Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಕನ್ನಡ ರಾಜ್ಯೋತ್ಸವ|ಕನ್ನಡವೇ ಸತ್ಯ,ಕನ್ನಡವೇ ನಿತ್ಯವಾಗಬೇಕಾದರೆ…..:
ಅಭಿಪ್ರಾಯ

ಕನ್ನಡ ರಾಜ್ಯೋತ್ಸವ|ಕನ್ನಡವೇ ಸತ್ಯ,ಕನ್ನಡವೇ ನಿತ್ಯವಾಗಬೇಕಾದರೆ…..:

ಗೀತಾ ಭರಮಸಾಗರ
Last updated: October 31, 2025 3:12 am
ಗೀತಾ ಭರಮಸಾಗರ
Share
Geeta Bharamasagar
SHARE

ಕನ್ನಡ ನಾಡು -ನುಡಿ 2000  ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸಾಂಸ್ಕೃತಿಕವಾಗಿ, ಸಾಹಿತಿಕವಾಗಿ, ಐತಿಹಾಸಿಕವಾಗಿ ದಿವ್ಯ ಪರಂಪರೆ ಯನ್ನು ಉಳಿಸಿಕೊಂಡು ಬಂದಿದೆ.

ನಮ್ಮ ನಾಡು ಯಾವ ಕಾಲಘಟ್ಟದಲ್ಲಿಯೂ ಏಕಪ್ರಭುತ್ವಕ್ಕೆ ಒಳಪಟ್ಟಿರಲಿಲ್ಲ. ರಾಷ್ಟ್ರಕೂಟರ ಕಾಲದಲ್ಲಿ ಕಾವೇರಿಯಿಂದ ಗೋದಾವರಿಯವರೆಗೂ ಬಹುವಿಸ್ತಾರವಾಗಿ ಹಬ್ಬಿ ಕೊಂಡಿತ್ತು. ನಂತರ 22 ಪ್ರಭುತ್ವಗಳಲ್ಲಿ ಹಂಚಿಹೋಗಿತ್ತು.

ಕವಿಗಳ,ಸಾಹಿತಿಗಳ, ನಾಡ ಪ್ರೇಮಿಗಳ ಮತ್ತು ಅನೇಕ ಕನ್ನಡಪರ ಸಂಘಟನೆಗಳ ಹೋರಾಟ ದ ಪ್ರತಿಫಲವಾಗಿ ಹರಿದು ಹಂಚಿಹೋಗಿದ್ದ ಕನ್ನಡ ನಾಡು ಏಕೀಕರಣ ಸಾಧಿ ಸಿ,  ಭಾಷಾವಾರು ಪ್ರಾಂತ್ಯವಾಗಿ 1956 ನವೆಂಬರ್ ಒಂದರಂದು ಮೈಸೂರು ರಾಜ್ಯವಾಗಿ ಉದಯವಾಯಿತು. ನಂತರ ಕನ್ನಡಿಗರ ಮಹಾದಾಸೆಯಂತೆ  1973ರಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಲಾಯಿತು.

ನಾಡಿನ ಜನತೆ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷ ಸಂಭ್ರಮದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡಿಗರು ಕನ್ನಡ ಭಾಷೆ, ಮತ್ತು ಕನ್ನಡಿಗರ ಸಾಂಸ್ಕೃತಿಕ ಪರಂಪರೆಯು ಅನೇಕ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಕನ್ನಡಪರ ಸಂಘಟನೆಗಳು,ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಾಡಿನ ಸಮಸ್ತ ಜನತೆ ಚಿಂತಿಸುವ ಮತ್ತು ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ.

Read also : ಶಿಕ್ಷಕರ ದಿನಾಚರಣೆ|ಅರಿವೆಂಬ ರವಿಯು ಮೂಡಲು : ಗೀತಾ ಭರಮಸಾಗರ

ಮಾತೃಭಾಷೆಗೂ, ಮನುಜನಿಗೂ ಭಾವನಾತ್ಮಕ ಸಂಬಂಧವಿದೆ.ಮಾತೃ ಭಾಷೆಯನ್ನು ಮನೆ ಯಿಂದಲೇ ಕಲಿಯುವುದರಿಂದಲೇ ಜಗತ್ತಿನ ಎಲ್ಲ ಭಾಷೆಗಳನ್ನು ಕಲಿಯಲು ಸಾಧ್ಯ ಮತ್ತು ಮಗು ವಿನಲ್ಲಿ ಕಲ್ಪನಾ ಶಕ್ತಿ, ವೈಚಾರಿಕ ಶಕ್ತಿ,ತಾರ್ಕಿಕ ಶಕ್ತಿಯನ್ನು ಬೆಳೆಸುವ ಮೂಲಕ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ.

ದೀರ್ಘ ಕಾಲಾವಧಿಯಲ್ಲಿ ಬೆಳೆದು ಬಂದ ಭಾಷೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯ ಬೇಕಾದರೆ ಪ್ರಸ್ತುತ ನಾಡು ಎಷ್ಟರಮಟ್ಟಿಗೆ ತನ್ನ ಭಾಷೆಯನ್ನು ಉಳಿಸಿ ಕೊಂಡಿದೆ ಮತ್ತು ಯಾವ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ ಎಂಬುದರ ಮೇಲೆ ನಿಂತಿದೆ. ಭಾಷೆಗೆ ಜೀವಂತಿಕೆ ಬರುವುದೇ ಬಳಕೆಯಿಂದ.

ಕನ್ನಡಿಗರೆಂದರೆ ಕನ್ನಡ ಭಾಷೆಯನ್ನು ಆಡುವವನೆಂದು, ಕನ್ನಡವನ್ನಾಡುವವನೇ ಕನ್ನಡವನ್ನು ಆಡಿಸಬಲ್ಲ, ನಾವು ಕನ್ನಡಿಗರೆಂಬುದನ್ನು ಅನೇಕರು ಮರೆತಂತಿದೆ. ಈ ಕನ್ನಡ ತನಕ್ಕೆ ತನ್ನರಿವು ಇನ್ನೂ ಕೊನರಿಲ್ಲ,ಅದು ಕೊನರಬೇಕಾದರೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ನಾಗಬೇಕು.

ಕನ್ನಡ ಭಾಷೆಯ ಸೊಬಗು,ಅದರ ಭಾಷಿಕ ಚರಿತ್ರೆ, ಕನ್ನಡ ಭಾಷಿಕರ ಮನಸ್ಥಿತಿಯನ್ನು ಬಹಳ ತಾರ್ಕಿಕವಾಗಿ ಅರಿತು, ಕಂಡುಕೊಂಡ ಒಳಹುಗಳಲ್ಲಿ ಕನ್ನಡ ಭಾಷೆ ಮತ್ತು ಇತರ ಜಾಗತಿಕ ಭಾಷೆಗಳ ಹಿನ್ನೆಲೆಯನ್ನು ಗಮನಿಸುತ್ತಲೇ,ವರ್ತಮಾನವನ್ನು ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬ ಭಾಷಿಕರ ಪ್ರಾತಿನಿಧ್ಯವಿದೆ. ಭಾಷೆ ಸಂವಹನಶೀಲ ಅಭಿವ್ಯಕ್ತಿ ಮಾಧ್ಯಮವಾಗಿದೆ.

“ಮಾತೆಂಬ ಜ್ಯೋತಿಯು ಬೆಳಗದೆ ಇದ್ದಿದ್ದರೆ ಜಗತ್ತಲ್ಲವೂ ಕಗ್ಗತ್ತಲ ಮೊತ್ತವಾಗಿರುತ್ತಿತ್ತು “ಎಂಬ ದಂಡಿಯ ಮಾತು ಔಚಿತ್ಯಪೂರ್ಣವಾಗಿದೆ.ಮಾತು ಅತಿ ಶ್ರೇಷ್ಠ ಅಭಿವ್ಯಕ್ತಿ ಮಾಧ್ಯಮ. ಈ ನಿಟ್ಟಿನಲ್ಲಿ ಕಾರ್ಯನಿಷ್ಟ ವಾಗಿರುವ ಕನ್ನಡ ನಾಡಿನ ಕನ್ನಡ ಜನತೆಯ ನುಡಿಯೇ ಕನ್ನಡ.”

ಇಂತಹ ಕನ್ನಡ ಭಾಷೆ ಇಂದು ಆಧುನೀಕರಣ, ಜಾಗತೀಕರಣದ ಹಿನ್ನೆಲೆಯಲ್ಲಿ ಅದರ ಉಳಿವಿನ ಸವಾಲುಗಳು ಎದುರಾಗುತ್ತಿರುವುದು ಕನ್ನಡಿಗರೆಲ್ಲರ ವಿಷಾದನೀಯ ಸಂಗ ತಿ. ಈ ನಿಟ್ಟಿನಲ್ಲಿ ಗ್ರಾಂಥಿಕ ಭಾಷೆ ಹಾಗೂ ಆಡು ಭಾಷೆಯಾಗಿ ಕನ್ನಡ ನಿರಂತರವಾಗಿ ಮುಂದುವರೆದು ಜೀವಂತ ಭಾಷೆಯಾದಲ್ಲಿ ” ಅರಳುಗಟ್ಟಿದ ಚಿನ್ನಕ್ಕೆ ಮೆರಗು ಕೊಡುವಂತಾಗುತ್ತದೆ ಅಲ್ಲವೇ?

ಕನ್ನಡ ದ್ರೋಹವೆಂಬದು ಕನ್ನಡಿಗರಿಂದಲೇ ಆಗುವಂತದ್ದು. ಪ್ರಸ್ತುತ ಪರಿಸ್ಥಿತಿಯು ನಿರಂತರ ವಾಗಿ ಹಿಂದಿ ಮತ್ತು ಇಂಗ್ಲೀಷಿನ ವಿರುದ್ಧ ಸೆಣಸಾಡುತ್ತ ನಮ್ಮ ಭಾಷೆಯ ಅಸ್ಮಿತೆ ಯನ್ನು ಉಳಿಸಿಕೊಳ್ಳಬೇಕಾಗಿರುವ ಸಂದಿಗ್ಧತೆ ಇಂದು ನಿರ್ಮಾಣವಾಗಿದೆ.ಕೇವಲ ತುಟಿ ತೃಪ್ತಿಯ ಕನ್ನಡ ನಿಷ್ಪ್ರಯೋಜಕ.ಅದೊಂದು ಮನೋಧರ್ಮವಾಗಬೇಕು.

“ಕನ್ನಡ ಗೊತ್ತಿಲ್ಲ “ಆದರೂ ಕರ್ನಾಟಕದಲ್ಲಿ ಬದುಕಬಹುದು.’ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ’ ಯಾರು ಬೇಕಾದರೂ ಇಲ್ಲಿ ಬಂದು ಸುಖವಾಗಿ ಬದುಕ ಬಹುದು. ರಾಜಧಾನಿಯಲ್ಲಿ ವಲಸೆ ಪ್ರಮಾಣ ಹೆಚ್ಚಾಗಿರುವುದರಿಂದ ಕನ್ನಡ ತನ್ನಷ್ಟಕ್ಕೆ ತಾನೇ ಮಾಯವಾಗುತ್ತಿದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕಿದ ನಂತರವೂ ಕನ್ನಡದ ಉಳಿವಿಗಾಗಿ, ರಕ್ಷಣೆಗಾಗಿ, ಪೋಷಣೆಗಾಗಿ, ಕನ್ನಡಪರ ಸಂಘಟನೆಗಳು,ಸಂಘ ಸಂಸ್ಥೆಗಳು ಅಭಿವೃದ್ಧಿ ಪ್ರಾಧಿ ಕಾರಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು  ನಿರಂತರ ಜಾಗೃತಿ ಮತ್ತು ಅರಿವಿನ ಅಸ್ಥಿತ್ವಕ್ಕಾಗಿ ಕನ್ನಡವನ್ನು ಉಳಿಸುವ ಮೂಲಕ ಸಾರ್ವಭೌಮತ್ವವನ್ನು ಕಾಪಾಡುತ್ತಿವೆ.

ಭಾಷೆ, ಸಂಸ್ಕೃತಿ,ಸಾಹಿತ್ಯ, ಕಲೆ ಇವುಗಳ ನಿರ್ವಹಣೆ ಅಭಿಮಾನಯುತವಾಗಿರಬೇಕೇ ಹೊರತು, ವ್ಯವಹಾರ ಪ್ರಧಾನವಾಗಬಾರದು.

ಕನ್ನಡವೇ ಜಾತಿ,ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷ ವಾಕ್ಯದೊಂದಿಗೆ ಒಂದು ಗಂಭೀರ ಚಿಂತನೆಯ ದೂರದೃಷ್ಟಿಯ ನಾಡನ್ನು ಕಟ್ಟುವ ಪ್ರಾಮಾಣಿಕ ಕಾಯಕವನ್ನು ಚಿಂತಕರು, ಸಾಹಿತಿಗಳು, ವಿದ್ವಾಂಸರು, ಆಡಳಿತಾರೂಢರು,ಸಮಸ್ತ ಕನ್ನಡಿಗರು ಮಾಡಿದ್ದೇ ಆದರೆ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಕುವೆಂಪುರವರ ಸದಾಶಯದ ಸಮೃದ್ಧತೆಗೆ ಸಾಕ್ಷಿಯಾಗುವುದು.

ಗೀತಾ ಭರಮಸಾಗರ – ಲೇಖಕರು 

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
By ಗೀತಾ ಭರಮಸಾಗರ
ಗೀತಾ ಭರಮಸಾಗರ ಶಿಕ್ಷಕರು, ಲೇಖಕರು ಚಿತ್ರದುರ್ಗ.
Previous Article Davanagere ಬಡ ಸಾಹಿತಿಗಳ ಬದುಕು ಬವಣೆ:ಅಕ್ಷರ ಲೋಕದ ಆರ್ತನಾದ|ಲೇಖನ : ವಸುಪ್ರಿಯ
Next Article Davanagere ಸೋರಿಯಾಸಿಸ್ ಒಂದು ಸಮಗ್ರ ರೋಗ: ಡಾ.ಎಂ.ಸಿ.ರೂಪ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Bhadra Reservoir | ಭದ್ರಾ ಜಲಾಶಯ ಎಡದಂಡೆ ನಾಲೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡುಗಡೆ

ದಾವಣಗೆರೆ (Davanagere): ಭದ್ರಾ ಜಲಾಶಯದ ಅಚ್ಚುಕಟ್ಟುದಾರ ವ್ಯಾಪ್ತಿಯ ಬೆಳೆಗಳು ಕಟಾವಿಗೆ ಬರಲು ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಿರುವುದರಿಂದ ರೈತರ ಬೇಡಿಕೆಯಂತೆ…

By Dinamaana Kannada News

ಗಣತಿಗೆ ಬಂದಾಗ “ಮಾದಿಗರು” ಎಂದು ನಮೂದಿಸಿ

ದಾವಣಗೆರೆ (Davanagere): ಒಳಮೀಸಲಾತಿ ಜಾರಿಗೆ ನ್ಯಾ.ನಾಗಮೋಹನದಾಸ್ ಅವರು ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕಾರಿಗಳಿಗೆ ಅಂಕಿ-ಅಂಶ ಸಂಗ್ರಹಿಸಿಲು ಕೋರಿರುವುದರಿಂದ ಮಾಹಿತಿ ಸಂಗ್ರಹಿಸಲು…

By Dinamaana Kannada News

ಡಾ.ಬಿ.ಆರ್.ಅಂಬೇಡ್ಕರ್ ಕೆನರಾ ವಿದ್ಯಾಜ್ಯೋತಿ ಯೋಜನೆ : ವಿದ್ಯಾರ್ಥಿ ವೇತನ ವಿತರಣೆ

ದಾವಣಗೆರೆ :  ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆ. 14 ರಂದು ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕೆನರಾ ವಿದ್ಯಾಜ್ಯೋತಿ…

By Dinamaana Kannada News

You Might Also Like

Applications invited
ತಾಜಾ ಸುದ್ದಿ

ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿಗೆ ಅರ್ಜಿ ಆಹ್ವಾನ

By Dinamaana Kannada News
Application for Youth Fund Scheme
ತಾಜಾ ಸುದ್ದಿ

ಯುವನಿಧಿ ಯೋಜನೆ: ನಿರುದ್ಯೋಗಿ ಭತ್ಯೆ ಪಡೆಯಲು ಅರ್ಜಿ ಆಹ್ವಾನ

By Dinamaana Kannada News
Dr. D. Francis
ಅಭಿಪ್ರಾಯ

ಕನ್ನಡಿಗರ ಹೆಮ್ಮೆಯ ಉಸಿರು: ಕನ್ನಡವೇ ನಮ್ಮಉಸಿರು|ಡಾ. ಡಿ. ಫ್ರಾನ್ಸಿಸ್

By Dinamaana Kannada News
Davanagere
ತಾಜಾ ಸುದ್ದಿ

ಸೋರಿಯಾಸಿಸ್ ಒಂದು ಸಮಗ್ರ ರೋಗ: ಡಾ.ಎಂ.ಸಿ.ರೂಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?