ದಾವಣಗೆರೆ (Davanagere): ಭಾರತದ ಯೋಧರು ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರುತಿಸಿ ದಾಳಿ ನಡೆಸುವ ಮೂಲಕ ಪಹಲ್ಗಾಮ್ನಲ್ಲಿ ಘಟನೆಗೆ ತಕ್ಕ ಉತ್ತರ ನೀಡಿದೆ. ನಮ್ಮ ಸೈನಿಕರ ಶೌರ್ಯ ನಮಗೆ ಹೆಮ್ಮೆಯಾಗಿದೆ. ಉಗ್ರರ ಮತ್ತೊಮ್ಮೆ ಭಾರತದತ್ತ ಕಣ್ಣಿತ್ತೆ ನೋಡದಂತೆ ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಎಂ.ಕೆ. ಲಿಯಾಖತ್ ಆಲಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಗೆÀ 26 ಮಂದಿ ಕುಟುಂಬಗಳು ನೊಂದಿದ್ದವು. ಭಾರತ ಸರಕಾರ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಉಗ್ರರ ಮೇಲೆ ದಾಳಿ ಮಾಡುವ ಮೂಲಕ ತಕ್ಕ ಶಾಸ್ತಿ ಮಾಡಿದೆ. ಉಗ್ರರ ಕೃತ್ಯಕ್ಕೆ ಬಲಿಯಾದ, ಸಂಬಂಧಿಕರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಯಾವುದೇ ಕಾರಣಕ್ಕೂ ಭಯೋತ್ಪಾದನೆಗೆ ಅವಕಾಶ ನೀಡಬಾರದು. ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡಲು ಕೇಂದ್ರ ಸರಕಾರದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಅವರು ಸೇನೆಯ ಶೌರ್ಯವನ್ನು ಶ್ಲಾಘಿಸಿದ್ದಾರೆ. ಉಗ್ರಗಾಮಿಗಳ ನಾಶಕ್ಕೆ ಕೇಂದ್ರ ಸರಕಾರದ ಜೊತೆ ನಾವಿದ್ದೇವೆ. ಭಯೋತ್ಪಾದನೆ ಜಗತ್ತಿಗೆ ಮಾರಕವಾಗಿದೆ. ಸಂಪೂರ್ಣ ನಿರ್ಮೂಲನೆಗೆ ಕೇಂದ್ರ ಸರ್ಕಾರ ವಿರೋಧ ಪಕ್ಷವಿದೆ. ಸೇನೆ ತೆಗೆದುಕೊಳ್ಳುವ ಕ್ರಮಗಳಿಗೆ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದ್ದಾರೆ. ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಶೌರ್ಯ ಖುಷಿಯ ವಿಚಾರ. ಭಾರತದ ಜೊತೆ ಕಿಡಿಗೇಡಿತನ ಮಾಡುವ ಬೇರೆ ದೇಶಗಳಿಗೂ ಇದು ಸಂದೇಶ ನೀಡಿದಂತಾಗಿದೆ ಎಂದು ಹೇಳಿದ್ದಾರೆ.
Read also : Davanagere | ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಭಯೋತ್ಪಾದಕರು ಸಂಪೂರ್ಣ ನಾಶ ಮಾಡಬೇಕಿದೆ. ಉಗ್ರರ ನಾಶಕ್ಕೆ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.