Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಆಧ್ಯಾತ್ಮಿಕ ಚಿಂತನೆ ಇಲ್ಲದಿದ್ದರೆ ಸ್ವಂತ ಮನೆಯಲ್ಲೇ ಪರಕೀಯತೆ ಕಾಡುತ್ತದೆ : ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
ತಾಜಾ ಸುದ್ದಿ

ಆಧ್ಯಾತ್ಮಿಕ ಚಿಂತನೆ ಇಲ್ಲದಿದ್ದರೆ ಸ್ವಂತ ಮನೆಯಲ್ಲೇ ಪರಕೀಯತೆ ಕಾಡುತ್ತದೆ : ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

Dinamaana Kannada News
Last updated: July 13, 2025 4:34 pm
Dinamaana Kannada News
Share
Sri Sachidananda Saraswati Swamiji
SHARE
ದಾವಣಗೆರೆ :  ಮನೆ ಮತ್ತು ಮನಗಳಲ್ಲಿ ಅಧ್ಯಾತ್ಮಿಕ ಭಾವನೆ ಇದ್ದಾಗ ಮಾತ್ರ ನೆಮ್ಮದಿ ಸಾಧ್ಯ. ಇಲ್ಲವಾದರೆ, ಅಪಾರ ಪರಿಶ್ರಮದಿಂದ ನಿರ್ಮಿಸಿದ ಸ್ವಂತ ಮನೆಯಲ್ಲೇ ಪರಕೀಯತೆಯ ಭಾವನೆ ಬರುತ್ತದೆ ಎಂದು ಶ್ರೀ ವಾಸವಿ ಪೀಠದ ಜಗದ್ಗುರು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಶ್ರೀ ವಾಸವಿ ಪ್ರಸಾದಾಲಯದ ಭೂಮಿಪೂಜೆ ನೆರವೇರಿಸಿ ಸ್ವಾಮೀಜಿಯವರು ಮಾತನಾಡಿದರು.
ಎಷ್ಟೋ ಜನರು ಅಪಾರ ಪರಿಶ್ರಮದಿಂದ ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ, ಆ ಮನೆಯಲ್ಲೇ ನೆಮ್ಮದಿ ಇರುವುದಿಲ್ಲ. ನೆಮ್ಮದಿಯನ್ನು ಮನೆಯಿಂದ ಹೊರಗೆ ಹುಡುಕುವ ಪ್ರಯತ್ನ ನಡೆಸುತ್ತಾರೆ ಎಂದು ಶ್ರೀಗಳು ವಿಷಾದಿಸಿದರು.
ಅಧ್ಯಾತ್ಮಿಕ ಗುಣಗಳನ್ನು ಬೆಳೆಸಿಕೊಳ್ಳದೆ ಇರುವುದೇ ಈ ರೀತಿಯ ಅಶಾಂತಿಗೆ ಕಾರಣಾಗುತ್ತದೆ. ಅಧ್ಯಾತ್ಮಿಕ ಗುಣವಿಲ್ಲದಿದ್ದರೆ ಅಪಾರ ಆಸ್ತಿ ಗಳಿಸಿದರೂ ನೆಮ್ಮದಿ ಇರುವುದಿಲ್ಲ ಎಂದು ಹೇಳಿದರು.
ದೇವರ ಭಕ್ತಿ – ಪೂಜೆಯ ಭಾವನೆಗಳನ್ನು ಮಕ್ಕಳು ಮನೆಯಲ್ಲಿ ಕಲಿಯಲು ಸಾಧ್ಯವಾಗುತ್ತಿಲ್ಲ. ಕಲಿಕೆಯ ಒತ್ತಡ ಹಾಗೂ ಒಂಟಿ ಕುಟುಂಬಗಳ ಕಾರಣದಿಂದಾಗಿ ಈ ಹಿಂದಿನ ಕಾಲದಂತೆ ಈಗಿನ ಮಕ್ಕಳಿಗೆ ಮನೆಗಳಲ್ಲಿ ದೈವಭಕ್ತಿ ಕಲಿಯಲು ಅವಕಾಶವಾಗುತ್ತಿಲ್ಲ ಎಂದು ಶ್ರೀಗಳು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಸವಿ ಪೀಠದಲ್ಲಿ ಅಧ್ಯಾತ್ಮಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಸಕುಟುಂಬ ಸಮೇತವಾಗಿ ಅಧ್ಯಾತ್ಮಿಕ ಕಲಿಕೆಯಲ್ಲಿ ತೊಡಗಲು ಪೀಠದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದವರು ಹೇಳಿದರು.
Read also : ದಾವಣಗೆರೆ | ಜಾಂಡೀಸ್ ಇಂಜಕ್ಷನ್ ಕೊರತೆ : ಶಾಸಕ ಬಸವಂತಪ್ಪ ಅಧಿಕಾರಿಗೆ ತರಾಟೆ
ನಗರದಲ್ಲಿ ವಾಸವಿ ಮಾತೆಗೆ ಮೂರು ದೇವಾಲಯಗಳಿವೆ. ಈ ಮೂರೂ ದೇವಾಲಯಗಳು ಸಮಾಜದ ಎಲ್ಲ ಭಕ್ತರಿಗೆ ಸೇರಿದ್ದಾಗಿವೆ.  ಭಕ್ತಿಯ ವಿಷಯ ಬಂದಾಗ ಸಮಾಜದ ಎಲ್ಲರೂ ಒಂದಾಗಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.
ದೇವಾಲಯಗಳ ನಿರ್ಮಾಣವಷ್ಟೇ ಅಲ್ಲದೇ ನಿರ್ವಹಣೆಯೂ ಅತಿ ಮುಖ್ಯ. ದೇವಾಲಯಗಳ ಕೈಂಕರ್ಯ ಮಾಡುವುದು ಕೇವಲ ಪದಾಧಿಕಾರಿಗಳ ಕೆಲಸವಲ್ಲ. ಈ ವಿಷಯದಲ್ಲಿ ಸಮಾಜದ ಎಲ್ಲರೂ ಕೈ ಜೋಡಿಸಬೇಕು ಎಂದು ಶ್ರೀಗಳು ತಿಳಿಸಿದರು.
ವಾಸವಿ ಪ್ರಸಾದನಿಲಯ ವರ್ಷದಲ್ಲೇ ನಿರ್ಮಾಣಗೊಳ್ಳುವಂತಾಗಲಿ ಎಂದು ಶ್ರೀಗಳು ಆಶಿಸಿದರು.
ಆರ್ಯವೈಶ್ಯ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಭಕ್ತಿ ಸಿಂಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀಗಳನ್ನು ಬೈಕ್ ರ್ಯಾಲಿ ಮೂಲಕ ಕರೆ ತರಲಾಗಿತ್ತು. ಅದೇ ರೀತಿ ಬೀಳ್ಗೊಡುಗೆ ಸಂದರ್ಭದಲ್ಲೂ ಸಹ ಬೈಕ್ ರ್ಯಾಲಿ ಆಯೋಜಿಸಿದ್ದು ವಿಶೇಷವಾಗಿತ್ತು.
ಶ್ರೀ ವಾಸವಿ ಪ್ರಸಾದಾಲಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ   ಆರ್.ಎಲ್. ಪ್ರಭಾಕರ, ಗೌರವಾಧ್ಯಕ್ಷ  ಆರ್.ಜಿ. ನಾಗೇಂದ್ರ ಪ್ರಕಾಶ್, ಕಾರ್ಯಧ್ಯಕ್ಷ   ಕಾಸಲ್ ಎಸ್ ಸತೀಶ್ , ಕಾರ್ಯದರ್ಶಿ  ಜೆ. ರವೀಂದ್ರ ಗುಪ್ತ, ಸಹಕಾರ್ಯದರ್ಶಿ   ಎ.ಎಸ್. ಸತ್ಯನಾರಾಯಣ ಸ್ವಾಮಿ, ಖಜಾಂಚಿ  ಕಬ್ಬೂರ್ ನಾಗೇಂದ್ರ ಕುಮಾರ್,  ಶ್ರೀ ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಅಧ್ಯಕ್ಷ   ಆರ್.ಜಿ. ಶ್ರೀನಿವಾಸಮೂರ್ತಿ, ಎಸ್. ಕೆ.ಪಿ. ವಿದ್ಯಾಪೀಠದ ಕಾರ್ಯದರ್ಶಿ    ಕೆ.ಎನ್. ಅನಂತರಾಮ್ ಶೆಟ್ಟಿ   ವಾಸವಿ ಯುವಜನ ಸಂಘದ ರಾಜ್ಯಾಧ್ಯಕ್ಷ ಎಸ್. ಸುನೀಲ್  ಮತ್ತಿತರರು ಉಪಸ್ಥಿತರಿದ್ದರು.
TAGGED:Arya Vaishya SamajDinamana.comKannada Newsvasavipeetamಆರ್ಯವೈಶ್ಯ ಸಮಾಜದಾವಣಗೆರೆ ಜಿಲ್ಲೆ .ದಿನಮಾನ.ಕಾಂಶ್ರೀ ವಾಸವಿ ಪ್ರಸಾದಾಲಯದ ಭೂಮಿಪೂಜೆ
Share This Article
Twitter Email Copy Link Print
Previous Article Davanagere ದಾವಣಗೆರೆ | ಜಾಂಡೀಸ್ ಇಂಜಕ್ಷನ್ ಕೊರತೆ : ಶಾಸಕ ಬಸವಂತಪ್ಪ ಅಧಿಕಾರಿಗೆ ತರಾಟೆ
Next Article Anil Hosamani ಪ್ರಜ್ಞೆಯ ಹಸಿವನ್ನು ಪ್ರತಿನಿಧಿಸಿದ ಅನಿಲ್ ಹೊಸಮನಿಯುವರ ಕಾರ್ಯಕ್ರಮ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು : ಮಹಾವೀರ ಕರೆಣ್ಣವರ್‌

ದಾವಣಗೆರೆ  (Davanagere) :  ಕಾನೂನು ಈ ದೇಶದ ಜನರಿಗಾಗಿಯೇ ಇದೆ. ಕಾನೂನು ಬಗ್ಗೆ  ಭಯಬೇಡ  ಎಂದು ಜಿಲ್ಲಾ ಕಾನೂನು ಸೇವಾ…

By Dinamaana Kannada News

DAVANAGERE NEWS | ವರದಕ್ಷಿಣೆ ಸಾವು ಪ್ರಕರಣ: ಆರೋಪಿಗೆ 07 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ದಾವಣಗೆರೆ (Davanagere ): ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣರಾದ ಪತಿ ಮಂಜುನಾಥಗೆ  7 ವರ್ಷ ಕಠಿಣ…

By Dinamaana Kannada News

ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದರೆ ಬಿ. ಆರ್. ಅಂಬೇಡ್ಕರ್ ಗೆ ಅಪಮಾನ ಮಾಡಿದಂತೆ: ಜಿ. ಬಿ. ವಿನಯ್ ಕುಮಾರ್

ದಾವಣಗೆರೆ (Davanagere): ನೀವು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದರೆ ದಾದಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಎಸಗುವ ದ್ರೋಹ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?