Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ರಾಜಕೀಯ > ಚನ್ನಪಟ್ಟಣದಲ್ಲಿ ಡಿಕೆಸು ವರ್ಸಸ್  ಅನಿತಕ್ಕ?
ರಾಜಕೀಯ

ಚನ್ನಪಟ್ಟಣದಲ್ಲಿ ಡಿಕೆಸು ವರ್ಸಸ್  ಅನಿತಕ್ಕ?

Dinamaana Kannada News
Last updated: July 22, 2024 10:20 am
Dinamaana Kannada News
Share
Political news
ರಾಜಕೀಯ ಸುದ್ದಿ
SHARE

ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಬಿಜೆಪಿಯ ಐರನ್ ಮ್ಯಾನ್ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಬಗ್ಗೆ ಅವರು ಪ್ರಸ್ತಾಪಿಸಿದರಂತೆ.

ಅಂದ ಹಾಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ, ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಮತ್ತು ಬಳ್ಳಾರಿಯಿಂದ ಕಾಂಗ್ರೆಸ್ಸಿನ ತುಕಾರಾಂ ಗೆದ್ದು ಸಂಸತ್ತಿಗೆ ಹೋಗಿರುವುದರಿಂದ ಅನುಕ್ರಮವಾಗಿ ಅವರು ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿದಾನಸಭಾ ಕ್ಷೇತ್ರಗಳಿಗೆ ಸಧ್ಯದಲ್ಲೇ ಉಪಚುನಾವಣೆಗಳು ನಡೆಯಲಿವೆ.

ಹೀಗೆ ಚುನಾವಣೆಗಳು ನಡೆಯಲಿರುವ ಕ್ಷೇತ್ರಗಳ ಪೈಕಿ ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಬೇಕು ಎಂಬ ವಿಷಯದಲ್ಲಿ ಕುಮಾರಸ್ವಾಮಿ ಅವರ ಅಭ್ಯಂತರವೇನೂ ಇಲ್ಲ.ಯಾಕೆಂದರೆ ಹೇಳಿ ಕೇಳಿ ಅವು ಬಿಜೆಪಿಯ ಪವರ್ ಇರುವ ಕ್ಷೇತ್ರಗಳು.ಇದೇ ರೀತಿ ಚನ್ನಪಟ್ಟಣ ಜೆಡಿಎಸ್ ಪವರ್ ಪುಲ್ ಆಗಿರುವ ಕ್ಷೇತ್ರ.

ಆದರೆ ಸಮಸ್ಯೆ ಎಂದರೆ,  ಜೆಡಿಎಸ್ ಪವರ್ ಫುಲ್ ಆಗಿದ್ದರೂ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಲು ಮಾಜಿ ಸಚಿವ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಬಯಸುತ್ತಿದ್ದಾರೆ.ಬರೀ ಬಯಸುವುದಷ್ಟೇ ಅಲ್ಲ,ತಮ್ಮ ಬಯಕೆಯನ್ನು ನೇರವಾಗಿಯೇ ಕುಮಾರಸ್ವಾಮಿ ಬಳಿ ಹೇಳಿಕೊಂಡಿದ್ದಾರೆ

ಹೀಗೆ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಲು ಸಿ.ಪಿ.ಯೋಗೇಶ್ವರ್ ಬಯಸುತ್ತಿದ್ದರೂ ಮತ್ತೊಂದು ಕಡೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಇದು ಇಷ್ಟವಿಲ್ಲ. ಹೀಗಾಗಿ ಅವರು ಕುಮಾರಸ್ವಾಮಿ ಅವರ ಬಳಿ,ಹೇಳಿ ಕೇಳಿ ಚನ್ನಪಟ್ಟಣ ನಿಮ್ಮ ಕ್ಷೇತ್ರ. ಹೀಗಾಗಿ ನೀವು ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ಬದಲು ನಿಮ್ಮ ಪಕ್ಷದವರನ್ನೇ ಕಣಕ್ಕಿಳಿಸಿ ಎಂದಿದ್ದಾರೆ. ಅರ್ಥಾತ್,ಚನ್ನಪಟ್ಟಣ ಕ್ಷೇತ್ರವನ್ನು ಸಿ.ಪಿ.ಯೋಗೇಶ್ವರ್ ಅವರಿಗೆ ಜೆಡಿಎಸ್ ಬಿಟ್ಟುಕೊಡುವುದು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಬ್ಬರಿಗೂ ಇಷ್ಟವಿಲ್ಲ.

ಇಷ್ಟಾದರೂ ತಮಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಬೇಕು ಎಂದು ಯೋಗೇಶ್ವರ್ ಬಯಸುತ್ತಿರುವ ರೀತಿ ಕುಮಾರಸ್ವಾಮಿ ಅವರಲ್ಲಿ ಧರ್ಮಸಂಕಟ ಮೂಡಿಸಿದೆ.ಯಾಕೆಂದರೆ ಯೋಗೇಶ್ವರ್ ನೇರವಾಗಿಯೇ ಕುಮಾರಸ್ವಾಮಿ ಅವರ ಬಳಿ ಮಾತನಾಡಿ,ಚನ್ನಪಟ್ಟಣದ ಟಿಕೆಟ್ ನನಗೆ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಹೀಗಾಗಿ ಇತ್ತೀಚೆಗೆ ಅಮಿತ್ ಷಾ ಅವರು ದಿಲ್ಲಿಯಲ್ಲಿ ಸಿಕ್ಕಾಗ ವಿಷಯವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ಸಾರ್, ಉಪಚುನಾವಣೆಗಳ ವಿಷಯ ಹೀಗಿದೆ. ಒಮ್ಮೆ ನಿಮ್ಮ ಗಮನಕ್ಕೆ ತರೋಣ ಎಂದು ಹೇಳುತ್ತಿದ್ದೇನೆ ಎಂದರಂತೆ. ಹೀಗೆ ಕುಮಾರಸ್ವಾಮಿ ಅವರು ಹೇಳಿದ್ದನ್ನು ಕೇಳಿದ ಅಮಿತ್ ಷಾ:ನೋ,ನೋ,ಉಪಚುನಾವಣೆಗಳ ವಿಷಯದಲ್ಲಿ ಯಾವ ಮುಜುಗರವೂ ಬೇಡ, ಯಾಕೆಂದರೆ ವಿಷಯ ಕ್ಲಿಯರ್ ಆಗಿದೆ.ಶಿಗ್ಗಾಂವಿ ಮತ್ತು ಸಂಡೂರು ನಮ್ಮ ಕ್ಷೇತ್ರಗಳು. ಹೀಗಾಗಿ ಅಲ್ಲಿ ನಮ್ಮವರು ಅಭ್ಯರ್ಥಿಗಳಾಗಲಿ, ಚನ್ನಪಟ್ಟಣ ನೀವು ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಹೀಗಾಗಿ ಅಲ್ಲಿಂದ ನಿಮ್ಮವರೇ ಅಭ್ಯರ್ಥಿಯಾಗಲಿ ಎಂದು ನೇರವಾಗಿಯೇ ಹೇಳಿದ್ದಾರೆ.

ಹೀಗೆ ಉಪಚುನಾವಣೆಗಳ ವಿಷಯ ಕ್ಲಿಯರ್ ಆದ ಮೇಲೆ ಅಮಿತ್ ಷಾ ಮತ್ತೊಂದು ವಿಷಯಕ್ಕೆ ತಿರುಗಿಕೊಂಡಿದ್ದಾರೆ. ದೇಖೋ ಕುಮಾರ ಸೋಮೀಜಿ. ಹಳೆ ಮೈಸೂರು ಭಾಗದಲ್ಲಿ ನಿಮ್ಮ ಪಕ್ಷವನ್ನು ಮತ್ತಷ್ಟು ಬಲಿಷ್ಟವಾಗಿ ಕಟ್ಟಿ. ಹೇಗಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟಕ್ಕಿರುವ ಶಕ್ತಿ ಸಾಬೀತಾಗಿದೆ. ರಾಜ್ಯದ ನೂರಾ ನಲವತ್ತೆರಡು ಕ್ಷೇತ್ರಗಳಲ್ಲಿ ನಮಗೆ ಕಾಂಗ್ರೆಸ್ಸಿಗಿಂತ ಹೆಚ್ಚು ಮತಗಳು ಬಂದಿವೆ.

ಇದನ್ನು ಗಮನದಲ್ಲಿಟ್ಟುಕೊಂಡು ನುಗ್ಗಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿರಾಯಾಸವಾಗಿ ನಾವು ನೂರೈವತ್ತು ಸೀಟು ಗೆಲ್ಲುತ್ತೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮಿಂದ ಯಾವ ನೆರವು ಬೇಕೋ ಕೇಳಿ.ಅದನ್ನು ಕೊಡಲು ನಾವು ರೆಡಿ. ಒಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಪಕ್ಷದಿಂದ ಅರವತ್ತು ಮಂದಿಯನ್ನು ಗೆಲ್ಲಿಸಿಕೊಂಡು ಬನ್ನಿ.ನಿಮ್ಮಿಂದ ಇದು ಸಾಧ್ಯವಾದರೆ ಅನುಮಾನವೇ ಬೇಡ, ನೀವು ಸಿಎಂ ಆಗುವುದು ಗ್ಯಾರಂಟಿ ಎಂದಿದ್ದಾರೆ.

ಯಾವಾಗ ಅಮಿತ್ ಷಾ ಈ ಮಾತು ಹೇಳಿದರೋ?ಇದಾದ ನಂತರ ಕರ್ನಾಟಕಕ್ಕೆ ಬಂದ ಕುಮಾರಸ್ವಾಮಿ ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.ಮತ್ತು ಈ ಸಭೆಯಲ್ಲಿ ಮಾತನಾಡುವಾಗ ಕರ್ನಾಟಕದ ನೂರು-ನೂರಾ ಹತ್ತು ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಸಜ್ಜಾಗುವಂತೆ ನಾಯಕರಿಗೆ ರಣವೀಳ್ಯ ನೀಡಿದ್ದಾರೆ.

 

ಅಗರ್ವಾಲ್ ರವಾನಿಸಿದ  ಆ ರಿಪೋರ್ಟು…

ಈ ಮಧ್ಯೆ ರಾಜ್ಯ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತಿರುವ ರಾಧಾಮೋಹನ ದಾಸ್ ಅಗರ್ವಾಲ್ ಪಕ್ಷದ ವರಿಷ್ಟರಿಗೆ ಮಹತ್ವದ ವರದಿಯೊಂದನ್ನು ರವಾನಿಸಿದ್ದಾರೆ.

ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳಿಗೆ ಒಳಮೀಸಲಾತಿ ಕೊಡಬೇಕು ಎಂಬ ಅಸ್ತ್ರವನ್ನಿಟ್ಟುಕೊಂಡು ಹೋರಾಡಿದರೆ ಬಿಜೆಪಿ ಮೈತ್ರಿಕೂಟಕ್ಕೆ ಲಾಭವಾಗಲಿದೆ ಎಂಬುದು ಈ ವರದಿ.

ಅಂದ ಹಾಗೆ ಇದಕ್ಕೆ ಪುಷ್ಟಿ ನೀಡಿರುವುದು ಲೋಕನೀತಿ-ಸಿ.ಎಸ್.ಡಿ.ಎಸ್ ಸರ್ವೇ ವರದಿ.ಅದರ ಪ್ರಕಾರ,ಮೊನ್ನಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಹತ್ತೊಂಬತ್ತು ಸ್ಥಾನಗಳನ್ನು ಗೆಲ್ಲಲು ಒಕ್ಕಲಿಗ,ಲಿಂಗಾಯತ ಸಮುದಾಯಗಳು ಮಾತ್ರವಲ್ಲ.ಹಿಂದುಳಿದ ಸಮುದಾಯ ನೀಡಿದ ಬೆಂಬಲವೂ ಪ್ರಮುಖ ಕಾರಣ.

ಸರ್ವೆಯ ಪ್ರಕಾರ,ಹಿಂದುಳಿದ ವರ್ಗಗಳ ಅರವತ್ತು ಪರ್ಸೆಂಟಿಗೂ ಹೆಚ್ಚು ಮತಗಳು ಮೈತ್ರಿಕೂಟಕ್ಕೆ  ಬಂದಿವೆ.ಇತ್ತೀಚಿನವರೆಗೆ  ಕಾಂಗ್ರೆಸ್ ಪಕ್ಷದ ಪ್ರಮುಖ ಮತ ಬ್ಯಾಂಕ್ ಆಗಿದ್ದ ಹಿಂದುಳಿದ ವರ್ಗಗಳು ಕೈ ಪಾಳಯದಿಂದ ವಿಮುಖವಾಗಲು ಒಳ ಮೀಸಲಾತಿಯ ಬೇಡಿಕೆಯೇ ಮುಖ್ಯ ಕಾರಣ. ಹಿಂದುಳಿದ ವರ್ಗಗಳ ಮೀಸಲಾತಿಯ ಲಾಭ ಪ್ರಬಲ ಜಾತಿಗಳಿಗೆ ಆಗುತ್ತಿರುವುದರಿಂದ ಪಟ್ಟಿಯಲ್ಲಿರುವ ಇನ್ನೂರಕ್ಕೂ ಹೆಚ್ಚು ಜಾತಿಗಳು ತಲ್ಲಣಗೊಂಡಿವೆ. ಪರಿಣಾಮ?ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೈತ್ರಿಕೂಟದ ಕಡೆ ವಾಲಿಕೊಂಡಿವೆ.

ಹೀಗೆ ಮೈತ್ರಿಕೂಟದ ಕಡೆ  ವಾಲಿಕೊಂಡಿರುವ ಈ ಸಮುದಾಯಗಳ ಪರವಾಗಿ ಧ್ವನಿ ಎತ್ತಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟ ದೊಡ್ಡ ಮಟ್ಟದ ಶಕ್ತಿ ಪಡೆಯಲಿದೆ.

ಅಂದ ಹಾಗೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಿನಿಮಮ್ ಎಪ್ಪತ್ತೈದು ಸಾವಿರದಷ್ಟಿರುವ ಹಿಂದುಳಿದವರು ಸಣ್ಣ-ಸಣ್ಣ ಪಾಕೇಟುಗಳಲ್ಲಿ ಹಂಚಿ ಹೋಗಿದ್ದಾರೇನೋ ನಿಜ.ಆದರೆ ಒಟ್ಟು ಸೇರಿಸಿ ನೋಡಿದರೆ ಪವರ್ ಫುಲ್ಲಾಗಿದ್ದಾರೆ.  ಹೀಗಾಗಿ ಇವರ ಒಳಮೀಸಲಾತಿಯ ಬೇಡಿಕೆಗೆ ಧ್ವನಿ ಕೊಟ್ಟರೆ ಮೈತ್ರಿಕೂಟದ ಬತ್ತಳಿಕೆಗೆ  ಡೆಡ್ಲಿ ಅಸ್ತ್ರ ಸೇರಲಿದೆ ಎಂಬುದು ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ವರದಿ.

ಚನ್ನಪಟ್ಟಣ:ಡಿಕೆಸು ವರ್ಸಸ್  ಅನಿತಕ್ಕ?

ಇನ್ನು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಕಣಕ್ಕೆ ಯಾರು ಇಳಿಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಲೇ ಇದೆ.  ಡಿಸಿಎಂ ಡಿಕೆಶಿ ಕ್ಯಾಂಪಿಗೆ ತಲುಪಿರುವ ಮಾಹಿತಿಯ ಪ್ರಕಾರ,ಮೈತ್ರಿಕೂಟದ ಕ್ಯಾಂಡಿಡೇಟ್ ಆಗಲು ಪ್ರಯತ್ನಿಸುತ್ತಿದ್ದ ಸಿ.ಪಿ.ಯೋಗೇಶ್ವರ್ ಅವರಿಗೆ ಬಿಜೆಪಿ ವರಿಷ್ಟರು ನೋ ಎಂದಿದ್ದಾರಂತೆ.ನಿಮ್ಮ ವಿಧಾನಪರಿಷತ್ ಸದಸ್ಯತ್ವದ ಅವಧಿ ಇನ್ನೂ ಎರಡು ವರ್ಷ ಬಾಕಿ ಇದೆ.ಹೀಗಿರುವಾಗ  ನೀವು ರಾಜೀನಾಮೆ ನೀಡಿ ಮೈತ್ರಿಕೂಟದ ಕ್ಯಾಂಡಿಡೇಟ್ ಆದರೆ ಆ  ಸೀಟು ಕಾಂಗ್ರೆಸ್ ವಶಕ್ಕೆ ಹೋಗುತ್ತದೆ ಎಂಬುದು ವರಿಷ್ಟರ ಮಾತು.

ಅಲ್ಲಿಗೆ ಮೈತ್ರಿಕೂಟದ ವತಿಯಿಂದ ಜೆಡಿಎಸ್ ಕ್ಯಾಂಡಿಡೇಟ್ ಪಕ್ಕಾ.ಇದೇ ರೀತಿ ಇವತ್ತಿನ ಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ಯರೊಬ್ಬರನ್ನು ಕಣಕ್ಕಿಳಿಸಿ ರಿಸ್ಕು ತೆಗೆದುಕೊಳ್ಳಲು ಕುಮಾರಸ್ವಾಮಿ ತಯಾರಿಲ್ಲ.ಹೀಗಾಗಿ ಅವರು ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಫೀಲ್ಡಿಗೆ ಇಳಿಸುತ್ತಾರೆ.ಹೀಗೆ ಫೀಲ್ಡಿಗಳಿಯುವವರು ನಿಖಿಲ್ ಕುಮಾರಸ್ವಾಮಿ  ಅದರೂ ಅಚ್ಚರಿಯಿಲ್ಲ.ಹಾಗಾದಾಗ ನಾವು ಪ್ರಬಲ ಕ್ಯಾಂಡಿಡೇಟನ್ನು ನಿಲ್ಲಿಸಲೇಬೇಕು ಎಂಬುದು ಡಿಕೆಶಿ ಕ್ಯಾಂಪಿನ ಮಾತು.

ಆದರೆ ಜೆಡಿಎಸ್ ಕ್ಯಾಂಪಿನ ಪ್ರಕಾರ,ಕೈ ಪಾಳಯದ ಅಭ್ಯರ್ಥಿಯಾಗಿ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಸ್ಪರ್ಧಿಸುವುದು ಗ್ಯಾರಂಟಿ.ಹೀಗಾಗಿ ನಾವು ಬಲಿಷ್ಟರನ್ನು ಫೀಲ್ಡಿಗಳಿಸಬೇಕು.ಆದರೆ ಅವರು ನಿಖಿಲ್‌ ಕುಮಾರಸ್ವಾಮಿ ಆಗಿರುವುದಿಲ್ಲ.ಜ್ಯೋತಿಷಿಗಳ ಪ್ರಕಾರ ನಿಖಿಲ್ ಅವರಿಗೆ 2027 ರವರೆಗೆ ಗುರು ಬಲವಿಲ್ಲ.ನಿಜ ಸಂಗತಿ ಎಂದರೆ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲೇ ಜ್ಯೋತಿಷಿಯೊಬ್ಬರು ಇದನ್ನು ಸ್ಪಷ್ಟವಾಗಿ ಹೇಳಿದ್ದರು.ಈ ಸಲ ನಿಖಿಲ್ ಸ್ಪರ್ಧಿಸಿದರೆ ಸೋಲುವುದು ಶತ:ಸ್ಸಿದ್ದ ಎಂದಿದ್ದರು.ಅದು ಹಾಗೇ ಆಯಿತು.

ಹೀಗಾಗಿ  ಅವರು ಈ ಸಲ ಚನ್ನಪಟ್ಟಣದ ಕಣಕ್ಕಿಳಿಯುವುದಿಲ್ಲ.ಬದಲಿಗೆ 2028 ರಲ್ಲಿ ರಾಮನಗರದ ಕಣಕ್ಕಿಳಿಯುತ್ತಾರೆ. ಪರಿಣಾಮ?ಅಂತಿಮವಾಗಿ ಕಾಂಗ್ರೆಸ್ಸಿನ ಡಿ.ಕೆ.ಸುರೇಶ್ ಅವರ ವಿರುದ್ಧ ಶ್ರೀಮತಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದು ಅನಿವಾರ್ಯವಾಗಬಹುದು.

ಅಂದ ಹಾಗೆ ಉಪಚುನಾವಣೆಯ ಮಾತು ಶುರುವಾದಾಗ ಚನ್ನಪಟ್ಟಣದಿಂದ ಡಾ.ಮಂಜುನಾಥ್ ಅವರ ಪತ್ನಿ ಶ್ರೀ ಮತಿ ಅನಸೂಯ ಅವರನ್ನು ಕಣಕ್ಕಿಳಿಸುವ ಯೋಚನೆ‌ ಇತ್ತಾದರೂ ಈಗ ಆ ಯೋಚನೆಯನ್ನು ಕೈ ಬಿಡಲಾಗಿದೆ.ಅರ್ಥಾತ್,ಅನಸೂಯ ಮೇಡಂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದ ಕಣಕ್ಕಿಳಿಯಲಿದ್ದಾರೆ.

ತ್ರಿಮೂರ್ತಿಗಳ ಪಡೆ ರೆಡಿಯಾಗಿದೆ…

ಈ ಬಾರಿ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವಿರುದ್ದ ಹೋರಾಡುತ್ತಿರುವ ಬಿಜೆಪಿ ನಾಯಕರಿಗೆ ಒಂದು ವಿಷಯ ಪಕ್ಕಾ ಆಗಿದೆ.

ಅದೆಂದರೆ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣವಿರಲಿ,ಮೂಡಾ  ಹಗರಣವಿರಲಿ, ಮತ್ತೊಂದಿರಲಿ. ಒಟ್ಟಿನಲ್ಲಿ ದಿಲ್ಲಿಯಿಂದ ಬರುವ ಡೈರೆಕ್ಷನ್ನಿಗೆ ಅನುಗುಣವಾಗಿಯೇ ಹೋರಾಡಬೇಕು ಎಂಬುದು ಅವರಿಗೆ ಖಚಿತವಾಗಿದೆ. ಅಂದ ಹಾಗೆ ದಿಲ್ಲಿಯಿಂದ ಬರುವ ಡೈರೆಕ್ಷನ್ನುಗಳ ಹಿಂದೆ ತ್ರಿಮೂರ್ತಿಗಳಿದ್ದಾರಂತೆ. ಅವರೆಂದರೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ,ಪ್ರಹ್ಲಾದ್ ಜೋಷಿ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್.

ಈ ಬಾರಿಯ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಬೇಕು. ಅದು ದಲಿತ ವಿರೋಧಿ ಎಂದು ರಾಷ್ಟ್ರ ಮಟ್ಟದಲ್ಲಿ ಪ್ರಚಾರವಾಗುವಂತೆ ನೋಡಿಕೊಳ್ಳಬೇಕು ಅಂತ ಡೈರೆಕ್ಷನ್ನು ಕೊಡುತ್ತಿರುವ ಈ ತ್ರಿಮೂರ್ತಿಗಳಿಗೆ ಮೊನ್ನೆ ಒಂದು ಅನುಮಾನ ಶುರುವಾಯಿತಂತೆ.

ಸಿದ್ದರಾಮಯ್ಯ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಮೂಡಾ ಹಗರಣದ ವಿಷಯದಲ್ಲಿ  ನಮ್ಮವರು ಮೃದುವಾಗಬಹುದು.ಮತ್ತು ಈ ಸಂದರ್ಭವನ್ನು ಬಳಸಿಕೊಂಡು ಅವಧಿಗೂ ಮುನ್ನ ಅಧಿವೇಶನ ಬರಕಾಸ್ತಾಗುವಂತೆ ಸರ್ಕಾರ ಮಾಡಬಹುದು ಎಂಬುದು ಈ ಅನುಮಾನ.

ಹೀಗಾಗಿಯೇ ಶನಿವಾರ ರಾತ್ರಿ ರಾಜ್ಯದ ನಾಯಕರಿಗೆ ಸಂದೇಶ ರವಾನಿಸಿದ ತ್ರಿಮೂರ್ತಿಗಳ ಪಡೆ,ಅಧಿವೇಶನದಲ್ಲಿ ಅಹೋರಾತ್ರಿ ಧರಣಿ ನಡೆಸಿ.ಒಂದು ವೇಳೆ ಸದನ ಕಲಾಪವನ್ನೇ ಅನಿರ್ದಿಷ್ಟಾವಧಿಯವರೆಗೆ ಮುಂದೂಡುವ ಕೆಲಸವಾದರೆ ಬೀದಿ ಹೋರಾಟಗಳಿಗೆ ಸಜ್ಜಾಗಿ ಎಂದಿದೆಯಂತೆ.

ಆರ್.ಟಿ.ವಿಠ್ಠಲಮೂರ್ತಿ

TAGGED:Dinamana.comKannada NewsPolitical Newsಕನ್ನಡ ಸುದ್ದಿದಿನಮಾನ.ಕಾಂರಾಜಕೀಯ ಸುದ್ದಿ
Share This Article
Twitter Email Copy Link Print
Previous Article harihara ಮಾದಿಗ ಸಮಾಜದ ತಾಲ್ಲೂಕು ಅಧ್ಯಕ್ಷರಾಗಿ ನಗರಸಭೆ ಸದಸ್ಯ ರಜನಿಕಾಂತ್
Next Article Davanagere ಶಿಕ್ಷಕರ ಸೇವೆ ಪಡೆಯಲು ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere Gruahalakshmi plan : ಗೃಹಲಕ್ಷ್ಮಿಗೆ ಇಕೆವೈಸಿ, ಸ್ಮಾರ್ಟ್ ಕಾರ್ಡ್ ಸುಳ್ಳು ವದಂತಿಗೆ ಕಿವಿಗೊಡಬೇಡಿ

ದಾವಣಗೆರೆ.ಆ 20 (davanagere) :  ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತುಗಳು ಜಮೆಯಾಗಲು ಸ್ವಲ್ಪ ತಡವಾಗಿದ್ದು…

By Dinamaana Kannada News

ಬೀಜ, ಗೊಬ್ಬರ ಕೃತಕ ಅಭಾವ ಆರೋಪ: ದಾಸ್ತಾನು ಗೋದಾಮುಗೆ ಶಾಸಕ ಬಸವಂತಪ್ಪ ಭೇಟಿ

ದಾವಣಗೆರೆ:  ಜಿಲ್ಲೆಯಲ್ಲಿ ಮುಂಗಾರು ಮಳೆ ಸುರಿಯುತ್ತಿದೆ. ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಬೀಜ, ಗೊಬ್ಬರ ರೈತರಿಗೆ ಸಮರ್ಪಕವಾಗಿ…

By Dinamaana Kannada News

ಕನ್ನಡ ಸಾಹಿತ್ಯಕ್ಕೆ ಬೀಚಿಯವರ ಕೊಡುಗೆ ಅನನ್ಯ

ಹಾಸ್ಯ ಇನ್ನೊಬ್ಬರ ಭಾವನೆಗಳು ಹಾಗೂ ಮನಸ್ಸು ಅರಳಿಸಬೇಕೆ ಹೊರತು ಇನ್ನೊಬ್ಬರ ಮನಸ್ಸು ಕೆರಳುವಂತೆ ಇರಬಾರದು,ಕೆಲವೊಂದು ಹಾಸ್ಯ ಅಶ್ಲೀಲ ಭಾಷೆ ಹಾಗೂ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ಕಂಪ್ಯೂಟರ್ ಆಧಾರಿತ ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಪರೀಕ್ಷೆಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದಿರಿ : ರೈತರಿಗೆ ಸಚಿವರಿಂದ ಅಭಯ

By Dinamaana Kannada News
Davanagere
ತಾಜಾ ಸುದ್ದಿ

ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?