Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ರಾಜಕೀಯ ಸಮಾನತೆಯಿದ್ದರೂ ಆರ್ಥಿಕ, ಶೈಕ್ಷಣಿಕ ಅಸಮಾನತೆ ಹೋಗಿಲ್ಲ: ಜಿ. ಬಿ. ವಿನಯ್ ಕುಮಾರ್ ಬೇಸರ
ತಾಜಾ ಸುದ್ದಿ

ರಾಜಕೀಯ ಸಮಾನತೆಯಿದ್ದರೂ ಆರ್ಥಿಕ, ಶೈಕ್ಷಣಿಕ ಅಸಮಾನತೆ ಹೋಗಿಲ್ಲ: ಜಿ. ಬಿ. ವಿನಯ್ ಕುಮಾರ್ ಬೇಸರ

Dinamaana Kannada News
Last updated: July 15, 2025 1:17 pm
Dinamaana Kannada News
Share
Davanagere
SHARE

ದಾವಣಗೆರೆ : ದೇಶದಲ್ಲಿ ರಾಜಕೀಯ ಸಮಾನತೆ ಇದ್ದರೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಸಮಾನತೆ ಹೋಗಿಲ್ಲ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಹರಿಹರ ತಾಲ್ಲೂಕಿನ ಧ.ರಾ.ಮ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ  ಇನ್ ಸೈಟ್ಸ್ ಐಎಎಸ್   ಸಹಯೋಗದೊಂದಿಗೆ ಏರ್ಪಡಿಸಿದ್ದ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಡವರು ಹಾಗೂ ಶ್ರೀಮಂತರು ಸೇರಿದಂತೆ ಯಾರೇ ಆದರೂ ಮತದ ಮೌಲ್ಯ ಒಂದೇ. ಆದ್ರೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಸಿಕ್ಕಿಲ್ಲ. ಇದು ಸಿಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.

ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ನೀಡಿದೆ. ಆದರೆ, ಅಸಮಾನತೆ ಇನ್ನೂ ತಾಂಡವವಾಡುತ್ತಿದೆ. ಅವಕಾಶಗಳು ಮತ್ತು ಸ್ಥಾನಮಾನಗಳಲ್ಲಿ ಸಮಾನತೆ ಸಿಕ್ಕಾಗ ಮಾತ್ರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ಸಾಮಾಜಿಕ ನ್ಯಾಯ ಸಿಗುತ್ತದೆ. ಪ್ರತಿಯೊಬ್ಬ ನಾಗರಿಕರಿಗೂ ಸಮಾನವಾದ ಅವಕಾಶ ಸಿಗಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ನಾವು ಬೆಳೆಯಬೇಕಾದರೆ ಉತ್ತಮ ಸಂಸ್ಕೃತಿ, ಮಾನವೀಯ ಮೌಲ್ಯಗಳು, ಉತ್ತಮ ಗುಣಗಳು, ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆ ತೊಲಗಿದರೆ ಸಹಜವಾಗಿಯೇ ಒಂದೊಂದೇ ಅವಕಾಶ ಮತ್ತು ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ ಎಂದು ಅಭಿಪ್ರಾಯಪಟ್ಟರು.

Davanagere
ಬಡವರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರು ಸೇರಿ ಮತ ಹಾಕಿ ಶಾಸಕರು, ಸಂಸದರನ್ನಾಗಿ ಮಾಡುತ್ತೇವೆ. ನೀವು ಹಾಕಿದ ಮತಗಳು ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ, ಜನರಜೀವನ ಮಟ್ಟ ಸುಧಾರಣೆ ಆಗಬೇಕು. ಶಾಸಕರು, ಸಂಸದರ ಅಧಿಕಾರ ಶ್ರೀಮಂತಿಕೆ, ಉದ್ಯಮ ಬೆಳೆಸಲು ಆಗಬಾರದು. ಜನರ ಸೇವೆಗಾಗಿಯೇ ಮೀಸಲಿಡುವಂತಾಗಬೇಕು. ಇಂದಿನ ಯುವಕ ಯುವತಿಯರೇ ಮುಂದಿನ ದೇಶದ ಭವಿಷ್ಯ ಬರೆಯುವವರು. ಮತ ಹಾಕುವಾಗ ಆಲೋಚಿಸಿ ಚಲಾಯಿಸಬೇಕು. ಅಧಿಕಾರದ ಗದ್ದುಗೆ ಏರಿ ಹೋದ ಮೇಲೆ ಸಂತ್ರಸ್ತರಾಗಬಾರದು. ಶಿಕ್ಷಣದ ಅಸಮಾನತೆಯಿಂದ ಹೊರ ಬಂದು ನೀವೂ ಕೂಡ ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು. ದೊಡ್ಡ ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.

ಬಿಎ, ಬಿಎಸ್ಸಿ, ಬಿಕಾಂ ಸೇರಿದಂತೆ ಪದವಿ ಪಡೆದ ಬಳಿಕ ಉದ್ಯೋಗಾವಕಾಶಗಳು ದಾವಣಗೆರೆಯಲ್ಲಿಯೇ ಸಿಗುತ್ತದೆ ಎಂದುಕೊಂಡು ಸುಮ್ಮನೆ ಕೂರಬಾರದು. ಪ್ರಯತ್ನ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಿ. ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳ ಬಗ್ಗೆ ತಯಾರಿ ನಡೆಸಿ. ಪುಸ್ತಕಗಳು, ದಿನಪತ್ರಿಕೆಗಳನ್ನು ಹೆಚ್ಚಾಗಿ ಓದಿ. ಎಷ್ಟು ಪುಸ್ತಕಗಳನ್ನು ಓದುತ್ತೀರೋ ಅಷ್ಟು ಜ್ಞಾನ ಸಂಪಾದನೆ ಆಗುತ್ತದೆ. ಜೊತೆಗೆ ಜೀವನದಲ್ಲಿ ದೊಡ್ಡ ಗುರಿ ಸಾಧಿಸುವ ಪ್ರಯತ್ನಕ್ಕೆ ಪೂರಕವಾಗುವ ಜೊತೆಗೆ ಧೈರ್ಯವನ್ನೂ ತಂದುಕೊಡುತ್ತದೆ ಎಂದು ಹೇಳಿದರು.

ಪ್ರತಿಯೊಂದು ರಂಗಗಳಲ್ಲಿಯೂ ಜಾತಿ ಎನ್ನೋದು ಹಾಸುಹೊಕ್ಕಾಗಿದೆ. ರಾಜಕಾರಣ, ಉದ್ಯಮ, ಸರ್ಕಾರಿ ಕೆಲಸ ಸೇರಿದಂತೆ ಯಾವ ವಿಚಾರಕ್ಕೂ ಬಂದರೂ ಜಾತಿಯಿಂದಲೇ ಗುರುತಿಸುವಂತ ಸ್ಥಿತಿ ನಿರ್ಮಾಣವಾಗಿದೆ.  ಜಾತಿ ಅನ್ನೋದು ದೇಶ ಕಾಡುತ್ತಿರುವ ದೊಡ್ಡ ಪಿಡುಗು, ದೊಡ್ಡ ಗುರುತು ಆಗಿದೆ. ದೇಶವು ಜಾತ್ಯಾತೀತ ರಾಷ್ಟ್ರ ಎನ್ನುತ್ತೇವೆ. ಆದ್ರೆ, ಜಾತಿ ಗುರುತುವಿಕೆಯೇ ಇಲ್ಲಿ ಪ್ರಧಾನವಾಗಿದೆ. ಜಾತಿ ಮೀರಿ ಪ್ರಯತ್ನ ಮಾಡಿದಾಗ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

Read also : ದಾವಣಗೆರೆ | ಬೀಡಾ ಅಂಗಡಿಯಲ್ಲಿ ಗಾಂಜಾ ಮಾರಾಟ ಆರೋಪಿ ಸೆರೆ 

ದಕ್ಷಿಣ ಭಾರತದಲ್ಲಿ ಮೊದಲ ಹಾಗೂ ದೇಶದಲ್ಲಿ 3 ನೇ ಸ್ಥಾನ ಪಡೆದಿರುವ ಐಎಎಸ್ ಕೋಚಿಂಗ್ ಸೆಂಟರ್ ಇನ್ ಸೈಟ್ಸ್ ಐಎಎಸ್ ಸಂಸ್ಥೆ. ಒಂದೂವರೆ ಸಾವಿರ ಜನರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕೊಟ್ಟ ಸಂಸ್ಥೆ ನನ್ನದು. ನಾನೇ ಮುಖ್ಯ ಮಾರ್ಗದರ್ಶಕ. ಈ ಸಂಸ್ಥೆ ಕಟ್ಟಿ ಬೆಳೆಸಲು ಕಾರಣವಾಗಿದ್ದೇ ಜ್ಞಾನ ಸಂಪಾದನೆ. ಇದು ಬಂದಿದ್ದು ಪುಸ್ತಕಗಳನ್ನು ಹೆಚ್ಚಾಗಿ ಓದಿದ್ದರಿಂದ. ನೀವೆಲ್ಲರೂ ಪುಸ್ತಕಗಳನ್ನು ಓದುವ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು. ಪಠ್ಯ ಪುಸ್ತಕಗಳ ಹುಳುಗಳಾಗದೇ ಜ್ಞಾನಾರ್ಜನೆಯತ್ತ ಹೆಚ್ಚಿನ ಗಮನ ಹರಿಸಿ ಎಂದು ಕಿವಿಮಾತು ಹೇಳಿದರು.

ಆಂಗ್ಲ ಭಾಷೆ ಶಿಕ್ಷಕ ಬಿ. ಜಿ. ಸಿದ್ಧಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಹರಿಹರದ ಧ.ರಾ.ಮ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಜಶೇಖರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರಿಹರ ತಾಲ್ಲೂಕಿನ ಡಿ.ಎಸ್.ಎಸ್. ಸಂಚಾಲಕ ಪಿ.ಜೆ. ಮಹಾಂತೇಶ್, ಸಮಾಜ ಸೇವಕರಾದ ಮುಗ್ದುಂ, ಉಪನ್ಯಾಸಕ ಬಿ.ಜಿ. ಸಿದ್ದಪ್ಪ, ಹರಿಹರದ ಲಕ್ಕಮ್ಮ ಶಿಕ್ಷಕಿಯವರ ಪುತ್ರ ಶಿವಕುಮಾರ್ ಸಂಬಳಿ ಮತ್ತಿತರರು ಹಾಜರಿದ್ದರು. ಐಶ್ವರ್ಯ ಪ್ರಾರ್ಥಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಕೆ. ಎಸ್. ಪುಷ್ಪಾ ನಿರೂಪಿಸಿದರು. ಚಂದ್ರನಾಯ್ಕ ವಂದಿಸಿದರು.

ಹೆಚ್ಚು ಸಾಧಿಸಿಲ್ಲ, ಮುಂದೆ ಸಾಧಿಸುತ್ತೇನೆ: ಜಿಬಿವಿ

ನಾನಿನ್ನೂ ದೊಡ್ಡ ಸಾಧನೆ ಮಾಡಿಲ್ಲ. ಮುಂದೆ ಮಾಡಿಯೇ ತೀರುತ್ತೇನೆ. ಈ ಸಾಧನೆಗೆ ಮೂರು, ಐದು ಇಲ್ಲವೇ ಹತ್ತು ವರ್ಷವಾದರೂ ಆಗಬಹುದು. ವಿಧಾನಸಭೆ, ಸಂಸತ್ ಗೆ ಹೋಗಿಯೇ ಹೋಗುತ್ತೇನೆ. ಶಿಕ್ಷಣದಲ್ಲಿನ ಅಸಮಾನತೆ ಕಡಿಮೆ ಮಾಡಿದಾಗ ಮಾತ್ರ ನಾನು ಸಾಧನೆ ಮಾಡಿದೆ ಎಂಬ ತೃಪ್ತಿ ಬರುತ್ತದೆ. ಅಲ್ಲಿಯವರೆಗೆ ಹೋರಾಟ ಮುಂದುವರಿಸುತ್ತೇನೆ. ಕಷ್ಟಪಡುತ್ತಲೇ ಇರುತ್ತೇನೆ. ನಾನು ಅನುಭವಿಸಿದ ನೋವು ಯಾರೂ ಅನುಭವಿಸಬಾರದು. ಬಡವರು, ಶೋಷಿತರು, ಹಿಂದುಳಿದವರು ಸೇರಿದಂತೆ ಯಾವುದೇ ಸಮುದಾಯದವರು ಕಷ್ಟದಲ್ಲಿದ್ದರೆ ಸಹಾಯ ಮಾಡಬೇಕು. ಮನೆ ಕಟ್ಟಿಕೊಡಬೇಕು, ಉತ್ತಮ ಶಿಕ್ಷಣ ಕೊಡಿಸಬೇಕು. ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ರಾಜಕಾರಣಕ್ಕೆ ಬಂದಿದ್ದೇನೆ ಎಂದು ಜಿಬಿವಿ ಹೇಳಿದರು.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere crime news ದಾವಣಗೆರೆ | ಬೀಡಾ ಅಂಗಡಿಯಲ್ಲಿ ಗಾಂಜಾ ಮಾರಾಟ ಆರೋಪಿ ಸೆರೆ
Next Article basavanatappa ಜಿಲ್ಲಾಧಿಕಾರಿಗೆ ಜ್ವಲಂತ ಸಮಸ್ಯೆಗಳ ದರ್ಶನ : ಶಾಸಕ ಕೆ.ಎಸ್.ಬಸವಂತಪ್ಪ ಅವರೊಂದಿಗೆ ಮಾಯಕೊಂಡಕ್ಕೆ ತೆರಳಿ ವಾಸ್ತವ ಸಮಸ್ಯೆಗಳ ಪರಿಶೀಲನೆ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Hemophilia | ಜೀನ್ ಥೆರಪಿ ಚಿಕಿತ್ಸೆ ನಮ್ಮ ದೇಶದಲ್ಲೂ ಬರಬಹುದು : ಐ.ಜಿ.ಪಿ ಡಾ. ರವಿಕಾಂತೇಗೌಡ

ದಾವಣಗೆರೆ Davanagere : ಹಿಮೋಫೀಲಿಯಾ (Hemophilia) ವಿರಳ ರಕ್ತಸ್ರಾವ ರೋಗವಾಗಿದ್ದು, ಅತ್ಯಂತ ದುಬಾರಿ ವೆಚ್ಚದ ಕಾಯಿಲೆಯಾಗಿದೆ ಎಂದು ಪೂರ್ವ ವಲಯ…

By Dinamaana Kannada News

Davanagere news : ಸಾಕ್ಷರತಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿ : ಡಾ. ಸುರೇಶ್ ಇಟ್ನಾಳ್

ದಾವಣಗೆರೆ (Davangere District) : ಸಾಕ್ಷರತಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಅನಕ್ಷರಸ್ಥರನ್ನು ಸಾಕ್ಷರತೆಗೆ ಒಳಪಡಿಸಬೇಕು ಎಂದು ಸಿಇಒ ಡಾ.…

By Dinamaana Kannada News

ಬೆಂಗಳೂರು ಕೃಷಿ ವಿವಿ : ರುಕ್ಸರ್‍ಖಾನಮ್‍ಗೆ ಸ್ವರ್ಣ ಪದಕ

ಹರಿಹರ (Harihara) : ನಗರದ ಲದ್ವಾ ಓಣಿ ನಿವಾಸಿ ಡಿ.ಆರ್.ಮೊಹಮ್ಮದ್ ಅಜರುದ್ದೀನ್ ಇವರ ಪತ್ನಿ ರುಕ್ಸರ್‍ಖಾನಮ್ ಇವರು ಮಂಡಿಸಿದ ಸಂಶೋಧನಾ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?