Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ರಾಜಕೀಯ > DAVANAGERE : ಸಿದ್ದು (Siddaramaiah) ಈಗ ಔಟ್ ಆಫ್  ಡೇಂಜರ್?
ರಾಜಕೀಯ

DAVANAGERE : ಸಿದ್ದು (Siddaramaiah) ಈಗ ಔಟ್ ಆಫ್  ಡೇಂಜರ್?

Dinamaana Kannada News
Last updated: August 12, 2024 4:54 am
Dinamaana Kannada News
Share
davanagere
ರಾಜಕೀಯ ವಿಶ್ಲೇಷಣೆ
SHARE

Kannada News | Dinamaana.com | 12-08-2024

ಕಳೆದ ವಾರ ದಿಲ್ಲಿಗೆ ಹೋದ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರಂತೆ.

ಮುಡಾ ಹಗರಣದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ಷೋಕಾಸ್ ನೋಟೀಸ್ ಕೊಟ್ಟರಲ್ಲ? ಈ ಬೆಳವಣಿಗೆ ಇನ್ನಷ್ಟು ಮುಂದಕ್ಕೆ ಹೋಗಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಸನ್ನಿವೇಶ ಸೃಷ್ಟಿಯಾದರೆ ಏನು ಗತಿ? ಅಂತ ಅವರು ಕೇಳಿದಾಗ, ಇಲ್ಲ, ಹಾಗಾಗುತ್ತದೆ ಅನ್ನಿಸುವುದಿಲ್ಲ. ಸಿದ್ಧರಾಮಯ್ಯ ಅವರು ರಾಜೀನಾಮೆ ಕೊಡುವ ಸನ್ನಿವೇಶ ಉದ್ಭವವಾಗುವುದಿಲ್ಲ ಎಂದರಂತೆ (Mallikarjuna Kharge) ಮಲ್ಲಿಕಾರ್ಜುನ ಖರ್ಗೆ.

ಆದರೂ ಪಟ್ಟು ಬಿಡದ  ಈ ನಾಯಕರು: ಸಿದ್ಧರಾಮಯ್ಯ ಅವರು ರಾಜೀನಾಮೆ  ಕೊಡುವ ಸನ್ನಿವೇಶ ಸೃಷ್ಟಿಯಾಗದಿದ್ದರೆ ಸರಿ, ಆದರೆ ನಮ್ಮ ಚಿಂತೆ ಎಂದರೆ ಸಿದ್ಧರಾಮಯ್ಯ  ರಾಜೀನಾಮೆ ಕೊಡುವುದು ಅನಿವಾರ್ಯವಾದರೆ‌ ಮುಂದೇನು ಅನ್ನುವುದು. ಈಗಿರುವ ಮಾಹಿತಿಯ ಪ್ರಕಾರ,ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಕೆಳಗಿಳಿದರೆ ನಾವೇ ಸಿಎಂ ಆಗಬೇಕು ಅಂತ ಕರ್ನಾಟಕದ ನಾಲ್ಕೈದು ಮಂದಿ ನಾಯಕರು ಬಯಸುತ್ತಿದ್ದಾರೆ. ಆದರೆ ಪಕ್ಷದ ಬಹುತೇಕರು:  ಅಂತಹ ಪ್ರಸಂಗ ಉದ್ಭವಿಸಿದರೆ  ನೀವೇ ಮುಖ್ಯಮಂತ್ರಿ ಪಟ್ಟಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ. ಇದಕ್ಕೆ‌ಕಾರಣವೂ ಇದೆ.

ಮೊದಲನೆಯದಾಗಿ ನೀವು ಅತ್ಯಂತ ಹಿರಿಯ ನಾಯಕರು. ಹೀಗಾಗಿ ನಿಮ್ಮ ನಾಯಕತ್ವವನ್ನು ಎಲ್ಲರೂ ಒಪ್ಪುತ್ತಾರೆ. ಎರಡನೆಯದಾಗಿ, ದಕ್ಷ ಆಡಳಿತಗಾರರು. ಇದೇ ರೀತಿ ನೀವು ಮುಖ್ಯಮಂತ್ರಿಯಾದರೆ ವಾಮಮಾರ್ಗದಿಂದ  ನಿಮ್ಮನ್ನಿಳಿಸಲು  ಬಿಜೆಪಿ ವರಿಷ್ಟರು ಬಯಸುವುದಿಲ್ಲ.  ಹೀಗಾಗಿ ಸಿದ್ಧರಾಮಯ್ಯನವರು    ಇಳಿಯುವುದು ಅನಿವಾರ್ಯವಾದರೆ‌ ನೀವು ಕರ್ನಾಟಕಕ್ಕೆ ಬರಲು  ಸಜ್ಜಾಗಿ ಅಂತ ಹೇಳಿದ್ದಾರೆ.  ಆದರೆ ತಮ್ಮ ಮಾತಿಗೆ ಖರ್ಗೆಯವರು ಆಸಕ್ತಿ ತೋರದೆ ಹೋದಾಗ, ಸಾರ್ಒಂದು ವೇಳೆ ಅಂತಹ  ಸನ್ನಿವೇಶ ಉದ್ಭವವಾದರೆ ನೀವು ಕರ್ನಾಟಕಕ್ಕೆ  ಬನ್ನಿ.  ಇಲ್ಲ ಅಂದರೆ ನನಗೆ ಒಂದು ಅವಕಾಶ ಕೊಡಿಸಲು ಯತ್ನಿಸಿ. ನಾನು ದಶಕಗಳ ಕಾಲದಿಂದ ರಾಜಕಾರಣ ಮಾಡಿದ್ದೇನೆ.ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ.ಇದು ಕೊನೆಯ ಅವಕಾಶ.ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ನನ್ನ ಹೆಸರಿಗೆ  ಬಲ ತುಂಬಿ ಅಂತ ಈ ನಾಯಕರು ಹೇಳಿ ಬಂದರಂತೆ.

ಸಿದ್ದು (Siddaramaiah) ಅಪಾಯದಿಂದ ಪಾರಾದರಾ?

ಈ ಮಧ್ಯೆ ರಾಜ್ಯಪಾಲರ ಷೋಕಾಸ್ ನೋಟೀಸ್  ಪ್ರಕರಣದ ನಂತರ ಸಿಎಂ ಸಿದ್ದರಾಮಯ್ಯ ಸುತ್ತ  ಆವರಿಸಿದ್ದ ಆತಂಕದ ಕಾರ್ಮೋಡ ಮೆಲ್ಲಗೆ ಕರಗುತ್ತಿದೆ.  ಇದಕ್ಕೆ ರಾಜ್ಯಪಾಲರ ವೇಗ ತಗ್ಗಿದ್ದು   ಒಂದು ಕಾರಣವಾದರೆ, ರಾಜ್ಯಪಾಲರ ಕ್ರಮದ ವಿರುದ್ದ ಹೋರಾಡಲು ಸಿದ್ದರಾಮಯ್ಯ ಅವರಿಗೆ ಸಿಗುತ್ತಿರುವ ಅಸ್ತ್ರಗಳು ಮತ್ತೊಂದು ಕಾರಣ.

ಅಂದ ಹಾಗೆ ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ, ನಿರಾಣಿ ಮತ್ತು ಜೊಲ್ಲೆ ವಿರುದ್ದ ವಿಚಾರಣೆಗೆ ಅನುಮತಿ  ನೀಡಲು ಕೋರಿ  ಸಲ್ಲಿಕೆಯಾಗಿದ್ದ  ಮನವಿಗಳು ರಾಜಭವನದಲ್ಲಿ ಕೊಳೆಯುತ್ತಿವೆ. ಆದರೆ ಜೂನ್ 26 ರಂದು ಮಂಡನೆಯಾದ  ಟಿ.ಜೆ.ಅಬ್ರಹಾಂ ದೂರಿಗೆ  ಪ್ರತಿಯಾಗಿ ಮರುದಿನವೇ ಸಿದ್ದರಾಮಯ್ಯ ಅವರಿಗೆ ಷೋಕಾಸ್ ನೋಟೀಸ್  ಜಾರಿಯಾಗುತ್ತದೆ. ಇದರರ್ಥ ಏನು?

ಒಂದು ವೇಳೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದರೆ ಈ ಅಂಶವನ್ನೇ ಹಿಡಿದುಕೊಂಡು ನ್ಯಾಯಾಲಯದ ಮೆಟ್ಟಿಲೇರಬಹುದು.ಮತ್ತು ಸಿಎಂ ವಿರುದ್ದದ ವಿಚಾರಣೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮಕ್ಕೆ ತಡೆಯಾಜ್ಞೆ ಪಡೆಯಬಹುದು  ಎಂಬುದು ಸಿದ್ದರಾಮಯ್ಯ ಆಪ್ತರ ವಿಶ್ವಾಸ. ಇದೇ ರೀತಿ ಇಂತಹ ಪ್ರಕರಣಗಳಲ್ಲಿ ಪತಿ-ಪತ್ನಿಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು  ಅಂತ ನ್ಯಾಯಾಲಯ ದಶಕಗಳಷ್ಟು  ಹಿಂದೆಯೇ ತೀರ್ಪು  ನೀಡಿದೆ.

ಮುಡಾ ಪ್ರಕರಣದಲ್ಲೂ ಅಷ್ಟೇ.ಇಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ,ಅವರ ಸಹೋದರ ಕಾಣಿಕೆ ನೀಡಿದ ಭೂಮಿಯನ್ನು ಮುಡಾ ಸ್ವಾಧೀನಪಡಿಸಿಕೊಂಡಿದೆ.ಮತ್ತು ಇದಕ್ಕೆ ಪ್ರತಿಯಾಗಿ ನಿವೇಶನಗಳನ್ನು ನೀಡಿದೆ. ಹೀಗೆ ಅವರಿಗೆ ನಿವೇಶನಗಳನ್ನು ನೀಡುವುದರಲ್ಲಿ  ಸಿದ್ದರಾಮಯ್ಯ ಅವರ ಪಾತ್ರವೇನಿದೆ? ಅವರೇನಾದರೂ ಕಾನೂನು ಬಾಹಿರವಾಗಿ ತಮ್ಮ ಪತ್ನಿಗೆ ನಿವೇಶನ ನೀಡಲು ಶಿಫಾರಸು ಮಾಡಿದ್ದಾರೆಯೇ?ಅಥವಾ ಅವರು ರಾಜ್ಯದ ಉಪಮುಖ್ಯಮಂತ್ರಿ,ಮುಖ್ಯಮಂತ್ರಿಯಾಗಿದ್ದಾಗ ಈ ನಿವೇಶನಗಳನ್ನು ಮುಡಾ ಮಂಜೂರು ಮಾಡಿದೆಯೇ? ಹೀಗಿದ್ದ ಮೇಲೆ ಈ ಪ್ರಕರಣಕ್ಕೂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ ಅನ್ನುವಂತಹ ಪ್ರಶ್ನೆಗಳನ್ನು ನ್ಯಾಯಾಲಯ ಕೇಳಿದರೆ ಉತ್ತರಿಸುವುದು ಕಷ್ಟ.

ಇಲ್ಲ,ಇಲ್ಲ ಸಿದ್ದರಾಮಯ್ಯ ಪ್ರಭಾವಿಯಾಗಿದ್ದ ಕಾರಣಕ್ಕೇ ಅವರ ಪತ್ನಿಗೆ ನಿವೇಶನಗಳನ್ನು ನೀಡಲಾಗಿದೆ ಎಂದಾದರೆ ಸಿದ್ದರಾಮಯ್ಯ ಅವರು ಯಾರ ಮೇಲೆ,ಯಾವ ಸಂದರ್ಭದಲ್ಲಿ ಪ್ರಭಾವ ಬೀರಿದರು ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ.  ಆ ದೃಷ್ಟಿಯಿಂದ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದರೂ  ನ್ಯಾಯಾಲಯ ಅದನ್ನು ಒಪ್ಪುವುದು ಕಷ್ಟ.

ಹೀಗಾಗಿ ಸಿದ್ದರಾಮಯ್ಯ ಈಗ ಔಟ್ ಆಫ್ ಡೇಂಜರ್ (Out of danger)ಎಂಬುದು ಅವರ ಆಪ್ತರ ಮಾತು. ಹೀಗಾಗಿಯೇ ಹದಿನೈದು ದಿನಗಳ ಹಿಂದೆ ವಿಪರೀತ ಆ್ಯಕ್ಟೀವ್ ಆಗಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Governor Thawarchand Gehlot) ಈಗ ಕೂಲ್ ಆಗಿದ್ದಾರೆ.ಅಷ್ಟೇ ಅಲ್ಲ,ವಿಚಾರಣೆಗೆ ಅನುಮತಿ ನೀಡಿದರೆ ಎದುರಾಗುವ ಸಾಧಕ-ಭಾದಕಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಸಿದ್ದು ಆಪ್ತರಿಗೆ ಬಂದಿರುವ ಮಾಹಿತಿಯ ಪ್ರಕಾರ,ಹದಿನೈದು ದಿನಗಳ ಹಿಂದೆ ಈ ವಿಷಯದಲ್ಲಿ ರಾಜ್ಯಪಾಲರ ಮೇಲಿದ್ದ ದಿಲ್ಲಿಯ ಒತ್ತಡ ಕಡಿಮೆಯಾಗಿದೆ.

ಸಧ್ಯಕ್ಕಿಲ್ಲ ಸಂಪುಟ ಸರ್ಜರಿ (CM Siddaramaiah)

ಇನ್ನು ಸಿಎಂ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸಣ್ಣದೊಂದು ಸರ್ಜರಿ ಮಾಡಲು ಬಯಸಿದ್ದ ಕಾಂಗ್ರೆಸ್ ವರಿಷ್ಟರು ಈಗ ಆ ಪ್ರಪೋಸಲ್ಲಿನಿಂದ ಹಿಂದೆ ಸರಿದಿದ್ದಾರೆ. (CM Siddaramaiah) ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರೋಧ ವ್ಯಕ್ತಪಡಿಸಿದ್ದೇ ಇದಕ್ಕೆ ಮುಖ್ಯ ಕಾರಣ.

ಅಂದ ಹಾಗೆ ಮೊನ್ನೆ ಕರ್ನಾಟಕಕ್ಕೆ ಬಂದಿದ್ದ ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಸಿದ್ಧರಾಮಯ್ಯ ಅವರ ಜತೆ ಮಾತನಾಡಿದ್ದಾರೆ.ಇತ್ತೀಚಿನ ದಿನಗಳಲ್ಲಿ  ನಾಲ್ಕೈದು ಮಂದಿ ಸಚಿವರ ಮೇಲೆ ಪದೇ ಪದೇ ದೂರುಗಳು ಬರುತ್ತಿವೆ.ಹೀಗಾಗಿ ಇವರನ್ನು ಸಂಪುಟದಿಂದ‌ ಕೈ ಬಿಟ್ಟು ಬೇರೆಯವರಿಗೆ ಅವಕಾಶ ಕೊಡೋಣ.

ಹಾಗಾದಾಗ ಪಕ್ಷ ಭ್ರಷ್ಟರನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ.ಮತ್ಗು ಉಳಿದವರಿಗೂ ಇದು ಎಚ್ಚರಿಕೆಯಾಗುತ್ತದೆ ಎಂಬುದು ಈ ನಾಯಕರ ಮಾತು.ಆದರೆ ಅವರಾಡಿದ ಮಾತುಗಳನ್ನು ಒಪ್ಪದ ಸಿದ್ದರಾಮಯ್ಯ’ನೋ,ನೋ, ಅದೆಲ್ಲ ಸಾಧ್ಯವಿಲ್ಲ. ಭ್ರಷ್ಟಾಚಾರದ ಆರೋಪ ಬಂದಿದೆ ಅಂತ ಕೆಲ ಮಂತ್ರಿಗಳನ್ನು ಟಾರ್ಗೆಟ್ ಮಾಡಿದರೆ ಸಾಲದು.ಭ್ರಷ್ಟಾಚಾರದ ಆರೋಪ ಯಾರ್ಯಾರ ಮೇಲಿದೆ ಅನ್ನುವುದನ್ನು ಪರಿಶೀಲಿಸಿ ಮೇಲು ಹಂತದಲ್ಲಿರುವವರ ಮೇಲೆ ಮೊದಲು ಕ್ರಮ ತೆಗೆದುಕೊಳ್ಳಬೇಕು.

ಅರ್ಥಾತ್,ಅವರನ್ನು ಸಂಪುಟದಿಂದ ಕೈ ಬಿಡಬೇಕು.ಹಾಗೆ ಮಾಡಲು ಸಾಧ್ಯವಾ?ಅಂತ ಯೋಚಿಸಿ.ಯೆಸ್ ಅನ್ನುವುದಾದರೆ ಸಂಪುಟಕ್ಕೆ ಮೇಜರ್ ಸರ್ಜರಿಯನ್ನೇ ಮಾಡಬಹುದು ಎಂದರು. ಯಾವಾಗ ಸಿದ್ದರಾಮಯ್ಯ ಈ ಮಾತನಾಡಿದರೋ? ಆಗ  ಪರಿಸ್ಥಿತಿ ಎಲ್ಲಿಗೆ ತಲುಪಬಹುದು? ಸಂಪುಟದಿಂದ ಗೇಟ್ ಪಾಸ್  ಪಡೆಯುವ ಪ್ರಬಲ ಮಂತ್ರಿಗಳು  ಯಾರು? ಅಂತ ಊಹಿಸಿದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು‌ ಕೆ.ಸಿ.ವೇಣುಗೋಪಾಲ್ ಸುಮ್ಮನಾದರಂತೆ.

ಯಡಿಯೂರಪ್ಪ-ಜೋಷಿ ಫುಲ್ ಕ್ಲೋಸು (Yeddyurappa-Joshi)

ಈ ಮಧ್ಯೆ ಮಾಜಿ‌ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ನಡುವಣ ವೈಮನಸ್ಸು  ಮಾಯವಾಗಿದೆ. ಇದಕ್ಕೆ ಕಾರಣವಾಗಿರುವುದು ಮೈಸೂರು ಚಲೋ ಪಾದಯಾತ್ರೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮೂಡಾದಲ್ಲಾದ ಹಗರಣಗಳ ಹಿನ್ನೆಲೆಯಲ್ಲಿ ಇಂತದೊಂದು ಪಾದಯಾತ್ರೆ ಮಾಡಬೇಕು ಎಂಬ ಪ್ರಸ್ತಾಪ ಪಕ್ಷದ ವೇದಿಕೆಯಲ್ಲಿ ಮಂಡನೆಯಾಗಿದ್ದು ನಿಜವಾದರೂ,ಅಂತಿಮವಾಗಿ ಅದು ವಿಜಯೇಂದ್ರ ಅವರ ವರ್ಚಸ್ಸನ್ನು ವೈಭವೀಕರಿಸಲಿದೆ ಎಂಬ ಕಾರಣಕ್ಕಾಗಿ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.

ಅದರಲ್ಲೂ ಮಾಜಿ ಮುಖ್ಯಮಂತ್ರಿಯೊಬ್ಬರು,ಇಂತಹ ಪಾದಯಾತ್ರೆಯಿಂದ ಯಾವ ಪ್ರಯೋಜನವೂ ಇಲ್ಲ.ಯಾಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ ಅಷ್ಟೇ.ಇದೇ ರೀತಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಹಗರಣವೇ ಇರಲಿ,ಮೂಡಾ ಹಗರಣವೇ ಇರಲಿ. ಕೆದಕುತ್ತಾ ಹೋದರೆ ಮೂರೂ ಪಕ್ಷಗಳ ಅವಧಿಯಲ್ಲಿ ಲೋಪಗಳಾಗಿವೆ.ಹೀಗಾಗಿ ಈ ವಿಷಯಗಳನ್ನು‌ ಕೆದಕುವುದರಲ್ಲಿ ಅರ್ಥವಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಹೋರಾಟದಿಂದ ರಾಜ್ಯದ ಅಹಿಂದ ವರ್ಗಗಳಿಗೆ ವ್ಯತಿರಿಕ್ತ ಸಂದೇಶ ರವಾನೆಯಾಗಬಹುದು.ಬಲಿಷ್ಟ ವರ್ಗಗಳು ಸೇರಿ ದುರ್ಬಲ ವರ್ಗಗಳ ನಾಯಕನನ್ನು ಇಳಿಸಲು ಹೊರಟಿವೆ ಎಂಬ ಸಂದೇಶ ರವಾನೆಯಾದರೆ ಅವು ಇನ್ನಷ್ಟು ಪರಿಣಾಮಕಾರಿಯಾಗಿ ಕಾಂಗ್ರೆಸ್ ಜತೆ ನಿಲ್ಲುತ್ತವೆ. ಹೀಗಾಗಿ ಇದಕ್ಕೆ ಅವಕಾಶ ಕೊಡುವ ಬದಲು  ಇನ್ನಷ್ಟು ಕಾಲ ಕಾಯುವುದು  ಒಳ್ಳೆಯದು ಅಂತ ಜೆ.ಪಿ.ನಡ್ಡಾ ಅವರಿಗೇ ವಿವರಿಸಿದ್ದರಂತೆ.

ಈ ಮಧ್ಯೆ ಪಾದಯಾತ್ರೆ ವಿಷಯದಲ್ಲಿ ಪ್ರೀತಂ ಗೌಡರಿಗೆ ಪ್ರಿಪರೆನ್ಸು ಕೊಟ್ಟಿದ್ದು ಸರಿಯಲ್ಲ ಅಂತ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಕರಾರು ಎತ್ತಿದರಲ್ಲ? ಈ ವಿಷಯವೂ ಸೇರಿ ಅಮಿತ್ ಷಾ ಅವರೇ  ಮಧ್ಯೆ  ಪ್ರವೇಶಿಸುವ ಸ್ಥಿತಿ  ಬಂದಾಗ  ಪಾದಯಾತ್ರೆಯ  ಕತೆ ಡೋಲಾಯಮಾನ ಸ್ಥಿತಿಯಲ್ಲಿತ್ತು.

ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಪ್ರಲ್ಹಾದ ಜೋಷಿ ಅವರು,ಯಾವ ಕಾರಣಕ್ಕಾಗಿ ಪಾದಯಾತ್ರೆ ನಡೆಯಬೇಕು ಅಂತ ವರಿಷ್ಟರಿಗೆ ವಿವರಿಸಿದ್ದಲ್ಲದೆ, ಈ ಪಾದಯಾತ್ರೆಯಿಂದ ವಿಜಯೇಂದ್ರ ಮಾತ್ರವಲ್ಲ,ನಿಮ್ಮ‌ ಮಗ ನಿಖಿಲ್‌ ಅವರ ಲೀಡರ್ ಷಿಪ್ಪಿಗೂ ಬಲ  ಬರುತ್ತದೆ ಅಂತ ಹೇಳಿ ಕುಮಾರಸ್ವಾಮಿ ಅವರ ಮನವೊಲಿಸಿದ್ದರು.

ಯಾವಾಗ ಪ್ರಲ್ಹಾದ ಜೋಷಿಯವರ ತಂತ್ರಗಾರಿಕೆ ಕೆಲಸ ಮಾಡಿತೋ? ಇದಾದ ನಂತರ  ಮೈಸೂರು ಚಲೋ ಪಾದಯಾತ್ರೆ  ಸಾಂಗವಾಗಿ ನಡೆದಿದೆ. ಅಷ್ಟೇ ಅಲ್ಲ,  ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ  ಧಗಧಗ  ಅಂತ ಹೊತ್ತಿ ಉರಿಯುತ್ತಿದ್ದ  ಯಡಿಯೂರಪ್ಪ-ಜೋಷಿ ನಡುವಣ ಸಂಬಂಧ ವಿಶ್ವಾಸದ ಹಳಿಗೆ ಮರಳಿದೆ.

ಮೈಸೂರು ಚಲೋ ಯಾತ್ರೆಯ ಸಂದೇಶ (CM Siddaramaiah)

ಅಂದ ಹಾಗೆ ಬಿಜೆಪಿ ಮಿತ್ರಕೂಟದ ಮೈಸೂರು ಚಲೋ ಪಾದಯಾತ್ತೆಯ ಸಾಧನೆ ಏನು?ಅದು ರವಾನಿಸಿದ ಸಂದೇಶವೇನು?ಎಂಬ ಬಗ್ಗೆ ಕುತೂಹಲಕಾರಿ ಚರ್ಚೆಗಳು ಪ್ರಾರಂಭವಾಗಿವೆ. ಕೆಲ ನಾಯಕರ ಪ್ರಕಾರ,ಮೈಸೂರು ಚಲೋ ಪಾದಯಾತ್ರೆ ಪ್ರಾರಂಭವಾದಾಗ ಅದರ ಸಾಧನೆ ಯಾವ ಲೆವೆಲ್ಲಿಗೆ ಹೋಗಬಹುದು ಎಂಬ ಕುತೂಹಲವಿತ್ತು.

ಅದರಲ್ಲೂ ಮುಖ್ಯವಾಗಿ ಪಾದಯಾತ್ರೆ ಗುರಿ ತಲುಪುವ  ಹೊತ್ತಿಗೆ ರಾಜ್ಯಪಾಲರು ಸಿಎಂ  ವಿರುದ್ದ ವಿಚಾರಣೆಗೆ ಅನುಮತಿ ಕೊಡುತ್ತಾರೆ  ಎಂಬ ನಿರೀಕ್ಷೆ ಇತ್ತು.ಆದರೆ ಅಂತಹದೇನೂ ಆಗಲಿಲ್ಲ. ಆದರೆ‌ ಈ ಯಾತ್ರೆ ನಿಸ್ಸಂಶಯವಾಗಿ ರಾಜ್ಯದ ಜನತೆಗೆ ಎರಡು ಸಂದೇಶಗಳನ್ನು ರವಾನಿಸಿತು.

ಮೊದಲನೆಯದಾಗಿ   ಬಿಜೆಪಿ ಮಿತ್ರಕೂಟದ ನಾಯಕತ್ವಕ್ಕಾಗಿ  ಕುಮಾರಸ್ವಾಮಿ ವಿಜಯೇಂದ್ರ ಮಧ್ಯೆ ಫೈಟು ಶುರುವಾಗಿದೆ ಎಂಬುದು. ಎರಡನೆಯದಾಗಿ, ಒಕ್ಕಲಿಗ ಪಾಳೇಪಟ್ಟಿನ ನಾಯಕತ್ವಕ್ಕಾಗಿ ಕುಮಾರಸ್ವಾಮಿ -ಡಿಕೆಶಿ ಎಂತಹ ರಣ ಭೀಕರ ಕದನಕ್ಕೂ  ತಯಾರಾಗಿ ನಿಂತಿದ್ದಾರೆ ಎಂಬುದು.

Read also : Davanagere : ದುರಂತ ನಾಯಕನಾಗಲು ಸಿದ್ದು ತಯಾರಿಲ್ಲ

ಇನ್ನು ಇಂತಹ ಸಂದೇಶಗಳ ಹೊರತಾಗಿ ಜನರಿಗೆ ಥ್ರಿಲ್ಲರ್ ತರ ಕಾಣುತ್ತಿರುವುದು ಕಾಂಗ್ರೆಸ್ ಮತ್ತು ಮಿತ್ರಕೂಟದ ನಾಯಕರ ಆರೋಪ-ಪ್ರತ್ಯಾರೋಪ.ಅವರ ಈ ಆರೋಪ-ಪತ್ಯಾರೋಪಗಳು  ಯಾವ ಯಾವ ಹಗರಣಗಳಲ್ಲಿ  ಯಾರ್ಯಾರು ಬಾಗಿಯಾಗಿದ್ದಾರೆ? ಎಷ್ಟೆಷ್ಟು ಕಾಸು ಒಟ್ಟಿಟ್ಟಿದ್ದಾರೆ  ಎಂಬುದನ್ನು ಧ್ವನಿಸುತ್ತಿರುವುದರಿಂದ  ತುಂಬ ಜನ ಬೆಕ್ಕಸ ಬೆರಗಾಗಿರುವುದು ನಿಜ.

ಆರ್.ಟಿ.ವಿಠ್ಠಲಮೂರ್ತಿ

TAGGED:Dinamana.comKannada NewsPolitical Analysisಇಂಗ್ಲಿಷ್ ರಾಜಕೀಯ ವಿಶ್ಲೇಷಣೆಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article DAVANAGERE Davanagere : ಆರೋಗ್ಯಯುತ ಬದುಕು ಇಲ್ಲದಿದ್ದರೆ ಹಣ, ಆಸ್ತಿ ಯಿಂದ ಪ್ರಯೋಜನವಿಲ್ಲ : ಪ್ರೊ.ಬಿ.ಎಂ.ಕುಮಾರಸ್ವಾಮಿ
Next Article davanagere Davangere University | ಮುಂದೂಡಿದ್ದ ಪರೀಕ್ಷೆ ಆ.24 ರಂದು : ಕುಲಸಚಿವ ಪ್ರೊ.ಸಿ.ಕೆ.ರಮೇಶ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಸೈಬರ್ ಭದ್ರತೆ, ದತ್ತಾಂಶ ಗೌಪ್ಯತೆಗೂ ಆದ್ಯತೆ ನೀಡಿ: ಕೌಲ್

ದಾವಣಗೆರೆ (Davanagere):  ಗ್ರಂಥಾಲಯಗಳು ವೈವಿಧ್ಯಮಯ ಬಳಕೆದಾರರ ಅಗತ್ಯಗಳನ್ನು ಪೂರೈಸಲು ನಿರಂತರ ಸುಧಾರಣೆಗಾಗಿ ಓದುಗರ ಪ್ರತಿಕ್ರಿಯೆಯನ್ನು ಬಳಸಿಕೊಳ್ಳುವ ಜೊತೆಗೆ ಅದರ ಜೊತೆಗೆ…

By Dinamaana Kannada News

ಸೊಂಡೂರಿನ ಕಗ್ಗತ್ತಲೆಯ ಕಥನಗಳು-33 ಊರು ನಮ್ಮದಲ್ಲವೋ…ನಾವೇ ಈ ಊರಿನವರಲ್ಲವೋ ಹೇಗೆ ಹೇಳುವುದು?

Kannada News | Dinamaana.com | 24-05-2024 ಇಲ್ಲಿನ ಗಣಿ ಬಾಧಿತ ಪ್ರದೇಶಗಳ ಬಹುತೇಕ ಊರುಗಳೆಲ್ಲ ಹಳ್ಳಿಗಾಡಿನ ಊರುಗಳೆ ಆಗಿವೆ.ಇಲ್ಲಿನ…

By Dinamaana Kannada News

ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ದಂಧೆಗೆ ಕಡಿವಾಣ ಹಾಕಿ : ಎಎಪಿ ಒತ್ತಾಯ

ದಾವಣಗೆರೆ- ರಾಜ್ಯದಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದ್ದು, ಮಿತಿಮೀರಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ದಂಧೆಗೆ ಕಡಿವಾಣ ಹಾಕಬೇಕು ಎಂದು…

By Dinamaana Kannada News

You Might Also Like

Davangere
Blog

ಸಾಹಿತ್ಯ ,ಬರಹಗಳು ಸಾಮಾಜಿಕ‌ ದೋಷ ತಿದ್ದಬೇಕು : ಲೇಖಕಿ ಮಂಜುಳಾ ಮಂಜಪ್ಪ

By Dinamaana Kannada News
Davanagere
ತಾಜಾ ಸುದ್ದಿ

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯಿಂದ ಅಕ್ರಮ ಮಾದಕ ವಸ್ತುಗಳು ವಶಕ್ಕೆ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

Davanagere | ಹಾವು ಕಚ್ಚಿ ಬಾಲಕಿ ಸಾವು

By Dinamaana Kannada News
Davanagere police
ತಾಜಾ ಸುದ್ದಿ

Davanagere | ಆಟೋ ಚಾಲಕರಿಗೆ 20600 ರೂ. ದಂಡ : ಒಟ್ಟು 105 ಪ್ರಕರಣ ದಾಖಲು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?