Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ದೇವದಾರಿ ಯೋಜನೆ-ಮನುಷ್ಯಕುಲದ ಆತ್ಮವಿನಾಶದ ದಾರಿಯ ಆರಂಭ
Blog

ದೇವದಾರಿ ಯೋಜನೆ-ಮನುಷ್ಯಕುಲದ ಆತ್ಮವಿನಾಶದ ದಾರಿಯ ಆರಂಭ

Dinamaana Kannada News
Last updated: June 16, 2024 1:12 am
Dinamaana Kannada News
Share
sanduru
ದೇವದಾರಿ ಮೈನಿಂಗ್‌ ಯೋಜನೆ (ಸಂಡೂರು )
SHARE

Kannada News | Sanduru Stories | Dinamaana.com | 16-06-2024

ದೇವದಾರಿ! (Sanduru)

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದಕ್ಷಿಣ ಭಾಗದ ಗಣಿ ಪ್ರದೇಶ.ಗಣಿಭಾಷೆಯಲ್ಲಿ ಸಂಡೂರು ಸೌತ್ ಒ ಬ್ಲಾಕ್ ಎಂದೇ ಕರೆಯಲ್ಪಡುವ ಈ ಏರಿಯಾದಲ್ಲಿ ಹುಲಿಕುಂಟೆ, ಲಕ್ಷ್ಮೀಪುರ ಮತ್ತು ಭುಜಂಗ ನಗರ ಎಂಬ ಜನವಸತಿ ಹಳ್ಳಿಗಳಿವೆ.

90 ಸಾವಿರಕ್ಕೂ ಹೆಚ್ಚು ವಿಶಿಷ್ಟ ಪ್ರಬೇಧಗಳ ಮರಗಳ ನಾಶ (Sanduru)

ಪ್ರಸ್ತುತ ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತಿದೆ ಎನ್ನುವ ಈ ಪ್ರದೇಶವೊಂದರಲ್ಲಿಯೇ ಅರವತ್ತು ಸೆಂಟಿಮೀಟರಿಗೂ ಕಡಿಮೆ ಸುತ್ತಳತೆಯನ್ನು ಹೊಂದಿರುವ ಸುಮಾರು 58324 ಮರಗಳಿವೆ.ಅರವತ್ತು ಸೆಂಟಿಮೀಟರಿಗೂ ಹೆಚ್ಚಿನ ಪ್ರಮಾಣದ ಸುತ್ತಳತೆಯುಳ್ಳ ಬೃಹತ್ ಗಾತ್ರದ ಮರಗಳು ಸಂಖ್ಯೆ 12566.ಇತರೆ ಮರಗಳೂ ಸೇರಿದಂತೆ ಒಟ್ಟು 90000ಕ್ಕೂ ಹೆಚ್ಚು ವಿಶಿಷ್ಟ ಪ್ರಬೇಧಗಳ ಮರಗಳ ಮಾರಣಹೋಮವೇ  ನಡೆಯಲಿದೆ.

ಜನರ ಗೋಳು ಕೇಳುವವರಾರೂ ? (Sanduru)

ಇದರಿಂದ ಏನಾಗುತ್ತದೆ? ಎಂದರೆ, ಮಣ್ಣಿನ ಸವಕಳಿ,ನೀರಿನ ಆಕರಗಳ ಮೇಲೆ ಪರಿಣಾಮ ಮತ್ತು ಯಾರೂ ಸರಿಪಡಿಸಲಾಗದಂತಹ ಪರಿಸರದ ನಷ್ಟವುಂಟಾಗುತ್ತದೆ ಎಂದು ವೈಜ್ಞಾನಿಕವಾದ ಶುಷ್ಕ ಅಂಕಿ ಅಂಶಗಳನ್ನು ನೀಡಬಹುದು. ಆದರೆ ಅದರಾಚೆಗೂ ಈ ಊರುಗಳ ಸಂತ್ರಸ್ತಗೊಳ್ಳಲಿರುವ ಜನ ಮಾಡಿರುವ ಪಾಪವಾದರೂ ಏನು?ಆಧುನಿಕ ವಿಜ್ಞಾನದ ಮೂಲಕ ಅಭಿವೃದ್ಧಿಯೆಂಬ ಭಯೋತ್ಪಾದಕ ಚಟುವಟಿಕೆಗಳಿಗೆ ತುತ್ತಾದವರ ಗೋಳನ್ನು ಕೇಳುವವರಾದರೂ ಯಾರು?

ಸಂಡೂರಿನ ಪರಿಸರ ಉಳಿಸಲು ನಿರಂತರ ಹೋರಾಟ ರೂಪಿಸುತ್ತಿರುವ ಮಿತ್ರ ಶ್ರೀಶೈಲ ಆಲದಹಳ್ಳಿ ಈ ದಿನ ಮಧ್ಯಾಹ್ನ ಮಾತನಾಡುವಾಗ ಹಿಂದಿನ ಕಾಲವನ್ನು ನೆನಪಿಸಿಕೊಂಡರು.ಕಾಡು ಎಂಬುದು ತನ್ನಜ್ಜನಿಗೆ, ತನ್ನಪ್ಪನಿಗೆ ಅದೊಂದು ಪಾವಿತ್ರ್ಯದ ಸ್ಳಳವಾಗಿತ್ತು.

ತನ್ನ ಹಿರಿಯರು ಎಂದಿಗೂ ಕೂಡ ಕಾಡಿನ ಒಳಗೆ ಹೋಗುವಾಗ ಕಾಲಿಗೆ ಚಪ್ಪಲಿ ಕೂಡ ಹಾಕುತ್ತಿರಲಿಲ್ಲ. ದುರ್ಗಮ ಹಾದಿಗಳಗುಂಟ ದೂರದವರೆಗೆ ಕಾಡಿನ ನಟ್ಟನಡುವೆ ನಡೆದುಕೊಂಡು ಹೋಗಿ ಬರಲು ಅಲ್ಲಿ ಉದ್ದೇಶಪೂರ್ವಕವಾಗಿಯೇ ದೇವರನ್ನು ಪ್ರತಿಷ್ಟಾಪಿಸುತ್ತಿದ್ದರೆಂದು, ಆ ಮೂಲಕವಾದರೂ  ಹಬ್ಬ, ಜಾತ್ರೆ, ಪರಿಷೆಗಳ ನೆಪದಲ್ಲಿ ಉತ್ತಮ ಗಾಳಿ,ವಾತಾವರಣದಲ್ಲಿ ಕೆಲಕಾಲವಾದರೂ ಬದುಕುತಿದ್ದರು.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-21  ಹರಿಶಂಕರ !

ಜನರೇ ಚಳುವಳಿ ರೂಪಿಸಬೇಕು  (Sanduru)

ಈಗ ನಮಗೆ ಅದೂ ಕೂಡ ಇಲ್ಲ.ಹೋಗಲಿ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿರೋ ಎಂದರೂ ಬಿಡದೀ ಪ್ರಭುತ್ವ

sanduru
ದೇವದಾರಿ- ಮೈನಿಂಗ್‌ ಯೋಜನೆ ಸಂಡೂರು

ದ ಅಭಿವೃದ್ಧಿ ಎಂಬ ಭೂತ.ಪಶ್ಚಿಮಘಟ್ಟಗಳ ಕಾಡು ಮರಗಳನ್ನು ಹೊರತುಪಡಿಸಿದರೆ ಸಂಡೂರಿನ ಪರಿಸರವು ನಾಡಿಗೆ ಆಮ್ಲಜನಕದ ಗಣಿಯೇ ಆಗಿದೆ. ಕಳೆದ ಮೇ ತಿಂಗಳಿನ ತಾಪಮಾನದಿಂದ ಬಸವಳಿದ ಜನರಿಗಾದರೂ ಬುದ್ದಿ ಬೇಡವೇ? ಈಗ ಜನರೇ ಚಳುವಳಿಗಳನ್ನು ರೂಪಿಸಬೇಕಿದೆ ಎಂದು ಸಂಡೂರಿನ ಬಜಾರಿನಲ್ಲಿ ಪುಟ್ಟದೊಂದು ಎಲೆಕ್ಟ್ರಾನಿಕ್ಸ್ ಶಾಪು ಇಟ್ಟುಕೊಂಡು ಜೀವನ ಸಾಗಿಸುವ ಪರಿಸರ ಹೋರಾಟಗಾರ ಮಿತ್ರ ,ಶ್ರೀಶೈಲ ಆಲದಹಳ್ಳಿ ಎದೆಯ ಸಂಕಟವನ್ನು ಹೊರಹಾಕಿದ್ದು ಹೀಗೆ.

ಪ್ರಸ್ತಾವಿತ ದೇವದಾರಿ ಗಣಿಪ್ರದೇಶವು 4605 ಹೆಕ್ಟೇರ್ ಸಂಪದ್ಭರಿತ ಐರನ್ ಮತ್ತು ಅಪರೂಪ ಗುಣಮಟ್ಟದ ಮ್ಯಾಂಗನೀಸ್ ಅದಿರಿನ ಭೂ ಪ್ರದೇಶವನ್ನು ಹೊಂದಿದೆ. ಜೊತೆಗೆ ಯಾರ ಹಂಗಿಲ್ಲದೆಯೂ ಬೆಳೆದ ದಟ್ಟ ಕಾಡಿನ ಮರಗಳು,ಇಲ್ಲಿ ವಾಸಮಾಡುವ ವಿಶಿಷ್ಟ ಜೀವಸಂಕುಲಗಳು.ಇದರಲ್ಲಿ 3203 ಹೆಕ್ಟೇರ್ ಭೂಮಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದರೆ, 1220 ಹೆಕ್ಟೇರ್ ಭೂಮಿ ರೆವಿನ್ಯೂ ಇಲಾಖೆಯ ವ್ಯಾಪ್ತಿಯಲ್ಲಿದೆ.ಉಳಿದಂತೆ 67 ಹೆಕ್ಟೇರ್ ಭೂ ಪ್ರದೇಶವು ಸರ್ಕಾರಕ್ಕೆ ಸೇರಿದ್ದೆಂದು ಮತ್ತು ಸುಮಾರು 114 ರಿಂದ 115 ಹೆಕ್ಟೇರುಗಳ ಪ್ರದೇಶವು ಈಗಾಗಲೇ ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ ಲಿಮಿಟೆಡ್ ((KIOCL) ವಶದಲ್ಲಿದೆ.

ಹೀಗಾಗಿ ಈ ಜಾಗದಲ್ಲಿ ಗಣಿಗಾರಿಕೆಯನ್ನು  ಆರಂಭಿಸುವುದು ಪ್ರಭುತ್ವಕ್ಕೆ ದೊಡ್ಡ ಸವಾಲೇನಲ್ಲ. ಎಲ್ಲವೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಣತಿ, ನಿರ್ದೇಶನದ ಮೇಲೆಯೇ ನಡೆಯುವಂಥವು. ಹಾಗಂತ ಪ್ರಸ್ತುತ ಈ ಏರಿಯಾದಲ್ಲಿ ಗಣಿಗಾರಿಕೆ ಇಲ್ಲವೇ ಇಲ್ಲ ಅಂತೇನಿಲ್ಲ.ಈಗಾಗಲೇ  ಎ ಮತ್ತು ಬಿ ವರ್ಗದ 59  , ಸಿ ವರ್ಗದ 26,ಹಾಗೂ  ರಿ ಸೆಟಲ್ಮೆಂಟ್, ರಿ ಹ್ಯಾಬಿಟೇಶನ್ ಪ್ಲ್ಯಾನ್ ಅನುಮೋದನೆಯಾಗದ ಸುಮಾರು 14 ಮೈನ್ಸ್ ಕಂಪೆನಿಗಳು ಈಗಾಗಲೇ  ಕಾರ್ಯನಿರ್ವಹಿಸುತ್ತಿವೆ.ಇವೆಲ್ಲವುಗಳ ವಾರ್ಷಿಕ ಅದಿರು ಉತ್ಪಾದನೆಯೇ 53599 ಮೆಟ್ರಿಕ್ ಟನ್ನುಗಳಾಗುತ್ತವೆ!

ಅದಿರು ಸಾಗಟ ಮಿತಿ ಮೀರಿ ಹೋಗಿದೆ (Sanduru)

ಬಳ್ಳಾರಿ ಜಿಲ್ಲೆಯ ಗರ್ಭದಲ್ಲಿ ಅಡಗಿರುವ ಅದಿರು ತೆಗೆಯಲು ಇರುವ  ವಾರ್ಷಿಕ ಸರಾಸರಿಯ ಮಿತಿಯೇ 28 ಮಿಲಿಯನ್ ಟನ್ನು ಮಾತ್ರ. (ಸುಪ್ರೀಂ ಕೋರ್ಟು ವರದಿ ದಿ.14-12-2017) ಅಂದರೆ ಜಿಲ್ಲೆಯ ಅದಿರು ಉತ್ಪಾದನೆಯ ಮಿತಿ ಯಾವಾಗಲೋ ಮಿತಿ ಮೀರಿ ಹೋಗಿರುವುದು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ.

ಆಧುನಿಕ ವಿಜ್ಞಾನಕ್ಕೆ ‘ತಂತ್ರಜ್ಞಾನದ ಅಹಂ’ ಸೇರಿಕೊಂಡಾದ ಮೇಲೆ ಪರಿಸರವನ್ನು ಕುರಿತು ವಿಜ್ಞಾನವು ಒಂದು ರೀತಿಯ  ಉಪೇಕ್ಷೆಯನ್ನು ತೋರಿದ್ದರಿಂದಲೇ ಇಂದು ಅರಣ್ಯ, ಸೂಕ್ಷ್ಮ ಜೀವಿ ಪರಿಸರಗಳ ಕುರಿತಂತೆ ತುಂಬಾ ಮೆಕ್ಯಾನಿಕಲ್ ಆದಂತಹ ರೀತಿಯಲ್ಲಿ ಪ್ರಭುತ್ವಗಳು ಯೋಚಿಸತೊಡಗಿವೆ.

ಅದೆಷ್ಟರಮಟ್ಟಿಗೆ ಎಂದರೆ ಈಗ ಚರ್ಚೆಯಾಗುತ್ತಿರುವ ಉದ್ದೇಶಿತ ದೇವದಾರಿ ಗಣಿ ಪ್ರದೇಶದ ಸುತ್ತಲೂ ಅಪರೂಪದ ಪ್ರಾಣಿಸಂಕುಲಗಳಿವೆ ಎಂದೆನೆಲ್ಲ,ಆ  ಅಪರೂಪದ ಕೊಂಡುಕುರಿ,ಕರಡಿ,ಚಿರತೆ ಮತ್ತು ಮುಳ್ಳುಹಂದಿ,ಮೊಲಗಳಂತಹ ಪ್ರಾಣಿಗಳ ಆವಾಸಸ್ಥಾನ ಇದಾಗಿದೆ.ಯಾಂತ್ರಿಕ,ಸಂವೇದನೆಗಳೇ ಇಲ್ಲದ ಆಧುನಿಕ ವಿಜ್ಞಾನವು “ಅವುಗಳನ್ನು ಬೇರೆಡೆಗೆ ಶಿಫ್ಟ್ ಮಾಡುವ”ಮತ್ತು ಬೇರೆ ಕಡೆಗಳಲ್ಲಿ ಪರ್ಯಾಯ ವನ್ಯಧಾಮಗಳ “ವನ್ಯಜೀವಿ ಕಾರಿಡಾರ್” ಗಳನ್ನು ರೂಪಿಸುವ ಆಭಾಸದ ಮಾತುಗಳನ್ನಾಡುತ್ತಿದೆ.ಅದಕ್ಕಾಗಿ ಕಂಪೆನಿಯಿಂದಲೇ ಕೋಟಿಗಟ್ಟಲೆ ಹಣವನ್ನು ತೆಗೆದಿರಿಸಿರುವುದಾಗಿಯೂ ಹೇಳುತ್ತಿದೆ.ಇಂಥ ಆಧುನಿಕತೆ,ನಾಗರಿಕತೆ ಬಗ್ಗೆ ಏನೆಂದು ಹೇಳುವುದು?

ಯಂತ್ರಗಳಂತಾದ ಜನರು (Sanduru)

ಹೀಗೆ ಸಾಗುತ್ತಲೇ ಕಳೆದ ಎರಡು ದಶಕಗಳಿಂದ ಗಣಿ ಕಂಪೆನಿಗಳ ಆಗರವೇ ಆಗಿಹೋಗುವ ಈ ಪ್ರದೇಶಗಳ ಜನ ಕೂಡ ಎಲ್ಲಿ ಯಂತ್ರಗಳಂತೆ ಆಗಿಬಿಡುವರೋ ಏನೋ? ಜನ ಕೂಡ ಹೊಸದಾದ ವಾತಾವರಣ ವೊಂದಕ್ಕೆ ಹೊಕದಿಕೊಂಡುಬಿಡುತ್ತಾರೆ.ಮಾನವನ ಬದುಕುವ ರೀತಿಯನ್ನೇ ಬದಲಿಸಬಹುದಾದ ಹೊಸ ಹೊಸ ಗಣಿಗಾರಿಕೆಯಿಂದಾಗಿ ಪ್ರದೇಶಗಳಲ್ಲಿ ಜನವಸತಿಗಾಗಿ ಕಂಪೆನಿಗಳು ಮನೆಗಳನ್ನು ನಿರ್ಮಿಸಬಹುದು.ಅವನ ಶಕ್ತಿ ಕುಗ್ಗಿ ಹೋದ ಮೇಲೆ ಅಥವಾ ವಯೋ ಸಹಜ ನಿವೃತ್ತರಾದರೆ ಆ ಮನೆಯನ್ನು ತೆರವುಗೊಳಿಸಿ ಹೊಸಬರಿಗೆ ನೀಡಬೇಕೆಂದು ವಯಸ್ಸಾದ ಮನುಷ್ಯರನ್ನೇ ತ್ಯಾಜ್ಯ ವಸ್ತುಗಳಂತೆ ನೋಡುವ ಕಾಲವೂ ದೂರವೇನಿಲ್ಲ.

ಹಿಟ್ಲರನ ಜರ್ಮನಿಯಲ್ಲಿ ಇಂತಹವರಿಗೆ “ನಿಷ್ಪ್ರಯೋಜಕ ಕೂಳಿನವರು”ಎಂಬ ಹೆಸರಿತ್ತಂತೆ ಈ ಭಾಗದ ಜನ ಪ್ರಭುತ್ವ ಕೂಡ ನಿರ್ಭಾವುಕತೆಯನ್ನು ಹೊಂದಿದರೆ ಆಶ್ಚರ್ಯವೇನಿಲ್ಲ.ತನ್ನ ಊರಿನಲ್ಲಿ ತಾನು ಹುಟ್ಟಿ,ಆಡಿ ಬೆಳೆದ ಊರಿನಲ್ಲಿಯೇ ಹೀಗೆ ಅಪರಿಚಿತನಾಗುವ,ಅಥವಾ ಕೆಲಸಕ್ಕೆ ಬಾರದ ‘ವಸ್ತು’ವಾಗುವ ಬೇರು ಕಿತ್ತ ವರ್ಗವಾಗುವ ರೈತರ ಭೀಕರತೆಯನ್ನೀಗಲೇ ನಾವು ಊಹಿಸಬಹುದು.

ಅಂತೂ ಇಂತೂ 2006ರಲ್ಲಿ ಸುಪ್ರೀಂ ಕೋರ್ಟು ನಿರ್ಬಂಧಿಸಿದ್ದ ಅರಣ್ಯ ಭೂಮಿಯಲ್ಲಿನ ಗಣಿಗಾರಿಕೆಯು ಮತ್ತೆ ಸಕ್ರಮಗೊಂಡ ಸುದ್ದಿ ಇಂದಿನ ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಗಣಿ ಮತ್ತೆ-ಅರಣ್ಯ ಭೂಮಿಯನ್ನು ಪ್ರವೇಶಿಸಿ ಆರ್ಭಟಿಸಲು ಉದ್ದೇಶಿಸಿದೆ.ಪ್ರಕ್ರಿಯೆಗಳನ್ನು ಸರಳಗೊಳಿಸಲು ಕೇಂದ್ರದ ಉಕ್ಕು ಸಚಿವಾಲಯ ಎಲ್ಲಿಲ್ಲದ ಉತ್ಸಾಹ ತೋರುತ್ತಿದೆ.

ಮೊನ್ನೆ ಭಾನುವಾರ ಪ್ರಮಾಣವಚನ ಸ್ವೀಕರಿಸಿದ ನೂತನ ಕೇಂದ್ರ ಸಚಿವರು ಬರೋಬ್ಬರಿ ಮುನ್ನೂರ ಎಂಭತ್ತೆಂಟು ಹೆಕ್ಟೇರ್ ಅರಣ್ಯ ಪ್ರದೇಶದ ಗಣಿಗಾರಿಕೆಯನ್ನು ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಗೆ ಐವತ್ತು ವರುಷಗಳ ಅವಧಿಗೆ ಲೀಜ್ ಗೆ ನೀಡಿ‌ ಸಹಿ ಹಾಕಿದ್ದಾರೆ. ಆದರೆ ಈ ಪ್ರಕ್ರಿಯೆಗಳೆಲ್ಲ ಸುಮಾರು ಆರು ವರುಷಗಳಿಂದಲೂ ಚಾಲೂ ಇವೆ. ಮಾರ್ಚ್ 2018 ರಲ್ಲಿಯೇ ಇಂಡಿಯನ್ ಬ್ಯೂರೋ ಆಫ್ ಮೈನ್ಸ್  ಮೂಲಕ ಗಣಿಗಾರಿಕೆಯ ವಿಸ್ತೃತ ಯೋಜನೆಯನ್ನು ರೂಪಿಸಲಾಗಿತ್ತು.

ಆಗಸ್ಟ್ ತಿಂಗಳು 2021 ಮತ್ತು ಡಿಸೆಂಬರ್ 2022 ರಷ್ಟೊತ್ತಿಗೆ ಪರಿಸರ ಮತ್ತು ಅರಣ್ಯ ಇಲಾಖೆಗಳ ಅನುಮತಿಗಳನ್ನು ಪಡೆಯಲಾಗಿತ್ತು.ಇನ್ನು ಕಳೆದ ವರುಷ ಜನವರಿ 2023 ರಲ್ಲಿ ರಾಜ್ಯ ಸರ್ಕಾರವೇ 388 ಹೆಕ್ಟೇರ್ ಭೂಮಿಯ ಗಣಿಗಾರಿಕೆಗೆ ಅನುಮತಿಯನ್ನು ಕೆ.ಐ.ಒ.ಸಿ.ಎಲ್.ಕಂಪೆನಿಗೆ ಐವತ್ತು ವರ್ಷಗಳ ಅವಧಿಗೆ ವೀಜ್ ನೀಡಲಾಗಿತ್ತು.ಇವೆಲ್ಲವೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಸಮನ್ವಯತೆಯಿಂದಲೇ ನಡೆದಿದ್ದವು ಎನ್ನುವುದನ್ನು ಗಮನಿಸಬೇಕು.

ಹೊಸ ಯೋಜನೆಯಿಂದ ಕಾಡು ನಾಶ (Sanduru)

ಹೊಸ ಯೋಜನೆಯಿಂದಾಗಿ ಮತ್ತಷ್ಟು ಕಾಡು ನಶಿಸಿ ಹೋಗುತ್ತಿದೆ. ವಿಶಿಷ್ಟ ಪ್ರಬೇಧದ ಬೃಹತ್ ಮರಗಳನ್ನು ಕಡಿದು,ನರ್ಸರಿಯಿಂದ ತರಿಸಿದ ಸಸಿಗಳನ್ನು “ಕಂಪೆನ್ಸೇಟರಿ ಫಾರೆಸ್ಟೇಷನ್” ಹೆಸರಿನಲ್ಲಿ ಗಿಡಗಳನ್ನೇನೋ ನೆಡಬಹುದು.ಅವುಗಳು ಬೆಳೆಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಗಣಿ ಪ್ರದೇಶವಷ್ಟೇ ಅಲ್ಲ,ಮೈನಿಂಗ್ ನಿಂದಾಗಿ ಐವತ್ತನಾಲ್ಕು ಹೆಕ್ಟೇರ್ ದಷ್ಟು ಭೂ ಪ್ರದೇಶ ಸ್ಲರಿ ಪೈಪ್ ಲೈನ್ ಹಾಕಲು, ಮತ್ತೆ ನೀರಿಗಾಗಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಕಾಡು, ಮತ್ತು ಕಾಡು ಪ್ರಾಣಿಗಳ, ಮನುಷ್ಯರ ಆವಾಸಸ್ಥಾನಗಳ ಮೇಲೆ, ಏಳನೇ ಶತಮಾನಕ್ಕೂ ಹಿಂದೆ ನಿರ್ಮಾಣವಾದ ಇಲ್ಲಿನ ಜನರ ಆರಾಧ್ಯದೈವ ಕುಮಾರಸ್ವಾಮಿ ಮತ್ತು ಪ್ರಸ್ತುತ ದೇವದಾರಿ ಯೋಜನಾ ಪ್ರದೇಶದ ದೈವವಾದ ಹುಲಿಕುಂಟೆರಾಯ ಕೂಡ ಬಾಧಿತರಾಗುರವ ಧಾರ್ಮಿಕ ದಾಳಿಗಳು,ರಿಲಿಜಿಯಸ್,ಕಲ್ಚರಲ್ ಶಾಕ್ ಗಳನ್ನು ಜನತೆಗೆ ಆಧುನಿಕ ಜಗತ್ತು ನೀಡುತ್ತಲೇ ಇರುತ್ತದೆ.

ಮರ, ಗಿಡ,ಹೊಲ, ಗದ್ದೆ,ಹಸು,ಬೆಟ್ಟ ಗುಡ್ಡಗಳು ಮನುಷ್ಯನ ಬದುಕಿನ ರೂಪಕಗಳು ಆಗಬೇಕಿತ್ತು.ಆದರೆ ಅವುಗಳ ಅರಿವಿಲ್ಲದರಿಂದಲೇ ನಮ್ಮ ಬದುಕಿನ ಕೊಂಡಿಗಳು ಸಡಿಲಗೊಳ್ಳುತ್ತಿರುವುದು ಮತ್ತು ದೇವದಾರಿಯಂತಹ ಯೋಜನೆಗಳು ಮನುಷ್ಯ ಕುಲದ ಆತ್ಮವಿನಾಶದ ದಾರಿಗಳಂತೆ ತೋರುವುದು ಅತಿಶಯೋಕ್ತಿಯೇನಲ್ಲ.

ಭಯ ಶುರುವಾಗಿದೆ (Sanduru)

ಈಗ ಶುರುವಾಗಿರುವ ಖಾಸಗಿ ಕಂಪೆನಿಗಳ ಕೃಪಾಪೋಷಿತ ಪ್ರಭುತ್ವವು ಮೈನಿಂಗ್ ಪಾಲಿಟಿಕ್ಸ್ ಗೆ ಇಳಿದಿದೆ. ಬಡ ಕೂಲಿಕಾರರು,ಕಾರ್ಮಿಕರು,ಆದಿವಾಸಿಗಳು,ಮತ್ತು ಅಲೆಮಾರಿಗಳ ಹಾಗೂ ಗ್ರಾಮೀಣ ರೈತರ ಸಣ್ಣ ಸಣ್ಣ ಸಂಭ್ರಮ,ಶಿಳ್ಳೆ,ಕೇಕೆ,ಮದುವೆ ದಿಬ್ಬಣಗಳ ಸದ್ದನ್ನು ಕಸಿದು‌,ಆಧುನಿಕತೆಯೆಂಬ ಬಯಲನ್ನು ನಿರ್ಮಿಸುತ್ತ ಸಾಗಿದೆ.ಆ ಬಟಾಬಯಲಿನ ಮೌನ….,ನಿರ್ಜನ ಪ್ರದೇಶದ ದೃಶ್ಯವನ್ನು ನೆನಪಿಸಿಕೊಂಡರೆ ಈಗಲೇ ಭಯ ಆವರಿಸಿಕೊಳ್ಳುತ್ತಿದೆ.

ಇಲ್ಲಿ ಹೋರಾಟಗಳೇನೂ ಇಲ್ಲವೆಂದಲ್ಲ.ಇವೆ.ಆಧುನಿಕ ವಿಜ್ಞಾನದ ರಕ್ಕಸ ಶಕ್ತಿ ಮತ್ತು ರಾಜಕಾರಣದ ಅಸಾಧಾರಣ ಶಕ್ತಿಯ ಮುಂದೆ ಇವುಗಳು ನಿಶ್ಯಕ್ತರಾಗಿ ಸೋತಂತೆ ಕಾಣಿಸುತ್ತವೆ.ಅಷ್ಟೇ ಅಲ್ಲ,ಚಳುವಳಿಗಳ ಮುಂಚೂಣಿ ನಾಯಕರಿಗೂ ಸಹ ರಾಜಕಾರಣ ಮತ್ತು ಆಧುನಿಕ ವಿಜ್ಞಾನ ಎಂಬುವುಗಳು ಕೂಡ ಸ್ವತಃ ರೋಗಿಗಳಂತೆ ಕಂಡುಬರುವುದರಿಂದಾಗಿ ಅವುಗಳೆಂದಿಗೂ ಡಾಕ್ಟರ್  ಆಗಲಾರವು ಎಂಬ ಕಟು ವಾಸ್ತವದ ಸತ್ಯವೂ ತಿಳಿದಿದೆ.

ಕೊನೆಯದಾಗಿ,ಗೆಳೆಯ ಶ್ರೀಶೈಲ ಆಲದಹಳ್ಳಿಯವರು ಹೇಳಿದ” ಇದರ ವಿರುದ್ಧ ಹೋರಾಡಲು,ನಾವು ರೊಟ್ಟಿ ಬುತ್ತಿ ಕಟಗೊಂಡು ಹೇಗೋ ಓಡಾಡಬಹುದು.ಆದರೆ  ಹೈಕೋರ್ಟಿನಲ್ಲಿ ಇಂತಹ ಕೇಸುಗಳ ರಿಟ್ ಹಾಕಲು  ಕನಿಷ್ಟ ಹತ್ತು ಲಕ್ಷ ರೂಪಾಯಿಗಳನ್ನಾದರೂ  ಅಲ್ಲಿನ ವಕೀಲರು ಕೇಳುತ್ತಾರೆ”ಎಂದ ಮಾತು ಎದೆಯಲ್ಲಿ ರಿಂಗಣಿಸುತಿದೆ.

            ಬಿ.ಶ್ರೀನಿವಾಸ

TAGGED:dinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article sanduru Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 56 :  ಪ್ರಯೋಗವಸ್ತು
Next Article harihara ಕ್ಯಾತನಹಳ್ಳಿ ಬಸಪ್ಪ ನಿಧನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ನಾಮನಿರ್ದೇಶಿತ ಸದಸ್ಯ ಸ್ಥಾನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಡಿ.24  (DAVANAGERE) :   ದಾವಣಗೆರೆ ಉಪವಿಭಾಗದ ಮಟ್ಟದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು(ದೌರ್ಜನ್ಯ ಮತ್ತು ನಿಯಂತ್ರಣ) ಹಾಗೂ…

By Dinamaana Kannada News

ಕಾಂಗ್ರೆಸ್ ಪಕ್ಷದಿಂದ ಆಜಾದ್ ನಗರದಲ್ಲಿ ಚಂದ್ರಶೇಖರ್ ಆಜಾದ್ ಸ್ಮರಣೆ

ದಾವಣಗೆರೆ (Davanagere): ನಗರದ ಆಜಾದ್ ನಗರದ ಮೊದಲನೇ ಮುಖ್ಯ ರಸ್ತೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತ ಸ್ವತಂತ್ರ ಚಳುವಳಿಯ…

By Dinamaana Kannada News

Davangere Crime News : ಟಿಪ್ಪ‌ರ್ ಲಾರಿ (Tipper lorry) ಪಲ್ಟಿ : ಚಾಲಕ ಸಾವು

ದಾವಣಗೆರೆ (Davangere) :  ತಾಲ್ಲೂಕಿನ ಆವರಗೊಳ್ಳ ಗ್ರಾಮದಲ್ಲಿ  ಟಿಪ್ಪ‌ರ್ ಲಾರಿ ಪಲ್ಟಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿದೆ. ಗದಗ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

By Dinamaana Kannada News
Political analysis
ರಾಜಕೀಯ

Political analysis | ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು?

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?