Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ದಾವಣಗೆರೆ : ಬಾಲ್ಯದಲ್ಲಿಯೇ ಮಕ್ಕಳಲ್ಲಿ ಅಳಿಸಲಾಗದ ಮೌಲ್ಯಗಳನ್ನು ಬಿತ್ತಿ’: ಡಾ.ಜಿ.ಎಚ್.ಅಶಾ
ತಾಜಾ ಸುದ್ದಿ

ದಾವಣಗೆರೆ : ಬಾಲ್ಯದಲ್ಲಿಯೇ ಮಕ್ಕಳಲ್ಲಿ ಅಳಿಸಲಾಗದ ಮೌಲ್ಯಗಳನ್ನು ಬಿತ್ತಿ’: ಡಾ.ಜಿ.ಎಚ್.ಅಶಾ

Dinamaana Kannada News
Last updated: September 12, 2025 8:53 am
Dinamaana Kannada News
Share
Eeshwaramma School
SHARE
ದಾವಣಗೆರೆ: ಬಾಲ್ಯದಿಂದಲೇ ವಿದ್ಯಾರ್ಥಿಗಳಲ್ಲಿ ಮೌಲ್ಯವನ್ನು ಬಿತ್ತುವ ಕಾರ್ಯ ಶಿಕ್ಷಕರಿಂದ ಆಗಬೇಕು. ಈ ನಿಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳು ಆದರ್ಶ, ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕೆಎಸ್‌ಎಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಚ್.ಆಶಾ ಕಿವಿಮಾತು ಹೇಳಿದರು.
ನಗರದ ಬಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ವನಿತ ಸಮಾಜದ ಜ್ಞಾನಜ್ಯೋತಿ ಶಿಕ್ಷಕಿಯರ ವೇದಿಕೆ ವತಿಯಿಂದ ‘ಮಾಲ್ಯ ಶಿಕ್ಷಣ’ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತ ಬಿ.ಆರ್.ಶಾಂತಕುಮಾರಿ ಸ್ಮರಣಾರ್ಥ ನಡೆಸುತ್ತಿರುವ ‘ಮೌಲ್ಯ ಶಿಕ್ಷಣ’ ತರಬೇತಿ ಕಾರ್ಯಾಗಾರವು ಒಂದು ಉತ್ತಮ ಕೆಲಸವಾಗಿದೆ. ಪ್ರಶಿಕ್ಷಣಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದರು.
Read also : ಲೋಕ ಅದಾಲತ್|ರಾಜಿಯಾಗಬಲ್ಲ 9916 ಪ್ರಕರಣಗಳ ಇತ್ಯರ್ಥಕ್ಕೆ ಗುರಿ: ನ್ಯಾ. ಡಿ.ಕೆ.ವೇಲಾ
ಈಶ್ವರಮ್ಮ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಎ.ಆರ್.ಉಷಾ ರಂಗನಾಥ್ ಮಾತನಾಡಿ, ಸತ್ಯ ಮೇವ ಜಯತೇ ಎಂಬುದು ನಮ್ಮ ದೇಶದ ಧೈಯ (ಘೋಷ) ವಾಕ್ಯ. ಮೌಲ್ಯಗಳು ನಮ್ಮ ದೇಶದ ನಮ್ಮ ನಾಡಿನ ಜೀವನಾಡಿಗಳು. ಮೌಲ್ಯಗಳಿಲ್ಲದ ಬದುಕು ಪ್ರಾಣಿಗಳಿಗಿಂತಲೂ ಕಡೆಯಾಗುತ್ತದೆ. ಇಂದಿನ ಮಕ್ಕಳಿಗೆ ಮೌಲ್ಯ ಶಿಕ್ಷಣ ಅಗತ್ಯ ಬಹಳ ಇದೆ. ಮಕ್ಕಳ ವಿಕಾಸವಾದಾಗ ಮಾತ್ರ ಅದು ದೇಶದ ವಿಕಾಸ ಸಮಾಜಕ್ಕೆ ಮೌಲ್ಯವರ್ಧನೆಯಾಗುವಂತಹ ಕೆಲಸ ಈ ಕಾರ್ಯಕ್ರಮದಿಂದ ಆಗಲಿ ಎಂದರು.
ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್ ಮಾತನಾಡಿ, ಈಶ್ವರಮ್ಮ ಶಾಲೆ ಸುಮಾರು ೪೩ ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುವುದರಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈಶ್ವರಮ್ಮ ಶಾಲೆಯ ಸಂಸ್ಥಾಪಕರಾದ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತರಾದ ಬಿ.ಆರ್.ಶಾಂತಕುಮಾರಿಯವರ ಸ್ಮರಣಾರ್ಥವಾಗಿ ಈ ಮೌಲ್ಯ ಶಿಕ್ಷಣ ಕಾರ್ಯಾಗಾರವನ್ನು ಪ್ರತಿವರ್ಷವೂ ನೂರಾರು ಶಿಕ್ಷಕರಿಗೆ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ಕೆ.ಆರ್.ಸುಜಾತ ಕೃಷ್ಣ ಮಾತನಾಡಿ, ಕರ್ನಾಟಕದಲ್ಲಿ ನಾಗಮ್ಮ ಕೇಶವಮೂರ್ತಿಯವರು ಮೌಲ್ಯಶಿಕ್ಷಣ ತರಬೇತಿ ಶಿಬಿರಗಳನ್ನು ನಡೆಸಿದವರು. ಮೌಲ್ಯಗಳೇ ಉಸಿರಾಗಿ ಆದರ್ಶ ಜೀವನ ನಡೆಸಿದ ಶಾಂತಕುಮಾರಿಯವರ ಸ್ಮರಣಾರ್ಥ ಈ ಕಾರ್ಯಾಗಾರ ನಡೆಸುತ್ತಿದ್ದೇವೆ. ಈಶ್ವರಮ್ಮ ಶಾಲೆಯ ಉದ್ದೇಶವೇ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿ ಬೆಳೆಸುವುದಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ರಾಂತ ಹಿರಿಯ ಶಿಕ್ಷಕಿಯಾದ ಕೆ.ಎಂ.ಗಿರಿಜಾ ‘ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಕ’, ವಿಶ್ರಾಂತ ಪ್ರಾಚಾರ್ಯರಾದ ಎ.ಪಿ.ಸುಜಾತ ‘ ಶಿಕ್ಷಕ ವೃತ್ತಿ ಮತ್ತು ಪಾವಿತ್ರತೆ’, ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಎ.ಎಲ್.ನಾಗವೇಣಿ ‘ಪಾಠಗಳಲ್ಲಿ ಚಟುವಟಿಕೆಗಳ ಅಗತ್ಯತೆ’, ಕನ್ನಡ ಭಾಷಾ ಶಿಕ್ಷಕಿ ಎಚ್.ಎಸ್.ಅನುರಾಧ ‘ಪಾಠಗಳಲ್ಲಿ ಮೌಲ್ಯಗಳ ಸಮನ್ವಯ’ ಎಂಬ ವಿಷಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜ್ಞಾನಜ್ಯೋತಿ ವನಿತಾ ಶಿಕ್ಷಕಿಯ ವೇದಿಕೆ ಅಧ್ಯಕ್ಷರಾದ ಜಿ.ಎಸ್.ಶಶಿರೇಖಾ, ಜಯಮ್ಮ ನೀಲಗುಂದ, ಜ್ಞಾನಜ್ಯೋತಿ ಶಿಕ್ಷಕಿ ವೇದಿಕೆಯ ಕಾರ್ಯದರ್ಶಿ ಮಲ್ಲಮ್ಮ, ಖಜಾಂಚಿ ವಾಗ್ಗೇವಿ ಹಾಗೂ ಕೆಎಸ್‌ಎಸ್ ಬಿಎಡ್ ಕಾಲೇಜಿನ ೭೦ ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಂಜನಿ ನಿರೂಪಿಸಿದರು. ಜಿ.ಎಸ್.ಶಶಿರೇಖಾ ವಂದಿಸಿದರು.
ಮೌಲ್ಯಗಳನ್ನು ಮೊದಲು ಮಕ್ಕಳಲ್ಲಿ ಬೆಳಸಬೇಕು
ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ಇಂತಹ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕೆಂದರೆ ಮೌಲ್ಯಗಳನ್ನು ಮೊದಲು ಮಕ್ಕಳಲ್ಲಿ ಬೆಳಸಬೇಕು.
– ಕೆ.ಆರ್.ಸುಜಾತ ಕೃಷ್ಣ, ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷೆ.
TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಲೋಕ ಅದಾಲತ್|ರಾಜಿಯಾಗಬಲ್ಲ 9916 ಪ್ರಕರಣಗಳ ಇತ್ಯರ್ಥಕ್ಕೆ ಗುರಿ: ನ್ಯಾ. ಡಿ.ಕೆ.ವೇಲಾ
Next Article ASUS Exclusive Retail Store Launched in Davangere ದಾವಣಗೆರೆಯಲ್ಲಿ ಎಎಸ್ಯುಎಸ್ ಎಕ್ಸ್ಕ್ಲೂಸಿವ್ ರಿಟೇಲ್ ‌ಸ್ಟೋರ್ ಪ್ರಾರಂಭ 
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಗಿಡ ನೆಡೋಣ ಬನ್ನಿ ಕಾರ್ಯಕ್ರಮ

ಹರಿಹರ:  ಪರಿಸರಕ್ಕಾಗಿ ನಾವು ಒಕ್ಕೂಟ ಹಾಗೂ ದಾವಣಗೆರೆ ಜೈನ್ ಇಂಜಿನಿಯರಿಂಗ್ ಕಾಲೇಜಿನಿಂದ ಹರಿಹರ ಹೊರವಲಯದ ಜೋಡಿ ರಸ್ತೆಯಲ್ಲಿ ಬುಧವಾರ ವಿಶ್ವ…

By Dinamaana Kannada News

Harihara | ಜ.5 ರಂದು 537ನೇ ಕನಕದಾಸರ ಜಯಂತ್ಯೋತ್ಸವ

ಹರಿಹರ (Harihara) : ದಾವಣಗೆರೆಯಲ್ಲಿ ಜಿಲ್ಲಾ ಮಟ್ಟದ 537ನೇ ಕನಕದಾಸರ ಜಯಂತ್ಯೋತ್ಸವವನ್ನು ಜಿಲ್ಲಾ ಕುರುಬ ಸಮಾಜ ಹಾಗೂ ಸಿದ್ದರಾಮಯ್ಯನವರ ಅಭಿಮಾನಿ…

By Dinamaana Kannada News

Davanagere | ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಗಿಲ್ಲ ಬೆಲೆ : ಶಾಸಕ ಕೆ.ಎಸ್.ಬಸವಂತಪ್ಪ

ದಾವಣಗೆರೆ (Davanagere):  ಬಡ ಕೂಲಿ ಕಾರ್ಮಿಕರು, ರೈತರಿಗೆ ವರದಾನ ಆಗಬೇಕಾದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯು ಶಾಪವಾಗಿದೆ. ಹೃದಯಘಾತಕ್ಕೆ ಒಳಗಾಗಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?