವರ್ ಮಾತನಾಡಿ, ಸಮಾಜದಲ್ಲಿ ದುರ್ಭಲರಿಗೆ, ಅಶಕ್ತರಿಗೆ ನ್ಯಾಯ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕೆಂದು ತಿಳಿಸಿದರು.

Read also : Chitradurga | ಗರಗ ಗ್ರಾಮದ ತಿಪ್ಪೇಶ್ ಕಾಣೆ

ಹಿಮೋಫಿಲೀಯಾ ರೋಗದ ಚಿಕಿತ್ಸೆ, ರೋಗ ಪತ್ತೆ ಹಚ್ಚುವಿಕೆ, ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ಡಾ. ಸುರೇಶ್ ಹನಗವಾಡಿ ಅವರು ಉಪನ್ಯಾಸ ನೀಡಿ, ಹಿಮೋಫಿಲೀಯಾ ರೋಗ ಗುಣಲಕ್ಷಣಗಳು ವೈದ್ಯರ ಗಮನಕ್ಕೆ ಬಂದ ಕೂಡಲೆ ಕರ್ನಾಟಕ ಹಿಮೋಫಿಲೀಯಾ ಸೋಸೈಟಿಯನ್ನು ಸಂಪರ್ಕಿಸಲು ತಿಳಿಸಿದರು.

ಸಂಯೋಜಿತ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಮೀನಾಕ್ಷಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ, ಜಿಲ್ಲಾ ಸರ್ವೆಲಿಯನ್ಸ್ ಅಧಿಕಾರಿ ಡಾ.ಜಿ.ಡಿ. ರಾಘವನ್, ಡಾ.ಪಿ.ಡಿ. ಮುರುಳೀಧರ, ಅಶ್ವತಮ್ಮ ಸಿ., ಡಾ. ಕೆ.ಕೆ. ಪ್ರಕಾಶ್, ಡಾ. ಮೀರಾ ಹನಗವಾಡಿ, ವೈದ್ಯಾಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಆಯೋಜಕತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಾವಣಗೆರೆ ರಾಜ್ಯ ರಕ್ತ ಕೋಶ – ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

TAGGED:HemophiliaThalassemiaಥಲಸ್ಸೇಮಿಯಾಹಿಮೋಫೀಲಿಯಾ
Share This Article
Twitter Email Copy Link Print
Previous Article Chitradurga Chitradurga | ಗರಗ ಗ್ರಾಮದ ತಿಪ್ಪೇಶ್ ಕಾಣೆ
Next Article Davanagere ದೇಶದ ಒಳತಿಗೆ ಎಲ್ಲರೂ ಒಗ್ಗಟಾಗಿ ಸೈನಿಕರಿಗೆ ಶಕ್ತಿ ತುಂಬಿ : ಶಾಸಕ ಕೆ.ಎಸ್.ಬಸವಂತಪ್ಪ ಕರೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davangere Crime News : ಟಿಪ್ಪ‌ರ್ ಲಾರಿ (Tipper lorry) ಪಲ್ಟಿ : ಚಾಲಕ ಸಾವು

ದಾವಣಗೆರೆ (Davangere) :  ತಾಲ್ಲೂಕಿನ ಆವರಗೊಳ್ಳ ಗ್ರಾಮದಲ್ಲಿ  ಟಿಪ್ಪ‌ರ್ ಲಾರಿ ಪಲ್ಟಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿದೆ. ಗದಗ…

By Dinamaana Kannada News

ಸೊಂಡೂರಿನ ಕಗ್ಗತ್ತಲೆಯ ಕಥನಗಳು-21  ಹರಿಶಂಕರ !

ಹರಿಶಂಕರ  ಸೊಂಡೂರಿನ ಪ್ರಮುಖ ತೀರ್ಥ ತೊರೆ ಸೊಂಡೂರಿನ ಪರಿಸರ ಬಹು ಸೂಕ್ಷ್ಮವಾಗಿದೆ.ಇಂತಹ ವಲಯದ ಸುತ್ತಲಿನ ಎರಡು ಕಿಲೋಮೀಟರಿನಷ್ಟು ದೂರದವರೆಗಾದರೂ ಗಣಿಗಾರಿಕೆ…

By Dinamaana Kannada News

Davanagere news | ಹಮಾಲಿ ಕಾರ್ಮಿಕರಿಗೆ ಕೆಲಸ ಕೊಡಲು ಆಗ್ರಹಿಸಿ ಧರಣಿ

ಹರಿಹರ (Davanagere) : ಸ್ಥಳೀಯ ಹಮಾಲಿ ಕಾರ್ಮಿಕರಿಗೆ ಕೆಲಸ ಕೊಡಲು ಆಗ್ರಹಿಸಿ ಹರಿಹರದ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ…

By Dinamaana Kannada News

You Might Also Like

DHO DAVANAGERE
ತಾಜಾ ಸುದ್ದಿ

ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ : ಆಕ್ಷೇಪಣೆಗೆ ಆಹ್ವಾನ

By Dinamaana Kannada News
Deadline extended
ತಾಜಾ ಸುದ್ದಿ

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆ :ಅವಧಿ ವಿಸ್ತರಣೆ

By Dinamaana Kannada News
Davanagere
ತಾಜಾ ಸುದ್ದಿ

ಪರಮಾಣು ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?