Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಮೆಕ್ಕೆಜೋಳ ಬೆಳೆಗೆ ಸಮರ್ಪಕವಾದ ಬೆಲೆ ದೊರೆಯುತ್ತಿಲ್ಲ  ರೈತರ ಕೂಗು
ತಾಜಾ ಸುದ್ದಿ

ಮೆಕ್ಕೆಜೋಳ ಬೆಳೆಗೆ ಸಮರ್ಪಕವಾದ ಬೆಲೆ ದೊರೆಯುತ್ತಿಲ್ಲ  ರೈತರ ಕೂಗು

Dinamaana Kannada News
Last updated: February 25, 2026 12:44 pm
Dinamaana Kannada News
Share
maize
SHARE

ಮೆಕ್ಕೆಜೋಳ ಬೆಳೆ ಕುಸಿತ ಕಂಡರೂ ಸಹ ಎದೆಗುಂದದ ರೈತರು ತಾಲೂಕಿನಲ್ಲಿ ಹಿಂಗಾರು ಹಂಗಾಮು ಮತ್ತು ಬೇಸಿಗೆಯಲ್ಲಿ ರೈತರು ಮೆಕ್ಕೆಜೋಳವನ್ನು ಬಿತ್ತನೆ ಮಾಡಿದರೆ.  ಇನ್ನೂ ಕೆಲವು ಭಾಗಗಳಲ್ಲಿ ಮೆಕ್ಕೆಜೋಳದ ಬೆಳೆ ಸೂಲಂಗಿ ಹಂತದಲ್ಲಿದ್ದು ಬೆಳೆಗಳು ನಳ ನಳಿಸುತ್ತಿವೆ. ಆದರೆ ಸಮರ್ಪಕವಾದ ಬೆಲೆ ದೊರೆಯುತ್ತಿಲ್ಲ ಎಂಬ ಕೂಗು ರೈತ ವಲಯದಲ್ಲಿ ಕೇಳಿ ಬರುತ್ತಿತ್ತು.

ದರ ಸಿಗಲಿ ಬಿಡಲಿ  ರೈತರು ಮಾತ್ರ  ಬಿತ್ತನೆ ಮಾಡಿ ಬೆಳೆಯುವುದನ್ನು ಮಾತ್ರ ಬಿಡುವುದಿಲ್ಲ. ಮುಂಗಾರು ಹಂಗಾಮಿನಲ್ಲಿ ಸಾಲ ಸೂಲ ಮಾಡಿ ಮುಂಗಾರು ಹಂಗಾಮಿನಲ್ಲಿ  ತಾಲೂಕಿನ  ಸೊಕ್ಕೆ, ಬಿಳಿಚೋಡು,ಕಸಬಾ  ಹೋಬಳಿಗಳಲ್ಲಿ  ಸುಮಾರು 43000 ಹೆಕ್ಟರ್ ಮೆಕ್ಕೆಜೋಳವನ್ನು ಬೆಳೆಯಲಾಗಿತ್ತು.

ಸಮರ್ಪಕವಾದ ಬೆಲೆ ದೊರೆಯುತ್ತಿಲ್ಲ ಎಂದು  ಕೆಲ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೆಳೆಯನ್ನು ಮಾರುಕಟ್ಟೆಗೆ ಹಾಕದೆ ಇಂದಲ್ಲ ನಾಳೆ ಉತ್ತಮ ಬೆಲೆ ದೊರೆಯುತ್ತದೆ ಎಂಬ ನಿರೀಕ್ಷೆಯಿಂದ ಮೆಕ್ಕೆಜೋಳದ ತೆನೆಗಳರಾಶಿಯ ಗ್ರಾಮೀಣ ಪ್ರದೇಶಗಳಲ್ಲಿ  ಕಣಗಳಲ್ಲಿ  ಇನ್ನೂ  ಸಹ  ಕಂಡುಬರುತ್ತಿವೆ.  ಆದರು ಸಹ ರೈತರು ಬೆಲೆಗಳ ಏರಿಳಿತ ಲೆಕ್ಕಿಸದೆ ಹಿಂಗಾರು ಹಂಗಾಮಿನಲ್ಲಿ ತಾಲೂಕಿನ ಬಿಳಿಚೋಡು ಸೊಕ್ಕೆ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ನೂರಕ್ಕೂ ಅಧಿಕ ಹೆಕ್ಟರ್ ಮೆಕ್ಕೆಜೋಳ ಬಿತ್ತನೆ ಮಾಡಿದ್ದು ಬೆಳೆಗಳು  ಸಮೃದ್ದವಾಗಿ ಬೆಳೆದು ನಳ ನಳಿಸುತ್ತಿವೆ.

ಉತ್ತಮ ಇಳುವರಿ: ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳಕ್ಕೆ ಲದ್ದಿ ಉಳುಗಳ ಮತ್ತು ಕೀಟ ಬಾದೆ  ಹಾಗೂ ರೋಗ ಬಾದೆಗಳು ಕಂಡುಬರುವುದರಿಂದ  ಎಕರೆಗೆ 20 ಕ್ವಿಂಟಲ್  ಇಳುವರಿ ದೊರೆತರೆ.  ಹಿಂಗಾರು ಹಂಗಾಮು ಮತ್ತು ಬೇಸಿಗೆಯಲ್ಲಿ ಬಿತ್ತನೆ ಮಾಡುವಂತಹ ಮೆಕ್ಕೆಜೋಳ ಬೆಳೆಗಳಿಗೆ ಕೀಟವಾದೆ ಮತ್ತು ರೋಗ ಭಾದೆಗಳು ಕಡಿಮೆ ಇರುವುದರಿಂದ ಒಂದು ಎಕರೆಗೆ 30 ಕ್ವಿಂಟಲ್ ಮೆಕ್ಕೆಜೋಳ ಇಳುವರಿ ದೊರೆಯುತ್ತದೆ  ಹಾಗಾಗಿ ಅವಧಿಯಲ್ಲಿ ಮೆಕ್ಕೆಜೋಳ ಬಿತ್ತನೆಗೆ ಹೆಚ್ಚು ಒತ್ತು ನೀಡುತ್ತಾರೆ.

ಹಿಂಗಾರಿಗೆ ಮತ್ತು ಬೇಸಿಗೆಗೆ ಒತ್ತು : ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್ ಅಂತ್ಯದಿಂದ ಡಿಸೆಂಬರ್ ತಿಂಗಳವರೆಗೆ ಬಿತ್ತನೆ ಮಾಡಲಾಗುತ್ತದೆ. ತಂಪಾದ ಮತ್ತು ಒಣಹವಾಮಾನ ಮೆಕ್ಕೆಜೋಳ ಬೆಳೆಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಮಣ್ಣಿನಲ್ಲಿ ತೇವಾಂಶ ಉಳಿದಿರುವುದರಿಂದ ಕಡಿಮೆ ನೀರಾವರಿ ಸಾಕಾಗುತ್ತದೆ.

Read also : ಜಗಳೂರು|ಬೀದಿ ನಾಯಿಗಳಿಗೆ ಆಶ್ರಯ ತಾಣದ ಕಾಮಗಾರಿ ಪರಿಶೀಲನೆ

ಬೇಸಿಗೆ ಹಂಗಾಮಿನಲ್ಲಿ ಜನವರಿ-ಫೆಬ್ರವರಿ ತಿಂಗಳಲ್ಲಿ ಬಿತ್ತನೆ ಮಾಡಲಾಗುತ್ತದೆ. ಈ ಕಾಲದಲ್ಲಿ ತಾಪಮಾನ ಹೆಚ್ಚಿರುವುದರಿಂದ ನೀರಿನ ಅವಶ್ಯಕತೆ ಹೆಚ್ಚಾಗುತ್ತದೆ. ಡ್ರಿಪ್ ಸಿಂಚನ ಪದ್ಧತಿ ಅನುಸರಿಸಿದರೆ ನೀರಿನ ಉಳಿತಾಯದೊಂದಿಗೆ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ.

ಬೇಸಿಗೆಯಲ್ಲಿ ಕಳೆ ಮತ್ತು ಕೀಟಗಳ ಹಾನಿ ಹೆಚ್ಚೇನು  ಕಾಣಿಸಿಕೊಳ್ಳುವುದಿಲ್ಲ ಆದರು ಸಹ ಸಕಾಲಕ್ಕೆ  ಸೂಕ್ತ ಔಷಧ ಸಿಂಪಡಣೆ ಮಾಡುವುದು ಸೂಕ್ತ ಎನ್ನುತ್ತಾರೆ‌ ರೈತ ಬಸಪ್ಪ

ಹಿಂಗಾರು ಹಂಗಾಮಿನಲ್ಲಿ  90ಕ್ಕೂ ಅಧಿಕ ಪ್ರದೇಶದಲ್ಲಿ  ಮೆಕ್ಕೆಜೋಳ ಬಿತ್ತನೆಯಾಗಿದೆ ಬೇಸಿಗೆಯಲ್ಲಿ ಕೀಟವಾದೆ ಕಡಿಮೆ ಇರುವುದರಿಂದ ಇಳುವರಿಯು ಸಹ ಉತ್ತಮ ವಾಗಿ ಬರಲಿದೆ
ಶ್ವೇತಾ, ಸಹಾಯಕ ಕೃಷಿ ನಿರ್ದೇಶಕರು

ಬೆಳಗಳಿಗೆ  ದರ ದೊರೆತರೂ ದೊರೆಯದೆ ಇದ್ದರೂ ಸಹ ರೈತರು ಋತುಮಾನಕ್ಕೆ ತಕ್ಕ ಬೆಳೆಗಳನ್ನು ಬೆಳೆಯುವಂತಹ ಕೌಶಲ್ಯವನ್ನು ಹೊಂದಿದ್ದಾರೆ ಸರ್ಕಾರವು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯನ್ನು ನೀಡಿದಾಗ ಮಾತ್ರ ರೈತರ ಜೀವನ ಹಸನಾಗಲಿದೆ.
ರಾಜು. ರೈತ ಸಂಘ ( ಹುಚ್ಚವ್ವನ ಹಳ್ಳಿ ಮಂಜುನಾಥ ಬಣ) ದ ಪ್ರಧಾನ ಕಾರ್ಯದರ್ಶಿ

TAGGED:Davanagere Newsdinamaana.comKannada NewsMaizeಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಮೆಕ್ಕೆಜೋಳ
Share This Article
Twitter Email Copy Link Print
Previous Article jagalore ಜಗಳೂರು|ಬೀದಿ ನಾಯಿಗಳಿಗೆ ಆಶ್ರಯ ತಾಣದ ಕಾಮಗಾರಿ ಪರಿಶೀಲನೆ
Next Article jagalore ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಕ್ಷೀಣ : ಕಣ್ವಕುಪ್ಪೆ ಶ್ರೀ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ದಾವಣಗೆರೆ (Davanagere): ಬಾಲಕಿಯನ್ನು ಪುಸಲಾಯಿಸಿ ಮದುವೆಯಾಗಿ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ…

By Dinamaana Kannada News

Kannada cinema |ಆ. 30 ರಂದು ‘ಟೇಕ್ವಾಂಡೋ ಗರ್ಲ್’ ಸಿನಿಮಾ ತೆರೆಗೆ

ದಾವಣಗೆರೆ  (Davanagere) :  ಟೇಕ್ವಾಂಡೋ ಗರ್ಲ್’  (Taekwondo Girl) ಸಿನಿಮಾವು ಆ.30ರಂದು ತೆರೆ  ಬರಲಿದೆ ಎಂದು ಚಿತ್ರದ ನಿರ್ದೇಶಕ ರವೀಂದ್ರ…

By Dinamaana Kannada News

ಕೊಂಡಜ್ಜಿಯ ಪಬ್ಲಿಕ್ ಶಾಲೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ ಏ.17 (Davanagere): ಕರ್ನಾಟಕ ರಾಜ್ಯ ಪೊಲೀಸ್ ವೆಲ್‍ಫೇರ್ ಅಂಡ್ ಎಜುಕೇಷನ್ ಟ್ರಸ್ಟ್ ದಾವಣಗೆರೆ ರೇಂಜ್ ಅಡಿಯಲ್ಲಿನ ಹರಿಹರ ತಾಲ್ಲೂಕು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಫಲಪುಷ್ಪ ಪ್ರದರ್ಶನ -2025:ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ

By Dinamaana Kannada News
jagalore
ತಾಜಾ ಸುದ್ದಿ

ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಆಗ್ರಹಿಸಿ ರೈತರಿಂದ ಬೆಸ್ಕಾಂಗೆ ಮುತ್ತಿಗೆ

By Dinamaana Kannada News
jagalore
ತಾಜಾ ಸುದ್ದಿ

ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಕ್ಷೀಣ : ಕಣ್ವಕುಪ್ಪೆ ಶ್ರೀ

By Dinamaana Kannada News
jagalore
ತಾಜಾ ಸುದ್ದಿ

ಜಗಳೂರು|ಬೀದಿ ನಾಯಿಗಳಿಗೆ ಆಶ್ರಯ ತಾಣದ ಕಾಮಗಾರಿ ಪರಿಶೀಲನೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?