ದಾವಣಗೆರೆ (Davanagere): ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಅವರು ದಾವಣಗೆರೆ ಹಳೇಯ ಭಾಗದಲ್ಲಿ ಸಂಚಾರ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.
(Old City) ನಗರದಲ್ಲಿ ಸಂಚರಿಸಿ ಪಾರ್ಕಿಂಗ್, ಒನ್ ವ್ಹೇ, ಫುಟ್ ಪಾತ್ ನಿರ್ವಹಣೆ, ಸಂಚಾರ ಫಲಕಗಳ ಬಗ್ಗೆ ಪರಿಶೀಲಿಸಿದರು.
ಪ್ರಮುಖ ರಸ್ತೆಗಳಾದ ಮಂಡಿಪೇಟೆ ರಸ್ತೆ, ಬಿನ್ನಿ ಕಂಪನಿ ರಸ್ತೆಗಳಲ್ಲಿ ಅಂಗಡಿ ಮಾಲೀಕರು ಪಾದಚಾರಿ ಮಾರ್ಗವನ್ನು ಅಕ್ರಮಿಸಿಕೊಂಡಿರುವ ಬಗ್ಗೆ ಕೆಲವು ಮಾಲೀಕರಿಗೆ ನೋಟೀಸ್ ನೀಡುವುದರ ಜೊತೆಗೆ ದಂಡವನ್ನು ವಿಧಿಸಲಾಯಿತು.
ಇನ್ನೂ ನಗರದ ಯಾವುದೇ ರಸ್ತೆಯಲ್ಲಿ ಈ ರೀತಿ ಪಾದಾಚಾರಿ ಮಾರ್ಗವನ್ನು ದುರ್ಬಳಕೆ ಮಾಡಿಕೊಂಡವರ ಮೇಲೆ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಅದೇ ರೀತಿ ವಾಹನ ಗಳ ನಿಲುಗಡೆ ಸರಿಯಾಗಿ ಮಾಡದ ವಾಹನ ಚಾಲಕರ ಮೇಲೆ ಐಎಂವಿ ಪ್ರಕರಣಗಳನ್ನು ದಾಖಲು ಮಾಡಲು ಸೂಚಿಸಿದರು.
ಸ್ಥಳೀಯ ಅಂಗಡಿ ಮಾಲೀಕರ ಸಲಹೆಗಳನ್ನು ಹಾಗೂ ಮೌಖಿಕ ಮನವಿಯನ್ನು ಪಡೆದು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕ್ರಮಗಳನ್ನು ಕೈಗೊಳ್ಳಲು ಹಾಗೂ ನಗರದಲ್ಲಿಸಂಚಾರ ಸುಧಾರಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳು ಸೂಕ್ತ ಸೂಚನೆಗಳನ್ನು ನೀಡಿದರು.
ಸಂಚಾರ ಪೊಲೀಸ್ ಅಧಿಕಾರಿಗಳಾದ ಮಂಜಪ್ಪ, ಜಯಶೀಲ ರವರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Read also : Davanagere | ಹ್ಯೂಮನ್ ಮೆಟ್ಪಾ ನ್ಯೂಮೋ ವೈರಸ್ : ಸಾರ್ವಜನಿಕರಿಗೆ ಆಂತಕ ಬೇಡ