ದಾವಣಗೆರೆ (Davanagere): ವೃದ್ದೆಯ ಮಾಂಗಲ್ಯ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಕ್ಕನೂರು ಗ್ರಾಮದ ವಿರೇಶಚಾರಿ, (38) ಬಂಧಿತ ಆರೋಪಿ.
ಜನವರಿ 26 ರಂದು ಬೆಳಗಿನಜಾವ 05-45 ಗಂಟೆ ಸಮಯದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕನೂರು ಗ್ರಾಮದ ಮಲ್ಲಮ್ಮ ಗಂಡ
ವೆಂಕಟನಗೌಡ ಕೊರಳಲ್ಲಿದ್ದ 37 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ಮಲೆಬೆನ್ನೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಎಸ್ಪಿ ಉಮಾ ಪ್ರಶಾಂತ, ಎಎಸ್ಪಿಗಳಾದ ವಿಜಯಕುಮಾರ್ ಎಂ ಸಂತೋಷ, ಜಿ. ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ಮಲೇಬೆನ್ನೂರು ರವರ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡ ರಚಿಸಲಾಗಿತ್ತು.
ಫೆ. 16 ರಂದು ಆರೋಪಿ ಬಂಧಿಸಿ ಒಟ್ಟು 37 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ, ಅಂದಾಜು ಬೆಲೆ 2,00,000/- ರೂ ಬೆಲೆ ಬಾಳುವ ಮಾಂಗಲ್ಯ ಸರವÀನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸಿಬ್ಬಂದಿಗಳಿಗೆ ಎಸ್ಪಿ ಉಮಾಪ್ರಶಾಂತ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸಾರ್ವಜನಿಕರ ಗಮನಕ್ಕೆ
ಮಹಿಳೆಯರು, ಯುವತಿಯರು ಮನೆಯಿಂದ ಹೊರಗಡೆ ಸುತ್ತಾಡುವಾಗ ಸರಗಳ್ಳರ ಬಗ್ಗೆ ಎಚ್ಚರ ವಹಿಸಬೇಕು, ಅಪರಚಿತ ವ್ಯಕ್ತಿಗಳು ಅಡ್ರೆಸ್ ಕೇಳುವ / ಇತರೆ ಯಾವುದೇ ವಿಚಾರವನ್ನು ಇಟ್ಟುಕೊಂಡು ನಿಮ್ಮ ಬಳಿ ಮಾತನಾಡುವಾಗ ಅವರಿಂದ ಅಂತರ ಕಾಯ್ದುಕೊಳ್ಳಬೇಕು. ಒಂಟಿಯಾಗಿ ಓಡಾಡುವಾಗ ಆಭರಣಗಳ ಬಗ್ಗೆ ಹಾಗೂ ಅಪರಚಿತ ವ್ಯಕ್ತಿಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ವಾಯು ವಿಹಾರಕ್ಕೆ ಒಡಾಡುವಾಗ ಒಬ್ಬೋಬ್ಬರೆ ಇರಬಾರದು ಹಾಗೂ ಆಭರಣಗಳನ್ನು ಹೆಚ್ಚಾಗಿ ಧರಿಸದೇ ಇರುವುದು ಒಳಿತು. ಸರಗಳ್ಳತನವಾದರೆ/ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದ ಕೂಡಲೇ 112 ಕ್ಕೆ ಕರೆ ಮಾಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.Read also : ಸೂರ್ಯನಿಂದಲೇ ಆಮ್ಲಜನಕ ಉತ್ಪತ್ತಿ : ವೆ|| ಪಂ|| ಗೋಪಾಲಾಚಾರ್ ಮಣ್ಣೂರ್