ದಾವಣಗೆರೆ (Lokayukta): ನಿವೇಶನದ ಹಕ್ಕುಪತ್ರ ಕೊಡಲು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮ ಪಂಚಾಯಿತಿ ಹಂಗಾಮಿ ಬಿಲ್ ಕಲೆಕ್ಟರ್ ಲೋಕೇಶ್ ಹಾಗೂ ನೀರುಗಂಟಿ ಶೇಖರಪ್ಪ ಲೋಕಾಯುಕ್ತ (Lokayukta)ಬಲೆಗೆ ಬಿದಿದ್ದಾರೆ.
ಗ್ರಾಮದ ಲಕ್ಷ್ಮೀ ದೇವಿ ಎಂಬುವರಿಗೆ ಇಂದಿರಾ ಗ್ರಾಮೀಣ ವಸತಿ ಯೋಜನೆಯಡಿ 2016ರಲ್ಲಿ ನಿವೇಶನ ಮಂಜೂರಾಗಿದೆ. ಈ ನಿವೇಶನದ ಹಕ್ಕುಪತ್ರ ಕೊಡಲು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಲಂಚದ ಹಣವನ್ನು ಕೊಡಲು ಇಷ್ಟ ಇಲ್ಲದೆ ದಾವಣಗೆರೆ ಲೋಕಾಯುಕ್ತ ಕಚೇರಿಗೆ ಲಕ್ಷ್ಮೀ ದೇವಿ ಎಂಬುವರು ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರ ಸಲಹೆಯಂತೆ ಲಕ್ಷ್ಮೀ ದೇವಿ ಹಂಗಾಮಿ ಬಿಲ್ ಕಲೆಕ್ಟರ್ ಲೋಕೇಶ್ ಮತ್ತು ನೀರುಗಂಟಿ ಶೇಖರಪ್ಪ ಅವರಿಗೆ ಲಂಚದ ಹಣ 5 ಸಾವಿರ ರೂ. ಕೊಡುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Read also : Davanagere | ಜೂ.20ರಂದು ಅರಿವೇ ಅಂಬೇಡ್ಕರ್ ಸಂವಾದ
ಲೋಕಾಯುಕ್ತ ಅಧೀಕ್ಷಕ ಎಂ.ಎಸ್.ಕೌಲಾಪೊರೆ ಮತ್ತು ಉಪಾಧೀಕ್ಷಕಿ ಕಲಾವತಿ, ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು, ಸರಳ ಅವರೊಂದಿಗೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.