Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > poem | ನಾ ಹೊಲೆದ ಕೆರವ ನಾ ಮೆಟ್ಟಿದ್ದರೆ ..
Blog

poem | ನಾ ಹೊಲೆದ ಕೆರವ ನಾ ಮೆಟ್ಟಿದ್ದರೆ ..

Dinamaana Kannada News
Last updated: October 17, 2024 4:47 am
Dinamaana Kannada News
Share
P.R.VENKATESH
P.R.VENKATESH
SHARE

ಬಯಲ ಬೇಲಿಯ ಆಚೆ

ಬಿಸಿಲಿಗೆ ಮರವಾಗಿ, ನೆಲಕೆ ನೆರಳಾಗಿ

ಆ….ಹೊತ್ತಿನಿಂದ ಈ….ಹೊತ್ತಿನಿವರೆಗೆ

ಕೆರ ಹೊಲೆದು ಕೆರದಂತಾದೆ

ನಾ ಹೊಲೆದ ಕೆರವ ನಾ ಮೆಟ್ಟಿದ್ದರೆ

ಉಬ್ಬು ತಗ್ಗುಗಳ ತೊರೆದು

ಬೇಲಿ ಕಡಿದು

ನನ್ನ ಗುಡಿಸಲೆದರು ಹೆದ್ದಾರಿ ಹಾಸುತ್ತಿತ್ತು.

 

ಜಗವ ಬಗೆದು,

ಚರ್ಮವ ಸುಲಿದು

ರಟ್ಟೆ  ಸೋಲಿಸಿ  ಬಡಿದು, 

ಮೆತ್ತಗೆ ಹದಗೊಳಿಸಿ

ಕಾಯಕದ ಚಿಮುಟಿಗೆ ಕರುಳ ದಾರವ ತೊಡೆಸಿ

ಆಕಾರ ಕೊಟ್ಟೆ.

ಪರಮಾನ್ನ ಉಂಡವರ  ಪಾದ ಹೊಕ್ಕ ಕೆರ

ನನ್ನನೇ ಮರೆಯಿತು.

ಮರೆತ ಕೆರವ ಮೆಟ್ಟಿದ್ದರೆ

ಚರಿತ್ರೆಯ ಗೊಣಸಾಗಿ

ನೆಲದ ಒಡಲಲಿ ಹೂತ ದನಿಗೆ ಕೊರಳಾಗುತ್ತಿತ್ತು.

 

ಬಿರುಕಿರಲಿ, ಆನೆಬಿಲ್ಲಿಯ ಅಳುಕಿರಲಿ,

ಸವೆದಿರಲಿ ನವೆದಿರಲಿ,

ಸಣ್ಣದಿರಲಿ ದೊಡ್ಡದಿರಲಿ

ಎಂಥ ಪಾದವೆ ಇರಲಿ

ಬೆವರ ಪಾಲೀಷಿಗೆ ಮಿರಮಿರ ಮಿನುಗಿ

ಜೀರ್ ಜೀರ್, ಪಟಪಟಾ ಹಾಡ ಗುನುಗಿ

ಜಾತಿ,ದರ್ಮ, ವರ್ಗದ ಗಡಿ ಮೀರಿ

ಚೆನ್ನನ ತೊಡೆಯಲಿ ಅರಳಿ, 

ನಿನ್ನ ತೆಲೆ ಮೆಟ್ಟಿದ ಕೆರವ ನಾ ಮೆಟ್ಟಿದ್ದರೆ ಬಸವಾ…

ದೇಹವೆ ದೇಗುಲವಾಗಿ

ದಯೆತೊಟ್ಟ ದರ್ಮಕ್ಜೆ ಲಾಂಚನವಾಗಿ

ಬೆವರ ದೇವರ ಪಟ್ಟದಲಿ

ಕಾಯಕಕೆ ಉಧೋ… ಎನ್ನುತ್ತಿತ್ತು

ನೆಲದ ಒಡಲಲ್ಲಿ

ಸಮಪಾಲ,  ಸಮಬಾಳ ಬಳ್ಳಿ ಹಬ್ಬುತ್ತಿತ್ತು.

 

ಹೇಳಿ ಹೃದಯವಂತ ಕವಿಗಳೇ, 

ಘನವೇತ್ತ ಜನರೇ ಹೇಳಿ,

ನಾ ಹೊಲೆದ ಕೆರ

ಜಗದ ಹೊಲಸನು ತಿಂದರೂ

ನಿಮಗೆ ಹೊಲಸ ಹಚ್ಚಿತ್ತೆ?

ಕಲ್ಲೆಡವಿ ನೊಂದರೂ

ನಿಮಗೆ ಗಾಯ ಕೊರೆದಿತ್ತೇ?

ನಿಮ್ಮ ಹೆಜ್ಜೆಗೆ ಹೆಜ್ಜೆಹಾಕಿ

ಗುಡ್ಡ ಬೆಟ್ಟವ ತಟ್ಟಿ

ನೆಲದ ಧೂಳನು ನುಂಗಿ

ದಿಕ್ಕು ತಪ್ಪಿ, ಹುದುಲಿಗೆ ಸಿಕ್ಕು,

ಮೂಳೆ ಮುರಿದು, ಉಂಗುಷ್ಟ ಕಿತ್ತು

ಶತ ಶತಮಾನದ  ಕೀವು ಕಕ್ಕಿದ ಕೆರವ

ನಾ ಮೆಟ್ಟಿದ್ದರೆ,

ಬುದ್ದ ಬೆಳಕಿನ ಹಣತೆಯಾಗುತ್ತಿತ್ತು

ನಾನತ್ವ ತೊರೆದು ನಾವತ್ವದ ಭಾವಕೋಶ ಅರಳುತ್ತಿತ್ತು.

ಮಹಾ ಜನರೇ,

ನಿಮ್ಮ ಪಾದ ಹೊಕ್ಕ ಕೆರ ನನ್ನ ಮೈ ಕಚ್ಚಿದೆ ಈಗ

ಕೆರಕ್ಕೆ ಕಚ್ಚುವ ಚಟ ಕಲಿಸಿದವರಾರು ಸ್ವಾಮಿ?

ಎಂಬ ಪ್ರಶ್ನೆಗೆ 

ಜಗದ ಬೆತ್ತಲ ನಗು ಮಾತ್ರ ಉತ್ತರ.

 

ಆ… ಹೊತ್ತಿಂದ ಈ… ಹೊತ್ತಿನ ತನಕ

ಕೆರ ಹೊಲೆದು  ಕೆರದಂತಾದೆ

ಅಪ್ಪಿತಪ್ಪಿಯೂ ಯಾರ ಹೊಸಲ ದಾಟಲಿಲ್ಲ

ಮನೆಮುಂದಿನ ಮೂಲಿಬಿಟ್ಟು

ಮನದ ಮಂದಿರಕೆ ನುಸುಳೇ ಇಲ್ಲ

ನಾ ಹೊಲೆದ ಕೆರವ ನಾ ಮಟ್ಟಲೇ ಇಲ್ಲ. !

Read also : ದಿನಮಾನ ಹೆಮ್ಮೆ : ನೆಲದ ಮೈಯ್ಯಿಗೆ ದುಡಿವ ಹೆಜ್ಜೆಗಳ ಕಾವ್ಯ ಬರೆವ -ಪಿ.ಆರ್.ವೆಂಕಟೇಶ್

ಪಿ.ಆರ್. ವೆಂಕಟೇಶ್….

TAGGED:Dinamana.comKannada NewsPoemPoet P.R. Venkateshಕನ್ನಡ ಸುದ್ದಿಕವಿ ಪಿ.ಆರ್‌ ವೆಂಕಟೇಶಕವಿತೆದಿನಮಾನ.ಕಾಂ
Share This Article
Twitter Email Copy Link Print
Previous Article Harihara Harihara | ಮೊಬೈಲ್‌ಗಳಿಂದ ದೂರವಿರಿ : ಪ್ರೊ. ಸಿ.ಕೆ. ರಮೇಶ್
Next Article Davanagere Harihara | ಹರಿಹರ ಜಿಟಿಟಿಸಿ ಕೇಂದ್ರದಲ್ಲಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಜಲ, ವಾಯು ಮತ್ತು ಅರಣ್ಯ ಸಂರಕ್ಷಣೆಗೆ ಕಟಿಬದ್ಧರಾಗಬೇಕು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಹರಿಹರ:  ಜಲ, ವಾಯು, ಅರಣ್ಯ ಸಂರಕ್ಷಣೆಗೆ ಕಟಿಬದ್ಧರಾಗಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು. ಹರಿಹರ ಸಮೀಪದ ಅಮರಾವತಿಯ…

By Dinamaana Kannada News

Davanagere |ಕಾನೂನು ಸುವ್ಯಸ್ಥೆಗೆ ಧಕ್ಕೆಯಾಗದಂತೆ ಕ್ರಮವಹಿಸಿ : ಎಸ್ಪಿ ಸೂಚನೆ

ದಾವಣಗೆರೆ (Davanagere): ಕಾನೂನು ಸುವ್ಯಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಸೂಚಿಸಿದರು. ನಗರದಲ್ಲಿಂದು…

By Dinamaana Kannada News

ನೀಲಿ ಟವೆಲ್ಲು…ಹಸಿರು ಶಾಲೂ

ಅದು ೧೯೮೬ನೆಯ ಇಸವಿ.ನಾನು ಎಸ್ಸೆಸ್ಸೆಲ್ಸಿ ನಂತರ ಪಿ.ಯು.ಸಿ.ವಿಜ್ಞಾನ ಓದಲು ಕೊಟ್ಟೂರಿನ ಕಾಲೇಜಿಗೆ ಸೇರಿಕೊಂಡಿದ್ದೆ.ಕೂಡ್ಲಿಗಿಯಿಂದ ಕೊಟ್ಟೂರಿಗೆ ದಿನನಿತ್ಯವೂ ಓಡಾಡಲು ಹದಿನೈದು ರೂಪಾಯಿಯ…

By Dinamaana Kannada News

You Might Also Like

arrest
ತಾಜಾ ಸುದ್ದಿ

crime news | ರೌಡಿಶೀಟರ್ ಕಣುಮನ ಕೊಲೆ ಪ್ರಕರಣ : 10 ಆರೋಪಿಗಳು ಆಂದರ್

By Dinamaana Kannada News
Lokayukta Davanagere
ತಾಜಾ ಸುದ್ದಿ

Lokayukta | ಒಳಚರಂಡಿ ಮಂಡಳಿ ಎಂಜಿನಿಯರ್ ಮನೆ ಮೇಲೆ ಲೋಕಾ ದಾಳಿ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

Harihara | ರೈಲು ಗಾಡಿಗೆ ಸಿಲುಕಿ ವೃದ್ದೆ ಸಾವು

By Dinamaana Kannada News
Davanagere
ತಾಜಾ ಸುದ್ದಿ

Davanagere | ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?