Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 63 : ಎಲೆಕ್ಷನ್ನು….
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 63 : ಎಲೆಕ್ಷನ್ನು….

Dinamaana Kannada News
Last updated: June 23, 2024 6:17 am
Dinamaana Kannada News
Share
SANDURU
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 23-06-2024

ಕೆಂಪು ಧೂಳು ಬಿಟ್ಟು ಹೋದವರು.. (Sanduru Stories)

ಕೆಂಪು ಧೂಳು ಬಿಟ್ಟು ಹೋದವರು ಮತ್ತೆ ಊರಿಗೆ ಬರದೇ ಅದೆಷ್ಟೋ ದಿನಗಳಾಗಿ ಹೋಗಿವೆ.  ನಿನ್ನೆ ಮೊನ್ನೆಯವರೆಗೂ ಸಂಡೂರಿನ ರಾಜ ಮನೆತನದಲ್ಲಿ ಕೆಲಸಕ್ಕಿದ್ದವರೆಲ್ಲ ಗಣಿ-ಧಣಿಗಳಾಗಿ ಐದೂ ಬೆರಳುಗಳಿಗೆ ಉಂಗುರ ತೊಟ್ಟು , ಚಿತ್ರ ವಿಚಿತ್ರವೆನಿಸುವ ಸೇದೋ ಹಗ್ಗ ನೆನಪಿಸುವ ಕೊರಳಸರ ಹಾಕಿಕೊಂಡು, ಇನ್ನೋವಾ, ಫಾರ್ಚ್ಯೂನ ರ್ಕಾರುಗಳಲ್ಲಿ ಓಡಾಡುವುದನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡವರು ಅದೆಷ್ಟೋ ಮಂದಿಯಿದ್ದರು.

ಆಗ್ಲೇ ಎಲೆಕ್ಸನ್ನು ಬಂದುಬುಡ್ತಾ..? (Sanduru Stories)

ಹೊಲಕ್ಕೋಗನೆಂದರೆ ಹೊಲಗಳಿಲ್ಲ. ಎಲ್ಲ ಹೊಲಗಳು ಮುದುರಿಕೊಂಡು ನೋಟುಗಳಾಗಿ ಕಾರುಗಳಲ್ಲಿ ಅವಿತು ಕುಳಿತಂತೆ ಭಾಸವಾಗುತ್ತಿದೆ. ಕೆಂಪು ಧೂಳಿನಲ್ಲಿ ಬಿಳಿಬಣ್ಣದ ಕಾರುಗಳು ಓಡಾಡುವುದನ್ನು ಕಂಡ ಕಲ್ಲಹಳ್ಳಿಯ ಮಾರಜ್ಜ”ಆಗ್ಲೇ ಎಲೆಕ್ಸನ್ನು ಬಂದುಬುಡ್ತಾ..? ” ಆಸೆ ಗರಿಗೆದರಿ ಕೇಳಿಯೇಬಿಟ್ಟ.

“ಏಯ್.. ತಗಾ, ಇನ್ನೂ ಐದ್ವರ್ಸ ಆಗಿಲ್ಲ.ಬೇನಳ್ಳಿ ದುರುಗಮ್ಮನ ಜಾತ್ರೀಗ್ ಆಗಿದ್ದು. ಮೂರೊರುಸನು ಆಗಿಲ್ಲ ತಗಿ ಮತ್ತೆಂಥ ಎಲೆಕ್ಸನ್ನು?”ಎಂದಳಾಕೆ.

ಒಂದು ಪಾರ್ಟಿಯ ಧಣಿ ಟೀವಿ ಕೊಡಿಸಿದ. ಇನ್ನೊಂದು ಪಾರ್ಟಿಯ ಧಣಿ ಸಿಡಿ ಪ್ಲೇಯರೂ ಕೊಡಿಸಿದ. ಮತ್ತೊಬ್ಬನ್ಯಾರೋ ಇಂಡಿಪೆಂಡಂಟಂತೆ ಅತ್ತೂ ಕರೆದು ತಾನೂ ಪಾರ್ಟಿಗಾಗಿ ದುಡಿದದ್ದು,ಅವರು ಹೊರಗೆ ಹಾಕಿದ್ದನ್ನು ಹೇಳಿ ಕಣ್ಣೀರು ಸುರಿಸಿ ಹೇಳಿದ್ದಲ್ಲದೆ, ತಾನು ಗೆದ್ದು ಬಂದರೆ ಎಲ್ಲರಿಗೂ ‘ಗಾಡಿ’ಕೊಡಿಸುವ ಭರವಸೆಯನ್ನು ನೀಡಿದ. ಹಂಗೇ ಹೋಗಬಾರದೆಂದು ಟಿಫನ್ನು ಕ್ಯಾರಿಯರ್ರುಗಳೆಂದು ಓಟಿಗೊಂದು  ಐನೂರರ, ಸಾವಿರದ ರೂಪಾಯಿ ನೋಟಿನ ಗಾಂಧಿ ತಾತನನ್ನು ಕೊಟ್ಟು ಹೋಗಿದ್ದ.

ದಮ್ಮು ಜಾಸ್ತಿಯಾಗಿ ಉಸಿರಾಟ ಕಷ್ಟ …(Sanduru Stories)

ಈಗ ಎಲ್ಲರ ಮನೆಯಲ್ಲೂ ಟೀವಿಗಳು ಮಾತಾಡ್ತಿವೆ. ಹರೆಯದ ಹುಡುಗರಿಗೆ ಪಾರ್ಶ್ವವಾಯು ಹೊಡೆದಿದೆ. “ಅಯ್ಯೋ ಕುಮಾರಸ್ವಾಮಿ…ನಿನಗ ಕಾಯಿ,ಕರ್ಪೂರ ದೀಪ ಹಚ್ಚಿದಿನಲ್ಲೋ ಇಂಥ ಅನ್ಯಾಯ ,ನೀನ ಮಾಡಬಹುದೇನೋ..?” ಎಂದು ಗೂಳಿಯಂತಿದ್ದ ಮಗ ನೆಲಕಚ್ಚಿದ್ದ ಕಂಡು ಎದೆ ಎದೆ ಬಡಕೊಂಡು ಅಳುತ್ತಿದ್ದಾಳೆ. ಆತನಿಗೆ ದಮ್ಮು ಜಾಸ್ತಿಯಾಗಿ ಉಸಿರಾಟ ಕಷ್ಟವಾಗುತ್ತಿದೆ.

READ ALSO : SANDURU STORIES : ಸೊಂಡೂರಿನ ಕಗ್ಗತ್ತಲೆಯ ಕಥನಗಳು : ಮುಂಜಾನೆಯ ಕೊಲೆ-3

ಭೂಮಿ ಬಗಿದ್ರೆ ಅವ್ವನ ಹೊಟ್ಟಿ ಬಗೆದಂಗೆ.. …(Sanduru Stories)

ಯಾರೋ ಪೊಲೀಸರು ಗಣಿಧಣಿಗಳನ್ನು ಹಿಡ್ಕೊಂಡೋದ್ರಂತೆ. ಗುಡ್ಡ-ಕಾಡು ಮೇಡುಗಳನೆಲ್ಲಾ ಇಂಗೆ ಕಡಿಬಾರದಿತ್ತಂತೆ. “ಆ..ಹ್ಞಾ..ಹ್ಞಾ..”ಮುದುಕ ವಿಲಕ್ಷಣವಾಗಿ ನಕ್ಕ. “ನಾನೇಳ್ಲಿಲ್ಲ ಅವತ್ತು,…ಬ್ಯಾಡ್ರಲೇ…ಬ್ಯಾಡ್ರಲೇ ಭೂಮ್ತಾಯಿನ ಬಗೀ ಬೇಡ್ರಲೆ ಅಂತ.ಕೇಳಿದ್ರಾ…ಅವ್ವನ ಹೊಟ್ಟಿ ಬಗೆದಂಗ ಬಗ್ದಾಕಿದ್ರೂ  ಈ ಸೂ….ಮಕ್ಕಳು ಥೂ..”

ಕ್ಯಾಕರಿಸಿ ಉಗುಳಿದ. ಉಗುಳಿದ ಸದ್ದು ಬೋಳುಗುಡ್ಡಗಳಲ್ಲಿ ಪ್ರತಿಧ್ವನಿಸಿ ,ಸ್ತಬ್ಧವಾಯಿತು.

 ಬಿ.ಶ್ರೀನಿವಾಸ

ದಾವಣಗೆರೆ

TAGGED:Davanagere Newsdinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article karnataka bank davanagere ಕೃತಕ ಬುದ್ಧಿಮತ್ತೆ ಬಳಕೆ : ಬ್ಯಾಂಕಿಂಗ್ ಉದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆ
Next Article DAVANAGERE ರೈಲಿನಲ್ಲಿ   34 ಲಕ್ಷ ‌ಮೌಲ್ಯದ ಗಾಂಜಾ‌‌ ಪತ್ತೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ದಾವಣಗೆರೆ.ಸೆ.12 (Davangere District) : ಒಳಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಬೃಹತ್…

By Dinamaana Kannada News

ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ : ಬಿ.ವೈ. ವಿಜಯೇಂದ್ರ

ದಾವಣಗೆರೆ (Davanagere): ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು…

By Dinamaana Kannada News

ಬೇಸಿಗೆ ಕಾಲದಲ್ಲಿ ಅಲರ್ಜಿ ಹಾಗೂ ದಮ್ಮಿನ ರೋಗಿಗಳ ವಿಶೇಷ ಕಾಳಜಿ ಅವಶ್ಯ

ಕಳೆದ ಹಲವು ದಿನಗಳಿಂದ ಬಿಸಿಲಿನ ಪ್ರಕೋಪ ಮಿತಿ ಮೀರಿದ್ದು 40 ಡಿಗ್ರಿ ದಾಟುತ್ತಿದೆ, ಇಂತಹ ಸಮಯದಲ್ಲಿ ಉಬ್ಬಸದ ಹಾಗೂ ಡಸ್ಟ್…

By Dinamaana Kannada News

You Might Also Like

Two Wheeler (Bike) Repair
ತಾಜಾ ಸುದ್ದಿ

ದಾವಣಗೆರೆ | ದ್ವಿಚಕ್ರ ವಾಹನ(ಬೈಕ್) ರಿಪೇರಿ ಮತ್ತು ಸೇವೆ ಉಚಿತ ತರಬೇತಿ : ಜುಲೈ 23 ಕೊನೆಯ ದಿನ

By Dinamaana Kannada News
Youth Congress
ತಾಜಾ ಸುದ್ದಿ

ದಾವಣಗೆರೆ | ಜಾತ್ಯತೀತ , ಸಮಾಜವಾದಿ ಪದ ತೆಗೆಯುವ ಹೇಳಿಕೆ : ಆರ್‍ಎಸ್‍ಎಸ್ ಮುಖಂಡ ವಿರುದ್ದ ಕ್ರಮಕ್ಕೆ ಒತ್ತಾಯ

By Dinamaana Kannada News
MP visits STPI Bengaluru
ತಾಜಾ ಸುದ್ದಿ

ದಾವಣಗೆರೆ | ಸಂಸದರಿಂದ ಎಸ್‌ಟಿಪಿಐ ಬೆಂಗಳೂರು ಭೇಟಿ : ಐಟಿವಲಯಕ್ಕೆ ಹೊಸ ಉತ್ತೇಜನ

By Dinamaana Kannada News
ದಾವಣಗೆರೆ
ತಾಜಾ ಸುದ್ದಿ

ದಾವಣಗೆರೆ | ಆತ್ಮಹತ್ಯೆಗೆ ಯತ್ನ : ತಾಯಿ ಮತ್ತು  ಮಗು ರಕ್ಷಿಸಿದ 112 ಹೊಯ್ಸಳ ಸಿಬ್ಬಂದಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?