Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಿ
ತಾಜಾ ಸುದ್ದಿ

ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಿ

Dinamaana Kannada News
Last updated: May 31, 2024 12:56 pm
Dinamaana Kannada News
Share
CPI (M) DAVANAGERE
ಸಿಪಿಐ(ಎಂ) ಕಾರ್ಯದರ್ಶಿ ಆನಂದರಾಜು ಕೆ.ಹೆಚ್.
SHARE

ದಾವಣಗೆರೆ :   ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ, ಅತ್ಯಂತ ದುರ್ಬಲ ಸಮುದಾಯಗಳಲ್ಲಿ ಪ್ರಮುಖವಾದ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಂಚನೆ ಮಾಡಲು ನಡೆದಿದೆಯನ್ನಲಾದ 87 ಕೋಟಿ ರೂಗಳ ಹಗರಣ ಅತ್ಯಂತ ಆತಂಕಕಾರಿ ವಿಚಾರವಾಗಿದೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ಆನಂದರಾಜು ಕೆ.ಹೆಚ್. ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 187 ಕೋಟಿ ರೂ ಮೊತ್ತದಲ್ಲಿ ಅದರ ಸುಮಾರು ಶೇ 50 ರಷ್ಟು ಮೊತ್ತವನ್ನು ಸರ್ಕಾರದ ಮೂಗಿನ ಕೆಳಗಿರುವ ಉನ್ನತ ಹಂತದ ಅಧಿಕಾರಿ ವಲಯದಲ್ಲಿಯೇ ಲಪಟಾಯಿಸಲು ಮುಂದಾಗಿರುವುದು ಅತ್ಯಂತ ಗಂಭೀರ ಹಾಗು ತೀವ್ರ ಖಂಡನೀಯ ವಿಚಾರವಾಗಿದೆ ಎಂದಿದ್ದಾರೆ.

ಇದು ದುರ್ಬಲ ಸಮುದಾಯಗಳ ಫಲಾನುಭವಿಗಳಿಗೆ ಸರ್ಕಾರದ ನೆರವು ಸಿಗದಂತೆ ಉನ್ನತ ವಲಯದಲ್ಲಿಯೆ ಹೇಗೆ ಲಪಟಾಯಿಸಲಾಗುತ್ತದೆ ಎಂಬುದರ ಸ್ಪಷ್ಟ ಚಿತ್ರಣ ನೀಡಿದೆ.   ಭ್ರಷ್ಟಾಚಾರದ ದ ವಿಚಾರಕ್ಕೆ ಸಂಬಂಧಿಸಿ ನಿಗಮದ ಕೇಂದ್ರ ಕಛೇರಿಯ ಅಧೀಕ್ಷಕ ಚಂದ್ರಶೇಖರನ್ ಮಾನಸಿಕ ಒತ್ತಡ ಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆಯು ಘಟಿಸಿದೆ.

ಈ ಎಲ್ಲ ಪ್ರಕರಣದ ಹಿಂದೆ ಕಾಣದ ಕೈಗಳು ಇಲ್ಲವೆನ್ನಲು ಹಳೆಯ ಅನುಭವಗಳು ಅವಕಾಶ ನೀಡುತ್ತಿಲ್ಲ. ಈ ಒಟ್ಟು ಪ್ರಕರಣದ ಮೂಲವನ್ನು ಬೇಧಿಸಲು, ರಾಜ್ಯದ ಜನತೆಯ ಆತಂಕವನ್ನು ನಿವಾರಿಸಲು ಮತ್ತು ಸತ್ಯವೇನೆಂದು ತಿಳಿಯುವಂತಾಗಲು ನೇರ ಸರಕಾರದ ನಿಯಂತ್ರಣ ದಿಂದ ಸ್ವತಂತ್ರವಾದ ನ್ಯಾಯಾಂಗದ ಸುಪರ್ಧಿಯಲ್ಲಿ ನ್ಯಾಯಾಂಗ ತನಿಖೆ ನಡೆಸುವುದೊಂದೆ ಸರಿಯಾದ ವಿಧಾನವಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಈ ಕೂಡಲೇ ಪ್ರಕರಣವನ್ನು ನ್ಯಾಯಾಂಗದ ತನಿಖೆಗೆ ವಹಿಸಬೇಕು. ಈ ಕೂಡಲೇ ಡೆತ್ ನೋಟ್ ನಲ್ಲಿ ಹೆಸರಿಸಲಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಮತ್ತು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಕುಟುಂಬಕ್ಕೆ ಸೂಕ್ತ ನೆರವು ನೀಡುವಂತೆ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

TAGGED:Davanagere Newsdinamaana.comLatest Kannada Newsಕನ್ನಡ ಸುದ್ದಿ ದಿನಮಾನ.ಕಾಂದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ
Next Article UBDT davanagere ನವೋದ್ಯಯ ಸ್ಥಾಪನೆಗೆ ಹತ್ತು ಹಲವು ಅವಕಾಶ : ಸಿ.ಎಂ.ಪಾಟೀಲ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 43 ;  ಸಾವಿಗೆ ಎಷ್ಟೂಂತ ದುಃಖಿಸುವುದು?

Kannada News | Sanduru Stories | Dinamaana.com | 03-06-2024 ಮುದುಕರು ಈಗೀಗ  ಮೌನ…(Sanduru Stories) ಮುದುಕರು ಈಗೀಗ…

By Dinamaana Kannada News

ಡಿ.ಇಎಲ್.ಇಡಿ ದಾಖಲಾತಿಗೆ ಅರ್ಜಿ ಆಹ್ವಾನ

ದಾವಣಗೆರೆ ಜು.09 :  ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿ.ಇಎಲ್.ಇಡಿ.ಗೆ ದಾಖಲಾತಿ  ಪಡೆಯಲು ಜುಲೈ 31 ರವಗೆ ಆಫ್‍ಲೈನ್ ಅರ್ಜಿ…

By Dinamaana Kannada News

ಇಕ್ವಿಟಿ ಮ್ಯೂಚುಯಲ್ ನ ಉಪಯೋಗ ಹಾಗೂ ಲಾಭದ ಕುರಿತು ಸರಳ ಮಾಹಿತಿ ಇಲ್ಲಿದೆ ನೋಡಿ

ಈ ಲೇಖನದಲ್ಲಿ ಇಕ್ವಿಟಿ ಮ್ಯೂಚುಯಲ್ ಫಂಡ್ ಗಳ (Equity Mutual Fund) ಬಗ್ಗೆ ತಿಳಿಯೋಣ ಮೊದಲಿಗೆ ಇಕ್ವಿಟಿ ಮ್ಯೂಚುಯಲ್ ಫಂಡ್ಗಳು…

By ಮುರುಳಸಿದ್ಧಯ್ಯ ಕೆ ಆರ್

You Might Also Like

Political analysis
ರಾಜಕೀಯ

Political analysis|ಅರಸು, ಕೃಷ್ಣ,ಯಡಿಯೂರಪ್ಪ ಅವರಿಗೆ ನಸೀಬು ಇತ್ತು

By Dinamaana Kannada News
Davanagere
ತಾಜಾ ಸುದ್ದಿ

ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆ : ಬೈಕ್ ರ‍್ಯಾಲಿ

By Dinamaana Kannada News
Davanagere
ತಾಜಾ ಸುದ್ದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಕೇವಲ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ : ಕೆ.ವಿ.ಪ್ರಭಾಕರ್

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?