ಹರಿಹರ (Harihara) : ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಂನಲ್ಲಿ ಉಗ್ರರ ದಾಳಿ ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿ ಹರಿಹರ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಮೇಣದ ಬತ್ತಿಗಳನ್ನು ಹಚ್ಚಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂವ್ನಲ್ಲಿ ನಡೆದ ಈ ಘಟನೆ ದೇಶದ ಜನತೆಗೆ ದೊಡ್ಡ ಆತಂಕವನ್ನುಂಟು ಮಾಡಿದೆ. ಇದು ರಾಷ್ಟ್ರದ ಏಕತೆ ಮತ್ತು ಅಖಂಡತೆಯ ಮೇಲಿನ ನೇರ ದಾಳಿಯಾಗಿದ್ದು, ಪ್ರವಾಸಿಗರ ಮೇಲೆ ನಡೆದ ಈ ಹೀನ ಕೃತ್ಯವು ದೇಶದ ಜನರ ಶಾಂತಿಯನ್ನು ಕದಡಿದೆ ಎಂದರು.
Read also : ಸಾಹಿತ್ಯ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು ; ಪಾಪುಗುರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ, ಮಾಜಿ ತಾಪಂ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ ಹರಿಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ ಹನುಮಂತಪ್ಪ, ಮಲೇಬೆನ್ನುರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ಎಂ.ಬಿ.ಅಬಿದ್ ಅಲಿ ಕಾಂಗ್ರೆಸ್ ಮುಖಂಡರಾದ ಸೈಯದ್ ಎಜಾಜ್. ಸತ್ಯನಾರಾಯಣ, ಸಿ.ಎನ್.ಹುಲಗೇಶ್, ಸನಾವುಲ್ಲಾ ಸಾಬ್,ದೂಡ ಸದಸ್ಯ ಜಬ್ಬರ್ ಖಾನ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬುತಾಹಿರ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಕರೀಮ್ ,ಜಾಫರ್, ನಗರಸಭೆ ಸದಸ್ಯ ಎಂ.ಎಸ್.ಬಾಬುಲಾಲ್, ನಾಮನಿರ್ದೇಶನ ಸದಸ್ಯ ಕೆ.ಬಿ. ರಾಜಶೇಖರ್, ಅರುಣ್ ಕುಮಾರ್ ಬಿ.ಮುಗ್ಧಂ, ವಿಜಯಕುಮಾರ್, ಭಾಗ್ಯಮ್ಮ ಹೆಚ್., ಶಿವಪ್ಪ, ಎಂ.ಎಸ್. ಆನಂದ್, ಮಹಮ್ಮದ್ ಪೈರೋಜ್, ಹಬೀಬ್ ಉಲ್ಲಾ, ತಿಪ್ಪೇಸ್ವಾಮಿ, ಗೌಸ್ ಪೀರ್, ಶ್ರೀನಿವಾಸ್ ಮೂರ್ತಿ ಮತ್ತಿತರರಿದ್ದರು.