Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Crime news | ದೇಶದ ಕುಖ್ಯಾತ ದರೋಡೆಕೋರರು ಅಂದರ್ | ಪ್ರಾಣದ ಹಂಗು ತೊರೆದು ಬಂಧಿಸಿದ ಹೊನ್ನಾಳಿ‌ -ನ್ಯಾಮತಿ  ಪೊಲೀಸರು !!
ತಾಜಾ ಸುದ್ದಿಅಪರಾಧ ಸುದ್ದಿ

Crime news | ದೇಶದ ಕುಖ್ಯಾತ ದರೋಡೆಕೋರರು ಅಂದರ್ | ಪ್ರಾಣದ ಹಂಗು ತೊರೆದು ಬಂಧಿಸಿದ ಹೊನ್ನಾಳಿ‌ -ನ್ಯಾಮತಿ  ಪೊಲೀಸರು !!

Dinamaana Kannada News
Last updated: March 16, 2025 2:24 pm
Dinamaana Kannada News
Share
crime news
crime news
SHARE
ನ್ಯಾಮತಿ/ ಹೊನ್ನಾಳಿ‌ (Nyamathi/ Honnali) : ಬ್ಯಾಂಕ್ ದರೋಡೆಯಲ್ಲಿ ದೇಶದಲ್ಲೇ ಕುಖ್ಯಾತರಾಗಿದ್ದ ನಾಲ್ವರು ಖದೀಮರನ್ನು ಪ್ರಾಣದ ಹಂಗು ತೊರೆದು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ದರೋಡೆಗೆ ಹೊಂಚು ಹಾಕಿದ್ದ ಉತ್ತರ ಪ್ರದೇಶದ ದರೋಡೆಕೋರರಿಗೆ ಭಾನುವಾರ ಹೊನ್ನಾಳಿ ಪೊಲೀಸರು ಎಡೆಮುರಿ ಕಟ್ಟಿದ್ದಾರೆ.
ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಬ್ಯಾಂಕ್ ಗಳನ್ನು ದರೋಡೆ ಮಾಡಿದ್ದು, ಮತ್ತೆ ಬ್ಯಾಂಕ್ ಗಳನ್ನು ದರೋಡೆ ಮಾಡಲು 1 ವಾರದ ಹಿಂದೆ ಕರ್ನಾಟಕ ರಾಜ್ಯಕ್ಕೆ ಬಂದು ದಾವಣಗೆರೆ ಉಳಿದುಕೊಂಡು  ದರೋಡೆ ಮಾಡಲು ಬ್ಯಾಂಕ್‌ಗಳನ್ನು  ಹೊಂಚು ಹಾಕಿದ್ದರು.
ಕಳೆದ ಎರಡು ದಿನಗಳಿಂದ  ಸವಳಂಗ ಗ್ರಾಮದಲ್ಲಿರುವ ಎಸ್ ಬಿಐ ಬ್ಯಾಂಕ್ ಬಳಿ ತಿರುಗಾಡಿ ಮಾಹಿತಿ ಪಡೆದು ರಾತ್ರಿ ಸವಳಂಗ ಗ್ರಾಮದ ಎಸ್ ಬಿ ಐ ಬ್ಯಾಂಕ್‌ನ್ನು ದರೋಡೆ ಮಾಡಲು  ಬಂದಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
ಉತ್ತರ ಪ್ರದೇಶದ ಬಾದಾಯ್ ಜಿಲ್ಲೆಯ ಕಕ್ರಾಳ ಗ್ರಾಮದ ಗುಡ್ಡು ಆಲಿಯಸ್ ಕಾಲಿಯಾ (45). ಹಜರತ್ ಆಲಿ (50). ಅಸ್ಲಾಂ ಆಲಿಯಾಸ್ ಟನ್ ಟನ್ (55) ಕಮರುದ್ದಿನ್ ಆಲಿಯಾಸ್ ಬಾಬು ಸೆರೆಲಿ(40) ಬಂಧಿತರು.
ಪ್ರಾಣದ ಹಂಗು ತೊರೆದು ಖದೀಮರ ಬೇಟೆ
ಕಾರ್ಯಾಚರಣೆ ವೇಳೆ ಪೇದೆ ಆನಂದ್ ಅವರ ತೋಳಿಗೆ ಮಚ್ಚಿನೇಟು ಬಿದ್ದಿದೆ, ಗುಂಡಿನೇಟಿಗೆ ಒಳಗಾದ ದರೋಡೆಗಾರ ಗುಡ್ಡು (45) ಈ ಇಬ್ಬರು ದಾವಣಗೆರೆ  ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಘಟನೆ ನಡೆದ ತಾಲೂಕಿನ ಅರಬಗಟ್ಟೆ ಕ್ರಾಸ್ ಗೆ ಭೇಟೆ  ನೀಡಿ ಪರಿಶೀಲಿಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು,  ಹರಿಹರದಿಂದ ಉತ್ತರಪ್ರದೇಶದ ನೋಂದಣೆ ಸಂಖ್ಯೆ  ಎರಡು ಕಾರು ಬರುತ್ತಿದ್ದವು, ಹರಿಹರದ  ಚೆಕ್‍ಪೋಸ್ಟ್  ಬಳಿ ನಿಲ್ಲಿಸದೆ ಹಾಗೇ ತಪ್ಪಿಸಿಕೊಂಡಿದ್ದಾರೆ. ಹರಿಹರ ಪೊಲೀಸ್ ರು ಹೊನ್ನಾಳಿ ಹಾಗೂ ನ್ಯಾಮತಿ ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ.  ತಾಲೂಕಿನ ಎಚ್.ಕಡದಕಟ್ಟೆ ಬಳಿ ಹೊನ್ನಾಳಿ ಪೊಲೀಸ್ ರು ಕಾರುಗಳನ್ನು ತಡೆಯಲು ಯತ್ನಿಸಿದ್ದಾರೆ.  ನಿಲ್ಲಿಸದೆ ನ್ಯಾಮತಿ ಕಡೆ ಹೋಗಿದ್ದಾರೆ.  ನ್ಯಾಮತಿ ಪೊಲೀಸ್ ರಿಗೆ ಸುದ್ದಿ ಮುಟ್ಟಿಸಿದ್ದಾರೆ.  ಅರಬಗಟ್ಟೆ ಕ್ರಾಸ್ ಬಳಿ ರಾತ್ರಿ 1.30ರ ಸಮಯದಲ್ಲಿ ಓವರ್ ಟೇಕ್ ಮಾಡಿ ಎರಡು ಕಾರುಗಳನ್ನು ನಿಲ್ಲಿಸಿದಾಗ ಕಾರ್‍ನಲ್ಲಿದ್ದ ದರೋಡೆಕೋರರು  ಪೊಲೀಸ್ ರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ವಿವರಿಸಿದರು.
ನ್ಯಾಮತಿ ಪೊಲೀಸ್   ಇನ್ಸಪೆಕ್ಟರ್ ರವಿ ಅವರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಾಯಾಳುವನ್ನು ದಾವಣಗೆರೆ ಆಸ್ಪತ್ರೆ ಸೇರಿಸಲಾಗಿದೆ. ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ.  ತಂಡದಲ್ಲಿ ಒಟ್ಟು 7 ಜನರಿರುವ ಬಗ್ಗೆ ಮಾಹಿತಿ ಇದ್ದು ಉಳಿದ ಆರೋಪಿಗಳು ತಪ್ಪಿಸಿಕೊಂಡಿದ್ದು ಪತ್ತೆಗಾಗಿ 2 ತಂಡಗಳನ್ನು ರಚಿಸಲಾಗಿದೆ ಎಂದರು.
ವಾಹನದಲ್ಲಿ ಮಾರಕಾಸ್ತ್ರಗಳು, 4 ಜೀವಂತ ಗುಂಡುಗಳು, ಅಕ್ಸಿಜನ ಸಿಲೆಂಡರ್ ರೆಗ್ಯುಲೇಟರ್, 3 ಕಬ್ಬಿನ ರಾಡ್, 5 ಪ್ಯಾಕೆಟ್ ಮೆಣಸಿನ ಪುಡಿ, 5 ಜೋತೆ ಹ್ಯಾಂಡ್ ಗ್ಲೌಸ್, ಒಂದು ಮಚ್ಚು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರಾಜಾರಾಮ್ ಉತ್ತರ ಪ್ರದೇಶದ ಬಚೌರ ಗ್ರಾಮ, ಬಾಬುಷಾ ಉತ್ತರ ಪ್ರದೇಶದ ನೌಲಿ ಗ್ರಾಮ, ಅಫೀಜ್ ಪಾರಾರಿಯಾಗಿದ್ದಾರೆ.  ಪತ್ತೆಗೆ ಪೊಲೀಸ್ ರ ತಂಡಗಳನ್ನು ರಚಿಸಲಾಗಿದೆ ಎಂದರು.
Read also : Davanagere | ಸಂಕಟಗಳಿಗೆ, ತಲ್ಲಣಗಳಿಗೆ ಮದ್ದಾಗಲಿ ವೃತ್ತಿ ರಂಗಭೂಮಿ : ಡಾ.ಎ.ಬಿ. ರಾಮಚಂದ್ರಪ್ಪ
ಪೊಲೀಸ್ ರ ಕೈಗೆ ಸಿಕ್ಕಿಬಿದ್ದಿರುವ ಉತ್ತರ ಪ್ರದೇಶದ ಆರೋಪಿಗಳ ವಿರುದ್ಧ ದೇಶದ ವಿವಿದೆಡೆಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ, ಜಾರ್ಖಡ್, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಚನ್ನಗಿರಿ ಉಪವಿಭಾಗದ ಎಎಸ್ಪಿ ಸ್ಯಾಂ ವರ್ಗೀಸ್, ಎಎಸ್ಪಿ ಎಸ್ಪಿ ವಿಜಯ ಸಂತೋಷ್, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್, ನ್ಯಾಮತಿ ಪೊಲೀಸ್ ಇನ್ಸ್ಪೆಕ್ಟರ್ ರವಿ, ಹೊನ್ನಾಳಿ ಇನ್ಸೆಪೆಕ್ಟರ್ ಸುನಿಲ್ ಕುಮಾರ್, ಹಾಗೂ ಹೊನ್ನಾಳಿ, ನ್ಯಾಮತಿ ತಾಲೂಕುಗಳ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
TAGGED:Davanagere districtDavanagere NewsDinamana.comKannada news ದಾವಣಗೆರೆ ಜಿಲ್ಲೆಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article National Career Theatre Festival Davanagere | ಸಂಕಟಗಳಿಗೆ, ತಲ್ಲಣಗಳಿಗೆ ಮದ್ದಾಗಲಿ ವೃತ್ತಿ ರಂಗಭೂಮಿ : ಡಾ.ಎ.ಬಿ. ರಾಮಚಂದ್ರಪ್ಪ
Next Article Davanagere Political analysis | ಅಮಿತ್ ಷಾ ಪರೀಕ್ಷೆಯಲ್ಲಿ ವಿಜಯೇಂದ್ರ ಪಾಸಾದರು

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere news | ಆಟೋದಲ್ಲಿ ಮರೆತು ಹೋಗಿದ್ದ ಅಭರಣ ಹಿಂದಿರುಗಿಸಿದ ಪೊಲೀಸರು

ದಾವಣಗೆರೆ  (Davanagere) : ಆಟೋದಲ್ಲಿ  ಕಳೆದುಕೊಂಡಿದ್ದ ಬಂಗಾರ & ಬೆಳ್ಳಿಯ ಆಭರಣಗಳನ್ನು ಪತ್ತೆ ಮಾಡುವಲ್ಲಿ ಬಸವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹರಿಹರದ ನವೀನತಾಜ್…

By Dinamaana Kannada News

ಸೂರ್ಯ ಘರ್ ಬಿಜಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ, ವಿದ್ಯುತ್ ಬಿಲ್ ಉಳಿತಾಯ ಮಾಡಿ

ದಾವಣಗೆರೆ (Davanagere):  ಸೋಲಾರ್ ರೂಫ್ ಟಾಪ್ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಸರ್ಕಾರ ಪಿಎಂ ಸೂರ್ಯಘರ್ ಮುಪ್ತ್…

By Dinamaana Kannada News

SC -ST ಅಭ್ಯರ್ಥಿಗಗಳಿಂದ ಮೊಬೈಲ್ ಕ್ಯಾಂಟೀನ್ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ (Davanagere):  ಪ್ರಸಕ್ತ ಸಾಲಿನಲ್ಲಿ ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ! ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು : ಆಲೂರು ನಿಂಗರಾಜ್

By Dinamaana Kannada News
ವಿಶ್ವ ಬೈಸಿಕಲ್ ದಿನಾಚರಣೆ
ತಾಜಾ ಸುದ್ದಿ

ವಿಶ್ವ ಬೈಸಿಕಲ್ ದಿನಾಚರಣೆ | ಸೈಕಲ್ ಬಳಸುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ  : ಉಮಾ ಪ್ರಶಾಂತ್ 

By Dinamaana Kannada News
Davanagere
ತಾಜಾ ಸುದ್ದಿ

ರಾಜ್ಯ ಸರ್ಕಾರದಿಂದ ಭೂ ಗ್ಯಾರಂಟಿ ಯೋಜನೆಯಡಿ ಹಂತಹಂತವಾಗಿ ಹಕ್ಕುಪತ್ರ ವಿತರಣೆ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
World No Tobacco Day
ತಾಜಾ ಸುದ್ದಿ

World No Tobacco Day | ದುಶ್ಚಟಗಳಿಂದ ದೂರವಿರಿ : ನ್ಯಾ.ವೇಲಾ ಡಿ.ಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?