Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere | ಯಶಸ್ಸು ನಿಮ್ಮದಾಗಲು ಗುರಿ ಇಟ್ಟುಕೊಳ್ಳಿ : ಪ್ರೊ.ಆರ್.ಶಶಿಧರ್
ತಾಜಾ ಸುದ್ದಿ

Davanagere | ಯಶಸ್ಸು ನಿಮ್ಮದಾಗಲು ಗುರಿ ಇಟ್ಟುಕೊಳ್ಳಿ : ಪ್ರೊ.ಆರ್.ಶಶಿಧರ್

Dinamaana Kannada News
Last updated: March 9, 2025 1:23 pm
Dinamaana Kannada News
Share
Davanagere AVK
Davanagere AVK
SHARE
ದಾವಣಗೆರೆ (Davanagere): ಆಧುನಿಕ ಶಿಕ್ಷಣ ಪದ್ಧತಿಯು ಇಂದು ಅನೇಕ ಜ್ಞಾನ ಶಿಸ್ತುಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಟ್ಟಿದೆ. ಆ ಆಧುನಿಕ ಶಿಕ್ಷಣದ ಮೂಲಕ ನಿಮ್ಮನ್ನು ನೀವು ಯಶಸ್ಸು ಮತ್ತು ಸಂತೃಪ್ತ ಜೀವನ ನಡೆಸುವ ಕಡೆಗೆ ದಾಪುಗಾಲು ಇಡಬೇಕೆಂದು ದಾವಣಗೆರೆ ವಿವಿ ಆಡಳಿತಾಂಗದ ಕುಲಸಚಿವ ಪ್ರೊ.ಆರ್.ಶಶಿಧರ್ ತಿಳಿಸಿದರು.
ನಗರದ ಎವಿಕೆ ಮಹಿಳಾ ಕಾಲೇಜಿನಲ್ಲಿ 2021-24 ನೇ ಸಾಲಿನ ವಿದ್ಯಾರ್ಥಿನಿಯರ ‘ಪದವೀಧರರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ನಾಳಿನ ಭವಿಷ್ಯದ ಶೈಕ್ಷಣಿಕ ಸಾಧನೆಯ ಜೊತೆಗೆ ಸಾಮಾಜಿಕ, ಕೌಟುಂಬಿಕ ಜೀವನವೂ ಕೂಡ ಯಶಸ್ಸು ಮತ್ತು ತೃಪ್ತಿಕರವಾಗಿ ಕೂಡಿರಬೇಕು. ಹಾಗಾದರೆ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಇಂದು ಆರ್ಟಿಫಿಶಲ್ ಇಂಟಲಿಜೆನ್ಸ್ ಯುಗ ಇದ್ದು, ಇದರ ಮೂಲಕ ಜಗತ್ತು ಹೊಸ ಹೊಸ ಆವಿಷ್ಕಾರ ನಡೆಸುತ್ತಿದೆ. ನೀವೂ ಕೂಡ ಬದಲಾದ ಕಾಲಕ್ಕೆ ಬದುಕನ್ನು ಒಳ್ಳೆಯ ಮಾರ್ಗದಲ್ಲಿ ಬದಲಾಯಿಸಿಕೊಂಡು ಬದುಕಬೇಕಿದೆ ಎಂದರು.
ಅಧ್ಯಾಪಕರು ನಿಮಗೆ ನೀಡಿದ್ದು, ಕೇವಲ ವಿದ್ಯೆ, ಜ್ಞಾನ ಮಾತ್ರವಲ್ಲ ಜೊತೆಗೆ ಬದುಕಿನ ಮಾರ್ಗವನ್ನು ತೋರಿದ್ದಾರೆ. ನೀವು ಉತ್ತಮ ಗುರಿಯನ್ನು ಇಟ್ಟುಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ನಾಳಿನ ಭವಿಷ್ಯಕ್ಕೆ ಇಂದೇ ನೀವು ಗುರಿ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವು ಪದವಿಗಳ ಜೊತೆ ಜೊತೆಗೆ ನೀವು ಅನೇಕ ಆನ್‌ಲೈನ್ ಕೋರ್ಸ್ ಪಡೆಯಬಹುದಾಗಿದೆ. ಈ ವಿದ್ಯೆ ಪಡೆಯಲು ಧನಾತ್ಮಕ ಆಲೋಚನೆ ಇಟ್ಟುಕೊಂಡು ಸಾಗಬೇಕು. ಉದ್ಯೋಗಕ್ಕೆ ಅನೇಕ ಅವಕಾಶ ಇದ್ದರೂ ಕೂಡ ಅದಕ್ಕೆ ತಕ್ಕುದಾದ ಜ್ಞಾನ ನಮ್ಮ ಯುವ ಜನಾಂಗದಲ್ಲಿ ಸಿಗುವುದು ಕಷ್ಟವಾಗಿದೆ. ಅದೆಷ್ಟೋ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿಯೇ ಇಲ್ಲ. ನೀವೆಲ್ಲರೂ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿ ಇಟ್ಟುಕೊಳ್ಳಿ, ಆ ಮೂಲಕ ನಿಮ್ಮನ್ನು ನೀವು ಸಾಧಕರಾಗಿ. ನಿಮ್ಮ ಬಾಳಿನಲ್ಲಿ ಆಶಾದಾಯಕ ಭಾವನೆಗಳು ಸದಾಕಾಲವೂ ಇರಲಿ. ಇಂದಿನ ಕಾಲದಲ್ಲಿ ಉತ್ತಮ ಹುದ್ದೆಯಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಆ ಮಾರ್ಗದಲ್ಲಿ ನೀವೆಲ್ಲರೂ ಸಾಗಬೇಕು ಎಂದು ಹೇಳುತ್ತಾ, ಪದವಿ ಪಡೆದ ಎಲ್ಲಾ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯ ಸಂಪನ್ನ ಮುತಾಲಿಕ್, ಯಶಸ್ಸಿನ ಹಿಂದೆ ನಿಮಗೆ ವಿದ್ಯೆ ನೀಡಿದ ಗುರುಗಳ ಪರಿಶ್ರಮ ಇದೆ. ಅಲ್ಲದೇ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಮೂಲಕ ಇನ್ನೂ ಹೆಚ್ಚು ಹೆಚ್ಚು ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಆಗಬೇಕು. ಆ ಉದ್ದೇಶದಿಂದ ಎವಿಕೆ ಮಹಿಳಾ ಕಾಲೇಜು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿಯೇ ಸ್ಥಾಪನೆ ಮಾಡಲಾಗಿದೆ ಎಂದರು.
ಅಲ್ಲದೇ ಒಳ್ಳೆಯ ಶಿಕ್ಷಣ ಪಡೆದು ಗಂಡು ಹೆಣ್ಣು ಎಂಬ ಭೇದ-ಭಾವ ಮರೆತು ಸಹಬಾಳ್ವೆಯಿಂದ ಒಟ್ಟಿಗೆ ಬಾಳುವ ಶಿಕ್ಷಣ ನಿಮ್ಮದಾಗಿರಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ್, ನಮ್ಮ ಕಾಲೇಜಿನಲ್ಲಿ ಎರಡನೇ ಬಾರಿಗೆ ಗ್ರ‍್ಯಾಜುಯೇಷನ್ ಡೇ ಆಚರಿಸುತ್ತಿದ್ದೇವೆ. ವಿದ್ಯಾರ್ಥಿನಿಯರು ದಾವಣಗೆರೆ ವಿವಿ ಪದವಿ ಪರೀಕ್ಷೆಯಲ್ಲಿ 10  ರಾಂಕ್ ಬಂದಿದೆ. ಇದೊಂದು ಮೈಲಿಗಲ್ಲು ದಿನ ನಮಗೆ. ಈ ವಿದ್ಯಾರ್ಥಿನಿಯರಿಗೆ ನಮ್ಮ ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ ಅವರು ತಲಾ 5001  ರೂ. ಚೆಕ್ ನೀಡಿ ಗೌರವಿಸಿದ್ದಾರೆ ಎಂದರು.
Read also : Davanagere | ಮಿಸ್ ಪಾರ್ವತಿ ಕಾರ್ಯಕ್ರಮ; ಸಂಸದರಿಂದ ಪೋಸ್ಟರ್ ಬಿಡುಗಡೆ
232  ವಿದ್ಯಾರ್ಥಿನಿಯರು ಗೌನ್ ಹ್ಯಾಟ್, ಪದವಿ ಪಡೆದ ಪ್ರಮಾಣ ಪತ್ರ ಹಿಡಿದು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಐಕ್ಯೂಎಸಿ ಸಂಯೋಜಕ ಪ್ರೊ.ಆರ್.ಆರ್.ಶಿವಕುಮಾರ್ ಮಾತನಾಡಿದರು. ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರಭಾವತಿ ಎಸ್.ಹೊರಡಿ, ಪ್ರಾಣಿಶಾಸ್ತ್ರ  ವಿಭಾಗದ ಮುಖ್ಯಸ್ಥ ಡಾ.ಕೆ.ಗುರುರಾಜ್, ಡಾ. ಆರ್.ಜಿ.ಕವಿತಾ, ಡಾ.ಜೆ.ಜಿ.ನಾಗವೇಣಿ, . ಎಲ್ಲಾ ವಿಭಾಗದ ಮುಖ್ಯಸ್ಥರು, ಗ್ರಂಥಪಾಲಕರು, ಬೋಧಕ- ಬೋಧಕೇತರ ವರ್ಗದವರು ಇದ್ದರು.
TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article ಬಾಪೂಜಿ ವಿದ್ಯಾಸಂಸ್ಥೆ Davanagere | ಮಿಸ್ ಪಾರ್ವತಿ ಕಾರ್ಯಕ್ರಮ; ಸಂಸದರಿಂದ ಪೋಸ್ಟರ್ ಬಿಡುಗಡೆ
Next Article Political analysis Political analysis | ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು?

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಮುಳುಗುತ್ತಿದ್ದ ಯುವಕನ ರಕ್ಷಣೆಗೆ ಹೋದ ಇಬ್ಬರು ನೀರು ಪಾಲು

ದಾವಣಗೆರೆ (DAVANAGERE) : ತಾಲೂಕಿನ ಕುರ್ಕಿ ಗ್ರಾಮದ ಬಳಿಯ ಭದ್ರಾ ಕಾಲುವೆಯಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆಗೆ ಹೋದ ಇಬ್ಬರು ನೀರು…

By Dinamaana Kannada News

ಮತದಾರ ಜಾಗೃತಿಗೆ ಹಾಟ್ ಏರ್ ಬಲೂನ್ ಹಾರಾಟ

ದಾವಣಗೆರೆ.ಮೇ.5 : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಆಶ್ರಯದಲ್ಲಿ ಜಿಲ್ಲಾ…

By Dinamaana Kannada News

ಭಾರತ ವಿಶ್ವದಲ್ಲಿಯೇ ಒಂದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ : ಡಿಸಿ

ದಾವಣಗೆರೆ ಏ.14 :  ಡಾ. ಬಿ.ಆರ್ ಅಂಬೇಡ್ಕರ್ ರವರು ಹಾಕಿಕೊಟ್ಟಂತಹ ಸಂವಿಧಾನದಿಂದ ಭಾರತ ವಿಶ್ವದಲ್ಲಿಯೇ ಒಂದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

By Dinamaana Kannada News
Political analysis
ರಾಜಕೀಯ

Political analysis | ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು?

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?