Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು -5   ಮಣ್ಣು ಮಾರಲು ವಿರೋಧಿಸಿದ ಮುದುಕಿ 
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು -5   ಮಣ್ಣು ಮಾರಲು ವಿರೋಧಿಸಿದ ಮುದುಕಿ 

Dinamaana Kannada News
Last updated: April 26, 2024 5:12 am
Dinamaana Kannada News
Share
sanduru
ಸತ್ರೂ ಮಣ್ಣು ಮಾರಲು ಬಿಡುವುದಿಲ್ಲ
SHARE

ಸೊಂಡೂರಿನ 94,359 ಹೆಕ್ಟೇರುಗಳ ಭೌಗೋಳಿಕ ಕ್ಷೇತ್ರದ ಪೈಕಿ ,ಸಾಗುವಳಿ ಮಾಡುವ ಭೂಮಿ 34,290 ಹೆಕ್ಟೇರುಗಳು ಮಾತ್ರ. ಅದರಲ್ಲಿಯೂ ಮಳೆಯಾಧಾರಿತ ಕೃಷಿ ಸಾಗುವಳಿ ಭೂಮಿ 28290 ಹೆಕ್ಟೇರು ಆಗಿದ್ದು, ಉಳಿದದ್ದು ಅಲ್ಪಸ್ವಲ್ಪ ದ ನೀರಾವರಿ ಸಾಗುವಳಿ ಭೂಮಿಯಾಗಿದೆ.ಇದ್ದ 24 ಕೆರೆಗಳಲ್ಲಿ ಹೂಳು ತುಂಬಿದೆ.

ಭೂಮಿಗಳೆಲ್ಲಾ ಬಹುತೇಕ ಮಳೆಯಾಶ್ರಿತವೇ

ಸಣ್ಣ ರೈತರ ತುಂಡು ಭೂಮಿಗಳೆಲ್ಲಾ ಬಹುತೇಕ ಮಳೆಯಾಶ್ರಿತವೇ. ಇಲ್ಲಿ ವಾಣಿಜ್ಯ ಬೆಳೆಗಳಿಗಿಂತಲೂ ತಮ್ಮ ಹೊಟ್ಟೆಗೆ ಅಗತ್ಯವಾದ ಜ್ವಾಳ ,ಸಜ್ಜಿ, ನವಣೆ, ಹುಳ್ಳಿ ಬೆಳೆಗಳನ್ನು ಬೆಳೆದು ಉಳಿದ ದಿನಸಿಗೂ,ಬಟ್ಟೆ ಬರೆಗೂ ಅವೇ ಬೆಳೆದ ಧಾನ್ಯಗಳನ್ನು ಆಗಾಗ ಅಂಗಡಿಗಳಿಗೆ ಹಾಕಿ ,ಅದೇ ರೊಕ್ಕದಲ್ಲಿ ಎಣ್ಣೆ,ಚಾಪುಡಿ,ಸಕ್ರೆ,ಬೆಲ್ಲ ಮುಂತಾದ ಅಗತ್ಯ ಸಾಮಗ್ರಿಗಳನ್ನು ಖರೀದಿಸುತ್ತಾರೆ.

ಉಣ್ಣುವ ಜ್ವಾಳಕ್ಕೂ ಪಡಿಪಾಟಲು

sanduru minining
sanduru minining

ಎಷ್ಟೋ ಕುಟುಂಬಗಳು ತಾವು ಬೆಳೆದ ಧಾನ್ಯಗಳನ್ನೆಲ್ಲ ಮಕ್ಕಳ ಮದುವೆಗೆಂದು ಮಾರಿ ,ಬಂದ ಹಣವೆಲ್ಲ ಖರ್ಚಾದ ನಂತರ ಉಣ್ಣುವ ಜ್ವಾಳಕ್ಕೂ ಪಡಿಪಾಟಲುಮಾಡಿಕೊಂಡಿದ್ದೂ ಇದೆ. ಇಲ್ಲಿನ ಕೃಷಿಕರ ದೇಹಗಳೂ ಅಷ್ಟೆ.ಕಬ್ಬಿಣದ ತೆಳು ರಾಡುಗಳಂತಿರುವ ಕಪ್ಪು ಕೈ-ಕಾಲುಗಳಲ್ಲಿ ಅದೇನು ಶಕ್ತಿಯಿರುತ್ತೋ ಏನೋ…! ಮತ್ತೆ ಉಣ್ಣುವ ಆಹಾರವೋ ತುಂಬಾ ಸರಳ.  ಮುಂಜಾನೆ ರೊಟ್ಟಿಯ ಮೇಲೊಂದಿಷ್ಟು ತಂಬುಳಿ: ಮಧ್ಯಾಹ್ನಕ್ಕೊ ಮುದ್ದೆಯ ಮೇಲೊಂದಿಷ್ಟು ತಂಬುಳಿ ಇಷ್ಟೆ.ಅನ್ನ ಗಿನ್ನ ಎಂಬುದೆಲ್ಲ ಅದು ಹಬ್ಬಗಳ ದಿನ ಮಾಡುವ ಅಪರೂಪದ ಖಾದ್ಯ!

ಕೆಲವೊಂದು ಘಟನೆಗಳು ಅನುಭವಿಸಿದ ಕಾರಣಕ್ಕೊ ಏನೋ ಮನಸ್ಸಿನಿಂದ ಮರೆಯಲಿಕ್ಕೆ ಸಾಧ್ಯವಾಗುವುದಿಲ್ಲ .ಇಂಥದ್ದೇ ಒಂದು ಘಟನೆಯನ್ನು ಹೊಸಳ್ಳಿ,ಅರ್ಥಾತ್ ಭುಜಂಗ ನಗರದ ಜನರು ಹೇಳಿದರು.

ಲಾರಿ ಟಿಪ್ಪರಗಳ ಸೌಂಡ್‌ ಬಂದರೆ ಅವೇಶ

ಅದೇನಾಗ್ತಿತ್ತೋ ಏನೋ …ಆ ಹೆಂಗಸಿಗೆ ಲಾರಿ ಟಿಪ್ಪರುಗಳ ಸದ್ದು ಕೇಳಿದರೆ ಸಾಕಿತ್ತು.ಮೈಯಲ್ಲಿ ಆವೇಶಗೊಂಡವಳ ಹಾಗೆ ರಸ್ತೆಗೆ ಬಂದು ನಿಲ್ಲುತ್ತಿದ್ದಳು. ಅದೆಷ್ಟೇ ದೂರದಲ್ಲಿರಲಿ,ಏನೇ ಮಾಡುತ್ತಿರಲಿ, ಮಾಡುವುದನ್ನು ಅಲ್ಲಿಯೇ ಬಿಟ್ಟು ರಸ್ತೆಗೆ ಓಡಿ ಬರುತ್ತಿದ್ದಳು. ಎರಡೂ ಕೈಗಳನ್ನು ಅಗಲಿಸಿ ರಸ್ತೆ ಮಧ್ಯೆ ನಿಂತಳೆಂದರೆ ಯಾವ ವಾಹನಗಳೂ ಓಡಾಡುವಂತಿರಲಿಲ್ಲ.

“ಹಗಲೊತ್ತು ಆಗಿದ್ದರೆ ,ನಾವೆಲ್ಲ ಇರುತಿದ್ವಿ,ಬೈದು ಗೀದು ಎಳೆದುಕೊಂಡು ಬಂದು ಮನೆಗೆ ಕುಂದ್ರಸ್ತಿದ್ವಿ.ಆದರೆ ಒಂದೇ ಒಂದು ಒಳ್ಳೇ ಗುಣಾ ಏನು ಅಂದ್ರೆ,ಆಕಿಗೆ ಲಾರಿ ಟಿಪ್ಪರುಗಳ ಸವುಂಡು ಅಂದ್ರೆ ಆಗಿಬರ್ತಿದ್ದಿಲ್ಲ ಅನ್ನಾದೊಂದು ಬಿಟ್ರೆ,ಉಳಿದಂತೆ ಎಲ್ಲಾ ಕೆಲಸನಾ ಆಕಿ ಮಾಡಾಕಿ..”ಆತ ಹೇಳುತ್ತಲೇ ಇದ್ದ.

ಕೆಮ್ಮುತಿರುವ ಮುದುಕ,ಟಿಪ್ಪರಿನ ಗಾಲಿಗೆ ಸಿಕ್ಕ ಮಗನ ನೆನೆಯುತ್ತ,ಅದೇ ಟೀಬಿ ಪೇಶಂಟಿನ ಮುದುಕಿ, ಮಣ್ಣು ಹೊತ್ತು ಲಾರಿಗೆ ಅಡ್ಡಲಾಗಿ ನಿಲ್ಲುತ್ತಾಳೆ.  ಎಲ್ಲರೂ ಆಕೆಯನ್ನು “ಹುಚ್ಚಿ”ಎಂದು ಕರೆಯುತ್ತಾರೆ.

ಸತ್ರೂ ಮಣ್ಣು ಮಾರಲು ಬಿಡುವುದಿಲ್ಲ

“ನಾನು,ಸತ್ರೂ ಮಣ್ಣು ಮಾರಲು ಬಿಡುವುದಿಲ್ಲ”ಎಂದು ಪ್ರತಿಭಟಿಸಿದ ಏಕಾಂಗಿ ಹೋರಾಟಗಾರ್ತಿ. ಈಕೆಯ ಕಾಟ ಬಹಳವಾಯಿತೆಂದೋ ಏನೋ ಅದೊಂದು ದಿನ,ರಸ್ತೆಯ ಮಧ್ಯೆ ಹೆಣವಾದಳು.ಬಿಡಲಾರೆ…ಬಿಡಲಾರೆ ಎಂದು ಹೇಳುತ್ತಿದ್ದ ಆ ಹುಚ್ಚಿಯ ದೇಹದ ಮೇಲೆಯೆ ಮಣ್ಣು ತುಂಬಿದ ಲಾರಿಗಳ ಚಕ್ರಗಳು ಸಲೀಸಾಗಿ ಹತ್ತಿಹೋದವು.

“ರಾತ್ರಿಹೊತ್ತು ಹಂಗಾಗಿ ಬುಡ್ತು ಸಾ..ಹಗಲೊತ್ತು ಎಂಗೋ ಕಾಪಾಡುತಿದ್ವಿ…ಹಾಳಾದ್ದು ಮುದುಕಿ,ಉಂಡು ಸುಮ್ಕೆ ಮಕ್ಕಳದು ಬಿಟ್ಟು ,ರೋಡಿಗೆ ಬಂದು ಧಣೇರ ಗಾಡಿಗಳಿಗೆ ಅಡ್ಡಾಕತಾಳ ಅಂದ್ರೆ..?”ಆತ ಹೇಳುತ್ತಲೆ ಇದ್ದ.

ಆಕೆಯದು ಎಂತಹ ಪ್ರತಿಭಟನೆ?

ನೋಡಲು ಫೋಟೋ ಏನಾದರೂ ಇದೆಯಾ..? ಎಂದು ಗೋಡೆಯ ಮೇಲೆ ನೋಡಿದೆ. ಹೊಲ ಮಾರಿದ ಸುದ್ದಿಗೆ ಎದಿಯೊಡೆದು ಸತ್ತವರ ಫೋಟೋಗಳು ಗೋಡೆಯ ತುಂಬಾ ರಾರಾಜಿಸುತ್ತಿದ್ದವು.

 “ನಾ….ಸತ್ರೂ ಮಣ್ಣು ಮಾರಲು ಬಿಡಂಗಿಲ್ಲ” ಅಜ್ಜಿಯ ಕೂಗು ಮಾರ್ದನಿಸುತ್ತಿದೆ.

                  ಬಿ.ಶ್ರೀನಿವಾಸ

 

TAGGED:dinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸೊಂಡೂರಿನ ಕಥನಗಳು.
Share This Article
Twitter Email Copy Link Print
Previous Article ಸೊಂಡೂರಿನ ಕಗ್ಗತ್ತಲೆಯ ಕಥನಗಳು  : ಪಶು ಸಂಗೋಪನೆಯನ್ನೆ ನಂಬಿ ಬದುಕಿದವರು -4
Next Article davanagere ದೋಸಾ ಕಾವಲಿಯಲ್ಲಿ ಮೂಡಿದ ಮತದಾನ ಜಾಗೃತಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ವಕ್ಪ್ ತಿದ್ದುಪಡಿ ಕಾಯ್ದೆನ್ನು ರದ್ದು ಪಡಿಸಿ : ಪ್ರತಿಭಟನೆ

ದಾವಣಗೆರೆ (Davanagere) : ವಕ್ಪ್ ತಿದ್ದುಪಡಿ ಕಾಯ್ದೆನ್ನು ರದ್ದು ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ನೇತೃತ್ವದಲ್ಲಿ…

By Dinamaana Kannada News

ದಾವಣಗೆರೆ ಮಾ.16 ಕ್ಕೆ ರಾಷ್ಟ್ರೀಯ ಲೋಕಾದಾಲತ್

ದಾವಣಗೆರೆ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ…

By Dinamaana Kannada News

Davanagere | ಕಂಪನಿ ನಾಟಕಗಳ ಕಲಾವಿದರಿಗೆ ಶಿಸ್ತಿನ ತರಬೇತಿ ಅಗತ್ಯವಿದೆ : ಪ್ರೊ.ಎಸ್.ಹಾಲಪ್ಪ

ದಾವಣಗೆರೆ (Davanagere): ವೃತ್ತಿರಂಗಭೂಮಿಯು ಪುನರುತ್ಥಾನಗೊಳ್ಳಬೇಕಿದೆ ಎಂದು ಪ್ರತಿಮಾ ಸಭಾದ ಗೌರವಾಧ್ಯಕ್ಷ ಪ್ರೊ.ಎಸ್.ಹಾಲಪ್ಪ ಸಲಹೆ ನೀಡಿದರು. ವೃತ್ತಿ ರಂಗಭೂಮಿ ರಂಗಾಯಣವು ರಾಷ್ಟ್ರೀಯ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?