Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 37: ಮಣ್ಣು ಸೇರಿದ ಜೀವ
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 37: ಮಣ್ಣು ಸೇರಿದ ಜೀವ

Dinamaana Kannada News
Last updated: May 28, 2024 4:25 am
Dinamaana Kannada News
Share
sanduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 28-05-2024

“ಅವ್ವಾ…ಅವ್ವಾ…”ಮತ್ತೆ ಮತ್ತೆ ಕೂಗುತ್ತಿದ್ದಾನೆ ಪೋರ. ಸದಾ ಕೆಮ್ಮುತ್ತಿದ್ದ ಅವಳೀಗ ಕೆಮ್ಮುತ್ತಿಲ್ಲ. ಗಾಬರಿಗೊಂಡ ಹುಡುಗ ಅಪ್ಪನ ಹುಡುಕುತ್ತ ಓಡತೊಡಗಿದ. ಅಳುತ್ತ ಓಡುವ ಹುಡುಗನ ನೋಡಿ ತಮ್ಮ ಮೈಗೆ ಅಂಟಿದ ಕೆಂಪುಧೂಳನ್ನು ಕೊಡವಿಕೊಳ್ಳುವುದರಲ್ಲಿ ಜನ ಮಗ್ನರಾಗಿದ್ದಾರೆ.

ಅಲ್ಲೊಂದು ಗಣಿಧಣಿಗಳ ಸ್ವರ್ಗವಿದೆ (Sanduru Stories)

ಅಲ್ಲೊಂದು ಗಣಿಧಣಿಗಳ ಸ್ವರ್ಗವಿದೆ. ದೊಡ್ಡ ದೊಡ್ಡ ಗುಡ್ಡಗಳನ್ನು ಅನಾಮತ್ತು ಎತ್ತಿ ಹಾಕುವ ರಕ್ಕಸ ಜೆಸಿಬಿ ಯಂತ್ರಗಳೇ ತುಂಬಿರುವ ಲೋಕವದು. ಹ್ಞಾ…ಅಲ್ಲಿ ಅಪ್ಪ ನಿಂತಿದ್ದಾನೆ “ಅಪಾ..ಅಪ್ಪಾ ಅವ್ವ ಮಾತಾಡುವಲ್ಳು”ಕೂಗಿದ.   ಗಣಿಧಣಿಗಳ ಮುಂದೆ ಅಪ್ಪ ಮೊಣಕಾಲೂರಿ ಏನನ್ನೋ ಬೇಡುತ್ತಿದ್ದಾನೆ.  ಆ ಹುಡುಗ  ಈ ಬಾರಿ ಜೋರಾಗಿ ಕೂಗುತ್ತಿದ್ದಾನೆ. “ಅಪ್ಪಾ….ನಿನ್ನ ಹಿಂದೆ ಆ ರಕ್ಕಸ ಯಂತ್ರ ಐತೆ ಇತ್ಲಾಕಡೀಗ್ ಬಾ….” ಮಗನ ನೋಡಿದನಷ್ಟೆ. ಆತನಿಗೇನೂ ಕೇಳಿಸುತ್ತಿಲ್ಲ.

“ಕೊಡ್ತಾರೆ ತಡಕಾ ಮಗಾ… (Sanduru Stories)

“ಕೊಡ್ತಾರೆ ತಡಕಾ ಮಗಾ…ಧಣಿಗಳು ಅಂಗೇನಿಲ್ಲ”ದೂರದಿಂದಲೇ ಕೂಗಿ ಹೇಳುತ್ತಿದ್ದಾನೆ. “ಅಪ್ಪಾ…ಅಪ್ಪಾ..ಸರಕೋ..ನಿನ್ ಹಿಂದೆ ಜೆ ಸಿ ಬಿ…”ಎನ್ನುತ್ತಲೇ ಕುಸಿದು ಕುಳಿತ. ರಕ್ಕಸಯಂತ್ರ ಕಲ್ಲು ಮಣ್ಣಿನೊಂದಿಗೆ  ಅದನ್ನೂ ಎತ್ತಿ ಟಿಪ್ಪರಿಗೆ ಹಾಕುತ್ತಿದೆ. “ಅಪ್ಪಾ…ಅವ್ವಾ…”ಎಂದು ಬಡಬಡಿಸುವ ಆ ಪೋರನ ಮಾತು ಈಗ ಯಾರಿಗೂ ಕೇಳಿಸುತ್ತಿಲ್

ಆಕೆ ತಲೆಯೆತ್ತಿ ನಡೆದಿದ್ದಾಳೆ (Sanduru Stories)

ನಮ್ಮೂರು ನಿಮಗೆ ಗೊತ್ತಲ್ಲ.  ಅದೇ ಬೆಟ್ಟ ಗುಡ್ಡ ಕಾಡು ಮೇಡು,ಹೊಲ ಗದ್ದೆ,ಮಣ್ಣು ಧೂಳು…..ಎಲ್ಲವೂ ಲಾರಿ ಟಿಪ್ಪರುಗಳಲ್ಲಿ ಮಾರಿಕೊಂಡ ಸುದ್ದಿಯಾಯ್ತಲ್ಲ ಅದೇ ಊರು. ನಮ್ಮೂರಿನಲ್ಲೀಗ ಪ್ರಭುಗಳಿಲ್ಲ ಆದರೆ ಅವರ ಕಟೌಟುಗಳಿವೆ.  ಊರಿಗೆ ಊರೇ ಕೆಮ್ಮುತಿಹುದು. ಕೋಳ ತೊಟ್ಟು ಹೋದ ಪ್ರಭುಗಳು ಮೊನ್ನೆ ದಿನ ಕೋರ್ಟಿಗೆ ಬಂದಿದ್ದರು. ಊರ ಹಸಿರು ಗುಡ್ಡ ಬೆಟ್ಟ,ಕಾಡು ಮೇಡು, ಮಣ್ಣು ಮಾರಿಕೊಂಡು ಕೋಳ ತೊಟ್ಟು ನಿಂತವರ ಮುಂದೆ ದೇಹ ಮಾರಿ ಬದುಕು ನೂಕುವ ಆಕೆ ತಲೆಯೆತ್ತಿ ನಡೆದಿದ್ದಾಳೆ.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-34 ಮಗು, ತಾಯಿ ಮತ್ತು ಸಾವು
ಸ್ಮೃತಿಗೆ ಸರಿದವರು (Sanduru Stories)

ಈ ಹಿಂದೆಯೂ ಅವರು ತಮ್ಮ ಹಳ್ಳಿಯ ದುಸ್ಥಿತಿಯ ಕುರಿತು ಆರಿಸಿ ಕಳಿಸಿದ ಎಮ್ಮೆಲ್ಲೆ ಮುಂದೆ ಅಲವತ್ತುಕೊಂಡಿದ್ದರು. “ನಿಮ್ಮೂರು ಒಂದೇ ಏನ್ ನನಿಗೆ ?” ಗದರಿಸಿದ್ದನಾತ. ಆಗ ಹಚ್ಚ ಹಸಿರು,ಕಾಡು ಬೆಟ್ಟ ಗುಡ್ಡಗಳು ಹಾಗೇ ಇದ್ದವು.  ಮೊನ್ನೆ ರೊಕ್ಕದ ಎಲೆಕ್ಷನ್ನಾಯಿತಲ್ಲ, ಹಳಬ ಸೋತು ಹೋದ. ಈಗ ಗಣಿ ಧಣಿ ಎಮ್ಮೆಲ್ಲೆ.     ಊರ ಸಮಸ್ಯೆ ಬೆಂಗಳೂರಿಗೆ ಹೋಗಿ ಹೇಳಿಯೇ ಸೈ ಎಂದು ತಂಡವೊಂದು ಹೊರಟಿತು. ಹೋಗ್ಹೋಗುತ್ತಲೆ ಹುಡುಗರು ಬಂದು ಬಂಗಲೆಗೆ ಕರೆದುಕೊಂಡು ಹೋದರು. ಹೊಟ್ಟೆ ತುಂಬ ರುಚಿ ರುಚಿಯಾದ ಊಟ ತಿಂಡಿ ಕೊಡಿಸಿದರು.

ಕಣ್ಣ ತುಂಬ ಗಣಿಧಣಿ ಕಟೌಟು (Sanduru Stories)

ಊರ ಜನರ ಬವಣೆ…ಬರ..ಹೇಳಿಕೊಳ್ಳೋದಿಕ್ಕೆ ಆಗಲಿಲ್ಲ. ಮುಂಜಾನಿಯಿಂದ ಬೆಂಗಳೂರನೆಲ್ಲ ತೋರಿಸಿದರು. ಆಗ ಕೂಡ ಊರು ನೆನಪಾಗಲಿಲ್ಲ. ರಾತ್ರಿ ಐನೂರರ ಗಾಂಧಿ ಕೈಗೆ ಬಂದಾಗಲಂತೂ ಊರ ನೆನಪು ಮಕ್ಕಳ ನೆನಪು ಮಾಸಿ, ಕಣ್ಣ ತುಂಬ ಗಣಿಧಣಿ ಕಟೌಟು ತುಂಬಿತು.

ಅವರು ಊರಿಗೆ ಮರಳಿದರು. ರಾತ್ರಿಯಿದ್ದ ಬೆಟ್ಟಗಳು ಮುಂಜಾನೆ ಖಾಲಿಯಾಗಿದ್ದವು. ಕುರಿ , ಮ್ಯಾಕೆಮರಿ ಜಿಗದಾಡಿ ಹಿಕ್ಕೆಹಾಕಿದ ಜಾಗಗಳು, ಸಾಲಿಗುಡಿಯ ಅಕ್ಷರಗಳು ಅದಿರು ಹೊತ್ತು ಟಿಪ್ಪರುಗಳಲ್ಲಿ ದೇಶ ವಿದೇಶಗಳಿಗೆ ಸಾಗುತ್ತಲೇ ಇವೆ.

ರೊಕ್ಕದ ಎಮ್ಮೆಲ್ಲೆ….ಐಷಾರಾಮಿ ಬಂಗಲೆ,  ಬಸ್ಸು,ಊಟ ……ಗುಣಗಾನ ನಡೆಯುತ್ತಲೇ ಇದೆ.

               ಬಿ.ಶ್ರೀನಿವಾಸ

TAGGED:Davanagere Newsdinamaana.comLatest Kannada NewsSanduru sotriesಕನ್ನಡ ಸುದ್ದಿ ದಿನಮಾನ.ಕಾಂದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article davanagere ಚನ್ನಗಿರಿ ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ : ಸಿಐಡಿಗೆ ಹಸ್ತಾಂತರ
Next Article Waqf davanagere ವಕ್ಫ್ ಸಂಸ್ಥೆಗಳು ಮಾದರಿ ನಿಯಮಾವಳಿ ಅನುಷ್ಠಾನಕ್ಕೆ ಸೂಚನೆ  

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಿದ್ದತಾ ಸಭೆ : ಎಲ್ಲಾ ಇಲಾಖೆಯಲ್ಲಿಯು ಕನ್ನಡ ಬಳಕೆ ಕಡ್ಡಾಯ

ದಾವಣಗೆರೆ,ಅ .19 (Davanagere) : ಜಿಲ್ಲಾಡಳಿತದಿಂದ ನವೆಂಬರ್ 1 ರಂದು ನಡೆಯುವ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾ…

By Dinamaana Kannada News

ಕೋರ್ಟಿನ ಗಾಂಧಿ

ಯಾರ ಜಪ್ತಿಗೂ ಸಿಗದ ಸೂರ್ಯ ಚಂದ್ರರೇ ಪುಣ್ಯವಂತರು ಸುಟ್ಟ ಗಾಯ ಸುಳ್ಳೆಂದು ಇನ್ನಷ್ಟೇ ಸಾಬೀತಾಗಿ ಘಮಘಮಿಸಲೇಬೇಕೆಂದೇನಿಲ್ಲ ಅರಳಿದರೂ ಸಾಕು ನ್ಯಾಯ…

By Dinamaana Kannada News

ಸೆ.3 ರಿಂದ 14ರ ವರೆಗೆ ‘ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್’ ಶೀರ್ಷಿಕೆಯಡಿ ಸೀರತ್ ಅಭಿಯಾನ-2025

ಹರಿಹರ: ಪ್ರವಾದಿ ಮುಹಮ್ಮದ್‌ರವರ ಸರ್ವಕಾಲಿಕ ಬೋಧನೆಗಳನ್ನು ಪ್ರಚುರಪಡಿಸಲು ಜಮಾ ಅತೆ ಇಸ್ಲಾಮಿ ಹಿಂದ್ ಮತ್ತು ರಾಬಿತಾ-ಎ-ಮಿಲ್ಲತ್ ವತಿಯಿಂದ ತಾಲ್ಲೂಕಿನಲ್ಲಿ ಸೆ.3…

By Dinamaana Kannada News

You Might Also Like

CEO Gitte Madhava Vitthal Rao
ತಾಜಾ ಸುದ್ದಿ

ಕುಷ್ಠರೋಗ ನಿವಾರಣೆಗೆ ಅರಿವು ಮೂಡಿಸಿ : ಸಿಇಓ ಗಿತ್ತೆ ಮಾಧವ ವಿಠಲ ರಾವ್

By Dinamaana Kannada News
Davanagere
ತಾಜಾ ಸುದ್ದಿ

ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡಿದರೆ ದೂರು ನೀಡಿ : ಎಸ್ಪಿ

By Dinamaana Kannada News
vinaykumara G B
ತಾಜಾ ಸುದ್ದಿ

ಯಾರೂ ಕರೆದು ಅವಕಾಶ ಕೊಡಲ್ಲ, ನಾವೇ ಸೃಷ್ಟಿಸಿಕೊಳ್ಳಬೇಕು: ವಿನಯ್ ಕುಮಾರ್  

By Dinamaana Kannada News
Davanagere crime
ಅಪರಾಧ ಸುದ್ದಿತಾಜಾ ಸುದ್ದಿ

ಬೈಕ್ ಕಳ್ಳತನ ಪ್ರಕರಣ : ಅಂತರ ಜಿಲ್ಲಾ ಕಳ್ಳರ ಬಂಧನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?