Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere | ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ಧ ಸಂದೇಶ ಸಾರುವ “ನೋಡು ಬಾ ನಮ್ಮೂರ ಮಸೀದಿ” ಕಾರ್ಯಕ್ರಮ
ತಾಜಾ ಸುದ್ದಿ

Davanagere | ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ಧ ಸಂದೇಶ ಸಾರುವ “ನೋಡು ಬಾ ನಮ್ಮೂರ ಮಸೀದಿ” ಕಾರ್ಯಕ್ರಮ

Dinamaana Kannada News
Last updated: September 14, 2024 2:39 pm
Dinamaana Kannada News
Share
davanagere
davanagere
SHARE

ದಾವಣಗೆರೆ (Davamagere ) : ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ಧ ಸಂದೇಶ ಸಾರುವ ನಿಟ್ಟಿನಲ್ಲಿ ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಮಸ್ಜಿದ್- ಎ- ಮಹಮ್ಮದಿಯ ಮಸೀದಿಯಲ್ಲಿ ಏರ್ಪಡಿಸಿದ್ದ “ನೋಡು ಬಾ ನಮ್ಮೂರ ಮಸೀದಿ” ಮಸೀದಿ ಸಂದರ್ಶನ ಕಾರ್ಯಕ್ರಮ ಸೌಹಾರ್ಧತೆಗೆ ಸಾಕ್ಷಿಯಾಗಿತ್ತು.

ದಾವಣಗೆರೆ ಸುತ್ತ ಮುತ್ತಲಿನ ವಿವಿಧ ಸಮುದಾಯದ ಧರ್ಮದ ಜನರು ಮಸೀದಿಗೆ ಭೇಟಿ ನೀಡಿ ಅಲ್ಲಿ ಮಸೀದಿಯ ಆಚಾರ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಸೀದಿಯ ಕಮಿಟಿಯವರು ಸ್ವಯಂಸೇವಕರು ಬರುವವರಿಗೆ ಸ್ವಾಗತಿಸಿ, ಮಸ್ಜಿದ್‍ನ ಒಳಗಡೆ ಪ್ರಾರ್ಥನಾಲಯದಲ್ಲಿ ಇಸ್ಲಾಂ ಎಂದರೇನು, ಅಲ್ಲಾಹ್ ಎಂದರೆ ಯಾರು, ಇಸ್ಲಾಂನ ಅರ್ಥವೇನು? ಎಂಬುದರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಇಸ್ಲಾಂ ಎಂದರೆ ಶಾಂತಿ, ಮುಸ್ಲಿಮ್ ಎಂದರೆ ಶರಣಾಗತಿ ಬಯಸುವವನು ಇನ್ನಿತರ ಫಲಕಗಳು ಮತ್ತು ಅಜಾನ್ ಬಗೆಗಿನ ವಿವರ ಮತ್ತು ಕುರಾನ್ ವಿವಿಧ ಅಂಶಗಳನ್ನು ಅಲ್ಲಿನ ಪ್ರದರ್ಶನ ಫಲಕಗಳಲ್ಲಿ ಪ್ರದರ್ಶಿಸುವ ಹಾಗೂ ಮಸೀದಿ ಸಂದರ್ಶನಕ್ಕೆ ಬಂದವರಿಗೆ ಆತ್ಮೀಯವಾಗಿ ಬರಮಾಡಿಕೊಂಡರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ, ಮಸೀದಿ ಸಂದರ್ಶನ ಒಂದು ಅತ್ಯುತ್ತಮ ನಡೆಯಾಗಿದ್ದು, ಇದರಿಂದ ಸಾರ್ವಜನಿಕ ಜೀವನದಲ್ಲಿ ಎಲ್ಲರೂ ಸೌಹಾರ್ದತೆ ಭಿತ್ತಲು ಸಾಧ್ಯವಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳು ಎಲ್ಲಾ ಭಾಗಗಳನ್ನು ನಡೆಯಬೇಕು. ಮಹಿಳೆಯರು ಸೇರಿದಂತೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಬೇಕು ಎಂದರು.

Read also : Davanagere judegement news | ಚಾಕು ಇರಿದ ಆರೋಪಿಗೆ 2 ವರ್ಷ ಸಜೆ

ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಂಜುನಾಥ್ ಕುಂದವಾಡ ಮಾತನಾಡಿ. ಇಲ್ಲಿಗೆ ಭೇಟಿ ನೀಡಿ ಇಸ್ಲಾಂ ಧರ್ಮದ ಬಗೆಗಿನ ಅರ್ಥ , ಅಲ್ಲಾಹನ ಅರ್ಥಗಳನ್ನು ತಿಳಿದು ಕೊಂಡಂತಾಗಿದೆ ಮತ್ತು ಎಲ್ಲಾ ಧರ್ಮಗಳ ಸಾರಗಳು ಒಂದೇ ಯಾವ ಧರ್ಮಗಳನ್ನು ಮೇಲು ಕೀಳಲ್ಲ, ಎಲ್ಲರೂ ಇಲ್ಲಿನ ಸಹೋದರತೆಯ ಭಾವನೆಯಿಂದ ಬಾಳಬೇಕು. ಮಸೀದಿ ಸಂದರ್ಶನ ಕಾರ್ಯಕ್ರಮವು ಒಂದು ಮಾದರಿ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿಯ ಇನ್ನೊಬ್ಬ ಸಂಚಾಲಕ ಹೆಗ್ಗೆರೆ ರಂಗಪ್ಪ ಮಾತನಾಡಿ, ಇದು ಮಾದರಿ ಕಾರ್ಯಕ್ರಮವಾಗಿ ಎಲ್ಲೆಡೆ ನಡೆಯಬೇಕು ಎಂದು ಹೇಳಿದರು.

ದಾವಣಗೆರೆ ವಿಶ್ವಮಾನವ ಮಂಟಪದ ರುದ್ರಮುನಿ ಆವರಗೆರೆ ಮಾತನಾಡಿ, ಪ್ರಪಂಚದಲ್ಲಿನ ಎಲ್ಲಾ ಧರ್ಮಗಳು ಒಂದೇ, ಎಲ್ಲಾ ಮಾನವರು ಒಂದೇ, ಹಾಗಾಗಿ ಎಲ್ಲರೂ ಸಮಾಜದಲ್ಲಿನ ಮೇಲು ಕೀಳು ತೊರೆದು ಸಹೋದರತೆಯಿಂದ ಮಾಡಬೇಕು ಎಂದು ಹೇಳಿದರು.

ಬೆಂಗಳೂರಿನಿಂದ ಮಸೀದಿ ನೋಡಲು ಆಗಮಿಸಿದ್ದ ವೈದ್ಯೆ ಡಾ. ಸ್ವಾತಿ ಮಾತನಾಡಿ, ಸಾಮರಸ್ಯ ಕೆಟ್ಟು ಹೋಗಿರುವ ಇಂದಿನ ಸಮಾಜದಲ್ಲಿ ಇದೊಂದು ಉತ್ತಮವಾದ ಕಾರ್ಯಕ್ರಮವಾಗಿದ್ದು. ರಾಜಕೀಯವಾಗಿ ಇಂದಿನ ಪರಿಸ್ಥಿತಿಯಲ್ಲಿ ಇಸ್ಲಾಂ ಎಂದರೆ ಭಯ, ದ್ವೇಷ ಮಾಡುವಂತಹದ್ದು ಎನ್ನುವ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದೆ. ನಾನು ಮೊದಲ ಬಾರಿಗೆ ಮಸೀದಿ ಒಳಗಡೆ ಬಂದು ಇಲ್ಲಿನ ವಾತಾವರಣವನ್ನು ಗಮನಿಸುತ್ತಿದ್ದೇನೆ ಮತ್ತು ಇಸ್ಲಾಂ ಎಂದರೆ ಶರಣಗತಿ ಶಾಂತಿ ಎಂಬ ಅರಿವು ತಿಳಿದಂತಾಗಿದೆ. ಇಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಮಾಡಬೇಕು ಮತ್ತು ಎಲ್ಲರೂ ಇಲ್ಲಿಗೆ ಬರಬೇಕು ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ರೈತ ಸಂಘದ ಅರುಣ್ ಕುಮಾರ್ ಕುರುಡಿ, ಬಲ್ಲೂರ್ ರವಿಕುಮಾರ್, ಜಬೀನಾಖಾನಂ, ಕರಿಬಸಪ್ಪ, ಅಲ್ಲಾಭಕ್ಷ್, ಸಾಜಿದ್, ಶೋಯಬ್, ತಾರಿಕ್, ಮಸೀದಿ ಕಮಿಟಿಯ ಅಧ್ಯಕ್ಷ ಸೈಯದ್ ಮನ್ಸೂರ್, ನ್ಯಾಮೇತುಲ್ಲ, ರಫೀಕ್, ಸೈಯದ್ ನಯಾಜ್, ನೂರುಲ್ಲಾ, ಉಮರ್ ಫಾರೂಕ್ ಮೌಲಾನ್, ಸೈಯದ್, ಉಬೇಧುಲ್ಲ, ಯಾಕೂಬ್, ಆಟೋ ರಫೀಕ್ ಸೇರಿದಂತೆ ಸಾವಿರಾರು ಜನರು ಮಸೀದಿ ದರ್ಶನ ಮಾಡಿದರು.

TAGGED:Davanagere districtDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere judegement news | ಚಾಕು ಇರಿದ ಆರೋಪಿಗೆ 2 ವರ್ಷ ಸಜೆ
Next Article DAVANAGERE Davanagere | ರಾಷ್ಟ್ರೀಯ ಲೋಕ್ ಅದಾಲತ್‌ : ರಾಜಿ ಮೂಲಕ  ಮತ್ತೆ ಒಂದಾದ ದಂಪತಿಗಳು

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಮೈಲಾರ ಜಾತ್ರೆ : ಫೆ. 14 ರಂದು ಕಾರ್ಣಿಕೋತ್ಸವ, ಭಕ್ತಿ, ಭಕ್ತರ ಭಾವನೆಗಳಿಗೆ ಪ್ರಾಮುಖ್ಯತೆ : ಡಿಸಿ  

ವಿಜಯನಗರ (ಹೊಸಪೇಟೆ), ಜ. 7 : ಭಕ್ತಿ ಪ್ರಧಾನವಾದ ಮೈಲಾರ ಕಾರ್ಣಿಕೋತ್ಸವದಲ್ಲಿ ಭಕ್ತರ ಭಾವನೆಗಳಿಗೆ ಧಕ್ಕೆ ಬಾರದಂತೆ ಜಾತ್ರೆ ಆಯೋಜಿಸಲು…

By Dinamaana Kannada News

HARIHARA : ಗುತ್ತೂರು ಗ್ರಾಮಕ್ಕೆ ಶಾಶ್ವತ ರುದ್ರಭೂಮಿ ಕಲ್ಪಿಸಿ : ಪ್ರತಿಭಟನೆ

ಹರಿಹರ ಅ 1  (Davangere district )  :  ದಲಿತರಿಗೆ ಸ್ಮಶಾನ  (ಸುಡುಗಾಡು,ಶ್ಮಶಾನ )  ಇಲ್ಲದ ಗ್ರಾಮವೆಂದೇ ಖ್ಯಾತಿಪಡೆದಿರುವ ತಾಲೂಕಿನ…

By Dinamaana Kannada News

poem | ಚೂರೇಚೂರು ಮಾನವೀಯತೆ 

ಅವಳು‌  ಸಮುದ್ರ ಕಿತ್ತೊಗೆದ ಮರುಳು ಬಟ್ಟಯಿಲ್ಲದ ಗೋಡೆಯಪ್ಪಿದ ಬೆತ್ತಲ ಚಿತ್ರ ಹಾಗೆ ನೋಡಿದರೆ ಅವಳು ನಿಜಕ್ಕೂ ಬೆತ್ತಲಲ್ಲ ಬದುಕಿನ ಅದೆಷ್ಟೋ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?