Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಬಂಡವಾಳಶಾಹಿಗಳ ವಿರುದ್ಧ ತುರ್ತು ಪರಿಸ್ಥಿತಿ ಅನಿವಾರ್ಯವಾಗಿತ್ತು : ಡಿ. ತಿಪ್ಪಣ್ಣ
ತಾಜಾ ಸುದ್ದಿ

ಬಂಡವಾಳಶಾಹಿಗಳ ವಿರುದ್ಧ ತುರ್ತು ಪರಿಸ್ಥಿತಿ ಅನಿವಾರ್ಯವಾಗಿತ್ತು : ಡಿ. ತಿಪ್ಪಣ್ಣ

Dinamaana Kannada News
Last updated: July 25, 2024 12:39 pm
Dinamaana Kannada News
Share
davanagere
ಕಾಂಗ್ರೆಸ್ ಮುಖಂಡ ಡಿ. ತಿಪ್ಪಣ್ಣ
SHARE

ದಾವಣಗೆರೆ: ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಬಂಡವಾಳಶಾಹಿಗಳ ವಿರುದ್ಧ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಸಂಘ-ಪರಿವಾರಗಳು ವಿಶೇಷವಾಗಿ ವಿರೋಧ ಪಕ್ಷಗಳು ಕರಾಳ ದಿನವೆಂದು ಬಿಂಬಿಸುತ್ತಲೇ ಬಂದಿರುವುದು ವಿಪರ್ಯಾಸ ಎಂದು ಕಾಂಗ್ರೆಸ್ ಮುಖಂಡ ಡಿ. ತಿಪ್ಪಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1975ರ ಜೂನ್ 25 ರಂದು ಭಾರತದಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈಗಾಗಲೇ 50 ವರ್ಷ ಸಂದಿಸಿದರೂ ಸಹ ಇಂದಿನವರೆಗೂ ಸಂಘ ಪರಿವಾರ ಮತ್ತು ವಿರೋಧ ಪಕ್ಷಗಳು ಕರಾಳದಿನವೆಂದು ಬಿಂಬಿಸುತ್ತಿರುವುದು. ಪದೇ ಪದೇ ಚರ್ಚಿಸುತ್ತಿರುವುದು ವಿಪರ್ಯಾಸ ಎಂದಿದ್ದಾರೆ ‌

ದೇಶದ ಬಡವರಿಗೆ, ದಲಿತರಿಗೆ ವಿವಿಧ ಕಾರ್ಯಕ್ರಮ ಹಾಕಿಕೊಂಡು ದೇಶದ ಉದ್ಧಾರಕ್ಕೆ ಶ್ರಮಿಸುತ್ತಿದ್ದ ಇಂದಿರಾಗಾಂಧಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಷಡ್ಯಂತ್ರ ನಡೆಸಿದ್ದವು. ಸರ್ಕಾರದ ವಿರುದ್ಧ ದಂಗೆ ಏಳಲು, ವಿದ್ಯಾರ್ಥಿಗಳಿಗೆ, ಪೊಲೀಸರಿಗೆ ಮತ್ತು ಸೈನ್ಯಕ್ಕೆ ವಿಪಕ್ಷಗಳು, ಕರೆಕೊಟ್ಟವು. ವಿದೇಶಿ ಬಂಡವಾಳ ಶಾಹಿಗಳ ಬೆಂಬಲ ಪಡೆದು ಕೋಮುವಾದ ಪ್ರಚೋದಿಸಿ, ಅಶಾಂತಿ ಹೆಚ್ಚಿಸಿ, ಅರಾಜಕತೆ ಸೃಷ್ಟಿಸಲು ವಿಪಕ್ಷಗಳು ಮುಂದಾದಾಗ ಇಂದಿರಾಜಿ ಅವರು ಅನಿವಾರ್ಯವಾಗಿ ತುರ್ತು ಪರಿಸ್ಥಿತಿ ದೇಶದಲ್ಲಿ ಹೇರಬೇಕಾಯಿತು ಎಂದು ತಿಳಿಸಿದ್ದಾರೆ.

ದೇಶದ ಅಸ್ತಿತ್ವಕ್ಕೆ ಧಕ್ಕೆ ತರಲು ವಿಪಕ್ಷಗಳು ಮುಂದಾಗಿದ್ದವು. ಸರ್ಕಾರದ ಪಾಲಿಗೆ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ಕಗ್ಗೋಲೆಯಲ್ಲ, ಜನಹಿತ ಕಾಪಾಡುವ ಏಕೈಕ ಮಾರ್ಗವಾಗಿತ್ತು. ತಾತ್ವಿಕವಾಗಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜನಾಂಗದ ಬಡವರಿಗೆ ಹೆಚ್ಚಿನ ಅನುಕೂಲವಾಯಿತು ಎಂದು ಅಭಿಪ್ರಾಯಿಸಿದ್ದಾರೆ.

ಇಂದಿರಾಗಾಂಧಿಯವರು ಜಾರಿಗೆ ತಂದ 20 ಅಂಶದ ಕಾರ್ಯಕ್ರಮಗಳು ಸಂವಿಧಾನ ವಿಧಿ 21 ರಡಿ ಬದುಕುವ ಹಕ್ಕು, ಬಹಳ ಮುಖ್ಯವಾದ ಅಸ್ಪೃಶ್ಯತೆ ನಿಮೂರ್ಲನೆ ಹಾಗೂ ಜೀತ ಪದ್ಧತಿಯಿಂದ ಮುಕ್ತಿ, ಊಳುವವನೇ ಭೂಮಿಯ ಒಡೆಯದಂತಹ ಸಮಾಜಮುಖಿ, ದೀನ, ದಲಿತೋದ್ಧಾರದ ಕಾರ್ಯಕ್ರಮ ಹಾಕಿಕೊಂಡು ಯಶಸ್ವಿ ಅನುಷ್ಠಾನಕ್ಕೆ ಸಾಧ್ಯವಾಯಿತು ಎಂದು ಪ್ರತಿಪಾದಿಸಿದ್ದಾರೆ.

ದೇಶದ ಶೇ.85 ರಷ್ಟು ಜನರ ಬದುಕು ಮತ್ತು ಭದ್ರತೆಗಾಗಿ. ಬೆರಳಣಿಕೆಯಷ್ಟು ಪಟ್ಟಭದ್ರ ಶ್ರೀಮಂತ ಜನರನ್ನು ಬಂಧಿಸಿ ಜೈಲಿಗೆ ಹಾಕುವುದು ಅನಿವಾರ್ಯವಾಗಿತ್ತು. ಶ್ರೀಮಂತರ ಕಪಿಮುಷ್ಠಿಯಿಂದ ಬಡ ಜನರನ್ನು ರಕ್ಷಿಸಿ ಬದುಕಲು ಅವಕಾಶ ನೀಡಲು ಶ್ರೀಮತಿ ಇಂದಿರಾಗಾಂಧಿಯವರು ತೆಗೆದುಕೊಂಡ ತೀರ್ಮಾನವೇ ತುರ್ತು ಪರಿಸ್ಥಿತಿ ಎಂದಿದ್ದಾರೆ.

ಇದೊಂದು ಕ್ರಾಂತಿಕಾರಿ ಹೆಜ್ಜೆಯಾದರೂ ವಿಪಕ್ಷಗಳು, ಪಟ್ಟಭದ್ರರು. ಪ್ರತಿಗಾಮಿಗಳು, ಮೂಲಭೂತವಾದಿಗಳು ಇದನ್ನೇ ಕರಾಳ ದಿನವೆಂದು ಬೊಬ್ಬೆ ಹಾಕುತ್ತಿರುವುದನ್ನು ಇನ್ನಾದರೂ ಕೈಬಿಟ್ಟು ದೇಶದ ಜನರ ಅಭಿವೃದ್ಧಿಯತ್ತ ಗಮನಹರಿಸಲಿ ಎಂದಿದ್ದಾರೆ.

TAGGED:Davanagere districtDinamana.comKannada Newsಕನ್ನಡ ಸುದ್ದಿದಾವಣಗೆರೆದಿನಮಾನ.ಕಾಂ
Share This Article
Twitter Email Copy Link Print
Previous Article Badhra dam Shivamogga ಭದ್ರಾ ಜಲಾಶಯ : ಒಳಹರಿವಿನಲ್ಲಿ ಮತ್ತೆ ಹೆಚ್ಚಳ
Next Article malebennuru ಪರಿಸರ ಸ್ವಚ್ಛ ಇದ್ದರೆ ಮಾತ್ರ ರೋಗಗಳು ದೂರ- ಮುಖ್ಯಾಧಿಕಾರಿ ಭಜಕ್ಕನವರ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಆಹಾರ ನಿರೀಕ್ಷಕ ಡಾ.ನಾಗರಾಜ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ: ಚಿನ್ನ, ನಗದು, ದಾಖಲೆ ವಶ

ದಾವಣಗೆರೆ: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜಿಲ್ಲಾ ಆರೋಗ್ಯ ಇಲಾಖೆಯ ಆಹಾರ ನಿರೀಕ್ಷಕ ಡಾ.ನಾಗರಾಜ್ ಅವರ ನಿವಾಸ, ಕಚೇರಿ,…

By Dinamaana Kannada News

ಜೂ.13 ರಂದು ಕರೆಂಟ್‌ ಇರಲ್ಲ

ದಾವಣಗೆರೆ ಜೂ.12 : ಕುಕ್ಕವಾಡ, ಶ್ಯಾಗಲೆ, ಆನಗೋಡು, ಅತ್ತೀಗೆರೆ ಮತ್ತು ಮಾಯಕೊಂಡ ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ…

By Dinamaana Kannada News

ಜಿಟಿಟಿಸಿ ನೇರ ಪ್ರವೇಶಕ್ಕೆ ಅರ್ಜಿ ಆಹ್ವಾನ

ಹರಿಹರ:  ಹರಿಹರದ ಹರ್ಲಾಪುರದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಸಮೀಪದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ದಲ್ಲಿ 2024-25…

By Dinamaana Kannada News

You Might Also Like

Prof. B. Krishnappa
ತಾಜಾ ಸುದ್ದಿ

Harihara | ಪ್ರೊ.ಬಿ.ಕೃಷ್ಣಪ್ಪ ಜಯಂತಿ ನಿಮಿತ್ತ ಪುಷ್ಪ ನಮನ ಜೂ.9ಕ್ಕೆ

By Dinamaana Kannada News
World Environment Day Suez Company
ತಾಜಾ ಸುದ್ದಿ

Suez | ಸುಯೆಜ್‌ ಕಂಪನಿಯಿಂದ ವಿಶ್ವ ಪರಿಸರ ದಿನಾಚರಣೆ

By Dinamaana Kannada News
Davanagere
Blog

Davanagere | ಪತ್ರಿಕಾಭವನ ನಿರ್ಮಾಣಕ್ಕೆ ದೂಡದಿಂದ ನಿವೇಶನ ಮಂಜೂರು

By Dinamaana Kannada News
ಮನೆಕಳ್ಳತನ ಪ್ರಕರಣ
ಅಪರಾಧ ಸುದ್ದಿತಾಜಾ ಸುದ್ದಿ

ಮನೆಕಳ್ಳತನ ಪ್ರಕರಣ | 24 ಗಂಟೆಯಲ್ಲಿ  ಆರೋಪಿ ಸೆರೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?