Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ಫಿಶರ್ ಸಂಕಟದಿಂದ ಬಳಲುತ್ತಿದ್ದೀರಾ?: ಇಲ್ಲಿದೆ‌‌ ನೋಡಿ‌ ಫಿಶರ್ ಕಾಯಿಲೆ ಕಾರಣ‌ ಮತ್ತು ‌ಪರಿಹಾರ
ಆರೋಗ್ಯ

ಫಿಶರ್ ಸಂಕಟದಿಂದ ಬಳಲುತ್ತಿದ್ದೀರಾ?: ಇಲ್ಲಿದೆ‌‌ ನೋಡಿ‌ ಫಿಶರ್ ಕಾಯಿಲೆ ಕಾರಣ‌ ಮತ್ತು ‌ಪರಿಹಾರ

Dinamaana Kannada News
Last updated: September 4, 2024 4:30 am
Dinamaana Kannada News
Share
fissure treatment in kannada
SHARE

ಫಿಶರ್ (Fissure) ಇದು ಹಲವು ಜನರನ್ನು ಕಾಡುವ ಪ್ರಮುಖ ಕಾಯಿಲೆ. ಆದರೆ ‌ಸಂಕೋಚ, ಅರಿವಿನ ಕೊರತೆ ‌ಕಾರಣ ಹಲವರು ಈ ಸಮಸ್ಯೆ ಕುರಿತು ವೈದ್ಯರ ಬಳಿ ಚರ್ಚಿಸುವ ಗೋಜಿಗೆ ಹೋಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಹಾಗೂ ಪರಿಹಾರಗಳ ಕುರಿತು ದಾವಣಗೆರೆ ಚಿಗಟೇರಿ ಜಿಲ್ಲೆ ಆಸ್ಪತ್ರೆಯ ಆಯುಷ್ ಪಂಚಕರ್ಮ ವಿಭಾಗದ ಹಿರಿಯ ವೈದ್ಯಾಧಿಕಾರಿ ಡಾ. ಬಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

 

fissure treatment in kannada

ಪರಿಕರ್ತಿಕ (ಫಿಶರ್‌-fissure ) ಅಂದರೇನು?

ಪರಿಕಾರ್ತಿಕ “ಪರಿಕೃತ್‌” ಎಂಬ ಮೂಲದಿಂದ ಬಂದಿದೆ, ಇದು ಸುತ್ತಲೂ ಕತ್ತರಿಸಲು ಸೂಚಿಸುತ್ತದೆ. (ಪರಿ:-ಸುತ್ತಲೂ, ಕರ್ತನಂ -ಕತ್ತರಿಸುವ ಕ್ರಿಯೆ). ಇದು ರೋಗಕ್ಕಿಂತ ಹೆಚ್ಚಾಗಿ ಲಕ್ಷಣವಾಗಿದೆ.

ಗುದದ್ವಾರದ ಕೆಳಗೆ ಒಳಗಿನ ಲೋಳೆಪೊರೆಯ ಗೋಡೆಯಲ್ಲಿ ನ ಬಿರುಕನ್ನು ಫಿಶರ್‌ ಇನ್‌ ಆನೊ ಎಂದು ಕರೆಯಲಾಗುತ್ತದೆ ಮಲ.

ವಿಸರ್ಜನೆ ಮಾಡುವಾಗ ಹಾಗು ನಂತರ ನೋವು & ರಕ್ತಸ್ರಾವ ವನ್ನು ಉಂಟು ಮಾಡುತ್ತದೆ ಇದು ಸಾಮಾನ್ಯವಾಗಿ ಎಲ್ಲಾ ವಯಸ್ಸಿನಲ್ಲಿ ಕಂಡುಬರುತ್ತದೆ ವಿಶೇಷವಾಗಿ ಯೌವ್ವನದಲ್ಲಿ, ಗರ್ಭಿಣಿಯರಲ್ಲಿ, ಮಕ್ಕಳಲ್ಲಿ ಸಾಮಾನ್ಯವಾಗಿದೆ.
1500 ವರ್ಷಗಳ ಪ್ರಾಚೀನ ಆಯುರ್ವೇದ ಗ್ರಂಥಗಳಾದ ಚರಕ ಸಂಹಿತ, ಸುಶ್ರುತ ಸಂಹಿತ, ಮತ್ತು ಕಾಶ್ಯಪ ಸಂಹಿತಗಳಲ್ಲಿ ಈ ರೋಗದ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸಾ ಕ್ರಮಗಳನ್ನು ವಿವರಿಸಲಾಗಿದೆ.

ವಿಶ್ವ ದ ಶೇಕಡ 30 ರಷ್ಟು ಜನಸಂಖ್ಯೆ ಅವರ ಜೀವಿತಾವಧಿಯಲ್ಲಿ ಈ ರೋಗದಿಂದ ಬಳಲುತ್ತಿದ್ದಾರೆ.

ಫಿಶರ್‌ ಇನ್‌ ಆನೋ ಎಂಬುದು ಹೆಚ್ಚು ವೃತ್ತಿಪರ ವ್ಯಕ್ತಿಗಳು. ಚಾಲಕರು. ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ನಂತರ ಕಂಡು ಬರುತ್ತದೆ.

Read Also: ಮಳೆಗಾಲದಲ್ಲಿ ಕಾಡುವ ಉಸಿರಾಟದ ಕಾಯಿಲೆಗಳು

ಫಿಶರ್‌ ಕಾರಣಗಳೇನು

  • ಮಲ ವಿಸರ್ಜನೆ ಮಾಡುವಾಗ ಅತಿಯಾಗಿ. ತಿಣುಕುವುದು
  • ಅಜೀರ್ಣ
  • ದೀರ್ಘ ಕಾಲದ ಮಲ ಬದ್ದತೆ.
  • ದೀರ್ಘ ಕಾಲದ ಅತಿಸಾರ
  • ಹೆರಿಗೆ ಸಮಯದಲ್ಲಿ ಗಾಯ
  • ಕೆಲವು ಉರಿಯೂತದ ರೋಗಗಳಾದ IBD crohns disease etc
  • ಗುದ ಪ್ರದೇಶಕ್ಕೆ ರಕ್ತ ಪೂರೈಕೆ ಕಡಿಮೆಯಾಗುವುದು
  • ಸಂಕುಚಿತ ಗುದ ಭಾಗದ sphincter ಸ್ನಾಯುಗಳು
  • ಕ್ಷಯರೋಗ ಗುದಬಾಗದ ಕ್ಯಾನ್ಸರ್‌
  • ಗುದ ಸಂಭೋಗ
  • ಅತಿಯಾದ ಖಾರ ಒಣ ಪದಾರ್ಥಗಳ ಸೇವನೆ ಕಡಿಮೆ ನೀರು ಸೇವನೆ.
  • ಗುದ ಮಾರ್ಗದ ಶಸ್ತ್ರಚಿಕಿತ್ಸೆ ಯ ಅಡ್ಡ ಪರಿಣಾಮಗಳು.

ಗುದ ಬಿರುಕುಗಳ (ಫಿಶರ್)‌ ಲಕ್ಷಣಗಳು

  1. ಗುದ ಪ್ರದೇಶದ ಒಳಭಾಗದ ಕೆಳಗೆ ಮತ್ತು ಮೇಲೆ ಗೋಚರ ವಾಗುವ ಹುಣ್ಣು(ಬಿರುಕು)
  2. ಮಲ ವಿಸರ್ಜನೆ ಮಾಡುವಾಗ ಮತ್ತು ನಂತರ ವಿಪರೀತವಾದ ನೋವು ಉರಿ. ಕಾಣಿಸಿಕೊಳ್ಳುವುದು. ರೋಗಿಗಳು ಇದರಿಂದ ಮಾಲ.
    ವಿಸರ್ಜನೆ ಮಾಡಲು ಭಯ ಪಡುತ್ತಾರೆ.
  3. ಮಲಕ್ಕೆ ಅಂಟಿಕೊಂಡಿರುವ ಕೆಂಪುಬಣ್ಣದ ರಕ್ತದ ಗೆರೆಗಳು ಕಾಣಬಹುದು.
  4. ದೀರ್ಘ ಕಾಲದ ಬಿರುಕುಗಳಿಂದ ಚರ್ಮದ ಗಂಟುಗಳು ಕಾಣಿಸಿಕೊಳ್ಳಬಹುದು.
  5. ಗುದ ಪ್ರದೇಶದ ಸುತ್ತ ತುರಿಕೆ.

ನೀವು ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

ಮನೆಯಲ್ಲಿ ಪೋಷಕರ ಆರೈಕೆ ಮಾಡಿದ ನಂತರ ಹೆಚ್ಚಿನ ಬಿರುಕುಗಳು ವಾಸಿಯಾಗುತ್ತವೆ ಆದಾಗ್ಯೂ ಬಿರುಕು ಹೆಚ್ಚು ಕಾಲ ಇದ್ದರೆ ಸರಿಯಾಗಿ
ಕುಳಿತುಕೊಳಲು ಹಾಗದೆ ನೋವು ವಿಪರೀತವಾದರೆ ವೈದ್ಯರ ಸಲಹೆಯನ್ನು ಪಡೆಯಬೇಕು ಬಿರುಕು ಸೋಂಕಿಗೆ ಒಳಗಾಗುವ ಸಾದ್ಯತೆ ಇರುತ್ತದೆ.
ಗುದ ಕ್ಯಾನ್ಸರ್‌, ಪೈಲ್ಸ್‌ ಇತರೆ ತೊಂದರೆಗಳನ್ನು ತಿಳಿಯಲು ವೈದ್ಯರು ಅನೇಕ ಪರೀಕ್ಷೆಗಳನ್ನು ಮಾಡಿ ಈ ತೊಂದರೆಗೆ ಸೂಕ್ತ ಚಿಕಿತ್ಸಾ
ಕ್ರಮಗಳನ್ನು ನೀಡುತ್ತಾರೆ.

ಆಯುರ್ವೇದವು (ಫಿಶರ್‌) ಬಿರುಕುಗಳನ್ನುಹೇಗೆ ಗುಣಪಡಿಸುತ್ತದೆ?

  1. ಜಾತ್ಯಾದಿ ಘೃತ ಗುದ ಪ್ರದೇಶದಲ್ಲಿನ ಬಿರುಕುಗಳನ್ನು ಗುಣಪಡಿಸುತ್ತದೆ.
  2. ತ್ರಿಫಲ ಗುಗ್ಗುಲು: ಇದು ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಮಲವನ್ನು ಮೃದುವಾಗುವಂತೆ ಮಾಡುತ್ತದೆ, ಇದು ಗುದದ ಬಿರುಕುಗೆ
    ಪ್ರಮುಖ ಕಾರಣವಾಗಿದೆ.
  3. ಗುದ ಪೂರಣ: ಔಷಧಿಯಿಂದ ಸಿದ್ಧ ಪಡಿಸಿದ ತೈಲವನ್ನು ಗುದಾಮಾರ್ಗದಲ್ಲಿ ನೀಡುವುದರ ಮೂಲಕ ಗುಣಪಡಿಸುವುದು.
  4. ಅವಗಾಹ ಸ್ವೇದ (ಬಿಸಿ ಫೋಮೆಂಟೇಶನ್‌-ಸಿಟ್ಟ್‌ ಸ್ನಾನ)

ಪ್ರತಿ ಮಲವಿಸರ್ಜನೆಯು ಅಸ್ವಸ್ಥತೆಯನ್ನು ಕಡಿಮೆಗೊಳಿಸಿದ ನಂತರ ಮತ್ತು ಸ್ವಲ್ಪ ಸಮಯದವರೆಗೆ ಒಳಗಿನ ಸ್ಟಿಂಕ್ಟರ್‌ನ ಸೆಳೆತವನ್ನು
ಶಾಂತಗೊಳಿಸಿದ ನಂತರ ಬೆಚ್ಚಗಿನ / ಬಿಸಿನೀರಿನ ತೊಟ್ಟಿಯಲ್ಲಿ ಕುಳಿತುಕೊಳ್ಳಬೇಕು, ಇದು ಬಿರುಕು. ಗಾಯಗಳನ್ನು ವಾಸಿಗೊಳಿಸಲು ಸಹಾಯ.
ಮಾಡುತ್ತದೆ. ಸಿಟ್‌ ಶವರ್‌ ಬಿರುಕುಗಳಿಗೆ ಚಿಕಿತ್ಸೆಯಲ್ಲಿ ಪ್ರಭಾವಶಾಲಿಯಾಗಿದೆ. ಇದನ್ನು 10 ರಿಂದ 15 ನಿಮಿಷಗಳ ಕಾಲ ಮಾಡಲಾಗುತ್ತದೆ.
ನೀರಿಗೆ ತ್ರಿಫಲಾ ಪುಡಿಯನ್ನು ಸೇರಿಸುವುದರಿಂದ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಗುಣಪಡಿಸುವ ಸಾಮರ್ಥ್ಯವನ್ನು
ಹೆಚ್ಚಿಸುತ್ತದೆ.

ಹೆಚ್ಚಿನ ನಾರಿನ ಆಹಾರ ಸೇವನೆ

ನಾರಿನ ಅಂಶವು ಜೀರ್ಣಾಂಗದಲ್ಲಿ ಪ್ರಮಾಣಿತ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ, ಇದು ದೊಡ್ಡದಾದ, ಮೃದುವಾದ ಮಲವನ್ನು ಸೃಷ್ಟಿಸುತ್ತದೆ. ದೊಡ್ಡದಾದ ಮತ್ತು ಮೃದುವಾದ ಮಲವು ರಕ್ತ ಪರಿಚಲನೆಗೆ ಸಹಾಯ ಮಾಡುವ ಸ್ಟಿಂಕ್ಟರ್‌ ಸ್ನಾಯು ಅಂಗಾಂಶವನ್ನು ವಿಸ್ತರಿಸುತ್ತದೆ ಮತ್ತು
ಪುನಸ್ಥಾಷಿಸುತ್ತದೆ.

-ಡಾ. ಬಿ ಶಿವಕುಮಾರ್‌
ಹಿರಿಯ ವೈದ್ಯಾಧಿಕಾರಿಗಳು ಆಯುಷ್‌ ಪಂಚಕರ್ಮ ವಿಭಾಗ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ -9886624267

TAGGED:Fissurefissure treatment in kannadaKannada healthKannada health tipsಫಿಶರ್ಮೂಲವ್ಯಾಧಿ
Share This Article
Twitter Email Copy Link Print
Previous Article DAVANAGERE Davangere theft case | ಸರಣಿ ಮನೆ ಕಳ್ಳತನ ಪ್ರಕರಣ : ಆರೋಪಿತರ ಬಂಧನ ,  6.20.000 ಸ್ವತ್ತು ವಶಕ್ಕೆ
Next Article DAVANAGERE Serial ‘Drishtibottu’ | ಕಲರ್ಸ್ ಕನ್ನಡದಲ್ಲಿ ಸೆ.9 ರಿಂದ ಹೊಸ ಧಾರಾವಾಹಿ ದೃಷ್ಟಿಬೊಟ್ಟು  

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere | ದಾವಣಗೆರೆ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ : ಹಲವರ ಬಂಧನ -ಬಿಡುಗಡೆ

ದಾವಣಗೆರೆ (Davanagere):  ಯುಬಿಡಿಟಿ ಉಳಿಸಿ, ಪೇಮೆಂಟ್ ಸೀಟು ನಿಲ್ಲಿಸಲು ಒತ್ತಾಯಿಸಿ ಎಐಡಿಎಸ್‍ಓ ಮತ್ತು ಪ್ರಗತಿಪರ ಸಂಘಟನೆಗಳು ಕರೆ ನೀಡಿದ ದಾವಣಗೆರೆ…

By Dinamaana Kannada News

ಸಸ್ಯದಲ್ಲಿ ಔಷಧ ಗುಣ ಹೆಚ್ಚಿರುವುದರಿಂದ ಸಸ್ಯ ಸಂರಕ್ಷಣೆ ಅಗತ್ಯ : ಡಾ.ಸಿದ್ದಪ್ಪ .ಬಿ.ಕಕ್ಕಳಮೇಲಿ  

ದಾವಣಗೆರೆ:   ಸಸ್ಯದಲ್ಲಿ ಆಯುರ್ವೇದ ಔಷಧ ಗುಣ ಹೇರಳವಾಗಿರುವುದರಿಂದ ಪ್ರಸಕ್ತ ದಿನದಲ್ಲಿ ಸಸ್ಯ ಸಂರಕ್ಷಣೆ ಅಗತ್ಯವೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ಅಧ್ಯಯನ…

By Dinamaana Kannada News

ದಾವಣಗೆರೆ | ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜುಲೈ 17 ರಂದು ವಿದ್ಯುತ್ ವ್ಯತ್ಯಯ

ದಾವಣಗೆರೆ  : ದಾವಣಗೆರೆ ಜಲ್ಲೆಯ  ಮೆಳ್ಳೆಕಟ್ಟೆ, ಮಾಯಕೊಂಡ ಮತ್ತು ಕಾಡಜ್ಜಿ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜುಲೈ…

By Dinamaana Kannada News

You Might Also Like

Nanjappa Hopsital Shivamogga
ಆರೋಗ್ಯ

ಯುವತಿಯ ಜೀವ ಉಳಿಸಿದ ನಂಜಪ್ಪ ಲೈಫ್‌ಕೇರ್‌ನ ತಜ್ಞರು: ಮೆದುಳಿನ ರಕ್ತಸ್ರಾವ ತಪ್ಪಿಸಿದ ಸುಧಾರಿತ ಚಿಕಿತ್ಸೆ

By Dinamaana Kannada News
Nova IVF in Davangere
ಆರೋಗ್ಯ

ದಾವಣಗೆರೆಯಲ್ಲಿ ನೋವಾ ಐವಿಎಫ್ (Nova IVF)ಆರಂಭ   

By Dinamaana Kannada News
World tuberculosis Day
ಆರೋಗ್ಯ

World tuberculosis Day | ವಿಶ್ವ ಕ್ಷಯ ರೋಗ (ಟಿ ಬಿ) ದಿನಾಚರಣೆ : ರೋಗ ತಡೆಗೆ ಮುನ್ನಚ್ಚರಿಕೆ ಅವಶ್ಯ

By Dinamaana Kannada News
Dr. Shivakumar
ಆರೋಗ್ಯ

Pilonidal Sinus | ಪಿಲೋನಿಡಲ್ ಸೈನಸ್ ಕಾಯಿಲೆ ಎಂದರೇನು? ಅದರ ರೋಗ ಲಕ್ಷಣ, ಆಯುರ್ವೇದ ಚಿಕಿತ್ಸಾ ವಿಧಾನ ಇಲ್ಲಿದೆ.

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?