ದಾವಣಗೆರೆ (Davanagere): ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ಜಯದೇವ ಸರ್ಕಲ್ ನಲ್ಲಿ ಆಪರೇಷನ್ ಸಿಂಧೂರ ಯಶಸ್ವಿ ಮಾಡಿದ ಭಾರತೀಯ ಸೈನಿಕರಿಗೆ ಧನ್ಯವಾದ ಅರ್ಪಿಸಲು ಯುವಕರು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿ ದೇಶದ ಸೈನಿಕರಿಗೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ದೇಶದ ನಮ್ಮ ಸೈನಿಕರು ಸದೃಢವಾಗಿ ಧೈರ್ಯದಿಂದ ಮುನ್ನುಗ್ಗಿ ಆಪರೇಷನ್ ಸಿಂಧೂರ ಯಶಸ್ವಿಗೊಳಿಸಿದ್ದಾರೆ. ನಮ್ಮ ಸೈನಿಕರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಧನ್ಯವಾದ ಹಾಗೂ ನಮ್ಮ ದೇಶದ ಸೈನಿಕರ ಜೊತೆ ನಾವು ಸದಾ ಇರುತ್ತೇವೆ ಎಂದು ಹೇಳಿದರು.
Read also : ಮೇ 17 ರಂದು ದಾವಣಗೆರೆ “ಕ್ರಾಂತಿಕಾರಿ” ರಥಯಾತ್ರೆ
ಈ ರಕ್ತದಾನ ಶಿಬಿರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ .ಬಿ. ಮಂಜಪ್ಪ ಯುವ ಕಾಂಗ್ರೆಸ್ ಅಧ್ಯಕ್ಷ ವರುಣ್ ಬೆಣ್ಣೆಹಳ್ಳಿ , ಉಪಾಧ್ಯಕ್ಷ ಅಲಿ ರೆಹ್ಮತ್ ಪೈಲ್ವಾನ್ , ಇಮ್ರಾನ್ ಬಿಲಾಲ್ ಖಾನ್ , ತಹೇರ್ ಸಮೀರ್ , ಭಾಷಾ, ಮಂಜುನಾಥ್ , ಯಶ್ವಂತ್ ಅಣ್ಣಪ ಚನ್ನಗಿರಿ, ಮಂಜುನಾಥ್ ಜಿ ಬಿ, ಲೋಕೇಶ್ ನಾಯ್ಕ್ ಇನ್ನು ಮುಂತಾದವರು ಇದ್ದರು.