Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ನೊಂದ ನೆರಿಗೆಯ ಸ್ವಾಗತ 
Blog

ನೊಂದ ನೆರಿಗೆಯ ಸ್ವಾಗತ 

Dinamaana Kannada News
Last updated: March 22, 2024 12:07 pm
Dinamaana Kannada News
Share
A painful welcome
A painful welcome
SHARE

 

ಆಕಾಶದ ನೀಲಿಯಲಿ
ಚಂದ್ರ ತಾರೆ ತೊಟ್ಟಿಲಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರಷ್ಟೇ ಸಾಕೆ

 

ಜಿ.ಎಸ್. ಶಿವರುದ್ರಪ್ಪರವರ ಕವಿವಾಣಿಯಂತೆ ನೋವ ನೆರಿಗೆಯಾಗಿಸಿಕೊಂಡ ಪ್ರತಿಯೊಬ್ಬರ ಬದುಕಲ್ಲಿ ಹೆಣ್ಣು ತಾಯಿಯಿಂದ ಹಿಡಿದು ಮಡದಿಯವರೆಗೆ ವಿವಿಧ ಸ್ಥಾನಗಳಲ್ಲಿ ಅಲಂಕರಿಸಿ ಗಂಡಿನ ಆತ್ಮಬಲ ಹೆಚ್ಚಿಸುವ ಶಕ್ತಿವರ್ಧಕವಾಗಿದ್ದಾಳೆ. ಅವನು ಎಷ್ಟೇ ಬಲಿಷ್ಠನಾಗಿದ್ದರು, ಬದುಕು ಅಯೋಮಯವಾಗಿ ಭಾವದ ಬಿತ್ತಿಗಳು ತಲ್ಲಣಗೊಂಡು ತತ್ತರಿಸುತ್ತವೆ .

ನೀನು ಎಷ್ಟೇ ಉನ್ನತ ಮಟ್ಟದಲ್ಲಿದ್ದರೂ… ಏನೆಲ್ಲಾ ಸಾಧನೆಯ ಶಿಖರ ಏರಿದ್ದರೂ ಸಹ ನನ್ನ ಗರ್ಭದಿಂದಲೇ ಬಂದಿರುವೆ ಎಂಬುದು ಸದಾ ಸ್ಮರಣೆಯಲ್ಲಿಸಿಕೊಂಡು ಮುಂದೆ ಸಾಗಬೇಕಾದುದು ಸಂಸ್ಕಾರಯುತ ಕರ್ತವ್ಯ.

ಮಾಂಸದ ಮುದ್ದೆಯಂತಹ ಭ್ರೂಣಕ್ಕೆ ಜೀವವನ್ನಷ್ಟೇ ಅಲ್ಲ, ಜೀವನವನ್ನು ನೀಡಿದ್ದೇನೆ. ಲಾಲನೆ – ಪಾಲನೆ ಮಾಡಿ ಸಾಕಿ ಬೆಳೆಸಿ ಜಗತ್ತಿಗೆ ನಿನ್ನನ್ನು ಪರಿಚಯಿಸಿದ್ದೇನೇ ಸಮರ್ಪಣಾ ಭಾವದಿಂದ ಬೀರುವ ಮಂದಹಾಸದ ಮೇಲೆ ನಿನ್ನ ಕರಿನೆರಳ ಛಾಯೆಯನ್ನು ಮೂಡಿಸಬೇಡ .

ಅರಳುಗಣ್ಣಿನ ಆಸೆಗಳಿಗೆ ಹರಳಿನ ಚೂರಾಗಿ ಚುಚ್ಚಬೇಡ

ತಾಯಿ , ಅಕ್ಕ – ತಂಗಿ, ಹೆಂಡತಿ, ಮಗಳ ರೂಪದಲ್ಲಿದ್ದೇನೆಯಲ್ಲವೇ..? ಸುಕೋಮಲ ಕಾಯದ ಪುಷ್ಪದಂತ ನನ್ನ ಹೆಜ್ಜೆ – ಹೆಜ್ಜೆಗೂ ಕೆಂಗಣ್ಣಿನಿಂದ ನೋಡಿ ದಹಿಸಬೇಡ , ಕಣ್ಣಿನ ಕಿಚ್ಚಿಗೆ ಕಮರುವಂತ ಸೂಕ್ಷ್ಮ ಸಂವೇದನಾಶೀಲಾ ಸ್ವಭಾವದ ಹಾಲುಗಲ್ಲದ ಹಸುಳೆ ಎನ್ನದೆ ಕಿತ್ತು ತಿನ್ನುವ ಪೈಶಾಚಿಕ ಕೃತ್ಯಕ್ಕೆ ನೀನು ಮುಂದಾಗುವಾಗ, ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡುವಾಗ , ಸಜೀವ ದಹನ ಮಾಡುವಾಗ, ನಿನ್ನಲ್ಲೇ ಅಡಗಿಕೊಂಡು ಗುಪ್ತಗಾಮಿನಿಯಂತೆ ಪ್ರವಹಿಸುವ ನೋವ್ವು, ಸಂಕಟ ಪ್ರಚೋದನೆಗೊಳ್ಳದಿರಲು ಕಾರಣವಾದರೂ ಏನಿರಬಹುದು..?

ಒಂದು ಬಾರಿ ಬಂದು ನೋಡು ಈ ಸುಂದರ ಜಗತ್ತಿನಲ್ಲಿ ಅರಳಿ ಘಮಘಮಿಸುವ ಹೂದೋಟದಂತ ನನ್ನ ಇಡೀ ಬದುಕನ್ನೇ ನಿನಗಾಗಿಯೇ ಅರ್ಪಿಸಲು ಕಾಯುತ್ತಿದ್ದೇನೆ .

ಸಂಯಮಶೀಲ ಅರ್ಪಣಾ ಭಾವಕ್ಕೆ, ಸಹಚಾರಿಕೆಗೆ ನಿನ್ನಿಂದ ಬಯಸುವುದಾದರೂ ಏನು..? ಕೇವಲ ಸ್ನೇಹ – ಪ್ರೀತಿ ಮಾತ್ರ. ಪ್ರತಿಯೊಂದು ರಂಗದಲ್ಲೂ ಸಹ ನಿನ್ನಷ್ಟೇ ಸರಿಸಮಾನವಾಗಿ ದುಡಿಯಬಲ್ಲ ಚಾಕಚಕ್ಯತೆಯನ್ನು ಹೊಂದಿದ್ದರು, ಬುದ್ಧಿಮತ್ತೆಯಲ್ಲಿ ಮೇಲಿದ್ದರೂ, ನೀನು ಕೈಚೆಲ್ಲಿದರೂ ಸಹ ಇಡೀ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತು ಸಾಗುವ ದಣಿವರಿಯದ ದಯಾವಂತೆಯಾದ ನನ್ನ ದಾರಿಯಲ್ಲಿ ಹೂವು ಬಳ್ಳಿಗಳು ಸ್ವಾಗತಿಸದೆ ತೊಡರುಗಾಲು ಹಾಕಿದ್ದು ಖೇದನೀಯ ಸಂಗತಿ. ಹಂಚಿದಷ್ಟು ಇಮ್ಮಡಿಯಾಗುವ ಸ್ನೇಹ – ಪ್ರೀತಿಯಿಂದ ನಡೆಸಿಕೊಂಡಲ್ಲಿ ಸಂಬಂಧಗಳು ಗಟ್ಟಿಯಾಗುತ್ತವೆ.

 

ಗೀತಾಮಂಜು ಬೆಣ್ಣೆಹಳ್ಳಿ
ಶಿಕ್ಷಕಿ ,ಕವಯಿತ್ರಿ
ಸ. ಹಿ. ಪ್ರಾ. ಶಾಲೆ, ಬೆಣ್ಣೆಹಳ್ಳಿ
ಜಗಳೂರು. ತಾ.
ದಾವಣಗೆರೆ. ಜಿ.

TAGGED:A painful welcomedinamaana.comdinamaana.com.davanagere newsದಿನಮಾನ.ಕಾಂದಿನಮಾನ.ಕಾಂ.ದಾವಣಗೆರೆ ಸುದ್ದಿನೊಂದ ನೆರಿಗೆಯ ಸ್ವಾಗತ
Share This Article
Twitter Email Copy Link Print
Previous Article Researches of People's Development: Prof. Indumati ಜನಪರ ಅಭಿವೃದ್ಧಿಯ ಸಂಶೋಧನೆಗಳಾಗಲಿ : ಪ್ರೊ.ಇಂದುಮತಿ
Next Article Water is lifeblood of life ನೀರು ಜೀವ ಸಂಕುಲದ ಜೀವಾಮೃತ : ನ್ಯಾ. ರಾಜೇಶ್ವರಿ ಎನ್.ಹೆಗಡೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಇದೇ ಆರ್ಥಿಕ ವರ್ಷದಲ್ಲಿ ಕಾಮಗಾರಿ ಪ್ರಾರಂಭ : ರೈಲ್ವೆ ಸಚಿವ ವಿ.ಸೋಮಣ್ಣ

ದಾವಣಗೆರೆ.ಅ.2.  (Davanagere):  ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದು ಮುಂದಿನ ನಾಲ್ಕೈದು ತಿಂಗಳು ಇದೇ…

By Dinamaana Kannada News

Crime news | ರೌಡಿಶೀಟರ್ ಕಣುಮನ ಹಂತಕರು ಒಂದು ದಿನದ ನಂತರ ಅಂದರ್ !

ಚಿತ್ರದುರ್ಗ (chitraduraga): ರೌಡಿ ಶೀಟರ್ ಕಣುಮ ಅಲಿಯಾಸ್ ಕಣುಮ ಸಂತೋಷಕುಮಾರನನ್ನು ಬರ್ಬರವಾಗಿ ಹತ್ಯೆಗೈದು ಸ್ಥಳದಿಂದ ನಾಪತ್ತೆಯಾಗಿದ್ದ ಹಂತಕರ ಪೈಕಿ 10…

By Dinamaana Kannada News

ಡೆಂಗ್ಯೂ ಜ್ವರ : ಕ್ರಮಕ್ಕೆ ಸಚಿವ ಎಸ್ಸೆಸ್ಸೆಂ ಸೂಚನೆ

ದಾವಣಗೆರೆ:  ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಳ ಆಗದಂತೆ ಸೂಕ್ತ ಕ್ರಮ ವಹಿಸುವಂತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?